ಕುಖ್ಯಾತ ಪಾತಕಿ ವಿಕಾಸ್ ದುಬೆಯನ್ನು ಉತ್ತರ ಪ್ರದೇಶದ ಪೊಲೀಸರು ಶುಕ್ರವಾರ ಬೆಳಿಗ್ಗೆ ಎನ್ಕೌಂಟರ್ ಮಾಡಿದ್ದಾರೆ. ಈ ಎನ್ಕೌಂಟರ್ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಮತ್ತೊಂದೆಡೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ವಿಕಾಸ್ ದುಬೆ ಎನ್ಕೌಂಟರ್ ಪ್ರಕರಣ ತನಿಖೆಯಾಗಬೇಕು ಎಂಬ ಮಾತುಗಳು ಕೇಳಿಬರುತ್ತಿವೆ. ಇವೆಲ್ಲದರ ನಡುವೆ ಬಾಲಿವುಡ್ನಲ್ಲಿ ವಿಕಾಸ್ ದುಬೆ ಕುರಿತಾಗಿ ಸಿನಿಮಾವೊಂದು ಮೂಡಿ ಬರುತ್ತಿದೆ ಎಂಬ ಸುದ್ದಿ ಎಲ್ಲೆಡೆ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ವಿಕಾಸ್ ದುವೆ ಕುರಿತಾಗಿ ಸಿನಿಮಾ ಬರಲಿದೆ ಎಂದು ಹರಿದಾಡಿತ್ತು. ಎಂಟು ಪೊಲೀಸರನ್ನು ಅಮಾನುಷವಾಗಿ ಕೊಂಡ ಪಾತಕಿ ವಿಕಾಸ್ ದುಬೆ ಕುರಿತಾಗಿ ಸಂದೀಪ್ ಕುಮಾರ್ ಎಂಬವರು ಈ ಸಿನಿಮಾವನ್ನು ಮಾಡುತ್ತಿದ್ದಾರೆ. ಜೊತೆಗೆ ಮನೋಜ್ ಬಾಜ್ಪೇಯಿ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಸಂದೀಪ್ ಅವರು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ವೈರಲ್ ಆಗಿತ್ತು.
ಅಷ್ಟು ಮಾತ್ರವಲ್ಲದೆ ಸಂದೀಪ್ ಅವರು ಮನೋಜ್ ಜೊತೆಗೆ ಚಿತ್ರದ ಬಗ್ಗೆ ಮಾತುಕತೆ ನಡೆಸಿದ್ದು, ಸದ್ಯದಲ್ಲೇ ಅಗ್ರಿಮೆಂಟ್ ಕೂಡ ಆಗಲಿದೆ ಎಂದು ಹೇಳಿದ್ದಾರೆ. ಸಿನಿಮಾ ಬಗ್ಗೆ ಮನೋಜ್ ಬಳಿ ಚಿತ್ರಕತೆ ಬಗ್ಗೆ ರೀಡಿಂಗ್ ಕೊಡಲಿದ್ದಾರೆ ಎಂದು ಹರಿದಾಡಿತ್ತು.
ಆದರೆ ಈ ಸುದ್ದಿ ಮನೋಜ್ ಬಾಜ್ಪೇಯಿ ಅವರ ಕಿವಿಗೆ ಬಿದ್ದ ತಕ್ಷಣ ಟ್ವೀಟ್ ಮಾಡಿದ್ದ ಅವರು ಇದೊಂದು ರಾಂಗ್ ನ್ಯೂಸ್ ಎಂದು ಹೇಳಿದ್ದಾರೆ. ತಾನು ಯಾವುದೇ ರೀತಿಯ ಪಾತ್ರವನ್ನು ಮಾಡುತ್ತಿಲ್ಲ ಎಂದು ಹೇಳಿದ್ದಾರೆ. ಇದೀಗ ವಿಕಾಸ್ ದುಬೆ ಕುರಿತಾಗಿ ಸಿನಿಮಾ ಮೂಡಿಬರಲಿದೆ ಎಂಬ ಸುದ್ದಿ ಸುಳ್ಳು ಸುದ್ದಿಯಾಗಿದೆ ಎಂಬುದು ಬೆಳಕಿಗೆ ಬಂದಿದೆ.
ರೆಸಾರ್ಟ್ ಬುಕ್ ಮಾಡುವ ಅವಶ್ಯಕತೆಯಿಲ್ಲ!; ಏಕೆಂದರೆ ಈ ಕಾರಲ್ಲೇ ಇದೆ ಎಲ್ಲಾ ಸೌಲಭ್ಯ! ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ