ಅಪ್ಪು(Appu) ನಮ್ಮನ್ನು ಬಿಟ್ಟು ಹೋದ ದಿನದಿಂದಲೂ ಪುನೀತ್ ರಾಜ್ಕುಮಾರ್ ಅವರನ್ನು ನೆನೆಪಿಸಿಕೊಂಡಿರದ ದಿನವೇ ಇಲ್ಲ. ಮರೆಯಬೇಕೆಂದರೂ ಮರೆಯಲಾಗದ ನೋವು ಇದು. ಅಪ್ಪು ಅವರು ನಮ್ಮೊಂದಿಗೆ ಇಲ್ಲ ಅನ್ನುವ ಸುದ್ದಿಯನ್ನು ಇನ್ನೂ ನಂಬಲು ಆಗುತ್ತಿಲ್ಲ. ಫ್ಯಾನ್ಸ್ಗಳು ಪ್ರತಿದಿನ ಕಣ್ಣೀರು ಹಾಕುತ್ತಿದ್ದಾರೆ. ಡಿಸೆಂಬರ್ 6ರಂದು ಅಪ್ಪು ಅವರ ಡ್ರೀಮ್ ಪ್ರಾಜೆಕ್ಟ್(Dream Project) ಗಂಧದಗುಡಿ(Gandhada Gudi) ಟೀಸರ್ ಬಿಡುಗಡೆಯಾಗಿತ್ತು. ಇದನ್ನು ಕಂಡ ಅಭಿಮಾನಿಗಳು ದೇವರಿಗೆ ಮತ್ತೆ ಹಿಡಿಶಾಪ ಹಾಕಿದ್ದರು. ಇಂತಹ ವ್ಯಕ್ತಿಯನ್ನು ಬೇಗ ಕರೆದುಕೊಂಡಿದ್ದೀರ ಯಾಕೆ ಎಂದು ಅಳಲು ತೋಡಿಕೊಂಡಿದ್ದರು. ಗಂಧಗ ಗುಡಿ ಟ್ರೈಲರ್ ಟ್ರೆಂಡಿಗ್ನಲ್ಲಿದೆ. ತಮ್ಮ ನೆಚ್ಚಿನ ನಟನ ಅದ್ಭುತ ಕಲ್ಪನೆಗೆ ಬೆರಗಾಗಿದ್ದ ಅಭಿಮಾನಿಗಳು ಮೂಕ ವಿಸ್ಮಿತರಾಗಿದ್ದರು. ಇಂತಹ ಸಂದರ್ಭದಲ್ಲಿ ಪವರ್ಸ್ಟಾರ್ ನಮ್ಮೊಂದಿಗಿಲ್ಲವಲ್ಲ ಅಂತ ಮರುಗಿದ್ದರು. ಆದರೆ, 'ಗಂಧದ ಗುಡಿ' ಮತ್ತೆ ಪುನೀತ್ ಅಭಿಮಾನಿಗಳಿಗೆ ಬದುಕಿಗೆ ಹೊಸ ಬೆಳಕಾಗಿದೆ.ಅಪ್ಪು ಅಭಿಮಾನಿಗಳು ಪುನೀತ್ ರಾಜ್ಕುಮಾರ್ ತೋರಿಸ ಕೊಟ್ಟ ದಾರಿಯಲ್ಲಿ ನಡೆಯುತ್ತಿದ್ದಾರೆ. ಅಪ್ಪು ಅವರನ್ನು ಜೀವಂತವಾಗಿರಸುವ ಕೆಲಸಗಳನ್ನು ಮಾಡುತ್ತಿದ್ದಾರೆ. ಇದೀಗ ಅಪ್ಪು ಅಭಿಮಾನಿಗಳು ಹೊಸ ಅಭಿಯಾನವನ್ನು ಆರಂಭಿಸಿದ್ದಾರೆ. ಪುನೀತ್ ರಾಜ್ಕುಮಾರ್(Puneeth Rajkumar) ಅವರ ಜನ್ಮ ದಿನ(Birthday)ಕ್ಕೆ 100 ದಿನ ಬಾಕಿ ಇದೆ. ಹೀಗಾಗಿ ಅಭಿಮಾನದ ಅಭಿಯಾನವನ್ನು ಅಪ್ಪು ಅಭಿಮಾನಿಗಳು ಶುರುಮಾಡಿದ್ದಾರೆ.
ರಾಜರತ್ನನ ಬರ್ತ್ಡೇಗೆ 100 ದಿನ ಬಾಕಿ
ಸ್ಟಾರ ನಟರ ಹುಟ್ಟುಹಬ್ಬಕ್ಕೆ ಯಾವ ರೀತಿಯ ಹಬ್ಬ ಹೇಗಿರುತ್ತೆ ಅನ್ನುವುದನ್ನು ವಿಶೇಷವಾಗಿ ಹೇಳಬೇಕಿಲ್ಲ. ಒಂದು ವಾರದ ಮುನ್ನವೇ ತಮ್ಮ ಅಚ್ಚು ಮೆಚ್ಚಿನ ನಟನ ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಸೆಲೆಬ್ರೆಟ್ ಮಾಡುವುದಕ್ಕೆ ಅಭಿಮಾನಿಗಳೇ ಸಜ್ಜಾಗುತ್ತಾರೆ. ಬ್ಯಾನರ್ಗಳನ್ನು ಸಿದ್ಧಪಡಿಸುತ್ತಾರೆ. ಕೇಕ್, ಹೂವಿನ ಹಾರಗಳಿಗೆ ವಾರ ಮುಂಚೇ ಆರ್ಡರ್ ಕೊಟ್ಟು ಬಿಡುತ್ತಾರೆ. ಆದ್ರೀಗ ಅಪ್ಪು ಬರ್ತ್ಡೇ 100 ದಿನಗಳಿರುವಾಗಲೇ ಅಭಿಮಾನಿಗಳು ಪುನೀತ್ ನೆನೆಯಲು ಆರಂಭಿಸಿದ್ದಾರೆ. 100 ದಿನ ಬಾಕಿ ಇರುವಾಗಲೇ ಪೋಸ್ಟರ್ವೊಂದನ್ನು ರಿಲೀಸ್ ಮಾಡಿದ್ದಾರೆ. ಇದು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಪವರ್ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಇಡೀ ವಿಶ್ವದಲ್ಲೂ ಇದ್ದಾರೆ. ಅದರಲ್ಲೂ ಮುಂಬೈನಲ್ಲಿರುವ ಪುನೀತ್ ಅಭಿಮಾನಿಗಳು ಈ 100 ದಿನಗಳ ಅಭಿಯಾನವನ್ನು ಆರಂಭಿಸಿದ್ದಾರೆ. ಪುನೀತ್ ರಾಜ್ಕುಮಾರ್ ಬರ್ತ್ಡೇಗೆ 100 ದಿನವಿರುವ ಪೋಸ್ಟರ್ ರಿಲೀಸ್ ಮಾಡಿದ್ದಾರೆ. "ಯೂತ್ ಐಕಾನ್ ಅಪ್ಪು ಬಾಸ್ ಹುಟ್ಟುಹಬ್ಬಕ್ಕೆ 100 ದಿನ. ಯಾವಾಗಲೂ ನಮ್ಮೊಂದಿಗೆ ಇರುತ್ತಾರೆ. ಮತ್ತಷ್ಟು ಹತ್ತಿರ" ಎಂದು ಟ್ವೀಟ್ ಮಾಡಿದ್ದಾರೆ. ಅಪ್ಪು ಇರದ ನೋವನ್ನು ಈ ಮೂಲಕ ಅವರ ಫ್ಯಾನ್ಸ್ ಕಡಿಮೆ ಮಾಡಿಕೊಳ್ಳಲು ಮುಂದಾಗಿದ್ದಾರೆ.
ಪುನೀತ್ ಹುಟ್ಟುಹಬ್ಬದ ದಿನ ಮಾರ್ಚ್ 17ಕ್ಕೆ 'ಜೇಮ್ಸ್' ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಚಿತ್ರದ ಸ್ಯಾಟಲೈಟ್ ಹಕ್ಕುಗಳು ಈಗಾಗಲೇ 15 ಕೋಟಿಗೆ ಮಾರಾಟವಾಗಿದೆ. ಚಿತ್ರದ ನಿರ್ದೇಶಕ ಚೇತನ್ ಅಪ್ಪು ಅವರ ಹುಟ್ಟುಹಬ್ಬದ ದಿನ ಅವರ ಅಭಿಮಾನಿಗಳಿಗೆ ಬಹುದೊಡ್ಡ ಗಿಫ್ಟ್ ನೀಡಬೇಕೆಂದು ‘ಜೇಮ್ಸ್’ ಚಿತ್ರದ ಕೆಲಸಗಳನ್ನು ವೇಗವಾಗಿ ಮಾಡುತ್ತಿದ್ದಾರೆ. ಅಪ್ಪು ಅವರ ಮತ್ತೊಂದು ಸಿನಿಮಾ ಕೂಡ ಅನೌನ್ಸ್ ಆಗಿತ್ತು. ಲೂಸಿಯಾ ಪವನ್ ನಿರ್ದೇಶನ ದ್ವಿತ್ವ ಸಿನಿಮಾ ಶೂಟಿಂಗ್ ಶುರುವಾಗುವ ಮುನ್ನ ಅಪ್ಪು ಇಹಲೋಕ ತ್ಯಜಿಸಿದ್ದರು.
Published by:Vasudeva M
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ