ಪವರ್ ಸ್ಟಾರ್ ಪುನೀತ್ ಜ್ಕುಮಾರ್ (Power Star Puneeth Rajkumar) ಹಾಗೂ ಹೊಂಬಾಳೆ ಫಿಲ್ಮ್ಸ್ (Hombale Films) ನಡುವೆ ಒಂದು ಗಟ್ಟಿಯಾದ ಬಂಧವಿತ್ತು. ಅಪ್ಪು(Appu) ಅಭಿನಯದ ‘ನಿನ್ನಿಂದಲೇ’ ಸಿನಿಮಾಗೆ ಹೊಂಬಾಳೆ ಬಂಡವಾಳ ಹಾಕಿತ್ತು. ಇದಾದ ಬಳಿಕ ‘ರಾಜಕುಮಾರ’ (Rajakumara) ಹಾಗೂ ‘ಯುವರತ್ನ’ (Yuvarathna) ನಿಗೂ ಅವರೇ ಬಂಡವಾಳ ಹಾಕಿದ್ದರು. ಈ ಎರಡು ಸಿನಿಮಾಗಳಿಗೆ ಅಪ್ಪು ಅವರ ನೆಚ್ಚಿನ ನಿರ್ದೇಶಕ ಸಂತೋಷ್ ಆನಂದ್ರಾಮ್ (Santhosh Anandram) ಆ್ಯಕ್ಷನ್ ಕಟ್ ಹೇಳಿದ್ದರು. ಅಪ್ಪು ಜೊತೆ ಮತ್ತೊಂದು ಸಿನಿಮಾ ಮಾಡುವ ಆಸೆ ಹೊಂದಿದ್ದರು ಹೊಂಬಾಳೆ ಪ್ರೊಡಕ್ಷನ್ (Hombale Production). ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಅಪ್ಪು ಹೇಳದೇ ಕೇಳದೇ ಬಾರದ ಲೋಕಕ್ಕೆ ಹೊರಟು ಹೋದರು. ಇದೀಗ ಅಪ್ಪುಗೆ ರೆಡಿ ಮಾಡಿದ್ದ ಕಥೆಯಲ್ಲಿ ಯುವರಾಜ್ ಕುಮಾರ್ ಅವರ ಹೊಸ ಸಿನಿಮಾ ಅನೌನ್ಸ್ ಆಗಿದೆ.
ಖಡಕ್ ಲುಕ್ನಲ್ಲಿ ಮಿಂಚಿದ ಯುವ ರಾಜ್ಕುಮಾರ್!
ಈಗ ಯುವ ರಾಜ್ ಮೊದಲ ಚಿತ್ರಕ್ಕೆ ಸಂತೋಷ್ ಆನಂದ್ ರಾಮ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಜೊತೆಗೆ ಮೊದಲ ಚಿತ್ರ ಸೆಟ್ಟೇರುವ ಮೊದಲೇ, ಯುವ ರಾಜ್ಕುಮಾರ್ ಮತ್ತೆರಡು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಒಟ್ಟು ಯುವ ಈಗ ನಾಲ್ಕು ಚಿತ್ರಗಳು ಮಾಡಲು ಒಪ್ಪಿಗೆ ಸೂಚಿಸಿದ್ದಾರಂತೆ. ಈ ಮೂಲಕ ಯುವ ಕನ್ನಡ ಚಿತ್ರರಂಗದಲ್ಲಿ ತಮ್ಮ ಸಿನಿ ಜರ್ನಿ ಆರಂಭದಲ್ಲೇ, ದೊಡ್ಡ ಮಟ್ಟದ ಛಾಪು ಮೂಡಿಸಲಿದ್ದಾರೆ. ಇದೀಗ ಇವರ ಕಾಂಬಿನೇಷನ್ನ ಮೊದಲ ಸಿನಿಮಾ ಅನೌನ್ಸ್ ಆಗಿದೆ. ಈ ಚಿತ್ರದಲ್ಲಿ ಸಖತ್ ರಗಡ್ ಲುಕ್ನಲ್ಲಿ ಯುವ ರಾಜ್ಕುಮಾರ್ ಕಾಣಿಸಿಕೊಳ್ಳಲಿದ್ದಾರೆ.
ಅಪ್ಪುಗೆ ರೆಡಿ ಮಾಡಿದ್ದ ಕಥೆಯಲ್ಲಿ ಯುವರಾಜ್ಕುಮಾರ್!
ಯುವ ರಾಜ್ಕುಮಾರ್ ನಿಮಾವನ್ನು ಸಂತೋಷ್ ಆನಂದ್ರಾಮ್ ನಿರ್ದೇಶನ ಮಾಡುತ್ತಾರೆ ಅಂತ ಕೆಲ ದಿನಗಳಿಂದ ಸುದ್ದಿಯಾಗಿತ್ತು. ಅದು ಕನ್ಫರ್ಮ್ ಆಗಿದೆ. ಹೊಂಬಾಳೆ ಬ್ಯಾನರ್ನಲ್ಲಿ ಮತ್ತೊಂದು ಹೊಸ ಸಿನಿಮಾ ಅನೌನ್ಸ್ ಆಗಿದೆ. ರಿಲೀಸ್ ಆಗಿರುವ ಪೋಸ್ಟರ್ ಗಳಲ್ಲಿ ಯುವ ರಾಜ್ಕುಮಾರ್ ಮಾಸ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಟೈಟಲ್ ಇನ್ನೂ ಫಿಕ್ಸ್ ಆಗಿಲ್ಲ. ಪುನೀತ್ ರಾಜ್ಕುಮಾರ್ ಅವರಿಗೆ ರೆಡಿ ಮಾಡಿದ್ದ ಕಥೆಯಲ್ಲಿ ಯುವ ರಾಜ್ಕುಮಾರ್ ನಟಿಸುತ್ತಿದ್ದಾರೆ.
ಇದನ್ನೂ ಓದಿ: ದಾಖಲೆ ಮೊತ್ತಕ್ಕೆ ಸೇಲಾಯ್ತು ಶೆಟ್ರು ಸಿನಿಮಾ! '777 ಚಾರ್ಲಿ' ಟಿವಿ ರೈಟ್ಸ್ ಕಲರ್ಸ್ ಕನ್ನಡ ಪಾಲು
ಯುವರಾಜ್ ಸಿನಿಮಾಗೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ!
ಅಪ್ಪು ಜೊತೆ ಮತ್ತೊಂದು ಸಿನಿಮಾ ಮಾಡಲು ಸಂತೋಷ್ ಆನಂದ್ರಾಮ್ ಕಥೆಯೊಂದನ್ನು ರೆಡಿ ಮಾಡಿಕೊಂಡಿದ್ದರು. ಇದೀಗ ಅದೇ ಕಥೆಯಲ್ಲಿ ಯುವರಾಜ್ಕುಮಾರ್ ನಟಿಸಲಿದ್ದಾರೆ. ಇದರ ಜೊತೆ ಇನ್ನೂ ಎರಡು ಹೊಸ ಸಿನಿಮಾಗೆ ಯುವರಾಜ್ ಸಹಿ ಹಾಕಿದ್ದಾರೆ. ಯುವ ರಾಜ್ಕುಮಾರ್ ಮೊದಲ ಚಿತ್ರ ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡಲಿದೆ ಎನ್ನುವ ಸುದ್ದಿ ಹೊರ ಬಂದಿದೆ. ಹೌದು, ಹೊಂಬಾಳೆ ಸಿನಿಮಾ ಯುವ ರಾಜ್ಕುಮಾರ್ ಮುಂದಿನ ಮೂರು ಚಿತ್ರಗಳನ್ನು ನಿರ್ಮಾಣ ಮಾಡಲು ಮುಂದಾಗಿದೆ. ಈಗಾಗಲೇ ಮಾತುಕತೆ ಮುಗಿದಿದ್ದು, ಯುವ ರಾಜ್ಕುಮಾರ್ ಕೂಡ ಸಹಿ ಹಾಕಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಅಪ್ಪು ಹೆಸರನ್ನು ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡ ನಮ್ರತಾ ಗೌಡ
ಅಪ್ಪು ಸ್ಥಾನ ತುಂಬಲಿದ್ದಾರಂತೆ ಯುವರಾಜ್!
ವಿಜಯ್ ಕಿರಗಂದೂರ್ ಅವರ ಹೊಂಬಾಳೆ ಫಿಲ್ಮ್ಸ್ ಶುರುವಾಗಿದ್ದು, ಅಪ್ಪು ಅವರಿಂದಲೇ. ಹೀಗಾಗಿ ಅಪ್ಪು ಅವರ ಸ್ಥಾನವನ್ನು ಈಗ ಯುವರಾಜ್ ಕುಮಾರ್ ತುಂಬಲಿದ್ದಾರೆ ಅಂತ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ