• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Bigg Boss 8: ಪರಿಸ್ಥಿತಿಯ ಲಾಭ ಪಡೆದು ದಿವ್ಯಾ ಸುರೇಶ್- ಮಂಜು​ ಕಣ್ಣೀರಿಗೆ ಕಾರಣವಾದ್ರ ಪ್ರಶಾಂತ್​ ಸಂಬರಗಿ..!

Bigg Boss 8: ಪರಿಸ್ಥಿತಿಯ ಲಾಭ ಪಡೆದು ದಿವ್ಯಾ ಸುರೇಶ್- ಮಂಜು​ ಕಣ್ಣೀರಿಗೆ ಕಾರಣವಾದ್ರ ಪ್ರಶಾಂತ್​ ಸಂಬರಗಿ..!

ದಿವ್ಯಾ ಸುರೇಶ್​ ಹಾಗೂ 
ಪ್ರಶಾಂತ ಸಂಬರಗಿ

ದಿವ್ಯಾ ಸುರೇಶ್​ ಹಾಗೂ ಪ್ರಶಾಂತ ಸಂಬರಗಿ

Prashanth Sambargi - Divya Suresh: ಟಾಸ್ಕ್​ ಅನ್ನೇ ಅಸ್ತ್ರವಾಗಿಟ್ಟುಕೊಂಡು ಪ್ರಶಾಂತ್​ ಸಂಬರಗಿ ಮನೆಯವರಿಗೆ ಸರಿಯಾಗಿ ಆಟವಾಡಿಸುತ್ತಿದ್ದಾರೆ. ಇನ್ನು ಇದನ್ನೇ ಮುಂದಿಟ್ಟುಕೊಂಡು ಪ್ರಶಾಂತ್​ ಸಂಬರಗಿ ಅವರು ದಿವ್ಯಾ ಸುರೇಶ್ ಹಾಗೂ ಮಂಜು ಪಾವಗಡ ಅವರ ಮನಸ್ಸಿಗೆ ನೋವಾಗುವಂತೆಯೂ ಮಾಡುತ್ತಿದ್ದಾರೆ.

ಮುಂದೆ ಓದಿ ...
  • Share this:

ಬಿಗ್​ ಬಾಸ್ ಸೀಸನ್​ 8ರ ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಸಾಕಷ್ಟು ವಾದ-ವಿವಾದಗಳ ಜೊತೆಗೆ ಜಗಳ ಹಾಗೂ ಮನಸ್ತಾಪ ಕೊಂಚ ಹೆಚ್ಚಾಗಿದೆ ಎಂದರೆ ತಪ್ಪಾಗದು. ಸೂಪರ್ ಸಂಡೆ ವಿಥ್ ಸುದೀಪ ಸಂಚಿಕೆಯಲ್ಲಿ ಡಿ ಜೆ ಚಕ್ರವರ್ತಿ ಚಂದ್ರಚೂಡ ಹಾಗೂ  ಮಂಜು ಪಾವಗಡ ಅವರ ನಡುವೆ ದೊಡ್ಡ ವಾಗ್ವಾದವೇ ನಡೆಯು ಹೋಯಿತು. ಚಂದ್ರಚೂಡ ಅವರು ಮೊದಲ ಇನ್ನಿಂಗ್ಸ್​ ಮುಗಿದು ಮನೆಗೆ ಹೋದಾಗ ಕೆಲವು ಯೂಟ್ಯೂಬ್​ ಚಾನಲ್​ಗಳಲ್ಲಿ ದಿವ್ಯಾ ಸುರೇಶ್ ಹಾಗೂ ಮಂಜು ಪಾವಗಡ ಅವರ ಸ್ನೇಹ ಸಂಬಂಧವಕ್ಕೆ ಫೇಕ್​ ಲವ್​ ಸ್ಟೋರಿಯ ಹೆಸರು ಕೊಟ್ಟು ಟೀಕೆ ಮಾಡಿದ್ದಾರೆ. ಇದಕ್ಕೆ ಪ್ರಶಾಂತ್ ಸಂಬರಗಿ ಅವರೂ ಹೊರತಾಗಿಲ್ಲ. ಅವರೂ ಸಹ ದಿವ್ಯಾ ಸುರೇಶ್ ಹಾಗೂ ಮಂಜು ಪಾವಗಡ ಅವರ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಈ ಕುರಿತಾಗಿ ಬಿಗ್ ಬಾಸ್​ ಮನೆಗೆ ಸ್ಪರ್ಧಿಗಳು ಮತ್ತೆ ಹೋದ ದಿನವೇ ನಡೆದ ಮೊದಲ ನಾಮಿನೇಶನ್ ಪ್ರಕ್ರಿಯೆಯಂದು ಈ ಎಲ್ಲ ವಿಷಯಗಳು ಹೊರ ಬಿದ್ದಿದ್ದವು. 


ಹೊರಗೆ ಹಾಗೂ ಒಳಗೆ ಸ್ಪರ್ಧಿಗಳು ಇತರೆ ಸ್ಪರ್ಧಿಗಳ ಕುರಿತಾಗಿ ಮಾತನಾಡಿರುವ ವಿಡಿಯೋ ಕ್ಲಿಪ್​ಗಳ ಆಧಾರದ ಮೇಲೆಯೇ ಮೊದಲ ನಾಮಿನೇಶನ್​ ನಡೆದಿದ್ದು. ಆದರೆ ಬಿಗ್ ಬಾಸ್​ ಮನೆಯಲ್ಲಿ ಈ ಸಲ ಮೊದಲ ವಾರದ ಎಲಿಮಿನೇಶನ್​ ಪ್ರಕ್ರಿಯೆ ನಡೆಯಲಿಲ್ಲ. ಕಾರಣ ಎಲಿಮಿನೇಶನ್​ ಪ್ರಕ್ರಿಯೆಗೆ ಟ್ವಿಸ್ಟ್ ಕೊಟ್ಟು ಅದನ್ನು ಮುಂದಿನ ವಾರಕ್ಕೆ ಮುಂದೂಡಲಾಗಿದೆ.


Kichcha Sudeep, Prashanth Sambargi, Manju Pavagada,ಕುರ್ಚಿ ಪಾಲಿಟಿಕ್ಸ್​, ವಾರದ ಕತೆ ಕಿಚ್ಚನ ಜೊತೆ, ಮಂಜು ಪಾವಗಡ, ಪ್ರಶಾಂತ್​ ಸಂಬರಗಿ, Vaarada Kathe Kichchana Jote, Kurchi Politics, Bigg Boss 8 Nomination, Bigg Boss 8 Contestants, ದಿವ್ಯಾ ಸುರೇಶ್​, ಬಿಗ್​ ಬಾಸ್​ 8 ನಾಮಿನೇಷನ್​, ಅರವಿಂದ್​ ಕೆ ಪಿ, ದಿವ್ಯಾ ಉರುಡುಗ, ಮಂಜು ಪಾವಗಡ, Manju Pavagada, Divya Suresh, Divya Uruduga, Aravind, Bigg Boss 8 Kannada, Bigg Boss 8 Winner, Divya Uruduga, Divya Suresh, Manju Pavagada, ದಿವ್ಯಾ ಉರುಡುಗ- ಸುರೇಶ್​ ನಡುವೆ ಜಗಳ, ಬಿಗ್​ ಬಾಸ್​ ಸೆಕೆಂಡ್​ ಇನ್ನಿಂಗ್ಸ್​ ಮೊದಲ ಮಹಾ ಸಂಚಿಕೆ, Bigg Boss 8 second innings first episode, Kichcha Sudeep, Aravind, Bigg Boss Second innings, Bigg Boss Second innings from June 23rd, colors kannada, Bigg Boss, ಬುಧವಾರದಿಂದ ಬಿಗ್​ ಬಾಸ್ 8ರ 2ನೇ ಇನ್ನಿಂಗ್ಸ್ ಆರಂಭ, bigg boss kannada, Bigg Boss Kannada 8, Divya Suresh, Sandalwood, Rowdy Baby, Divya Suresh Kissing video, Lip Lock Video, Divya Suresh hot photos, ದಿವ್ಯಾ ಸುರೇಶ್​ ಹಾಟ್​ ಫೋಟೋಗಳು, ದಿವ್ಯಾ ಸುರೇಶ್​ ಕಿಸ್ಸಿಂಗ್​ ವಿಡಿಯೋ, ರೌಡಿ ಬೇಬಿ ಕನ್ನಡ ಸಿನಿಮಾ, Bigg Boss 8 weekend with Kichcha Sudeep and Who will win in this Kurchi Politics ae
ವಾರದ ಕತೆ ಕಿಚ್ಚನ ಜೊತೆ


ಹೌದು, ಮೊದಲಿಗೆ ಪ್ರಶಾಂತ್ ಸಂಬರಗಿ ಮನೆಯಿಂದ ಹೊರ ಹೋದ ಮೊದಲ ಸ್ಪರ್ಧಿ ಎಂದು ಪ್ರಕಟಿಸಿದ ಸುದೀಪ್​, ಅದು ಕೇವಲ ಪ್ರ್ಯಾಂಕ್ ಎಂದು ಮನೆಯವರ ಬಳಿ ಹೇಳಿದರು. ಆಗಲೇ ಪ್ರಶಾಂತ್​ ಸಂಬಗರಿ ಅವರಿಗೆ ಇದ್ದರೂ ಮನೆಯಲ್ಲಿ ಇಲ್ಲದಂತೆ ಇರುವ ಟಾಸ್ಕ್​ ಕೊಟ್ಟಿದ್ದು ಬಿಗ್​ ಬಾಸ್​.




ಈ ಟಾಸ್ಕ್​ನಲ್ಲಿ ಪ್ರಶಾಂತ್​ ಸಂಬರಗಿ ಎದುರು ಬಂದರೂ ಮನೆಯವರು ಮಾತ್ರ ಅಲ್ಲಿ ಯಾರೂ ಇಲ್ಲದಂತೆ ವರ್ತಿಸಬೇಕು. ಆದರೆ ಪ್ರಶಾಂತ್ ಸಂಬರಗಿ ಅವರು ಮನೆಯವರನ್ನು ಮಾತನಾಡಿಸುವ ಹಾಗೂ ಕಾಡಿಸುವ ಪ್ರಯತ್ನ ಮಾಡುತ್ತಿರುತ್ತಾರೆ.


ಇದನ್ನೂ ಓದಿ: Bigg Boss 8: ಚಕ್ರವರ್ತಿ-ಮಂಜು ನಡುವಿನ ವಾದ-ವಿವಾದ: ಖ್ಯಾತ ನಟಿಯ ಜತೆಗಿನ ವಿಚ್ಛೇದನದ ವಿಷಯ ಚರ್ಚೆಗೆ ಬಂತು..!


ಈ ಟಾಸ್ಕ್​ ಅನ್ನೇ ಅಸ್ತ್ರವಾಗಿಟ್ಟುಕೊಂಡು ಪ್ರಶಾಂತ್​ ಸಂಬರಗಿ ಮನೆಯವರಿಗೆ ಸರಿಯಾಗಿ ಆಟವಾಡಿಸುತ್ತಿದ್ದಾರೆ. ಇನ್ನು ಇದನ್ನೇ ಮುಂದಿಟ್ಟುಕೊಂಡು ಪ್ರಶಾಂತ್​ ಸಂಬರಗಿ ಅವರು ದಿವ್ಯಾ ಸುರೇಶ್ ಹಾಗೂ ಮಂಜು ಪಾವಗಡ ಅವರ ಮನಸ್ಸಿಗೆ ನೋವಾಗುವಂತೆಯೂ ಮಾಡುತ್ತಿದ್ದಾರೆ.




ಹೌದು, ತಾನು ಮನೆಯಿಂದ ಹೊರಗೆ ಹೋದಾಗ ಕೊಟ್ಟಿರುವ ಸಂದರ್ಶನಗಳಲ್ಲಿ ಫೇಕ್ ಲವ್​ ಸ್ಟೋರಿಗಳ ಬಗ್ಗೆ ಹೇಳಿದ್ದೇನೆ. ಇನ್ನು ತಮ್ಮ ಮನೆಯ ಸೆಕ್ಯೂರಿಟಿಗಾರ್ಡ್​ಗೆ ಸಂಬಳ ಎಷ್ಟು ಗೊತ್ತಾ..? ಅವರಿಗೆ 30 ಸಾವಿರ ಸಂಬಳ ಕೊಡ್ತೇನೆ ಎಂದೆಲ್ಲ ಕಿರಿ ಕಿರಿ ಮಾಡುವ ಮಾತುಗಳನ್ನು ಆಡುತ್ತಿದ್ದಾರೆ.


ಇದನ್ನೂ ಓದಿ: Bigg Boss 8: ದಿವ್ಯಾ ಸುರೇಶ್​-ಪ್ರಿಯಾಂಕಾ ತಿಮ್ಮೇಶ್​ರನ್ನು ಟಾರ್ಗೆಟ್ ಮಾಡಿದ ಚಕ್ರವರ್ತಿ ಚಂದ್ರಚೂಡ


ಮಂಜು ಅವರನ್ನು ದಿವ್ಯಾ ಸುರೇಶ್​ ಅವರ ಬಾಡಿಗಾರ್ಡ್​ ಹಾಗೂ ಸೆಕ್ಯೂರಿಟಿ ಗಾರ್ಡ್​ ಎಂದೆಲ್ಲ ಈ ಹಿಂದೆಯೂ ಸಂಬರಗಿ ಕರೆದಿದ್ದರು. ಈಗಲೂ ಅದನ್ನೇ ಮುಂದುವರೆಸುತ್ತಾ ದಿವ್ಯಾ ಸುರೇಶ್ ಅವರು ಕಣ್ಣೀರಿಡುವಂತೆ ಮಾಡಿದ್ದಾರೆ. ಇನ್ನು ಬೆಳಿಗಿನಿಂದ ಎಷ್ಟೇ ಪಾಸಿಟಿವ್​ ಆಗಿ ಇರಲು ಪ್ರಯತ್ನಿಸಿದರೂ ಹಾಗೆ ಇರಲು ಬಿಡದೆ ಚುಚ್ಚು ಮಾತುಗಳಿಂದ ಪ್ರಶಾಂತ್ ನೋವು ಮಾಡುತ್ತಿದ್ದಾರೆಂದು ಪ್ರಿಯಾಂಕಾ ಬಳಿ ದಿವ್ಯಾ ಸುರೇಶ್ ಅಳಲು ತೋಡಿಕೊಂಡಿದ್ದಾರೆ. ಇನ್ನು ಮಂಜು ಪಾವಗಡ ಸಹ ಪ್ರಶಾಂತ್​ ಅವರ ಮಾತಿನಿಂದ ನೊಂದು ಕಣ್ಣೀರಿಟ್ಟಿದ್ದಾರೆ.


ಇನ್ನು ಪ್ರಶಾಂತ್​ ಸಂಬರಗಿ ಮನೆಯಲ್ಲಿ ದಿವ್ಯಾ ಉರುಡುಗ, ರಘು, ವೈಷ್ಣವಿ, ಚಕ್ರವರ್ತಿ ಚಂದ್ರಚೂಡ ಹಾಗೂ ಶಮಂತ್ ಅವರನ್ನು ಮಾತನಾಡಿಸಲು ಸಿಕ್ಕಾಪಟ್ಟೆ ಪ್ರಯತ್ನ ಮಾಡುತ್ತಿದ್ದಾರೆ.

Published by:Anitha E
First published: