ಖ್ಯಾತ ನಟ ಪ್ರಕಾಶ್ ರಾಜ್ ಮತ್ತೊಮ್ಮೆ ಮದುವೆಯಾಗುವ ಮೂಲಕ ಸುದ್ದಿಯಲ್ಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಪ್ರಕಾಶ್ ರಾಜ್ ಮದುವೆಯದ್ದೇ ಸದ್ದು. ತಮ್ಮ ಅದ್ಭುತ ನಟನೆಯ ಮೂಲಕ ಜನ ಮಾನಸದಲ್ಲಿ ಮನೆ ಮಾಡಿರುವ ಪ್ರಕಾಶ್ ರಾಜ್ ಮತ್ತೊಮ್ಮೆ ಮದುವೆಯಾಗಿದ್ದು, ಅವರ ಹೆಂಡತಿಯನ್ನೇ. ಹೌದು, ತಮ್ಮ ಮಡದಿ ಪೋನಿ ವೆರ್ಮಾ ಅವರನ್ನು ಮತ್ತೊಮ್ಮೆ ಮದುವೆಯಾಗಿ ಸುದ್ದಿಯಲ್ಲಿದ್ದಾರೆ. 11 ವರ್ಷಗಳ ದಾಂಪತ್ಯ ಜೀವನ ನಡೆಸಿರುವ ಪ್ರಕಾಶ್ ರಾಜ್- ಪೋನಿ ವೆರ್ಮಾ ದಂಪತಿಗೆ ವೇದಾಂತ್ ಎಂಬ ಮಗನಿದ್ದಾನೆ. ಈಗ ಈ ಕ್ಯೂಟ್ ಕಪಲ್ ಮತ್ತೊಮ್ಮೆ ಮದುವೆಯಾಗಿರುವುದು ಸಹ ತಮ್ಮ ಮಗನಿಗೋಸ್ಕರವೇ.
ಹೌದು, ಪ್ರಕಾಶ್ ರಾಜ್ ತಮ್ಮ ಟ್ವಿಟರ್ ಖಾತೆಯಲ್ಲಿ (Prakash Raj Twitter Account) ಮತ್ತೆ ಮದುವೆಯಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ’ನಮ್ಮ ಮಗನಿಗಾಗಿ ಈ ರಾತ್ರಿ ನಾವು ಮತ್ತೆ ಮದುವೆಯಾದೆವು. ನಮ್ಮ ಮದುವೆಗೆ ಮಗ ವೇದಾಂತ್ ಸಾಕ್ಷಿಯಾಗಿದ್ದ’ ಎಂದು ಬರೆದುಕೊಂಡಿದ್ದಾರೆ.
ಒಂದು ಫೋಟೋದಲ್ಲಿ ಪ್ರಕಾಶ್ ರಾಜ್ ದಂಪತಿ ತಮ್ಮ ಮಗನನ್ನು ಸಾಕ್ಷಿಯಾಗಿಟ್ಟುಕೊಂಡು ಮದುವೆಯಾಗಿದ್ದಾರೆ. ಪ್ರಕಾಶ್ ರಾಜ್ ತಮ್ಮ ಮಡದಿ ಪೋನಿ ವೆರ್ಮಾಗೆ (Prakash Raj Wife Pony Verma) ಉಂಗುರ ತೊಡಿಸುತ್ತಿದ್ದರೆ, ಮಗ ವೇದಾಂತ್ (Prakash Raj Son Vedanth) ಅವರಿಬ್ಬರ ಮದುವೆಗೆ ಸಾಕ್ಷಿಯಾಗಿದ್ದಾನೆ. ಈ ಕ್ಯೂಟ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಮತ್ತೊಂದು ಫೋಟೊದಲ್ಲಿ ಪ್ರಕಾಶ್ ರಾಜ್-ಪೋನಿ ವೆರ್ಮಾ (Prakash Raj - Pony Verma) ಲಿಪ್ಕಿಸ್ ಮಾಡಿದ್ದಾರೆ. ಇನ್ನೊಂದು ಫೋಟೋದಲ್ಲಿ ಪ್ರಕಾಶ್ ರಾಜ್ ಅವರ ಇಬ್ಬರು ಹೆಣ್ಣು ಮಕ್ಕಳು ಇದ್ದು, ಸಂಪೂರ್ಣ ಕುಟುಂಬ ಸೆರೆಯಾಗಿದೆ.
ಈ ಫೋಟೋಗಳನ್ನು ಹಂಚಿಕೊಂಡಿರುವ ಪ್ರಕಾಶ್ ರಾಜ್ ತುಂಬಾ ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ತಮ್ಮ ಮದುವೆಯ ಫೋಟೋವನ್ನು ಹಂಚಿಕೊಂಡಿದ್ದು, ಮಡದಿ ಪೋನಿ ವೆರ್ಮಿಗೆ ಧನ್ಯವಾದ ಹೇಳಿದ್ದಾರೆ. ಥ್ಯಾಂಕ್ಯೂ ಮೈ ಡಾರ್ಲಿಂಗ್ ವೈಫ್, ಅದ್ಭುತ ಫ್ರೆಂಡ್ ಆಗಿರುವುದಕ್ಕೆ, ಲವರ್ ಆಗಿರುವುದಕ್ಕೆ ಹಾಗೂ ಕೋ-ಟ್ರಾವೆಲರ್ ಆಗಿ ನನ್ನ ಜೊತೆ-ಜೊತೆಯಲ್ಲಿ ಸಾಗುತ್ತಿರುವುದಕ್ಕೆ ತುಂಬಾ ಥ್ಯಾಂಕ್ಸ್ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.
ಪ್ರಕಾಶ್ ರಾಜ್ಗೆ ತಮ್ಮ 45ನೇ ವಯಸ್ಸಿನಲ್ಲಿ ಪೋನಿ ಮೇಲೆ ಪ್ರೀತಿ ಹುಟ್ಟಿತು. 2010ರಲ್ಲಿ ತಮ್ಮ ಗೆಳೆಯರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಇಬ್ಬರೂ ಮದುವೆಯಾದರು. ಪೋನಿ ಸಿನಿಮಾವೊಂದರ ಹಾಡಿಗೆ ಕೋರಿಯಾಗ್ರಫಿಂಗ್ ಮಾಡುವಾಗ ಪ್ರಕಾಶ್ ರಾಜ್ ಭೇಟಿಯಾಗಿದ್ದರು. ಪ್ರಕಾಶ್ ತಮ್ಮ ಮೊದಲ ಹೆಂಡತಿ ಲಲಿತಾ ಕುಮಾರಿಯಿಂದ 2009ರಲ್ಲಿ ಬೇರೆಯಾದರು.
ಇದನ್ನೂ ಓದಿ: ಬಿಡದಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾದ ನಟಿ ರಚಿತಾ ರಾಮ್
ಬಹುನಿರೀಕ್ಷಿತ ಸಿನಿಮಾ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-2 ಸಿನಿಮಾದಲ್ಲಿ ಪ್ರಕಾಶ್ ರಾಜ್ ನಟಿಸಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಏಪ್ರಿಲ್ 14ಕ್ಕೆ ರಿಲೀಸ್ ಆಗಲಿದೆ. ಪ್ರಶಾಂತ್ ನೀಲ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ