ಕನ್ನಡದ ದುನಿಯಾ ವಿಜಯ್ (Duniya Vijay) ಯಾವಾಗಲೂ ಸಾಹಸಗಳನ್ನ ಮಾಡ್ತಾನೇ ಇರ್ತಾರೆ. ಸಾಹಿತ್ಯದ ಬಗ್ಗೆನೂ ವಿಶೇಷ ಆಸಕ್ತಿ ಇದೆ. ಕಥೆಗಳನ್ನೂ ಕೇಳೋದು ಇದೆ. ಕಥೆಗಳನ್ನ ಸಿನಿಮಾಕ್ಕಾಗಿಯೇ ಹೇಳೋದು ಇದೆ. ದುನಿಯಾ ವಿಜಯ್ ಅವರಿಗೆ (Direction) ನಿರ್ದೇಶನದ ಆಸಕ್ತಿನೂ ಇದೆ. ಆ ಆಸಕ್ತಿಯಲ್ಲಿ ಈಗಾಗಲೇ ಸಲಗ ಸಿನಿಮಾ ಬಂದಿದೆ. ಹಿಟ್ ಕೂಡ ಆಗಿದೆ. ಇದೇ ವಿಜಯ್ ಈಗ ಮತ್ತೊಂದು (Cinema) ಸಿನಿಮಾ ಶುರು ಮಾಡಿದ್ದಾರೆ. ಅದುವೇ ಭೀಮ. ಈ ಚಿತ್ರದ ಪಾತ್ರಗಳು ಭರ್ಜಿಯಾಗಿಯೇ ಇವೆ. ಒಳ್ಳೆ ವಿಭಿನ್ನ ಪಾತ್ರಗಳನ್ನೆ ದುನಿಯಾ ವಿಜಯ್ ಡಿಸೈನ್ ಮಾಡಿದ್ದಾರೆ. ಈ ಸಿನಿಮಾದ ಮಧ್ಯದಲ್ಲಿಯೇ ವಿಜಯ್ ಹುಡುಕಿಕೊಂಡು (Tollywood)ಟಾಲಿವುಡ್ನಿಂದ ಒಂದು ದೊಡ್ಡ ಚಿತ್ರದ ಆಫರ್ ಬಂದಿತ್ತು. ಅದಕ್ಕಾಗಿಯೇ ದೇಹದ ತೂಕ ಹೆಚ್ಚಿಸಿಕೊಂಡಿ ಖದರ್ ಆಗಿಯೇ ವಿಲನ್ ಮಾತ್ರ ಮಾಡಿ ಬಂದಿದ್ದಾರೆ.
ಆದರೆ ತಮ್ಮ ಚಿತ್ರವನ್ನೂ ಮಾಡ್ಬೇಕು ಅಲ್ವೇ. ಅದಕ್ಕಾಗಿಯೇ ದುನಿಯಾ ವಿಜಯ್ಈಗ ದೇಹದ ತೂಕ ಇಳಿಸಿಕೊಂಡು ಸ್ಲಿಮ್ ಆಗಿಯೇ ಸಖತ್ ಯಂಗ್ ಆಗಿಯೇ ಕಾಣಿಸುತ್ತಿದ್ದಾರೆ.
ಭೀಮನಿಗಾಗಿ ಸಖತ್ ಲುಕ್-ನಯಾ ಲುಕ್ ಅಲ್ಲಿ ವಿಜಯ್ ಮಿಂಚಿಂಗ್
ದುನಿಯಾ ವಿಜಯ್ ದೇಹದವನ್ನ ತಮಗೆ ಹೇಗೆ ಬೇಕೋ ಹಾಗೆ ಮೋಲ್ಡ್ ಮಾಡಿಕೊಳ್ಳ್ತಾರೆ. ದೇಹದ ತೂಕ ಹೆಚ್ಚಿಸಬೇಕೋ. ಓಕೆ ಫೈನ್ ಎಂದು ಪಾತ್ರಕ್ಕೆ ಎಷ್ಟು ಬೇಕೋ ಅಷ್ಟು ತೂಕ ಹೆಚ್ಚಿಸಿಕೊಳ್ತಾರೆ.
ಬಾಲಯ್ಯ ಅಭಿನಯದ ವೀರ ಸಿಂಹ ರೆಡ್ಡಿ ಚಿತ್ರಕ್ಕಾಗಿಯೇ ದೇಹದ ತೂಕ ಹೆಚ್ಚಿಸಿಕೊಂಡು ಖಡಕ್ ವಿಲನ್ ಆಗಿಯೇ ಅಭಿನಯಿಸಿ ವಾಪಸ್ ಆಗಿದ್ದಾರೆ. ತಮ್ಮ ಕನಸಿನ ಪ್ರೋಜೆಕ್ಟ್ ಭೀಮ ಚಿತ್ರಕ್ಕಾಗಿಯೇ ಈಗ ಮತ್ತೆ ಎಲ್ಲ ತಯಾರಿಯನ್ನ ಮಾಡಿಕೊಳ್ಳುತ್ತಿದ್ದಾರೆ.
ಭೀಮನಿಗಾಗಿ ದೇಹದ ತೂಕ ಇಳಿಸಿದ ವಿಜಯ್
ದುನಿಯಾ ವಿಜಯ್ ತಮ್ಮ ಭೀಮಾ ಚಿತ್ರಕ್ಕಾಗಿ ದೇಹದ ತೂಕ ಇಳಿಸಿಕೊಂಡಿದ್ದಾರೆ. ದೇಹದ ತೂಕ ಹೆಚ್ಚಿಸಿಕೊಳ್ಳುವುದು ತುಂಬಾ ಸುಲಭವೇ ಆಗಿರುತ್ತದೆ. ಆದರೆ ದೇಹ ತೂಕ ಇಳಿಸಬೇಕಲ್ವೇ? ಆಗಲೇ ನೋಡಿ ಎಲ್ಲ ಗೊತ್ತಾಗೋದು. ಅದರಂತೆ ವಿಜಯ್ ದೇಹದ ತೂಕ ಇಳಿಸಿಕೊಳ್ಳುವುದು ಮತ್ತು ಹೆಚ್ಚಿಸಿಕೊಳ್ಳುವುದರಲ್ಲಿ ನಿಸ್ಸಿಮರು.
ಅದಕ್ಕೇನೆ ವಿಜಯ್ ದೇಹ ಅವರ ಮಾತು ಕೇಳುತ್ತದೆ. ಆ ಹಿನ್ನೆಲೆಯಲ್ಲಿಯೇ ವಿಜಯ್ ಈಗ ಮತ್ತೆ ದೇಹದ ತೂಕ ಇಳಿಸಿಕೊಂಡು ಸಖತ್ ಯಂಗ್ ಆಗಿಯೇ ಕಾಣಿಸುತ್ತಿದ್ದಾರೆ. ಭೀಮ ಚಿತ್ರಕ್ಕಾಗಿಯೇ ಮತ್ತೆ ತಯಾರಿನೂ ಮಾಡಿಕೊಂಡಿದ್ದಾರೆ.
ಭೀಮ ಸಿನಿಮಾದ ಟೀಮ್ ಚರ್ಚೆ ಬಲು ಜೋರು
ದುನಿಯಾ ವಿಜಯ್ ತಮ್ಮ ಚಿತ್ರದ ಕೆಲಸವನ್ನ ಪಕ್ಕಾ ಮಾಡಿಕೊಂಡೇ ಶೂಟಿಂಗ್ ಹೋಗ್ತಾರೆ. ಅದರಲ್ಲೂ ಚಿತ್ರಕ್ಕೆ ಇವರೇ ನಿರ್ದೇಶಕರಾಗಿದ್ದಾರೆ. ಹೀರೋನೂ ಇವರೇ ಆಗಿದ್ದಾರೆ. ಎರಡು ಜವಾಬ್ದಾರಿಯನ್ನ ಹೊತ್ತ ವಿಜಯ್, ಅಷ್ಟೇ ಪ್ಲಾನಿಂಗ್ ನಲ್ಲಿಯೇ ತಯಾರಿ ಶುರು ಮಾಡಿದ್ದಾರೆ.
ಡೈಲಾಗ್ ರೈಟರ್ ಮಾಸ್ತಿ ಜೊತೆಗೂ ಈಗಾಗಲೇ ಚರ್ಚೆ ಮಾಡ್ತಾನೇ ಇದ್ದಾರೆ. ಒಳ್ಳೆ ಡೈಲಾಗ್ ಬರೆಯಲು ಅವಶ್ಯಕ ಚರ್ಚೆ ಭೀಮ ಚಿತ್ರದ ಟೀಮ್ ನಲ್ಲಿ ನಡೆಯುತ್ತಿದೆ. ಭೀಮ ಸಿನಿಮಾದಲ್ಲಿ ಒಳ್ಳೆ ಕ್ಯಾರೆಕ್ಟರ್ಗಳೇ ಇವೆ.
ಭೀಮ ಸಿನಿಮಾದಲ್ಲಿ ಅದ್ಭುತ ಪಾತ್ರಗಳ ದಂಡು
ಭೀಮ ಸಿನಿಮಾದಲ್ಲಿ ಹೊಸ ಕಲಾವಿರ ದಂಡೂ ಇದೆ. ದೈತ್ಯ ಬ್ಲ್ಯಾಕ್ ಡ್ರ್ಯಾಗನ್ ಮಂಜು, ಗಿಲಿ ಗಿಲಿ ಚಂದ್ರು ಹೀಗೆ ನವ ಕಲಾವಿದರೆಲ್ಲ ಭೀಮ ಸಿನಿಮಾದಲ್ಲಿ ಪರಿಚಯ ಆಗುತ್ತಿದ್ದಾರೆ.
ಜಯಮ್ಮನ ಮಗ ಚಿತ್ರದಲ್ಲಿ ಅಮ್ಮನ ಪಾತ್ರ ಮಾಡಿರೋ ನಟಿ ಕಲ್ಯಾಣಿ ರಾಜು ಅವರು ಇಲ್ಲೂ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಬೆಂಗಳೂರಿನ ಬಂಡಿ ಮಹಾಕಾಳಮ್ಮ ದೇವಸ್ಥಾನದಲ್ಲಿಯೇ ಮುಹೂರ್ತವೂ ಆಗಿದೆ.
ಇದನ್ನೂ ಓದಿ: Abhishek Ambareesh: ರೆಬೆಲ್ಸ್ಟಾರ್ ಪುತ್ರನ ನಿಶ್ಚಿತಾರ್ಥಕ್ಕೆ ಮುಹೂರ್ತ ಫಿಕ್ಸ್! ಉಂಗುರ ಪೂಜೆ ಸಂಭ್ರಮ
ಇನ್ನು ಈಗಾಗಲೇ ಡೈರೆಕ್ಟರ್ ವಿಜಯ್ ಈ ಚಿತ್ರದ ಈ ಪಾತ್ರಗಳ ಪೋಸ್ಟರ್ ಅನ್ನೂ ರಿಲೀಸ್ ಮಾಡಿದ್ದಾರೆ. ಜನರಿಗೆ ಪರಿಚಯ ಮಾಡಿಸಿದ್ದಾರೆ. ಭೀಮ ಸಿನಿಮಾದಲ್ಲಿ ವಿಜಯ್ ಹೇಗೆ ಕಾಣಿಸುತ್ತಾರೆ ಅನ್ನೋ ಝಲಕ್ ಕೂಡ ಈಗಾಗಲೇ ಸಿಕ್ಕಿದೆ. ಉಳಿದಂತೆ ಭೀಮ ಸಿನಿಮಾದ ಚಿತ್ರೀಕರಣಕ್ಕೆ ವಿಜಯ್ ಮತ್ತೆ ಸಜ್ಜಾಗುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ