• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Ravi Belagere Movies: ಒಳ್ಳೆಯ ನಟನಾದರೂ ರವಿ ಬೆಳಗೆರೆ ಹೆಚ್ಚು ಸಿನಿಮಾಗಳಲ್ಲಿ ಯಾಕೆ ನಟಿಸಲಿಲ್ಲ?

Ravi Belagere Movies: ಒಳ್ಳೆಯ ನಟನಾದರೂ ರವಿ ಬೆಳಗೆರೆ ಹೆಚ್ಚು ಸಿನಿಮಾಗಳಲ್ಲಿ ಯಾಕೆ ನಟಿಸಲಿಲ್ಲ?

ರವಿ ಬೆಳಗೆರೆ

ರವಿ ಬೆಳಗೆರೆ

ರವಿ ಬೆಳಗೆರೆ ಅವರು ಸಿನಿಮಾ ರಂಗದ ಜೊತೆ ಆತ್ಮೀಯವಾದ ನಂಟು ಹೊಂದಿದ್ದರು. ಅಕ್ಷರಗಳ ಸಾಂಗತ್ಯದಲ್ಲಿದ್ದವರಿಗೆ ಬಣ್ಣದ ಲೋಕದಿಂದ ದೂರ ಉಳಿಯಲು ಆಗಲಿಲ್ಲ. ಕೆಲವು ಸಿನಿಮಾಗಳಲ್ಲಿ ನಟಿಸಿರುವ ರವಿ ಬೆಳಗೆರೆ ಅವರಿಗೆ ನಟರಾಗಿ ಯಶಸ್ಸು ಕಾಣಲು ಸಾಧ್ಯವಾಗಲಿಲ್ಲ. ಅದಕ್ಕೆ ಒಂದು ಪ್ರಮುಖ ಕಾರಣವೂ ಇದೆ.

ಮುಂದೆ ಓದಿ ...
  • Share this:

ತಮ್ಮ ಬರವಣಿಗೆ ಮೂಲಕ ಅಸಂಖ್ಯಾತ ಮಂದಿಗೆ ಓದುವ ಹುಚ್ಚು ಹಿಡಿಸಿದ ರವಿ ಬೆಳಗೆರೆ ಇನ್ನಿಲ್ಲ. 1995ರಲ್ಲಿ ಹಾಯ್​ ಬೆಂಗಳೂರು ಆರಂಭಿಸಿ, ನಂತರದಲ್ಲಿ ಕಾದಂಬರಿ, ಅನುವಾದ, ಕಥಾ ಸಂಕಲನ, ಜೀವನ ಕಥನ, ಅಂಕಣ ಬರಹಗಳು, ಕಿರುತೆರೆಯಲ್ಲಿ ಕ್ರೈಂ ಕುರಿತಾದ ಕಾರ್ಯಕ್ರಮಗಳನ್ನು ಮಾಡುತ್ತಾ ಜನರಿಗೆ ಮತ್ತಷ್ಟು ಹತ್ತಿರವಾಗಿದ್ದರು. ಕಿರುತೆರೆಯಲ್ಲಿ ಕಾರ್ಯಕ್ರಮದ ನಿರೂಪಕರಾಗಿದ್ದ ರವಿ ಬೆಳಗೆರೆ ನಂತರದಲ್ಲಿ ಧಾರಾವಾಹಿಯಲ್ಲೂ ಒಂದು ಪುಟ್ಟ ಪಾತ್ರದಲ್ಲಿ ಕಾಣಸಿಕೊಂಡಿದ್ದರು. ಮುಕ್ತ ಮುಕ್ತ ಮುಕ್ತ ಧಾರಾವಾಹಿಯಲ್ಲಿ ರವಿ ಬೆಳಗೆರೆ ಜಡ್ಜ್​ ಪಾತ್ರದಲ್ಲಿ ನಟಿಸಿದ್ದಾರೆ. ರವಿ ಬೆಳಗೆರೆ ಅವರು ಸಿನಿಮಾ ರಂಗದ ಜೊತೆ ಆತ್ಮೀಯವಾದ ನಂಟು ಹೊಂದಿದ್ದರು. ಅಕ್ಷರಗಳ ಸಾಂಗತ್ಯದಲ್ಲಿದ್ದವರಿಗೆ ಬಣ್ಣದ ಲೋಕದಿಂದ ದೂರ ಉಳಿಯಲು ಆಗಲಿಲ್ಲ. ಕೆಲವು ಸಿನಿಮಾಗಳಲ್ಲಿ ನಟಿಸಿರುವ ರವಿ ಬೆಳಗೆರೆ ಅವರಿಗೆ ನಟರಾಗಿ ಯಶಸ್ಸು ಕಾಣಲು ಸಾಧ್ಯವಾಗಲಿಲ್ಲ. ಅದಕ್ಕೆ ಒಂದು ಪ್ರಮುಖ ಕಾರಣವೂ ಇದೆ. 


ರವಿ ಶ್ರೀವತ್ಸ ನಿರ್ದೇಶನದ ಗಂಡ ಹೆಂಡತಿ ಸಿನಿಮಾದಲ್ಲಿ ಮೊದಲ ಬಾರಿಗೆ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಂಡರು. ನಂತರ ಮಾದೇಶ, ವಾರಸ್ದಾರ ಸಿನಿಮಾಗಳಲ್ಲಿ ಅಭಿನಯಿಸಿದರು. ಡೆಡ್ಲಿಸೋಮ ಸಿನಿಮಾಗೆ ಕಂಠದಾನ ಮಾಡಿದ್ದಾರೆ.


Ravi Belagere contested in Bigg Boss Kannada Season 7 here is how was his life in bigg boss,
ರವಿ ಬೆಳಗೆರೆ


ರವಿ ಬೆಳಗೆರೆ ಅವರಿಗೆ ನಂತರದಲ್ಲಿ ಸಾಕಷ್ಟು ಸಿನಿಮಾಗಳಿಂದ ಅವಕಾಶಗಳು ಅರಸಿ ಬಂದಿದ್ದವು. ಆದರೆ ಅವುಗಳನ್ನು ಮಾಡಲು ಅವರೇ ಆಸಕ್ತಿ ತೋರಲಿಲ್ಲವಂತೆ. ಕಾರಣ ಒಂದೇ ರೀತಿಯ ಪಾತ್ರಗಳಲ್ಲಿ ನಟಿಸಲು ಅವಕಾಶ ಸಿಕ್ಕ ಕಾರಣಕ್ಕೆ ಅವರು ಅಭಿನಯದಿಂದ ದೂರ ಉಳಿದಿದ್ದರಂತೆ. ಹಾಗೆಂದು ಅವರು ಸಿನಿಮಾ ರಂಗದ ಜೊತೆ ಇದ್ದ ನಂಟನ್ನು ಮಾತ್ರ ಕಳೆದುಕೊಳ್ಳಲಿಲ್ಲ.


Ravi Belagere
ರವಿ ಬೆಳಗೆರೆ


ಕಿಚ್ಚ ಸುದೀಪ್​ ಸಹ ರವಿ ಬೆಳಗೆರೆ ಕುಟುಂಬದೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದಾರೆ. ಬಿಗ್​ ಬಾಸ್​ ಕಾರ್ಯಕ್ರಮದಲ್ಲಿ ತೆಗೆದಿದ್ದ ಫೋಟೋವನ್ನು ಹಂಚಿಕೊಳ್ಳುವುದರೊಂದಿಗೆ ಅವರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ ಸುದೀಪ್​.



ರವಿ ಬೆಳಗೆರೆ ಅವರಿಗೆ ಸ್ಯಾಂಡಲ್​ವುಡ್​ನ ಹಿರಿಯ ನಿರ್ದೇಶಕರು ಹಾಗೂ ನಿರ್ಮಾಪಕರೊಂದಿಗೆ ಆತ್ಮೀಯವಾದ ಸಂಬಂಧವಿತ್ತು. ಇನ್ನು ಅವರ ಅಳಿಯ ಶ್ರೀನಗರ ಕಿಟ್ಟಿ ಸಹ ಸ್ಯಾಂಡಲ್​ವುಡ್​ನಲ್ಲಿ ಸಕ್ರಿಯವಾಗಿದ್ದಾರೆ. ಇನ್ನು ರವಿ ಬೆಳಗೆರೆ ಅವರ ಕಾದಂಬರಿಯನ್ನೇ ಸಿನಿಮಾ ಮಾಡುವ ಕೆಲಸ ನಡೆಯುತ್ತಿತ್ತು ಎನ್ನಲಾಗುತ್ತಿದೆ. ಗುಳ್ಟು ಸಿನಿಮಾದ ನಿರ್ದೇಶಕ ಜನಾರ್ಧನ್​ ಚಿಕ್ಕಣ್ಣ ಈ ಸಿನಿಮಾವನ್ನು ಮಾಡಲಿದ್ದರಂತೆ. ಇದಕ್ಕೆ ರವಿ ಬೆಳಗೆರೆ ಸಹ ಒಪ್ಪಿಗೆ ನೀಡಿದ್ದರು ಎಂದೂ ಹೇಳಲಾಗುತ್ತಿತ್ತು.


ಸಿನಿಮಾ ರಂಗ-ವಿವಾದ


ರವಿ ಬೆಳಗೆರೆ ಅವರಿಗೆ ಸಿನಿಮಾ ರಂಗದ ಜೊತೆ ಎಷ್ಟು ಸ್ನೇಹವಿತ್ತೋ ಅಷ್ಟೇ ಮಂದಿಯೊಂದಿಗೆ ಜಗಳವೂ ಆಗಿತ್ತು. ದುನಿಯಾ ವಿಜಯ್​ ಅವರೊಂದಿಗೆ 'ಭೀಮಾ ತೀರದಲ್ಲಿ' ಸಿನಿಮಾ ವಿಷಯದಲ್ಲಿ ಗಲಾಟೆ ಆಗಿತ್ತು. ಇದರಿಂದಾಗಿಯೇ ದುನಿಯಾ ವಿಜಯ್​ ಅವರ ಕೌಟುಂಬಿಕ ಕಲಹ ನಡೆದಾಗಲೂ ಹಾಯ್​ ಬೆಂಗಳೂರು ಪತ್ರಿಕೆಯಲ್ಲಿ ಅದರ ಬಗ್ಗೆ ಬರೆದಿದ್ದರು. ಇನ್ನು ದರ್ಶನ್​ ಅವರ ವೈವಾಹಿಕ ಜೀವನದ ಬಗ್ಗೆಯೂ ಹಾಯ್​ ಬೆಂಗಳೂರಿನಲ್ಲಿ ಪ್ರಕಟವಾಗಿತ್ತು.

Published by:Anitha E
First published: