• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Master Hirannaiah: ಹಿಂದೆ ಮೆಜೆಸ್ಟಿಕ್​ನಲ್ಲೇ ಬಿಡಾರ ಹೂಡಿದ್ದ ಹಿರಣ್ಣಯ್ಯ: ಹಳೇ ನೆನಪು ಮೆಲುಕು ಹಾಕಿದ ಜಗ್ಗೇಶ್​-ಡಿಬಾಸ್ ದರ್ಶನ್​​

Master Hirannaiah: ಹಿಂದೆ ಮೆಜೆಸ್ಟಿಕ್​ನಲ್ಲೇ ಬಿಡಾರ ಹೂಡಿದ್ದ ಹಿರಣ್ಣಯ್ಯ: ಹಳೇ ನೆನಪು ಮೆಲುಕು ಹಾಕಿದ ಜಗ್ಗೇಶ್​-ಡಿಬಾಸ್ ದರ್ಶನ್​​

ಹಿರಣ್ಣಯ್ಯ ಅವರ ಅಗಲಿಕೆಗೆ ಕಂಬನಿ ಮಿಡಿದ ಜಗ್ಗೇಶ್​ ಹಾಗೂ ದರ್ಶನ್​

ಹಿರಣ್ಣಯ್ಯ ಅವರ ಅಗಲಿಕೆಗೆ ಕಂಬನಿ ಮಿಡಿದ ಜಗ್ಗೇಶ್​ ಹಾಗೂ ದರ್ಶನ್​

  • News18
  • 3-MIN READ
  • Last Updated :
  • Share this:

ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಮಾಸ್ಟರ್​ ಹಿರಣ್ಣಯ್ಯ ಇಂದು ಬೆಳಿಗ್ಗೆ ಇಹ ಲೋಕ ತ್ಯಜಿಸಿದ್ದಾರೆ. ಅವರ ಅಗಲಿಕೆ ರಂಗಭೂಮಿ ಹಾಗೂ ಸಿನಿ ರಂಗಕ್ಕೆ ತುಂಬಲಾರದ ನಷ್ಟ. ಅವರ ಗರಡಿಯಲ್ಲೇ ಅಭಿನಯ ಕಲಿತು ಬೆಳ್ಳಿ ಪರದೆ ಮೇಲೆ ರಾಜಾಜಿಸಿದವರು ಹಲವರಿದ್ದಾರೆ.

ಇದನ್ನೂ ಓದಿ: Master Hirannaiah: ರಂಗಭೂಮಿಯ ನಿಧಿ ಮಾಸ್ಟರ್​ ಹಿರಣ್ಣಯ್ಯ ಇಸ್ಪೀಟ್​ ಆಡುವುದರಲ್ಲೂ ನಿಸ್ಸೀಮರು

ರಂಗವೇದಿಕೆ ಮೇಲೆ ನಿಂತರೆ ಸಾಕು ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದಂತೆ ಅಭಿನಯಿಸುಯತ್ತಿದ್ದ ರಂಗಭೂಮಿಯ ನಟ ಸಾರ್ವಭೌಮ ಮಾಸ್ಟರ್​ ಹಿರಣ್ಣಯ್ಯ. ಅವರು ಸಿನಿ ಜೀವನಕ್ಕೆ ಕಾಲಿಟ್ಟ ನಂತರ ಸಾಕಷ್ಟು ಕಲಾವಿದರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಹೀಗೆ ಅವರೊಂದಿಗೆ ಒಡನಾಟ ಇಟ್ಟುಕೊಂಡಿದ್ದ ಜಗ್ಗೇಶ್​ ಹಾಗೂ ನಟ ದರ್ಶನ್​ ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಜಗ್ಗೇಶ್​ ಅವರು ಬಾಲ್ಯದಲ್ಲಿ ತಮ್ಮ ಅಪ್ಪ-ಅಮ್ಮೊನೊಂದಿಗೆ ಹಿರಣ್ಣಯ್ಯ ಅವರ ನಾಟಕ ನೋಡಲು ಹೋಗುತ್ತಿದ್ದರಂತೆ. 'ಆಗ ನಾಟಕಗಳು ನಡೆಯುತ್ತಿದ್ದದ್ದು ಈಗಿನ ಮೆಜೆಸ್ಟಿಕ್​ ಬಸ್​ ನಿಲ್ದಾಣದಲ್ಲೆ. ಹಿರಣ್ಣಯ್ಯ ಮಿತ್ರಮಂಡಲಿ ಆಗ ಮೆಜೆಸ್ಟಿಕ್​ನಲ್ಲೇ ಬಿಡಾರ ಬಿಟ್ಟಿರುತ್ತಿದ್ದರು. ಅಲ್ಲದೆ ನಾನು 9ನೇ ತರಗತಿಯಲ್ಲಿದ್ದಾಗ ಇವರ 'ದೇವದಾಸಿ' ಸಿನಿಮಾದ ಹಾಡು ಹಾಡಿ ಶಾಲೆಯಲ್ಲಿ ಬಹುಮಾನ ಪಡೆದಿದ್ದೆ' ಎಂದು ನವರಸ ನಾಯಕ ಹಳೇ ದಿನಗಳನ್ನು ನೆನಪಿಸಿಕೊಂಡಿದ್ದಾರೆ.



ಇನ್ನೂ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಹಿರಣ್ಣಯ್ಯ ಅವರೊಂದಿಗೆ 'ಗಜ' ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದಾರೆ. ಹಿರಣ್ಣಯ್ಯ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿ ಕುಟುಂಬದವರಿಗೆ ನೀಡಲಿ ಎಂದು ಟ್ವೀಟ್​ ಮಾಡಿದ್ದಾರೆ.

 


ಇದನ್ನೂ ಓದಿ: Master Hirannaiah: ಹಿರಣ್ಣಯ್ಯ ಬಿಟ್ಟರೂ, ಅವರನ್ನು ಕೊನೆವರೆಗೂ ಕೈ ಬಿಡದ ರಂಗಭೂಮಿ..!

ರಂಗಭೂಮಿ ಕಲಾವಿದರಿಗೆ ಹಿರಿಯಣ್ಣನಂತಿದ್ದ ಹಿರಿ ಜೀವ ಹಿರಣ್ಣಯ್ಯ ಅವರ ಅಗಲಿಕೆ ನಿಜಕ್ಕೂ ಸಿನಿಮಾ ಹಾಗೂ ರಂಗಭೂಮಿಗೆ ತುಂಬಲಾರದ ನಷ್ಟ. ದೇವರು ಅವರ ಆತ್ಮಕ್ಕೆ ಶಾಂತಿ ಕೊಡಲಿ ಎಂದು ಆಶಿಸೋಣ.

Exclusive Photos: ಮಾಸ್ಟರ್​ ಹಿರಣ್ಣಯ್ಯರ 'ಲಂಚಾವತಾರ' ನಾಟಕ ಹಾಗೂ 'ಋಣಮುಕ್ತಳು' ಸಿನಿಮಾದ ಚಿತ್ರಗಳು..!

First published: