RCB ಪಂದ್ಯ ನೋಡುವವರಿಗೆ ಡಿಬಾಸ್​​ ದರ್ಶನ್​ ಏನು ಹೇಳಿದ್ರು ಗೊತ್ತಾ?

ದರ್ಶನ್

ದರ್ಶನ್

Viral Video: ಐಪಿಎಲ್​ ಸೀಸನ್​ 14ರ ಮೊದಲ ಪಂದ್ಯ ಚೆನ್ನೈನಲ್ಲಿ ನಡೆಯುತ್ತಿದೆ. ಸಾಕಷ್ಟು ಜನರು ಇಂದಿನ ಆರ್​ಸಿಬಿ ಪಂದ್ಯವನ್ನು ನೋಡಲು ಉತ್ಸುಹಕರಾಗಿದ್ದಾರೆ.

  • Share this:

    ಈ ವರ್ಷದ ಮೊದಲ ಐಪಿಎಲ್​ ಪಂದ್ಯಾಟ ಇಂದಿನಿಂದ ಪ್ರಾರಂಭವಾಗುತ್ತಿದೆ. ರಾಯಲ್​​ ಚಾಲೆಂಜರ್ಸ್​ ಬೆಂಗಳೂರು -ಮುಂಬೈ ಇಂಡಿಯನ್ಸ್ ತಂಡದ ನಡುವೆ ಇಂದಿನ ಪಂದ್ಯ ನಡೆಯಲಿದೆ. ಕ್ರಿಕೆಟ್​ ಪ್ರಿಯರು ಪಂದ್ಯ ವೀಕ್ಷಿಸಲು ತುದಿಗಾಳಿನಲ್ಲಿ ನಿಂತಿದ್ದಾರೆ. ಹೀಗಿರುವಾಗ ಸ್ಯಾಂಡಲ್​ವುಡ್​ ನಟ ದರ್ಶನ್​​ ಅವರು ಐಪಿಎಲ್​ ಪ್ರಿಯರಿಗೆ ಕಿವಿ ಮಾತು ಹೇಳಿರುವ ಹಳೆಯ ವಿಡಿಯೋವೊಂದು ಸೋಷಿಯಲ್​ ಮೀಡಿಯಾದಲ್ಲಿ ಮತ್ತೊಮ್ಮೆ ವೈರಲ್ ಆಗಿದೆ.


    ಐಪಿಎಲ್​ ಸೀಸನ್​ 14ರ ಮೊದಲ ಪಂದ್ಯ ಚೆನ್ನೈನಲ್ಲಿ ನಡೆಯುತ್ತಿದೆ. ಸಾಕಷ್ಟು ಜನರು ಇಂದಿನ ಆರ್​ಸಿಬಿ ಪಂದ್ಯವನ್ನು ನೋಡಲು ಉತ್ಸುಹಕರಾಗಿದ್ದಾರೆ. ಕ್ರಿಕೆಟ್​ ಪಂದ್ಯವೆಂದಾಗ ಕೆಲವರು ಬೆಟ್ಟಿಂಗ್​ ಮೊರೆ ಹೋಗುತ್ತಾರೆ. ಯಾವುದೋ ಆಸೆಗಾಗಿ ಅಲ್ಪ ಸ್ವಲ್ಪ ದುಡಿದ ಹಣವನ್ನು ಬೆಟ್ಟಿಂಗ್​ಗೆ ಸುರಿಯುತ್ತಾರೆ. ಹಾಗಾಗಿ ಅಂತದನ್ನು ದಯವಿಟ್ಟು ಮಾಡಬೇಕು ಎಂದು ಹೇಳಿರುವ ನಟ ದರ್ಶನ್​ ಅವರ ಹಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.


    ಆರ್​ಸಿಬಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡವಾಗಿದೆ. ಎಷ್ಟೇ ಸಲ ಸೋತರು ಅದಕ್ಕೆ ಕ್ಯಾರೆ ಅನ್ನದೆ ತಂಡಕ್ಕೆ ಅಭಿಮಾನಿಗಳು ಪ್ರೊತ್ಸಾಹ ನೀಡುತ್ತಾ ಬಂದಿದ್ದಾರೆ. ಹೀಗೆ ಕ್ರೀಡಾ ಉತ್ಸಾಹದ ನಡುವಲ್ಲಿ ಅಭಿಮಾನಿಗಳು ಕ್ರಿಕೆಟ್​ ಬೆಟ್ಟಿಂಗ್​ಗೆ ಮುಂದಾಗಿ ಕೈ ಸುಟ್ಟುಕೊಂಡಿರುವ ಹಲವಾರು ಘಟನೆಗಳು ಈ ಮೊದಲು ಬೆಳಕಿಗೆ ಬಂದಿದೆ. ಹಾಗಾಗಿ ಬೆಟ್ಟಿಂಗ್​ ಎಂಬ ಕೂಪಕ್ಕೆ ಬಿದ್ದು ತೊಂದರೆಗೆ ಸಿಲುಕದಿರಿ ಎಂದು ಅನೇಕ ಸೆಲೆಬ್ರಿಟಿಗಳು ಹೇಳುತ್ತಾ ಬಂದಿದ್ದಾರೆ. ಅದರಂತೆ ಡಿಬಾಸ್​ ಕೂಡ ಈ ಬಗ್ಗೆ ಜಾಗೃತಿ ಮೂಡಿಸಿರುವ ಹಳೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಹಂಚಿದ್ದಾರೆ.




    ಐಪಿಎಲ್​ ಪಂದ್ಯದ ದಿನಾಂಕ ನಿಗದಿಯಾದ ದಿನದಿಂದ ಆರ್​ಸಿಬಿ ಕುರಿತ ಹಲವು ಫೋಟೋ, ವಿಡಿಯೋಗಳು ಟ್ರೋಲ್​ ಪೇಜ್​ನಲ್ಲಿ ಓಡಾಡುತ್ತಿದೆ. ಹಲವು ಹಾಡುಗಳು ಯ್ಯೂಟೂಬ್​ನಲ್ಲಿ ಬಿಡುಗಡೆಯಾಗಿದೆ. ಇಂದು ಆರ್​ಸಿಬಿ ಮತ್ತು ಮುಂಬೈ ಇಂಡಿಯನ್ಸ್​ ನಡುವೆ ರೋಹಕ ಹಣಾಹಣಿ ನಡೆಯಲಿದೆ. ಹಾಗಾಗಿ ಯಾರು ಮೊದಲ ಪಂದ್ಯ ಜಯಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.

    Published by:Harshith AS
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು