ಮುಂಬೈ: ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ನ (Nita Mukesh Ambani Cultural Center) ಅಧಿಕೃತ ಉದ್ಘಾಟನೆ ನಿನ್ನೆ ಅದ್ಧೂರಿಯಾಗಿ ನಡೆದಿದೆ. ಸಿನಿಮಾ, ಉದ್ಯಮ, ಸಾಮಾಜಿಕ ರಂಗದ ಗಣ್ಯರು ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾದರು. ರಜನಿಕಾಂತ್, ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ ಮತ್ತು ಕರಣ್ ಜೋಹರ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು. ಈವೆಂಟ್ನ ಹಲವಾರು ಸೆಲೆಬ್ರಿಟಿಗಳ (celebrities ) ವೀಡಿಯೊಗಳು ವೈರಲ್ ಆಗಿದ್ದರೆ, ಉದ್ಘಾಟನಾ ಸಮಾರಂಭದಲ್ಲಿ ಸಾರ್ವಜನಿಕರು ನೀತಾ ಅಂಬಾನಿ ಅವರ ಕಾರ್ಯಕ್ಷಮತೆಗೆ ಸಾಕಷ್ಟು ಪ್ರೀತಿಯಿಂದ ಹೊಗಳಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ನೀತಾ ಅಂಬಾನಿ (Nita Ambani), "ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ ನಮ್ಮ ರಾಷ್ಟ್ರಕ್ಕೆ ಒಂದು ಗೌರವವಾಗಿದೆ, ಸಾಂಸ್ಕೃತಿಕ ಕೇಂದ್ರವು ಭಾರತೀಯ ಕಲೆಗಳನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವ ಗುರಿಯನ್ನು ಹೊಂದಿದೆ. ನಮ್ಮ ಸ್ಥಳಗಳು ಪ್ರತಿಭಾವಂತರನ್ನು ಪೋಷಿಸುತ್ತವೆ ಮತ್ತು ಪ್ರೇರೇಪಿಸುತ್ತವೆ, ಭಾರತ ಮತ್ತು ಪ್ರಪಂಚದಾದ್ಯಂತದ ಸಮುದಾಯಗಳನ್ನು ಒಟ್ಟುಗೂಡಿಸುತ್ತವೆ" ಎಂದು ಭರವಸೆಯ ಮಾತನ್ನಾಡಿದರು.
ನೀತಾ ಅಂಬಾನಿ ಮಾತು
ಭಾರತದ ಈ ಸಂಗೀತ ವೃತ್ತಾಂತವನ್ನು ಪ್ರಸ್ತುತಪಡಿಸಲು ಇದು ಒಂದು ದೊಡ್ಡ ಸಂತೋಷ ಮತ್ತು ಗೌರವವಾಗಿದೆ ಅಂತ ನೀತಾ ಅಂಬಾನಿ ಹೇಳಿದ್ದಾರೆ. ನಮ್ಮ ಸಂಸ್ಕೃತಿ ಕೇವಲ ಸಾವಿರಾರು ವರ್ಷಗಳಿಂದ ಉಳಿದುಕೊಂಡಿಲ್ಲ, ಆದರೆ ಪ್ರವರ್ಧಮಾನಕ್ಕೆ ಬಂದಿದೆ. ನಾವು ಪ್ರಪಂಚದ ಅತ್ಯಂತ ಹಳೆಯ ಜೀವಂತ ನಾಗರಿಕತೆಗಳಲ್ಲಿ ಒಂದಾಗಿದ್ದೇವೆ. ಅಲ್ಲದೆ, ಅತ್ಯಂತ ವೈವಿಧ್ಯಮಯ ಹಾಗೂ ವಿಶ್ವದ ಅತ್ಯಂತ ಹೆಚ್ಚಿನ ಯುವ ಜನತೆಯನ್ನು ಹೊಂದಿದ್ದೇವೆ. ಇಂದು ನಾವು ಆಧುನಿಕ ಭಾರತದ ಅಮೃತ ಕಾಲದಲ್ಲಿದ್ದೇವೆ ಅಂತ ಅಭಿಪ್ರಾಯಪಟ್ಟರು.
ಇದು ಮಂಗಳಕರ ಸಮಯ
1.4 ಶತಕೋಟಿ ಭಾರತೀಯರ ಹೆಮ್ಮೆಯ, ಸಮೃದ್ಧ, ಬಲವಾದ ಮತ್ತು ಆತ್ಮವಿಶ್ವಾಸದ ರಾಷ್ಟ್ರಕ್ಕಾಗಿ ಅದ್ಭುತವಾದ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಇದು ಮಂಗಳಕರ ಸಮಯ ಅಂತ ನೀತಾ ಅಂಬಾನಿ ಹೇಳಿದರು.
ಇದನ್ನೂ ಓದಿ: ಭಾರತ ಸಂಸ್ಕೃತಿಕ ವೈವಿಧ್ಯತೆ ಪ್ರಸ್ತುತಪಡಿಸಲು Nita Mukesh Ambani Cultural Centre ದೊಡ್ಡ ವೇದಿಕೆ; ಇಶಾ ಅಂಬಾನಿ
ನಮ್ಮ ಕನಸು ನನಸಾಗಿದೆ
ಮುಖೇಶ್ ಅಂಬಾನಿ ಮತ್ತು ನನ್ನ ಪಾಲಿಗೆ ಎನ್ಎಂಎಸಿಸಿ ಕನಸು ನನಸಾಗಿದೆ. ಭಾರತವು ವಿಶ್ವ ದರ್ಜೆಯ ಸಾಂಸ್ಕೃತಿಕ ಕೇಂದ್ರವನ್ನು ಹೊಂದಬೇಕು ಎಂಬ ಕನಸನ್ನು ಬಹಳ ಹಿಂದಿನಿಂದಲೂ ನಾವು ಬೆಳೆಸಿಕೊಂಡಿದ್ದೇವೆ. ನಮ್ಮ ಕಲಾತ್ಮಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸಲು ಮತ್ತು ಆಚರಿಸಲು ನಾವು ಜಾಗವನ್ನು ರಚಿಸಲು ಉತ್ಸುಕರಾಗಿದ್ದೇವೆ ಅಂತ ಹೇಳಿದ್ರು.
ಭಾರತದ ಅಮೂಲ್ಯ ರಾಷ್ಟ್ರೀಯ ಸಂಪತ್ತು
ಸಿನಿಮಾ ಮತ್ತು ಸಂಗೀತ, ನೃತ್ಯ ಮತ್ತು ನಾಟಕ, ಸಾಹಿತ್ಯ ಮತ್ತು ಜಾನಪದ, ಕಲೆ ಮತ್ತು ಕರಕುಶಲತೆ, ವಿಜ್ಞಾನ ಮತ್ತು ಆಧ್ಯಾತ್ಮಿಕತೆ ಇವೆಲ್ಲವೂ ಭಾರತದ ಅಮೂರ್ತ ರಾಷ್ಟ್ರೀಯ ಸಂಪತ್ತು ಅಂತ ನೀತಾ ಅಂಬಾನಿ ಅಭಿಪ್ರಾಯಪಟ್ಟರು. ಸಂಸ್ಕೃತಿಯು ಪರಸ್ಪರ ತಿಳುವಳಿಕೆ, ಸಹಿಷ್ಣುತೆ ಮತ್ತು ಗೌರವದ ಎಳೆಗಳನ್ನು ಹೆಣೆದು ಸಮುದಾಯಗಳು ಮತ್ತು ದೇಶಗಳನ್ನು ಒಟ್ಟಿಗೆ ಬೆಸೆಯುತ್ತದೆ. ಸಂಸ್ಕೃತಿಯು ಮಾನವೀಯತೆಗೆ ಭರವಸೆ ಮತ್ತು ಸಂತೋಷವನ್ನು ತರುತ್ತದೆ. ಆದ್ದರಿಂದ, ಒಬ್ಬ ಕಲಾವಿದೆಯಾಗಿ ಈ ಕೇಂದ್ರವು ಕಲೆ, ಕಲಾವಿದರು ಮತ್ತು ಪ್ರೇಕ್ಷಕರನ್ನು ಸಂಭ್ರಮಿಸುವ ಜಾಗವಾಗಲಿ ಎಂದು ನಾನು ಭಾವಿಸುತ್ತೇನೆ ಅಂತ ಅವರು ಹೇಳಿದ್ರು.
ನಮ್ಮ ಜನರು ತಮ್ಮ ಬಗ್ಗೆ ಹೆಮ್ಮೆ ಪಡುವಂತಹ ಜಾಗ ಇದು
ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ ಭಾರತೀಯ ನಗರಗಳಿಂದ ಮಾತ್ರವಲ್ಲದೆ ನಮ್ಮ ಸಣ್ಣ ಪಟ್ಟಣಗಳು ಮತ್ತು ದೂರದ ಹಳ್ಳಿಗಳಿಂದಲೂ ಅತ್ಯುತ್ತಮ ಪ್ರತಿಭೆಗಳಿಗೆ ನೆಲೆಯಾಗಲು ಬಯಸುತ್ತದೆ. ಈ ಜಾಗವು ನಮ್ಮ ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ಮತ್ತು ಸಬಲೀಕರಣವನ್ನು ಮುಂದುವರೆಸುತ್ತದೆ ಎಂದು ನಾನು ನಿಜವಾಗಿಯೂ ಭಾವಿಸುತ್ತೇನೆ. ಎಲ್ಲಿಯವರೆಗೆ ನಮ್ಮಲ್ಲಿ ವೇದಿಕೆ ಇದೆಯೋ ಅಲ್ಲಿಯವರೆಗೆ ನಮಗೆ ಧ್ವನಿ ಇರುತ್ತದೆ. ಮತ್ತು ನಾವು ಧ್ವನಿಯನ್ನು ಹೊಂದಿರುವವರೆಗೆ, ನಮ್ಮ ಕಥೆಗಳನ್ನು ಹೇಳುವ ಶಕ್ತಿ, ನಮ್ಮ ಇತಿಹಾಸವನ್ನು ರೂಪಿಸಲು, ಹೊಸ ಪ್ರಯತ್ನವನ್ನು ರಚಿಸಲು ಮತ್ತು ಜಗತ್ತನ್ನು ಉತ್ತಮವಾಗಿ ಬದಲಾಯಿಸುವ ಕಥೆಗಳನ್ನು ನಾವು ಹೊಂದಿದ್ದೇವೆ ಅಂತ ಇದೇ ಸಂದರ್ಭದಲ್ಲಿ ನೀತಾ ಅಂಬಾನಿ ಹೇಳಿದ್ರು.
ಬಾಲ್ಯದ ವೇದಿಕೆಯ ನೆನಪಾಯಿತು
ನಾನು ಈ ಗ್ರ್ಯಾಂಡ್ ಥಿಯೇಟರ್ ವೇದಿಕೆಯಲ್ಲಿ ಪ್ರದರ್ಶನ ನೀಡಿದಾಗ ನನ್ನ ಬಾಲ್ಯ ನೆನಪಾಯಿತು. ವೇದಿಕೆಯ ಮೇಲೆ ಇಷ್ಟು ದಶಕಗಳ ನಂತರವೂ, ಆ ಚಿಕ್ಕ ವಯಸ್ಸಿನಲ್ಲಿ ನಾನು ಅನುಭವಿಸಿದ ಅದೇ ಶಕ್ತಿ ಮತ್ತು ಕೃತಜ್ಞತೆಯನ್ನು ನಾನು ಇನ್ನೂ ಅನುಭವಿಸುತ್ತೇನೆ. ಅದು ನನ್ನ ಭರತನಾಟ್ಯ ಪ್ರದರ್ಶನಗಳಾಗಲಿ ಅಥವಾ ನಾನು ಕೆಲಸ ಮಾಡಿದ ಕಾಲೇಜು ನಾಟಕಗಳಾಗಲಿ ಅವೆಲ್ಲವನ್ನೂ ನೆನೆಯುತ್ತೇನೆ ಅಂತ ನೀತಾ ಅಂಬಾನಿ ಬಾಲ್ಯವನ್ನು ಇದೇ ಸಂದರ್ಭದಲ್ಲಿ ಸ್ಮರಿಸಿಕೊಂಡರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ