ಟಾಲಿವುಡ್ ನಟ ಹಾಗೂ ರಾಜಕಾರಣಿ ನಂದಮುರಿ ಬಾಲಕೃಷ್ಣ (Nandamuri Balakrishna) ಅವರು ಮತ್ತೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಮತ್ತೆ ಚರ್ಚೆಯ ವಿಷಯವಾಗಿದ್ದಾರೆ. ತೆಲುಗು ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಬಾಲಕೃಷ್ಣ ಅವರು ಎ.ಆರ್. ರೆಹಮಾನ್ (AR Rahman) ಅವರ ಬಗ್ಗೆ ಮಾತನಾಡಿದ್ದಾರೆ. ಈಗ ಬಾಲಕೃಷ್ಣ ಅವರು ಕೊಟ್ಟಿರುವ ಹೇಳಿಕೆ ವಿವಾದಕ್ಕೀಡಾಗಿದೆ. ಹೌದು, ಸಂದರ್ಶನದಲ್ಲಿ ಬಾಲಕೃಷ್ಣ ಅವರು ತನಗೆ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರು ಗೊತ್ತೇ ಇಲ್ಲ. ಯಾರು ಅವರು ಎಂದಿದ್ದಾರಂತೆ. ಅಷ್ಟೇಅಲ್ಲ ಮಾತನ್ನು ಮುಂದುವರೆಸಿ ಭಾರತರತ್ನ ಪ್ರಶಸ್ತಿ ಬಗ್ಗೆಯೀ ವಿವಾದಾತ್ಮ ಹೇಳಿಕೆ ನೀಡಿದ್ದಾರಂತೆ.
ಬಾಲಕೃಷ್ಣ ಅವರು ವಿವಾದಾತ್ಮಕ ಹೇಳಿಕೆಗಳನ್ನು ನೀಡಲು ಖ್ಯಾತರಾದವರು. ತೆಲುಗು ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಅವರು ಯಾರು ಅಂತ ಗೊತ್ತಿಲ್ಲ. ಅವರಿಗೆ ಆಸ್ಕರ್ ಬಂದಿದೆ, ಆದರೂ ಅವರ ಬಗ್ಗೆ ನನಗೆ ತಿಳಿದಿಲ್ಲ. ದಶಕದಲ್ಲಿ ಒಮ್ಮೆ ಹಿಟ್ ಹಾಡುಗಳನ್ನು ಕೊಡುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
Know your level before commenting someone !@arrahman #Balakrishna#ARRahmanThePrideofIndia pic.twitter.com/tapfup6Tu8
— Troll Cinema ( TC ) (@Troll_Cinema) July 21, 2021
Who is #NandamuriBalakrishna ?
First time heard about AR Rahman ji's related news.#nandamuri #balakrishna
— BornTraveller (@hussainnellikal) July 21, 2021
@arrahman Sir, May be you don't understand telugu, Our Telugu Super Star Balakrishna is disappointed because you only worked for his Nippurava BGM and Not for straight movie, He Says you are unfit for OScar https://t.co/dA6NfSwkn2
— మంచినీటికాలువ (@PMCBN2021) July 20, 2021
How can a senior actor like #Balakrishna talk about Indian legend #ARRahman? Will people accept if a similar thing is being spoken by a Tamil actor on #Rajamouli? pic.twitter.com/ILMPDvjsVe
— Troll Cinema ( TC ) (@Troll_Cinema) July 20, 2021
Edho Oscar https://t.co/vvmIIwgXxd
— Phani (@WeepingBileDuct) July 20, 2021
ಇದನ್ನೂ ಓದಿ: Bigg Boss Kannada Season 8: ಅರವಿಂದ್-ದಿವ್ಯಾ ಉರುಡುಗ ಸ್ನೇಹದಲ್ಲಿ ಬಿರುಕು: ಕಾರಣವಾಯ್ತಾ ಆ ಒಂದು ಮಾತು..!
ಇನ್ನು ರೆಹಮಾನ್ ಯಾರು ಆದರೆ ಏನು, ನಾನು ತಲೆಕೆಡಸಿಕೊಳ್ಳುವುದಿಲ್ಲ ಎಂದಿರುವ ಬಾಲಕೃಷ್ಣ ಅವರನ್ನು ಕೆಲ ನೆಟ್ಟಿಗರು ಬಾಲಕೃಷ್ಣ ಯಾರೆಂದು ಇದೇ ಮೊದಲ ಸಲ ಕೇಳುತ್ತಿರುವುದು ಎನ್ನುತ್ತಿದ್ದಾರೆ.
Balakrishna's recent comments on
A. R. Rahman is pathetic and cheap...
Don't know why these Telugu actors are so heavy headed... 😏
— PRABHA...😎 (@twitz_prabhakar) July 21, 2021
ಇದನ್ನೂ ಓದಿ: Bigg Boss Kannada Season 8: ದಿವ್ಯಾ ಸುರೇಶ್ಗೆ ಒಂಟಿತನ ಕಾಡುತ್ತಿದೆ ಎಂದರೂ ಮಂಜು ಮನಸ್ಸು ಮಾತ್ರ ಕರಗುತ್ತಿಲ್ಲ..!
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ