ಸಲಾರ್, (Salaar) ಸದ್ಯ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಹುಟ್ಟು ಹಾಕಿರೋ ಸಿನಿಮಾ. ಈ ಚಿತ್ರವನ್ನು ಪ್ರಕಟಿಸಿದಾಗಿನಿಂದಲೇ ಪ್ರಭಾಸ್ (Prabhas) ಹಾಗೂ ಪ್ರಶಾಂತ್ ನೀಲ್ (Prashanth Neel) ಅಭಿಮಾನಿಗಳಲ್ಲಿ ಊಹೆಗೂ ಮೀರಿದ ನಿರೀಕ್ಷೆ ಈ ಸಿನಿಮಾದ ಮೇಲೆ ಹುಟ್ಟಿಕೊಂಡಿದೆ. ಅದಕ್ಕೆ ಕಾರಣನೇ ಪ್ರಶಾಂತ್ ನೀಲ್ ಹಾಗೂ ಬಾಹುಬಲಿ ಪ್ರಭಾಸ್ ಕಾಂಬಿನೇಷನ್ ಅಂದರೆ ತಪ್ಪಾಗದು. ಒಂದು ಕಡೆ ಬಾಹುಬಲಿ ಮೂಲಕ ಜಾಗತಿಕ ಮಟ್ಟಕ್ಕೆ ಪರಿಚಯವಾದ ನಟ, ಇನ್ನೊಂದು ಕಡೆ ಕರ್ನಾಟಕಕ್ಕೆ ಮಾತ್ರ ಸಿಮೀತ ಅನಿಸಿಕೊಂಡಿದ್ದ ಚಿತ್ರರಂಗವನ್ನು ರಾಷ್ಟ್ರಮಟ್ಟಕ್ಕೆ ತೆಗೆದುಕೊಂಡು ಹೋದ ನಿರ್ದೇಶಕ. ಇವರಿಬ್ಬರು ಒಂದಾಗಿದ್ದಾರೆ ಎಂದರೆ ಆ ಸಿನಿಮಾ ಮೇಲಿನ ನಿರೀಕ್ಷೆ ಚಿತ್ರಪ್ರೇಮಿಗಳಲ್ಲಿ ಎಷ್ಟಿರಬಹುದು ಎಂದು ನೀವೇ ಯೋಚಿಸಿ. ಕೆಜಿಎಫ್-2 ಸಿನಿಮಾದ ಚಿತ್ರೀಕರಣ ಮುಗಿಸಿರುವ ನಿರ್ದೇಶಕ ಪ್ರಶಾಂತ್ ನೀಲ್ ಸದ್ಯ ಸಲಾರ್ ಚಿತ್ರದಲ್ಲಿ ವ್ಯಸ್ತರಾಗಿದ್ದಾರೆ. ಅತ್ತ ಪ್ರಭಾಸ್ ಸಹ ರಾಧೆ ಶ್ಯಾಮ್ ಶೂಟಿಂಗ್ ಮುಗಿಸಿ ಈಗಾಗಲೇ ಸಲಾರ್ ಚಿತ್ರತಂಡ ಸೇರಿಕೊಂಡಿದ್ದಾರೆ. ಜತೆಗೆ ಆದಿಪುರುಷ್ ಚಿತ್ರೀಕರಣದಲ್ಲೂ ಭಾಗಿಯಾಗುತ್ತಿದ್ದಾರೆ.
ಸಲಾರ್ ಚಿತ್ರೀಕರಣ ಆರಂಭವಾಗುತ್ತಿದ್ದಂತೆಯೇ ಚಿತ್ರೀಕರಣದ ಸೆಟ್ನಲ್ಲಿ ನಡೆದ ಬೆಂಕಿ ಅವಘಡದಿಂದಾಗಿ ಶೂಟಿಂಗ್ಗೆ ಕೆಲ ಕಾಲ ಬ್ರೇಕ್ ಬಿದ್ದಿತ್ತು. ಇನ್ನು ಈ ಸಿನಿಮಾದ ನಾಯಕಿಯಾರೆಂದು ಚಿತ್ರತಂಡ ಈಗಾಗಲೇ ಪ್ರಕಟಿಸಿದೆ. ಜೊತೆ ಮೆಲ್ಲನೆ ಇತರೆ ತಾರಾಗಣದ ಪ್ರಕಟಣೆ ಆಗಲಿದೆ. ಹೀಗಿರುವಾಗಲೇ ನಿರ್ದೇಶಕ ಪ್ರಶಾಂತ್ ನೀಲ್ ಸಲಾರ್ ಸಿನಿಮಾದ ರಿಲೀಸ್ ದಿನಾಂಕ ಪ್ರಕಟಿಸಿದ್ದಾರೆ.
View this post on Instagram
View this post on Instagram
ಇದನ್ನೂ ಓದಿ: ಸ್ಟನ್ನಿಂಗ್ ಲುಕ್ಸ್ನಲ್ಲಿ ರಾಬರ್ಟ್ ರಾಣಿ ಆಶಾ ಭಟ್..!
ಮೂಲಗಳ ಪ್ರಕಾರ ಸ್ವತಃ ಪ್ರಭಾಸ್ ಗೆ ಪ್ರಶಾಂತ್ ನೀಲ್ ಜೊತೆ ಕೆಲಸ ಮಾಡುವ ಇಚ್ಛೆ ಉಂಟಾಗಿದೆ. ಯಾಕೆಂದರೆ ಸದ್ಯ ರಿಲೀಸ್ ಗೆ ಸಜ್ಜಾಗುತ್ತಿರುವ ರಾಧೆ ಶ್ಯಾಮಾ ತುಂಬಾ ಸಾಫ್ಟ್ ಲವ್ ಸ್ಟೋರಿ, ಅದರಲ್ಲಿ ಒಂದೇ ಒಂದು ಆ್ಯಕ್ಷನ್ ಸಹ ಇಲ್ವಂತೆ. ಹೀಗಿರುವಾಗ ಉತ್ತರ ಭಾರತದಲ್ಲಿ, ಅದರಲ್ಲೂ ಬಿಹಾರದಲ್ಲಿ ಅತಿ ಹೆಚ್ಚು ಅಭಿಮಾನಿ ಬಗಳವನ್ನು ಹೊಂದಿರುವ ಪ್ರಭಾಸ್ ಗೆ ಅಲ್ಲೆಲ್ಲ ರಾಧೆ ಶ್ಯಾಮಾ ಕ್ಲಿಕ್ ಆಗಲಿದೆ ಎಂಬ ಅನುಮಾನ ಇದೆಯಂತೆ. ಹೀಗಾಗಿ ತನಗಿರೋ ಇಮೇಜನ್ನ ಕಾಪಾಡಿಕೊಂಡು, ಅದನ್ನು ಹಾಗೇ ಉಳಿಸಿಕೊಂಡು ಬೆಳೆಸಿಕೊಂಡು ಹೋಗಲು ಪ್ರಭಾಸ್ ಗೆ ತುರ್ತಾಗಿ ಒಂದು ಮಾಸ್ ಸಿನಿಮಾ ಬೇಕಾಗಿದ್ದು, ಸ್ವತಃ ಪ್ರಭಾಸ್ ಹಾಗೂ ಅವರ ಟೀಮ್ ಪ್ರಶಾಂತ್ ನೀಲ್ ಅವರಿಗೆ ಸಿನಿಮಾ ಮಾಡಿಕೊಡುವಂತೆ ಆಫರ್ ಕೊಟ್ಟಿದ್ದರು ಎಂದೂ ಹೇಳಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ