ಟಾಲಿವುಡ್ (Tollywood)ನಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳು, ಬಿಗ್ ಬಜೆಟ್ ಸಿನಿಮಾಗಳು ಜನವರಿಯಲ್ಲಿ ತೆರೆಗೆ ಬರೋಕೆ ತುದಿಗಾಲಲ್ಲಿ ನಿಂತಿದೆ. ಟಾಲಿವಡ್ನಲ್ಲಿ ಸಕ್ರಾಂತಿಗೆ ಸಿನಿಮಾ ರಿಲೀಸ್ ಮಾಡಿದರೆ ಅದು ಸೂಪರ್ ಹಿಟ್ ಆಗುತ್ತೆ ಅನ್ನುವ ನಂಬಿಕೆ. ಹೀಗಾಗಿ ಸಕ್ರಾಂತಿಗೆ ಸಿನಿಮಾ ರಿಲೀಸ್ ಮಾಡಲು ಕಾತುರದಿಂದ ಕಾಯುತ್ತಿರುತ್ತಾರೆ. ಜನವರಿ 7ರಂದು ಭಾರತೀಯ ಚಿತ್ರರಂಗದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ ‘ಆರ್ಆರ್ಆರ್’(RRR) ರಿಲೀಸ್ ಆಗುತ್ತಿದೆ. ಫ್ಯಾನ್ಸ್ಗಳು ತುದಿಗಾಲಲ್ಲಿ ಸಿನಿಮಾ ನೋಡಲು ನಿಂತಿದ್ದಾರೆ. ಆದರೆ, ಸಕ್ರಾಂತಿಗೆ ಪವನ್ ಕಲ್ಯಾಣ್ ಅಭಿನಯದ ‘ಭೀಮ್ಲಾ ನಾಯಕ್’ (BheemlaNayak) ಸಿನಿಮಾ ತೆರೆಗೆ ಬರುವುದಕ್ಕೆ ಸಜ್ಜಾಗಿತ್ತು. ಒಂದು ವಾರ ಅಂತರದಲ್ಲಿ ಎರಡು ದೊಡ್ಡ ಸಿನಿಮಾಗಳು ಬಿಡುಗಡೆಯಾದರೆ ಹೇಗೆ ಎಂಬ ಪ್ರಶ್ನೆ ಮೂಡಿತ್ತು. ಇತ್ತ ‘ಆರ್ಆರ್ಆರ್’ ಸಿನಿಮಾದಲ್ಲಿ ಜೂ.ಎನ್ಟಿಆರ್ (Jr.NTR), ರಾಮ್ಚರಣ್ (Ramcharan) ನಟಿಸಿದ್ರೆ, ಅತ್ತ ಭೀಮ್ಲಾ ನಾಯಕ್ ಚಿತ್ರದಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್ (Pawan Kalyan) ಹಾಗೂ ರಾಣಾ ದಗ್ಗುಬಾಟಿ (Rana Daggubati) ನಟಿಸಿದ್ದಾರೆ. ಈ ಎರಡು ಸಿನಿಮಾಗಳ ನಡುವೆ ಮತ್ತೊಂದು ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ಪ್ರಭಾಸ್ ನಟನೆಯ ರಾಧೆ-ಶ್ಯಾಮ್ ಚಿತ್ರ ಬಿಡುಗಡೆಯಾಗಲಿದೆ. ಹೀಗಾಗಿ ‘ರಾಧೆ-ಶ್ಯಾಮ್’, ‘ಭೀಮ್ಲಾ ನಾಯಕ್’ ಸಿನಿಮಾಗಳಲ್ಲಿ ಒಂದು ಸಿನಿಮಾ ರೇಸ್ನಿಂದ ಹಿಂದೆ ಸರಿಯುವ ಅವಶ್ಯಕತೆ ಇತ್ತು.
ರೇಸ್ನಿಂದ ಹಿಂದೆ ಸರಿದ ‘ಭೀಮ್ಲಾ ನಾಯಕ್’!
ತೆಲುಗಿನಲ್ಲಿ ರೆಡಿಯಾಗಿರು ‘ಭೀಮ್ಲಾ ನಾಯಕ್’ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಈ ಸಿನಿಮಾದ ಸಂಕ್ರಾಂತಿ ರೇಸ್ನಲ್ಲಿತ್ತು. ಆದರೆ, ಈಗ ಚಿತ್ರ ಇದರಿಂದ ಹಿಂದೆ ಸರಿದಿದೆ. ಇದಕ್ಕಾಗಿ ‘ಭೀಮ್ಲಾ ನಾಯಕ್’ ನಿರ್ಮಾಪಕ ನಾಗ ವಂಶಿ ಅವರು ಪವನ್ ಕಲ್ಯಾಣ್ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ. ‘ಎಲ್ಲಾ ಅಭಿಮಾನಿಗಳಲ್ಲಿ ಕ್ಷಮೆಯಾಚಿಸುತ್ತೇನೆ. ಇದು ನನ್ನ ಕೈಯಲ್ಲಿ ಇರಲಿಲ್ಲ. ನಮ್ಮ ನಾಯಕ ಪವನ್ ಕಲ್ಯಾಣ್ ಅವರ ಮಾತುಗಳನ್ನು ನಾನು ಪಾಲಿಸಬೇಕಿತ್ತು. ಅವರು ಯಾವಾಗಲೂ ಈ ಉದ್ಯಮದ ಕಲ್ಯಾಣಕ್ಕೆ ಮಹತ್ವ ಕೊಡುತ್ತಾರೆ. ಈ ಶಿವರಾತ್ರಿಯಲ್ಲಿ ಒಂದು ಬಿರುಗಾಳಿ ಬರಲಿದೆ ಎಂದು ನಾನು ಭರವಸೆ ನೀಡುತ್ತೇನೆ. ಫೆಬ್ರವರಿ 25ರಂದು 'ಭೀಮ್ಲಾ ನಾಯಕ್’ ಎಂದು ಬರೆದುಕೊಂಡಿದ್ದಾರೆ.
ಇದನ್ನು ಓದಿ : `ಸೆಕೆಂಡ್ ಹ್ಯಾಂಡ್ ಐಟಂ’ ಅಂದವನಿಗೆ ಸಮಂತಾ ಕ್ಲಾಸ್: ನಟಿ ಕೊಟ್ಟ ಉತ್ತರ ನೋಡಿದ್ರೆ ಶಹಬ್ಬಾಸ್ ಅಂತೀರಾ..!
ಸಿನಿಮಾ ತಂಡಕ್ಕೆ ಧನ್ಯವಾದ ಹೇಳಿದ ರಾಜಮೌಳಿ!
ಬಾಕ್ಸ್ ಆಫೀಸ್ ಕ್ಲ್ಯಾಶ್ ತಪ್ಪಿಸಿದ್ದಕ್ಕೆ ರಾಜಮೌಳಿ ಖುಷಿಪಟ್ಟಿದ್ದು, ಪವನ್ ಕಲ್ಯಾಣ್ ತಂಡಕ್ಕೆ ಅವರು ಧನ್ಯವಾದ ಅರ್ಪಿಸಿದ್ದಾರೆ. ‘ಸರ್ಕಾರು ವಾರಿ ಪಾಟ’ ಸಿನಿಮಾವನ್ನು ಈ ಹಿಂದೆಯೇ ಏ.1ಕ್ಕೆ ಮುಂದೂಡಿಕೆ ಮಾಡಲಾಗಿತ್ತು. ಇದೀಗ ‘ಭೀಮ್ಲಾ ನಾಯಕ್’ ತಂಡದವರು ಕೂಡ ತಮ್ಮ ಸಿನಿಮಾವನ್ನು ಫೆ.25ಕ್ಕೆ ಮುಂದೂಡಿಕೆ ಮಾಡಿ, ‘ಆರ್ಆರ್ಆರ್’ ಮತ್ತು ‘ರಾಧೆ ಶ್ಯಾಮ್’ ಸಿನಿಮಾಗಳ ಜೊತೆಗೆ ಆಗುತ್ತಿದ್ದ ಬಾಕ್ಸ್ ಆಫೀಸ್ ಕ್ಲ್ಯಾಶ್ಅನ್ನು ತಪ್ಪಿಸಿದ್ದಾರೆ. ಹೀಗಾಗಿ ಆರ್ಆರ್ಆರ್ ಸಿನಿಮಾಗೂ ಯಾವುದೇ ಅಡ್ಡಿ ಇಲ್ಲದಂತಾಗಿದೆ.ಇದೇ ವಿಚಾರಕ್ಕೆ ನಿರ್ದೇಶಕ ರಾಜಮೌಳಿ ಸಖತ್ ಖುಷಿಯಾಗಿದ್ದಾರೆ.
ಇದನ್ನು ಓದಿ : ಅಯ್ಯೋ.. ಇದೇನ್ ಹಿಂಗಿದೆ ಬಟ್ಟೆ.. ಅದನ್ನೂ ಹಾಕ್ಬೇಡಿ ಹಂಗೇ ಓಡಾಡಿ ಎಂದ ನೆಟ್ಟಿಗರು!
ಅಯ್ಯಪ್ಪನುಮ್ ಕೋಶಿಯನ್ ರೀಮೆಕ್ ಭೀಮ್ಲಾ ನಾಯಕ್!
ಮಲಯಾಳಂನ ‘ಅಯ್ಯಪ್ಪನುಮ್ ಕೋಶಿಯುಮ್’ ಸಿನಿಮಾದ ರಿಮೇಕ್ ‘ಭಿಮ್ಲಾ ನಾಯಕ್’. ಪೊಲೀಸ್ ಹಾಗೂ ಮಾಜಿ ಸೈನಿಕನ ನಡುವೆ ನಡೆಯುವ ಅಹಂನ ಕಥೆ ಇದಾಗಿದೆ. ಈ ಸಿನಿಮಾ ಮಲಯಾಳಂನಲ್ಲಿ ಮೆಚ್ಚುಗೆ ಪಡೆದುಕೊಂಡಿತ್ತು. ಪೃಥ್ವಿರಾಜ್ ಹಾಗೂ ಬಿಜು ಮೆನನ್ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಪೃಥ್ವಿರಾಜ್ ಪಾತ್ರವನ್ನು ರಾಣಾ ದಗ್ಗುಬಾಟಿ ಹಾಗೂ ಬಿಜು ಮಾಡಿದ್ದ ಪಾತ್ರವನ್ನು ಪವನ್ ಕಲ್ಯಾಣ್ ನಿರ್ವಹಿಸುತ್ತಿದ್ದಾರೆ. ಮಲಯಾಳಂನಲ್ಲಿ ಸೂಪರ್ ಡೂಪರ್ ಹಿಟ್ ಆಗಿದ್ದ ಈ ಸಿನಿಮಾ, ಟಾಲಿವುಡ್ನಲ್ಲಿ ಯಾವ ರೀತಿ ಧೂಳೆಬಿಸುತ್ತೆ ಅಂತ ಫೆ.25ರವರೆಗೆ ಕಾದು ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ