ರಾಜಕೀಯ (Politics)_ಧುರೀಣ ದೇವೇಗೌಡರ (H D Deve gowda) ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು, ಗೌಡರ ಮರಿ ಮೊಮ್ಮಗನಿಗೆ ನಾಮಕರಣ ಮಾಡಲಾಗಿದೆ. ಹೌದು, ಮಾಜಿ ಸಿಎಂ ಕುಮಾರಸ್ವಾಮಿ (Kumarswamy) ಅವರ ಮಗ, ರಾಜಕೀಯ ಹಾಗೂ ಚಿತ್ರರಂಗ ಎರಡಲ್ಲೂ ಬ್ಯುಸಿ ಇರುವ ನಿಖಿಲ್ ಕುಮಾರಸ್ವಾಮಿ (Nikhil Kumarswamy) ಮುದ್ದು ಮಗನ ನಾಮಕರಣ ಶಾಸ್ತ್ರವಾಗಿದ್ದು, ಆವ್ಯನ್ ದೇವ್ ಎಂದ ಹೆಸರಿಡಲಾಗಿದೆ.
ಜೆಪಿ ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ನಾಮಕರಣ ಶಾಸ್ತ್ರ ಮಾಡಲಾಗಿದ್ದು, ಬೆಳಗ್ಗೆ 10:30 ರಿಂದ 12:20 ರವರೆಗೂ ನಡೆಯುವ ಶುಭ ಲಗ್ನದಲ್ಲಿ ನಾಮಕರಣ ಶಾಸ್ತ್ರ ನಡೆಯುತ್ತಿದೆ. ಇನ್ನು ಈ ಕಾರ್ಯಕ್ರಮದ ಜೊತೆ ಪ್ರಪೌತ್ರ ಜನನ ಶಾಂತಿ ,ನಾಮಕರಣ,ಕನಕಾಭಿಷೇಕ ಕಾರ್ಯಕ್ರಮಗಳನ್ನು ಗೌಡರ ಕುಟುಂಬ ಹಮ್ಮಿಕೊಂಡಿದ್ದು, ಬಹಳ ಸರಳವಾಗಿ ಸಮಾರಂಭವನ್ನು ಮಾಡಲಾಗುತ್ತಿದೆ.
ಕೇವಲ ಕುಟುಂಬಸ್ಥರ ಸಮ್ಮುಖದಲ್ಲಿ ಕಾರ್ಯಕ್ರಮ
ಇನ್ನು ನಿಖಿಲ್ ಕುಮಾರಸ್ವಾಮಿ ಅವರ ಮಗನಿಗೆ ಸದ್ಯ 9 ತಿಂಗಳು ತುಂಬಿದ್ದು, ಈಗ ಆವ್ಯನ್ ದೇವ್ ಎಂದು ನಾಮಕರಣ ಮಾಡಲಾಗಿದೆ. ಅಲ್ಲದೇ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಜನರನ್ನು ಸಹ ಆಹ್ವಾನಿಸಲಾಗಿಲ್ಲ, ಕೇವಲ ಕುಟುಂಬಸ್ಥರ ಸಮ್ಮುಖದಲ್ಲಿ ನಾಮಕರಣ ಮಾಡಲಾಗುತ್ತಿದೆ.
2020ರ ಏಪ್ರಿಲ್ನಲ್ಲಿ ಬಿಡದಿಯ ತೋಟದ ಮನೆಯಲ್ಲಿ ಅದ್ಧೂರಿಯಾಗಿ ನಿಖಿಲ್-ರೇವತಿ ಮದುವೆಯಾಗಿತ್ತು , 2021ರ ಸೆಪ್ಟೆಂಬರ್ನಲ್ಲಿ ರೇವತಿ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಮಗುವಿನ ನಾಮಕರಣ ಮಾಡಲಾಗಿದೆ. ಮಗುವಿಗೆ ಒಂಬತ್ತು ತಿಂಗಳು ತುಂಬಿದ್ದು, ಕುಟುಂಬಸ್ಥರು ಸೇರಿ ಈ ಕಾರ್ಯಕ್ರಮ ಮಾಡಿದ್ದಾರೆ. ಈ ನಾಮಕರಣ ಸಮಾರಂಭದಲ್ಲಿ ಗೌಡರ ಕುಟುಂಬ ಹಾಗೂ ಕೆಲ ಆಪ್ತರು ಮಾತ್ರ ಭಾಗವಹಿಸಿದ್ದಾರೆ.
ಇನ್ನು ಮಗು ಹುಟ್ಟಿದ ಸಂದರ್ಭದಲ್ಲಿ ನಿಖಿಲ್ ಹಾಗೂ ಮಗುವಿನ ಫೋಟೋ ಸಾಮಾಜಿಕಾ ಜಾಲಾತಾಣದಲ್ಲಿ ಫುಲ್ ವೈರಲ್ ಆಗಿತ್ತು. ಅಭಿಮಾನಿಗಳು ನಿಖಿಲ್ ಅವರಿಗೆ ಶುಭಾಶಯಗಳ ಸುರಿಮಳೆ ಸುರಿಸಿದ್ದರು.
ಇದನ್ನೂ ಓದಿ: ರಜನಿಕಾಂತ್ ಜೊತೆ ಸಿನಿಮಾ ಮಾಡಲು ಐಶ್ವರ್ಯಾ ರೈ ರೆಡಿ, ಮತ್ತೆ ದಕ್ಷಿಣದತ್ತ ಮುಖ ಮಾಡಿದ ಮಾಜಿ ವಿಶ್ವ ಸುಂದರಿ
ಫುಲ್ ಬ್ಯುಸಿ ಇದ್ದಾರೆ ನಿಖಿಲ್
ನಿಖಿಲ್ ಮತ್ತು ರೇವತಿ ಫೋಟೋ ಸಾಮಾಜಿಕ ಜಾಲಾತಾಣದಲ್ಲಿ ಆಗಾಗ ವೈರಲ್ ಆಗುತ್ತಲೇ ಇರುತ್ತದೆ. ಮದುವೆಗೆ ಮೊದಲು ಸಹ ಅವರಿಬ್ಬರು ಜೊತೆ ಇರುವ ಫೋಟೋಗಳು ಸುದ್ದಿ ಮಾಡಿದ್ದವು. ಅಲ್ಲದೇ ರೇವತಿ ಅವರ ಸೀಮಂತಾ ಕಾರ್ಯಕ್ರಮ ಬಹಳ ಸದ್ದು ಮಾಡಿತ್ತು. ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗಿದ್ದ ಸೀಮಂತಾ ಕಾರ್ಯಕ್ರಮಕ್ಕೆ ಗಣ್ಯಾತಿ ಗಣ್ಯರು ಭಾಗವಹಿಸಿದ್ದರು. ಹಾಗೆಯೇ ಆ ಸಮಯದಲ್ಲಿ ಸಹ ನಿಖಿಲ್ ಹಾಗೂ ರೇವತಿ ಅವರ ಫೋಟೋಗಳು ಬಹಳ ವೈರಲ್ ಆಗಿತ್ತು.
ನಟ, ರಾಜಕಾರಣಿ ಎರಡೂ ಆಗಿರುವ ನಿಖಿಲ್ ಪ್ರಸ್ತುತ ಜೆಡಿಎಸ್ ಯುವ ಮೋರ್ಚಾ ರಾಜ್ಯಾಧ್ಯಕ್ಷ ಕೂಡ ಆಗಿದ್ದು, ಫುಲ್ ಬ್ಯುಸಿ ಇದ್ದು, ಕೆಲ ಚಿತ್ರಗಳನ್ನು ಸಹ ಒಪ್ಪಿಕೊಂಡಿದ್ದಾರೆ.
ಕಳೆದ ಚಿತ್ರ ಡಿ.24ರಂದು ನಟನೆಯ ರೈಡರ್ ಸಿನಿಮಾ ಬಿಡುಗಡೆಯಾಗಿ ಭರ್ಜರಿಯಾಗಿ ಯಶಸ್ಸು ಕಂಡಿತ್ತು. ಸದ್ಯ ನಿಖಿಲ್ರ ಹೊಸ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದ್ದು, ಮಗನ ನಾಮಕರಣದ ಸಂಭ್ರಮದಲ್ಲಿ ನಿಖಿಲ್ ಇದ್ದಾರೆ.
ಇದನ್ನೂ ಓದಿ: ದೇವೇಗೌಡರ ಮರಿ ಮೊಮ್ಮಗನ ನಾಮಕರಣ ಕಾರ್ಯಕ್ರಮಕ್ಕೆ ಭರ್ಜರಿ ತಯಾರಿ! ಏನಂಥ ಹೆಸರಿಡಬಹುದು ಗೆಸ್ ಮಾಡಿ
2016 ರಲ್ಲಿ ಜಾಗ್ವಾರ್ ಕನ್ನಡ ಚಲನಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ್ದ ಟಕಿಲಾ ಬಳಿಕ ಸೀತಾರಾಮ ಕಲ್ಯಾಣ ಸಿನಿಮಾದಲ್ಲಿ ನಟಿಸಿದ್ದರು.. ಸದ್ಯ ರೈಡರ್ ಸೇರಿ ಹಲವಾರು ಸಿನಿಮಾಗಳಲ್ಲಿ ನಟನೆ ಮಾಡಿರುವ ನಿಖಿಲ್ ಕುಮಾರಸ್ವಾಮಿ ಹಲವಾರು ಸಿನಿಮಾಗಳು ಬಿಡುಗಡೆಯಾಗಬೇಕಿದೆ. ಇನ್ನು ಮತ್ತೊಂದು ಚಿತ್ರದಲ್ಲಿ ನಿಖಿಲ್ ಬ್ಯುಸಿ ಇದ್ದು, ಮಂಜು ಅಥರ್ವ ನಿರ್ದೇಶನದ ಸಿನಿಮಾದಲ್ಲಿ ನಿಖಿಲ್ ನಟಿಸುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಅದ್ಧೂರಿಯಾಗಿ ಮೂಡಿ ಬರುತ್ತಿರುವ ಈ ಸಿನಿಮಾವನ್ನು ನಿಶಾ ವೆಂಕಟ್ ಕೊನಂಕಿ ಮತ್ತು ಸುಪ್ರೀತ್ ನಿರ್ಮಾಣ ಮಾಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ