• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Yash: ಪಾನ್ ಮಸಾಲ ಜಾಹೀರಾತು ತಿರಸ್ಕರಿಸಿದ ಯಶ್​! 'ಗುಟ್ಕಾ ಗ್ಯಾಂಗ್'​ ಸೇರ್ಲಿಲ್ಲ ರಾಕಿ, ನೀವೇ ನಿಜವಾದ ಸುಲ್ತಾನ

Yash: ಪಾನ್ ಮಸಾಲ ಜಾಹೀರಾತು ತಿರಸ್ಕರಿಸಿದ ಯಶ್​! 'ಗುಟ್ಕಾ ಗ್ಯಾಂಗ್'​ ಸೇರ್ಲಿಲ್ಲ ರಾಕಿ, ನೀವೇ ನಿಜವಾದ ಸುಲ್ತಾನ

ರಾಕಿಂಗ್​ ಸ್ಟಾರ್​ ಯಶ್​

ರಾಕಿಂಗ್​ ಸ್ಟಾರ್​ ಯಶ್​

ಕೋಟಿ ಕೋಟಿ ಹಣ ಪಡೆದು ಬಾಲಿವುಡ್​ನ ತ್ರಿಮೂರ್ತಿಗಳು ಪಾನ್​ ಮಸಾಲ ಆ್ಯಡ್​ನಲ್ಲಿ ನಟಿಸಿ ಟ್ರೋಲ್​ ಆಗುತ್ತಿದ್ದಾರೆ. ವಿಶ್ವದಾದ್ಯಂತ ನರಾಚಿ ಅಧಿಪತಿಯ ಓಟ ಮುಂದುವರೆದಿದೆ. ಇದರ ಜೊತೆಗೆ ಇದೀಗ ರಾಕಿ ಭಾಯ್​ ಅಭಿಮಾನಿಗಳು ಸಂತಸ ಪಡುವ ವಿಚಾರವೊಂದು ಹೊರಬಿದ್ದಿದೆ.

  • Share this:

ಕಳೆದ ಕೆಲ ದಿನಗಳಿಂದ ಬಾಲಿವುಡ್​ (Bollywood) ನಲ್ಲಿ ಗುಟ್ಕಾ (Pan) ವಿಚಾರವಾಗಿ ಹಿಂದಿ ಚಿತ್ರರಂಗದ ಟಾಪ್​ ಸ್ಟಾರ್​ಗಳು ಸಿಕ್ಕಾಪಟ್ಟೆ ಟ್ರೋಲ್ (Troll)​ ಆಗುತ್ತಿದ್ದಾರೆ. ಬಾಲಿವುಡ್​​ನಲ್ಲಿ 'ಗುಟ್ಕಾ ಗ್ಯಾಂಗ್​' (Gutka Gang) ಎಂದೇ ಅವರನ್ನು ಕರೆಯಲಾಗುತ್ತಿದೆ. ಹೀರೋ ಅಂದರೆ ಹೇಗಿರಬೇಕು ಹೇಳಿ. ಅವರು ಏನೇ ಮಾಡಿದರೂ ಜನ ಅದನ್ನು ಫಾಲೋ ಮಾಡುತ್ತಾರೆ. ಅದು ತೆರೆ ಮುಂದೆಯಾಗಲಿ, ತೆರೆ ಹಿಂದೆಯಾಗಲಿ. ಅಕ್ಷಯ್ ಕುಮಾರ್(Akshay Kumar) , ಅಜಯ್ ದೇವಗನ್ (Ajay Devgn) ಹಾಗೂ ಶಾರುಖ್ ಖಾನ್ (Shah Rukh Khan) ಈ ಮೂವರೂ ಸೂಪರ್‌ಸ್ಟಾರ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಕೆಲವು ದಿನಗಳಿಂದ ಟ್ರೋಲ್ ಆಗುತ್ತಿದ್ದಾರೆ. ಪಾನ್​ ಮಸಾಲ (Pan Masala) ಜಾಹೀರಾತಿನಲ್ಲಿ ಈ ಮೂವರು ನಟರು ಕಾಣಿಸಿಕೊಂಡಿದ್ದು, ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು.ಕ್ಷಯ್ ಕುಮಾರ್ ಬಹಿರಂಗವಾಗಿ ಕ್ಷಮೆಯಾಚಿಸಿದ್ದರು. ಜಾಹೀರಾತಿನಿಂದ ಬಂದ ಹಣವನ್ನು ಸಮಾಜಮುಖಿ ಕೆಲಸಕ್ಕೆ ಬಳಸಿಕೊಳ್ಳುವುದಾಗಿಯೂ ಹೇಳಿದ್ದರು.


ಪಾನ್​ ಜಾಹೀರಾತಿಗೆ ನೋ ಎಂದಿದ್ದ ರಾಕಿ ಭಾಯ್​​!


ಹೌದು, ಕೋಟಿ ಕೋಟಿ ಹಣ ಪಡೆದು ಬಾಲಿವುಡ್​ನ ತ್ರಿಮೂರ್ತಿಗಳು ಪಾನ್​ ಮಸಾಲ ಆ್ಯಡ್​ನಲ್ಲಿ ನಟಿಸಿ ಟ್ರೋಲ್​ ಆಗುತ್ತಿದ್ದಾರೆ. ವಿಶ್ವದಾದ್ಯಂತ ನರಾಚಿ ಅಧಿಪತಿಯ ಓಟ ಮುಂದುವರೆದಿದೆ. ಇದರ ಜೊತೆಗೆ ಇದೀಗ ರಾಕಿ ಭಾಯ್​ ಅಭಿಮಾನಿಗಳು ಸಂತಸ ಪಡುವ ವಿಚಾರವೊಂದು ಹೊರಬಿದ್ದಿದೆ.  ರಾಕಿಂಗ್ ಸ್ಟಾರ್ ಯಶ್ ಬಹು ಕೋಟಿ ಮೊತ್ತದ ಪಾನ್ ಮಸಾಲ ಜಾಹೀರಾತನ್ನು ತಿರಸ್ಕರಿಸಿದ್ದಾರೆ. ರಾಕಿ ಬಾಯ್‌ ತೆಗೆದುಕೊಂಡು ಈ ನಿರ್ಧಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಾಲಿವುಡ್​ ಸ್ಟಾರ್​​ ನಟರೇ ದುಡ್ಡಿಗೆ ಬೆಲೆ ಕೊಟ್ಟು ಪಾನ್​ ಮಸಲಾ ಆ್ಯಡ್​ನಲ್ಲಿ ನಟಿಸಿದ್ದಾರೆ.


ಕೋಟಿ ಕೋಟಿ ಕೊಡ್ತೀವಿ ಅಂದ್ರು ಮಾಡಲ್ಲ ಎಂದ ಯಶ್​! 


ರಾಕಿಂಗ್​ ಸ್ಟಾರ್​ ಯಶ್​ ಹಾಗೂ ಪ್ರಶಾಂತ್​ ನೀಲ್​ ಕಾಂಬಿನೇಷನ್​ನಲ್ಲಿ ಬಂದಿರುವ ಕೆಜಿಎಫ್​ 2 ಸಿನಿಮಾ ಪ್ರತಿದಿನ ಒಂದಲ್ಲ ಒಂದು ದಾಖಲೆಗಳನ್ನು ಮಾಡುತ್ತಿದೆ. ರಾಕಿಂಗ್​ ಸ್ಟಾರ್​ ಯಶ್​ ತಮ್ಮದೇ ಬ್ರ್ಯಾಂಡ್​ ಸೃಷ್ಟಿಸಿದ್ದಾರೆ. ಇಡೀ ವಿಶ್ವದಲ್ಲೇ ರಾಕಿ ಭಾಯ್​ ಯಾರೆಂದು ತಿಳಿದಿದೆ. 'ಕೆಜಿಎಫ್ 2' ಅದ್ಧೂರಿ ಯಶಸ್ಸಿನ ಬಳಿಕ ಪಾನ್ ಮಸಲಾ ಹಾಗೂ ಎಲೈಚಿ ಸಂಸ್ಥೆಯೊಂದು ಬ್ರ್ಯಾಂಡ್ ಅಂಬಾಸಿಡರ್ ಆಗುವಂತೆ ಯಶ್‌ಗೆ ಕೇಳಲಾಗಿತ್ತು. ಆದರೆ, ಯಶ್ ಈ ದುಬಾರಿ ಮೌಲ್ಯದ ಜಾಹೀರಾತನ್ನು ತಿರಸ್ಕರಿಸಿದ್ದಾರೆ.



ಇದನ್ನೂ ಓದಿ: ಮುದ್ದಾಗಿ ಸಲಾಂ ರಾಕಿ ಭಾಯ್ ಎಂದ ಐರಾ, ಮಗಳ ವಿಡಿಯೋ ಕಂಡು ಯಶ್​ ಫುಲ್​ ಖುಷ್​!


ಅಭಿಮಾನಿಗಳ ಆರೋಗ್ಯವೇ ರಾಕಿ ಭಾಯ್​ಗೆ ಮುಖ್ಯ!


'ಕೆಜಿಎಫ್' ಬಳಿಕ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಯಶ್, ತಮ್ಮ ಅಭಿಮಾನಿಗಳು ಹಾಗೂ ಜನರ ಆರೋಗ್ಯದ ದೃಷ್ಟಿಯಿಂದ ಈ ಜಾಹೀರಾತನ್ನು ಕೈ ಬಿಟ್ಟಿದ್ದಾರೆ ಎಂದು ಟ್ಯಾಲೆಂಟ್ ಮ್ಯಾನೆಜ್ಮೆಂಟ್ ಏಜೆನ್ಸಿ ಬಹಿರಂಗ ಪಡಿಸಿದೆ. ರಾಕಿ ಭಾಯ್​ ಯಶ್​ 10 ರಿಂದ 99 ಕೋಟಿವರೆಗೂ ಆಫರ್ ನೀಡುತ್ತಿದ್ದ ಜಾಹೀರಾತನ್ನು ತಿರಸ್ಕರಿದ್ದಾರೆ. ಅಕ್ಷಯ್ ಕುಮಾರ್, ಅಜಯ್ ದೇವಗನ್ ಹಾಗೂ ಶಾರುಖ್ ಖಾನ್ ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಟೀಕೆಗೆ ಒಳಗಾಗಿದ್ದರು. ಈ ಮೂವರು ಸ್ಟಾರ್‌ಗಳ ದಾರಿಯನ್ನು ಯಶ್ ಹಿಡಿಯದೆ ಇದ್ದಿದ್ದಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.


ಇದನ್ನೂ ಓದಿ: KGF 2 ಸಿನಿಮಾ ನೋಡಿದ ಗುಜರಾತ್ ಟೈಟನ್ಸ್​ ಟೀಂ, ರಾಕಿ ಭಾಯ್​ ಅಬ್ಬರ ಕಂಡು ದಂಗಾದ ಹಾರ್ದಿಕ್​ ಪಾಂಡ್ಯ!


ನಿಜವಾದ ಸುಲ್ತಾನ ನೀವು ಎಂದ ಫ್ಯಾನ್ಸ್!

top videos


    ರಾಕಿ ಭಾಯ್​ ಪಾನ್​ ಮಸಲಾ ಆ್ಯಡ್​ ತಿರಸ್ಕರಿಸಿರುವ ವಿಚಾರ ತಿಳಿದ ಅಭಿಮಾನಿಗಳು ಯಶ್​ ಅವರ ವ್ಯಕ್ತಿತ್ವಕ್ಕೆ ಫಿದಾ ಆಗಿದ್ದಾರೆ. ದುಡ್ಡಿಗೆ ಪ್ರಾಮುಖ್ಯತೆ ನೀಡದೇ ನೀವು ನಿಜವಾದ ಸುಲ್ತಾನ ಎನಿಸಿಕೊಂಡಿದ್ದೀರಾ ಬಾಸ್​ ಎಂದು ಅಭಿಮಾನಿಗಳು ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಳ್ಳುತ್ತಿದ್ದಾರೆ.

    First published: