- ಅನಿತಾ ಈ,
'ಕುರುಕ್ಷೇತ್ರ' ಸಿನಿಮಾ ಬಿಡುಗಡೆಗೆ ಮುನ್ನವೇ ಸಾಕಷ್ಟು ಸದ್ದು ಮಾಡುತ್ತಿದೆ. ಒಂದು ಕಡೆ ಮೇಕಿಂಗ್, ಭಾರೀ ಬಜೆಟ್ನಿಂದಾಗಿ ಸುದ್ದಿಯಾಗುತ್ತಿದ್ದರೆ, ಮತ್ತೊಂದು ಕಡೆ ದರ್ಶನ್ರ 50 ನೇ ಸಿನಿಮಾ ಆಗಿರುವ ಕಾರಣಕ್ಕೆ ಮತ್ತಷ್ಟು ಸದ್ದು ಮಾಡುತ್ತಿದೆ.
ಹೀಗಿರುವಾಗಲೇ ದರ್ಶನ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರ ಆಡಿಯೋ ಲಾಂಚ್ ಕುರಿತಂತೆ ಇತ್ತೀಚೆಗೆ ದಿನಾಂಕ ಪ್ರಕಟಿಸಲಾಗಿತ್ತು. ಅದಕ್ಕೆ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲೂ ಎಲ್ಲ ಸಿದ್ಧತೆಗಳು ನಡೆದಿದ್ದವು. ಆದರೆ ಕಾರ್ಯಕ್ರಮದ ಪಾಸ್ನಲ್ಲಿ ದರ್ಶನ್ ಅವರ ಚಿತ್ರವೇ ಇರಲಿಲ್ಲ.
![Darshan in Kurukshetra]()
'ಕುರುಕ್ಷೇತ್ರ' ಸಿನಿಮಾದಲ್ಲಿ ದರ್ಶನ್
ಇದರಿಂದಾಗಿ ಡಿಬಾಸ್ ಅಭಿಮಾನಿಗಳು ಸಿಕ್ಕಾಪಟ್ಟೆ ಗರಂ ಆಗಿ, ಸಾಮಾಜಿಕ ಜಾಲತಾಣದಲ್ಲಿ ನಿರ್ಮಾಪಕ ಮುನಿರತ್ನ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದರಿಂದಾಗಿ ದರ್ಶನ್ ಅಭಿಮಾನಿಗಳಿಗೆ ಓಪನ್ ಚಾಲೆಂಜ್ ಹಾಕುವ ಮೂಲಕ ಜಾಣತನದಿಂದ ಮುಂದಾಗಬಹುದಾಗಿದ್ದ ಅನಾಹುತವನ್ನು ತಪ್ಪಿಸಿದ್ದಾರೆ.
ದರ್ಶನ್ ಅವರು ಲೈವ್ ಬಂದಿದ್ದು ಕಳೆದ ಸೋಮವಾರ. ನಿನ್ನೆ ಅಂದರೆ ಗುರುವಾರ ರಾತ್ರಿ 'ಕುರುಕ್ಷೇತ್ರ' ಸಿನಿಮಾದ ಆಡಿಯೋ ಬಿಡುಗಡೆಯ ಆಹ್ವಾನ ಪತ್ರಿಕೆ ಸಿದ್ಧವಾಗಿದ್ದು, ಅದನ್ನು ನಿರ್ಮಾಪಕ ಮುನಿರತ್ನ ಅವರು ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಮುನಿರತ್ನ ಅವರು ಹಂಚಿಕೊಂಡಿರುವ ಟ್ವೀಟ್ನಲ್ಲಿ ಒಂದು ವಿಶೇಷವಿದೆ. ಹೌದು, ಈ ಸಲ ಭಾನುವಾರದಂದು ಅಂದರೆ ಜು.7ರಂದು ನಡೆಯಲಿರುವ ಆಡಿಯೋ ಬಿಡುಗಡೆ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ದರ್ಶನ್ರ ಹೊಸ ಪೋಸ್ಟರ್ ಅನ್ನು ರಿಲೀಸ್ ಮಾಡಲಾಗಿದೆ. ಇದರಲ್ಲಿ ಇದು ದರ್ಶನ್ ಅವರ 50ನೇ ಸಿನಿಮಾ ಎಂದೆಲ್ಲ ಬರೆಯಲಾಗಿದೆ. ಈ ಹಿಂದೆ ಕೋಪಗೊಂಡಿದ್ದ ದಚ್ಚು ಅಭಿಮಾನಿಗಳನ್ನು ಮುನಿರತ್ನ ಶಾಂತಗೊಳಿಸಲು ಈ ದಾರಿ ಕಂಡುಕೊಂಡಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: Lindsay Lohan: ಇನ್ಸ್ಟಾಗ್ರಾಂನಲ್ಲಿ ತನ್ನದೇ ನಗ್ನ ಸೆಲ್ಫಿ ಪೋಸ್ಟ್ ಮಾಡುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡ ನಟಿ..!
ಇನ್ನು ಸಿನಿಮಾವನ್ನು ಸಿನಿಮಾದಂತೆ ನೋಡಿ ಎಂದು ಅಭಿಮಾನಿಗಳಿಗೆ ಪಾಠ ಮಾಡಿದ್ದ ದರ್ಶನ್, 'ಕುರುಕ್ಚೇತ್ರ' ಚಿತ್ರಕ್ಕಾಗಿ ಶ್ರಮಿಸಿರುವ ಎಲ್ಲರಿಗೂ ಧನ್ಯವಾದ ತಿಳಿಸುವ ಮೂಲಕ ಆಡಿಯೋ ಲಾಂಚ್ನ ಆಹ್ವಾನ ಪತ್ರಿಕೆಯನ್ನು ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಬಹುತಾರಾಗಣ ಹೊಂದಿರುವ ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಇದೇ ಭಾನುವಾರ ಜುಲೈ ೭ ರಂದು ನಡೆಯಲಿದೆ. ಬಹಳಷ್ಟು ನಟರು ಹಾಗೂ ತಂತ್ರಘ್ನರು ಈ ಚಿತ್ರಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ. ನಿಮ್ಮ ಪ್ರೀತಿ ಪ್ರೋತ್ಸಾಹ ಹೀಗೆ ಸದಾ ಇರಲಿ 😊 pic.twitter.com/1NB13H4Qns
ಒಟ್ಟಾರೆ ಸ್ಯಾಂಡಲ್ವುಡ್ನ ಬಹು ನಿರೀಕ್ಷಿತ ಹಾಗೂ ಬಿಗ್ ಬಜೆಟ್ ಸಿನಿಮಾ 'ಕುರುಕ್ಷೇತ್ರ'. ನಾಗಣ್ಣ, ವಿ.ನಾಗೇಂದ್ರ ಪ್ರಸಾದ್, ಎಸ್.ವಿ. ಪ್ರಸಾದ್ ಹಾಗೂ ದೇವರಾಜ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ಅಂಬರೀಷ್, ರವಿಚಂದ್ರನ್, ಅರ್ಜುನ್ ಸರ್ಜಾ, ನಿಖಿಲ್ ಸೇರಿದಂತೆ ದೊಡ್ಡ ತಾರಾಬಳಗವೇ ಈ ಸಿನಿಮಾದಲ್ಲಿದೆ.
Sunny Leone: ಪಡ್ಡೆಗಳಿಗೆ ಸಮೂಹ ಸನ್ನಿ ಹಿಡಿಸಿದ್ದ ಮಾಜಿ ನೀಲಿ ತಾರೆ ಸನ್ನಿಗೂ ಇತ್ತಂತೆ ಆ ಕಾಯಿಲೆ..!