ಸುಶಾಂತ್ ಸಿಂಗ್ ರಜಪೂತ್ ಅವರ ಅಗಲಿಕೆಯಿಂದಾಗಿ ಇಡೀ ಸಿನಿರಂಗವನ್ನೇ ಶಾಕ್ನಲ್ಲಿದೆ. ಸುಶಾಂತ್ ಅವರ ನಿಧನ ಮತ್ತೊಮ್ಮೆ ಸಿನಿರಂದಲ್ಲಿನ ಸ್ವಜನಪಕ್ಷಪಾತದ ಕುರಿತು ಚರ್ಚೆಗೆ ಕಾರಣವಾಗಿದೆ. ಸ್ವಜನಪಕ್ಷಪಾತದ ಕಾರಣದಿಂದಲೇ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದು ಎಂದು ನೆಟ್ಟಿಗರು ಆರೋಪಿಸುತ್ತಿದ್ದಾರೆ.
ಟ್ವಿಟರ್ನಲ್ಲಿ ಈಗಾಗಲೇ ಸ್ವಜನಪಕ್ಷಪಾತದ ಕುರಿತಾಗಿ ಸಾಕಷ್ಟು ಮಂದಿ ಟ್ವೀಟ್ ಮಾಡುತ್ತಿದ್ದು, ಬಿ-ಟೌನ್ನ ಸಾಕಷ್ಟು ಸೆಲೆಬ್ರಿಟಿಗಳನ್ನು ಟ್ರೋಲ್ ಮಾಡುತ್ತಿದ್ದಾರೆ. ಹೀಗಿರುವಾಗಲೇ ನಟ ಪ್ರಕಾಶ್ ರಾಜ್ ಸಹ ಟ್ವಿಟರ್ನಲ್ಲಿ ಸುಶಾಂತ್, ಈ ಹಿಂದೆ ಸ್ವಜನಪಕ್ಷಪಾತದ ಕುರಿತಾಗಿ ಮಾತನಾಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
#nepotism I have lived through this .. I have survived ... my wounds are deeper than my flesh ..but this child #SushanthSinghRajput couldn’t.. will WE learn .. will WE really stand up and not let such dreams die .. #justasking pic.twitter.com/Q0ZInSBK6q
2017ರಲ್ಲಿ ಸುಶಾಂತ್ ನೀಡಿರುವ ಸಂದರ್ಶನವೊಂದರಲ್ಲಿ ಸ್ವಜನಪಕ್ಷಪಾತದ (ನೆಪೋಟಿಸಂ) ಬಗ್ಗೆ ಕೇಳಿದ್ದಕ್ಕೆ ಉತ್ತರಿಸಿದ್ದಾರೆ. ಈ ವಿಡಿಯೋದಲ್ಲಿ ಸುಶಾಂತ್ ಸ್ವಜನಪಕ್ಷಪಾತ ಎಲ್ಲ ಕಡೆ ಇದೆ. ಅದಕ್ಕೆ ಏನೂ ಮಾಡಲಾಗುವುದಿಲ್ಲ. ಆದರೆ ಯಾವಾಗ ನಿಜವಾದ ಪ್ರತಿಭಾವಂತರು ಮೇಲೆ ಬರಲು ಇದು ಅಡ್ಡಿಯಾಗುತ್ತೆದೆಯೋ ಅಂದು ನಿಜಕ್ಕೂ ಇಡೀ ವ್ಯವಸ್ಥೆಯೇ ಕುಸಿದು ಬೀಳುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ಅಕ್ಷಯ್ ಕುಮಾರ್ ನಟನೆಯ ಲಕ್ಷ್ಮಿ ಬಾಂಬ್ ಸಿನಿಮಾದ ಒಟಿಟಿ ರಿಲೀಸ್ ದಿನಾಂಕ ಫಿಕ್ಸ್..!
ಸುಶಾಂತ್ ಅವರ ಈ ಹಳೇ ವಿಡಿಯೋ ಹಂಚಿಕೊಂಡಿರುವ ಪ್ರಕಾಶ್ ರಾಜ್, 'ನಾನೂ ಸಹ ಸ್ವಜನಪಕ್ಷಪಾತದಿಂದ ನೋವವನ್ನು ಅನುಭವಿಸಿದ್ದೇನೆ. ಅದರಿಂದಾದ ಗಾಯ ತುಂಬಾ ಆಳವಾಗಿದೆ. ಆದರೆ ಈ ಮಗು ಅಂದರೆ ಸುಶಾಂತ್ ಅದನ್ನು ತಾಳಲಿಲ್ಲ' ಎಂದು ನೋವಿನಿಂದ ಬರೆದುಕೊಂಡಿದ್ದಾರೆ. ಜೊತೆಗೆ ಹೀಗೆ ಕನಸುಗಳನ್ನು ಸಾಯಲು ಹಾಗೇ ಬಿಡುತ್ತೇವಾ ಅಥವಾ ಅದರ ವಿರುದ್ಧ ನಿಲ್ಲುತ್ತೇವಾ ಎಂದು ಅಭಿಮಾನಿಗಳನ್ನು ಪ್ರಶ್ನಿಸಿದ್ದಾರೆ.
We are with you Sushant your demise will not be wasted..😢😢#JusticeForSushantSinghRajput#BoycottKaranJohar #KaranJoharIsBULLY #BoycottBollywoodNepotism #boycottstarkidsmovies #boycottstarkids #BoycottKaranJoharGang #Boycottkaranjohargangmovie #BoycottKaranJohar pic.twitter.com/RHs1hYMLDM
ಸಾಮಾಜಿಕ ಜಾಲತಾಣದಲ್ಲಿ ಸ್ವಜನಪಕ್ಷಪಾತ ಹಾಗೂ ನಟ ಸುಶಾಂತ್ ಅವರನ್ನು ಕಿರುತೆರೆ ಕಾರ್ಯಕ್ರಮಗಳಲ್ಲಿ ವ್ಯಂಗ್ಯ ಮಾಡಿದ್ದ ನಟ-ನಟಿಯರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಕಳೇದ ಕೆಲವು ದಿನಗಳಿಂದ ಬಾಯ್ಕಾಟ್ಬಾಲಿವುಡ್ ಹಾಗೂ ಬಾಯ್ಕಾಟ್ ಸ್ಟಾರ್ ಕಿಡ್ಸ್ ಎನ್ನುವುದು ಟ್ರೆಂಡ್ ಆಗುತ್ತಿದೆ.
Kriti Sanon-Sushant: ಕಣ್ಣೀರು ತರಿಸುತ್ತೆ ಅಗಲಿದ ಗೆಳೆಯ ಸುಶಾಂತ್ ಕುರಿತು ಕೃತಿ ಸನೋನ್ ಬರೆದ ಈ ಸಾಲುಗಳು..!
ಇದನ್ನೂ ಓದಿ: ಸಾಮಾಜಿಕ ಜಾಲತಾಣದಿಂದ ದೂರ ಉಳಿದಿದ್ದ ಅನುಪಮಾ ಪರಮೇಶ್ವರನ್..! ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ