ಚಿತ್ರರಂಗದಲ್ಲಿ ಎಲ್ಲಾ ರೀತಿಯ ಏಳು ಬೀಳುಗಳನ್ನು ನೋಡಿದ ನಟರಲ್ಲಿ ರವಿಚಂದ್ರನ್ (Ravichandran) ಒಬ್ಬರೂ, ಮೊದಲು ಸ್ಯಾಂಡಲ್ವುಡ್ (Sandalwood) ಹೇಗಿತ್ತು, ಈಗ ಹೇಗಿದೆ ಎಲ್ಲವನ್ನು ಬಲ್ಲ ನಟನಾ ಚತುರ ಇವರು. ಬಾಲ ನಟನಾಗಿ ಚಿತ್ರರಂಗಕ್ಕೆ ಬಂದು ನಂತರ ವಿಲನ್ (Villain) ಆಗಿ , ನಂತರ ನಟನಾಗಿ ಎಲ್ಲಕ್ಕಿಂತ ಹೆಚ್ಚಾಗಿ ಕ್ರೇಜಿ ಸ್ಟಾರ್ (Crazy Star) ಆಗಿ ಮೆರೆದ ಈ ನಟ, ಇಂದಿನ ಅದೆಷ್ಟೋ ನಟರಿಗೆ ಸ್ಫೂರ್ತಿ. ರವಿಚಂದ್ರನ್ ಸೃಷ್ಟಿಸಿದ ದಾಖಲೆ (Record) ಗಳನ್ನು ಯಾರಿಂದಲೂ ಮುರಿಯಲು ಸಾಧ್ಯವಾಗಲಿಲ್ಲ. ಮುರಿಯುವುದಿರಲಿ, ಅವರ ದಾಖಲೆಗಳ ಬಳಿ ಹೋಗಲು ಆಗುತ್ತಿರಲಿಲ್ಲ. ಆ ಕಾಲದಲ್ಲಿ ಕಾಸ್ಟ್ಲಿ ಸೆಟ್ಸ್ (Costly Sets) , ಗ್ರ್ಯಾಂಡ್ ಶೂಟಿಂಗ್ (Grand Shooting), ಕೋಟಿ ಕೋಟಿ ಖರ್ಚು ಮಾಡುತ್ತಿದ್ದವರು ಅಂದರೆ ಅದು ನಮ್ಮ ಕ್ರೇಜಿ ಸ್ಟಾರ್ ರವಿಚಂದ್ರನ್. ಅವರ ಒಂದೊಂದು ಸಿನಿಮಾ ಕೂಡ ಈಗ ಬಿಡುಗಡೆಯಾದರೂ ಹೌಸ್ಫುಲ್ ಪ್ರದರ್ಶನವಾಗುತ್ತೆ. ಅದರಲ್ಲೂ ಪ್ರೇಮಲೋಕ ಬಗ್ಗೆ ಹೇಳುವುದೇ ಬೇಡ.
ಸ್ಯಾಂಡಲ್ವುಡ್ನಲ್ಲಿ ಮತ್ತೆ ಸೃಷ್ಟಿಯಾಗುತ್ತಾ ಪ್ರೇಮಲೋಕ!
ಪ್ರೇಮಲೋಕ ಸಿನಿಮಾ ಅಂದರೆ ಥಟ್ ಅಂತ ರಿಚ್ನೆಸ್ ನೆನಪಿಗೆ ಬರುತ್ತೆ. ಅಬ್ಬಬ್ಬಾ ಒಂದೊಂದು ಹಾಡುಗಳು ಕೂಡ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಹಾಗೇ ಉಳಿದಿದೆ. ಜೂಹಿ ಚಾವ್ಲಾ ಹಾಗೂ ರವಿಚಂದ್ರನ್ ಪ್ರೇಮಲೋಕದಲ್ಲಿ ಹೊಸ ಲೋಕವನ್ನೇ ಸೃಷ್ಟಿ ಮಾಡಿದ್ದರು. ಪ್ರೇಮಲೋಕ ಬಂದು ಇಷ್ಟು ವರ್ಷಗಳು ಕಳೆದರು, ಇನ್ನೂ ಆ ಫೀಲ್ ಹೋಗಿಲ್ಲ. ಇದೀಗ ರವಿಚಂದ್ರನ್ ಪ್ರೇಮಲೋಕದ ಬಗ್ಗೆ ಮತ್ತೆ ಮಾತನಾಡಿದ್ದಾರೆ. ಈ ಬಾರಿ ಅವರ ಪ್ರೇಮಲೋಕದ ಬಗ್ಗೆ ಮಾತನಾಡಿಲ್ಲ. ಮತ್ತೊಮ್ಮೆ ಪ್ರೇಮಲೋಕ ಸೃಷ್ಟಿಸುವ ಬಗ್ಗೆ ಮಾತನಾಡಿದ್ದಾರೆ. ಈ ವಿಚಾರ ಇದೀಗ ಸಖತ್ ವೈರಲ್ ಆಗುತ್ತಿದೆ.
ಪ್ರೇಮಲೋಕ 2 ಸ್ಕ್ರಿಪ್ಟ್ 2 ರೆಡಿ ಇದೆ ಎಂದ ರವಿಮಾಮ!
ಇತ್ತೀಚೆಗೆ ಆ್ಯಂಕರ್ ಅನುಶ್ರೀ ಅವರ ಯೂಟ್ಯೂಬ್ ಚಾನೆಲ್ಗೆ ರಕ್ಷಿತ್ ಶೆಟ್ಟಿ ಭಾಗವಹಿಸಿದ್ದರು. ಜೊತೆಗೆ ಸ್ಯಾಂಡಲ್ವುಡ್ ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ಭಾಗಿಯಾಗಿದ್ದರು. ಅಪೂರ್ವ ಸಂಗಮ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಎಪಿಸೋಡ್ನಲ್ಲಿ ಹಲವಾರು ವಿಚಾರಗಳನ್ನು ಇಬ್ಬರು ನಟರು ಹಂಚಿಕೊಂಡಿದ್ದಾರೆ. ಇದೇ ವೇಳೆ ರವಿಚಂದ್ರನ್ ಪ್ರೇಮಲೋಕ 2 ಹಾಗೂ ರಣಧೀರ 2 ಕಥೆಗಳು ರೆಡಿಯಾಗಿದೆ. ರವಿ ಬೋಪಣ್ಣ ಸಿನಿಮಾ ಮುಗಿದ ಕೂಡಲೇ ಈ ಸಿನಿಮಾಗಳನ್ನು ಕೈಗೆತ್ತಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸ್ಯಾಂಡಲ್ವುಡ್ ಕ್ವೀನ್ ಬಗ್ಗೆ ಶೆಟ್ರು ಹಿಂಗ್ಯಾಕ್ ಅಂದ್ರು! ಏನಿಲ್ಲ ಏನಿಲ್ಲ ಅಂತಾನೇ ಚಮಕ್ ಕೊಟ್ರಾ?
ಪ್ರೇಮಲೋಕಕ್ಕೆ ಆ ನಟನೇ ಬೇಕು ಎಂದ ರವಿಚಂದ್ರನ್!
ಹೌದು, ಎರಡು ಸಿನಿಮಾಗಳ ಕಥೆಗಳು ರೆಡಿಯಿದೆ. ನನ್ನ ಮಕ್ಕಳಿಗೆ ಅಂತಾನೆ ಕಥೆ ರೆಡಿಮಾಡಿ ಇಟ್ಟಿದ್ದೇನೆ ಅವರೇ ಮಾಡಬೇಕು ಎಂದು ರವಿಚಂದ್ರನ್ ಹೇಳಿದ್ದಾರೆ. ಬೇರೆ ನಟರಿಗಿಂತ ನನ್ನ ಮಕ್ಕಳು ಈ ಸಿನಿಮಾಗಳಲ್ಲಿ ನಟಿಸಬೇಕು ಎಂದು ಅವರು ಹೇಳಿದ್ದಾರೆ. ಇದು ತಾನು ನಟಿಸಿದ ಸಿನಿಮಾಗಳ ಸೀಕ್ವೆಲ್ ಅಲ್ಲ. ಇದು ಈಗಿನ ಜನರೇಶನ್ ಸಿನಿಮಾ ಮಾಡುತ್ತೇನೆ ಎಂದು ರವಿಚಂದ್ರನ್ ಹೇಳಿದ್ದಾರೆ. ಈ ವಿಚಾರ ತಿಳಿದು ರವಿಚಂದ್ರನ್ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.
ಇದನ್ನೂ ಓದಿ: ಇಂದು ಸ್ಯಾಂಡಲ್ವುಡ್ ಕ್ರೇಜಿಸ್ಟಾರ್ ಜನ್ಮದಿನ - 'ಬೋಪಣ್ಣ'ಗೆ ಭರ್ಜರಿ ಬರ್ತ್ ಡೇ ಗಿಫ್ಟ್
'ಕುಲಗೌರವ' ಚಿತ್ರದಲ್ಲಿ ಬಾಲನಟನಾಗಿ ಡಾ ರಾಜ್ಕುಮಾರ್ ಜೊತೆಗೆ ರವಿಚಂದ್ರನ್ ಮೊದಲು ಬಣ್ಣ ಹಚ್ಚಿದ್ದರು. ನಂತರ 1982ರಲ್ಲಿ ‘ಖದೀಮ ಕಳ್ಳರು’ ಚಿತ್ರದಲ್ಲಿ ವಿಲನ್ ಆಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ, ಈ ಹೀರೋ ನಂತರ ತಿರುಗಿ ನೋಡಿಲ್ಲ. ರಣಧೀರ, ಅಂಜದ ಗಂಡು, ರಾಮಚಾರಿ, ಹಳ್ಳಿ ಮೇಷ್ಟ್ರು, ಯುದ್ಧಕಾಂಡ, ಅಣ್ಣಯ್ಯ, ಪುಟ್ನಂಜ, ಸಿಪಾಯಿ, ಯಾರೇ ನೀನು ಚೆಲುವೆ, ರೋಜಾ, ಮಾಂಗಲ್ಯಂ ತಂತುನಾನೇನಾ, ಪ್ರೀತ್ಸೋದ್ ತಪ್ಪಾ., ಇವರ ಅದ್ಭುತ ಚಿತ್ರಗಳ ಲಿಸ್ಟ್ ಮಾಡುತ್ತಾ ಹೋದರೆ ಮುಗಿಯುವುದಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ