Prakash Raj: ನನ್ನ ಕನ್ನಡ ಅವಮಾನಿಸಿದ್ರೆ ನಿಂತು ಹೋರಾಡ್ತೀನಿ ಎಂದ ಕೆಜಿಎಫ್ ನಟ

ಕನ್ನಡ ಪರ ಧ್ವನಿ ಎತ್ತಿದ ನಟ ಪ್ರಕಾಶ್ ರಾಜ್

ಕನ್ನಡ ಪರ ಧ್ವನಿ ಎತ್ತಿದ ನಟ ಪ್ರಕಾಶ್ ರಾಜ್

ಸೌತ್ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ವಿರುದ್ಧ ಬಹಳಷ್ಟು ಜನರು ಧ್ವನಿ ಎತ್ತಿದ್ದಾರೆ. ಇವರಲ್ಲಿ ಪ್ರಮುಖರು ನಟ ಪ್ರಕಾಶ್ ರಾಜ್. ನಟ ಈಗ ಕನ್ನಡದ ಪರ ಧ್ವನಿ ಎತ್ತಿದ್ದಾರೆ.

  • News18 Kannada
  • 4-MIN READ
  • Last Updated :
  • Bangalore, India
  • Share this:

ದಕ್ಷಿಣ ಭಾರತದ ರಾಜ್ಯಗಳಲ್ಲಿ (South Indian States) ಹಿಂದಿ ಹೇರಿಕೆ  (Hindi Imposition)ವಿರುದ್ಧ ಹಿಂದಿನಿಂದಲೂ ವಿರೋಧ ಇದೆ. ಇತ್ತೀಚಿನ ವರ್ಷಗಳಲ್ಲಿ ಹಿಂದಿ ಹೇರಿಕೆಯನ್ನು ಬಹಳಷ್ಟು ಸೆಲೆಬ್ರಿಟಿಗಳು (Celebrity) ಕೂಡಾ ವಿರೋಧಿಸಿದ್ದಾರೆ. ಇದರಲ್ಲಿ ನಟ ಪ್ರಕಾಶ್ ರಾಜ್ (Prakash Raj) ಹೆಸರು ಮೊದಲಿಗೆ ಕೇಳಿ ಬರುತ್ತದೆ. ಅವರ ಕೆಲವು ಸಿನಿಮಾಗಳಲ್ಲಿಯೂ ಹಿಂದಿಭಾಷೆಗೆ ಸೂಚ್ಯವಾಗಿ ಟಾಂಗ್ ಕೊಡುವ ದೃಶ್ಯಗಳಿರುತ್ತವೆ. ಇದೀಗ ನಟ ಕನ್ನಡದ (Kannada) ಪರವಾಗಿ ಮಾತನಾಡಿದ್ದಾರೆ. ಬರೋಬ್ಬರಿ 7 ಭಾಷೆಗಳನ್ನು  (Language) ಮಾತನಾಡಬಲ್ಲ ಸೌತ್​ನ ಸಿನಿ ಪ್ರತಿಭೆ ಪ್ರಕಾಶ್ ಏನು ಹೇಳಿದ್ದಾರೆ ಗೊತ್ತೇ?


ಹಿಂದಿ ಹೇರಿಕೆಗೆ ವಿರೋಧ


ಪ್ರಕಾಶ್ ರಾಜ್ ಅವರು ಮೊದಲಿನಿಂದಲೂ ಹಿಂದಿ ಹೇರಿಕೆಯನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಅವರು ತಮಿಳುನಾಡಿನಲ್ಲಿಯೂ ಹಿಂದಿ ಭಾಷಾ ಹೇರಿಕೆಯನ್ನು ವಿರೋಧಿಸಿದ್ದರು. ಈಗ ಕನ್ನಡ ಭಾಷೆಯ ಪರ ಮಾತನಾಡಿದ್ದಾರೆ.


ಪ್ರಕಾಶ್ ರಾಜ್ ಅವರ ಟ್ವೀಟ್


ಪ್ರಕಾಶ್ ರಾಜ್ ಅವರು ಟ್ವೀಟ್ ಮಾಡಿದ್ದು ವೈರಲ್ ಆಗಿದೆ. ಅದರಲ್ಲಿ ನಟ ಸ್ಪೆಷಲ್ ಟೀಶರ್ಟ್ ಧರಿಸಿದ್ದಾರೆ. ಆದರೆ ಈ ಫೋಟೋ ವೈರಲ್ ಆಗುತ್ತಿದ್ದಂತೆ ವಕೀಲರೊಬ್ಬರು ಟ್ವೀಟ್ ಮಾಡಿದ್ದಾರೆ.



ಕರ್ನಾಟಕ ರಾಜ್ಯದ ಮ್ಯಾಪ್ ಒಳಗೆ ‘ನಂಗೆ ಹಿಂದಿ ಬರಲ್ಲ ಹೋಗ್ರಪ್ಪ’ ಎಂದು ಬರೆದುಕೊಂಡಿರುವ ಶರ್ಟ್​ ಧರಿಸಿಕೊಂಡು ಪ್ರಕಾಶ್ ರಾಜ್ ಪೋಸ್ ಕೊಟ್ಟಿದ್ದಾರೆ. ಈ ಫೋಟೋವನ್ನು ಸುಪ್ರೀಂಕೋರ್ಟ್ ವಕೀಲ ಶಶಾಂಕ್ ಶೇಖರ್ ಖಾ ಅವರು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಇದಕ್ಕೆ ಕ್ಯಾಪ್ಶನ್ ನೀಡಿರುವ ಅವರು, ತಮಿಳುನಾಡು ಪೊಲೀಸರೇ ಪ್ರಕಾಶ್ ರಾಜ್ ವಿರುದ್ಧ ಎಫ್​ಐಆರ್​ ದಾಖಲು ಮಾಡಿಕೊಂಡಿದ್ದೀರೇ ಎಂದು ಪ್ರಶ್ನಿಸಿದ್ದಾರೆ ಮಾಡಿದ್ದಾರೆ. ಈ ಟ್ವೀಟ್​​ ವಿರುದ್ಧ ಪ್ರಕಾಶ್ ರಾಜ್ ಸಿಟ್ಟಾಗಿದ್ದಾರೆ.




ಇದನ್ನೂ ಓದಿ: The Kashmir Files: ತೀರ್ಪುಗಾರರು ಉಗಿದರೂ ಬುದ್ಧಿ ಬರ್ಲಿಲ್ಲ! ಕಾಶ್ಮೀರಿ ಫೈಲ್ಸ್​ ನಾನ್ಸೆನ್ಸ್ ಎಂದ ಪ್ರಕಾಶ್ ರಾಜ್


ನನ್ನ ಬೇರು.. ನನ್ನ ಮೂಲ ನನ್ನ ಕನ್ನಡ.. ನನ್ನ ತಾಯನ್ನು ಗೌರವಿಸದೆ ನಿನ್ನ ಹಿಂದಿಯನ್ನು ಹೇರಿದರೆ ನಾವು ಹೀಗೇ ಪ್ರತಿಭಟಿಸುತ್ತೇವೆ.. ಹೆದರೊಲ್ಲ, ಅಷ್ಟೇ’ ಎಂದು ಪ್ರಕಾಶ್ ರಾಜ್ ಅವರು ಶಶಾಂಕ್ ಶೇಖರ್​ ಟ್ವೀಟ್​ಗೆ ಉತ್ತರಿಸಿದ್ದಾರೆ. ನಂತರ ಮತ್ತೊಂದು ಟ್ವೀಟ್ ಮಾಡಿ ಎಚ್ಚರಿಕೆ ನೀಡುವ ಕೆಲಸ ಮಾಡಿದ್ದಾರೆ.



ಪ್ರಕಾಶ್ ರಾಜ್ ಹೇಳಿಕೆಗೆ ಬಹಳಷ್ಟು ಜನರು ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ನಟ ಕೊಟ್ಟ ಖಡಕ್ ಉತ್ತರ ಕನ್ನಡಿಗರಿಗೆ ಮೆಚ್ಚುಗೆಯಾಗಿದೆ. ಕನ್ನಡ ಪ್ರೇಮಿಗಳು ಪ್ರಕಾಶ್ ರಾಜ್ ಅವರ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ.




ಖಳ ನಾಯಕನ ಪಾತ್ರದಲ್ಲಿ ಫೇಮಸ್


ಪ್ರಕಾಶ್ ರಾಜ್ ಅವರು ಖಳನಾಯಕನ ಪಾತ್ರಗಳ ಮೂಲಕ ಚಿತ್ರರಂಗದಲ್ಲಿ ಹೆಚ್ಚು ಗುರುತಿಸಿಕೊಂಡಿದ್ದಾರೆ. ಆದರೆ ವಿಲನ್ ರೋಲ್ ಮಾಡಿದಷ್ಟೇ ಚೆನ್ನಾಗಿ ಉಳಿದ ರೋಲ್​ಗಳನ್ನೂ ಮಾಡುತ್ತಾರೆ. ಇದರ ಜೊತೆಗೆ ಪೋಷಕ ಪಾತ್ರಗಳ ಮೂಲಕವೂ ಅವರು ಪ್ರೇಕ್ಷಕರನ್ನು ಸೆಳೆಯುತ್ತಾರೆ.


ಎಲ್ಲ ಭಾಷೆಗೂ ಡಬ್ ಮಾಡ್ತಾರೆ


ಬಹುತೇಕ ಎಲ್ಲ ಚಿತ್ರರಂಗದಲ್ಲಿಯೂ ಅವರ ಪಾತ್ರಗಳಿಗೆ ಅವರೇ ಡಬ್ ಮಾಡುತ್ತಾರೆ ಎನ್ನುವುದು ಮತ್ತೊಂದು ವಿಶೇಷ. ತಮಿಳು, ತೆಲುಗು ಭಾಷೆಗಳಲ್ಲಿ ಸಿನಿಮಾ ಮಾಡುತ್ತಲೇ ಇರುತ್ತಾರೆ. ಇತ್ತೀಚೆಗೆ ವಿಜಯ್ ಅಭಿನಯದ ವಾರಿಸು ಸಿನಿಮಾದಲ್ಲಿಯೂ ವಿಲನ್ ರೋಲ್ ಮಾಡಿದ್ದಾರೆ.

Published by:Divya D
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು