• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Kichcha Sudeep: ಕಿಚ್ಚನ ಪ್ರಚಾರಕ್ಕೆ ಬಿಜೆಪಿ ಬಿಗ್ ಪ್ಲಾನ್​, ಇತ್ತ ನಟ ಸುದೀಪ್​ಗೆ ಶಾಕ್ ಕೊಟ್ಟ ಜೆಡಿಎಸ್!

Kichcha Sudeep: ಕಿಚ್ಚನ ಪ್ರಚಾರಕ್ಕೆ ಬಿಜೆಪಿ ಬಿಗ್ ಪ್ಲಾನ್​, ಇತ್ತ ನಟ ಸುದೀಪ್​ಗೆ ಶಾಕ್ ಕೊಟ್ಟ ಜೆಡಿಎಸ್!

ಸಿಎಂ ಬೊಮ್ಮಾಯಿ, ಸುದೀಪ್​

ಸಿಎಂ ಬೊಮ್ಮಾಯಿ, ಸುದೀಪ್​

ಬಿಜೆಪಿ ಸ್ಟಾರ್ ಪ್ರಚಾರಕರಾಗಿರುವ ನಟ ಸುದೀಪ್ ಅವರ ಸಿನಿಮಾ, ಜಾಹೀರಾತು ಹಾಗೂ ಟಿವಿ ಶೋಗಳಿಗೆ ಬ್ರೇಕ್​ ಹಾಕುವಂತೆ ಜೆಡಿಎಸ್ ದೂರು ನೀಡಿದೆ.

  • News18 Kannada
  • 4-MIN READ
  • Last Updated :
  • Karnataka, India
  • Share this:

ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಫೈಟ್ ಜೋರಾಗಿದೆ. (Karnataka Assembly Elections 2023) ಬಿಜೆಪಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ರಣತಂತ್ರ ರೂಪಿಸಿದ್ದಾರೆ.  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಪರ ಪ್ರಚಾರ ಮಾಡುವುದಾಗಿ ಈಗಾಗಲೇ ನಟ ಕಿಚ್ಚ ಸುದೀಪ್ (Kichcha Sudeep) ಘೋಷಿಸಿದ್ದಾರೆ. ಸಿಎಂ ಬೊಮ್ಮಾಯಿ ಹೇಳಿದ ಕಡೆ ಪ್ರಚಾರ ಮಾಡುವುದಾಗಿ ಸುದೀಪ್ ಹೇಳಿದ್ದಾರೆ. ಇದೀಗ ಸುದೀಪ್​ ವಿರುದ್ಧ ಜೆಡಿಎಸ್ ದೂರು ದಾಖಲಿಸಿದೆ. 


ಸುದೀಪ್​ಗೆ ಶಾಕ್ ಕೊಟ್ಟ ಜೆಡಿಎಸ್​


ಕನ್ನಡದ ನಟ ಕಿಚ್ಚ ಸುದೀಪ್ ಪ್ರಸ್ತುತ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿ ಗುರುತಿಸಿಕೊಂಡಿದ್ದಾರೆ. ಆದ್ದರಿಂದ ಅವರ ಸಿನಿಮಾ, ಜಾಹೀರಾತು, ಪೋಸ್ಟರ್ ಮುಂತಾದವುಗಳು ಮತದಾರರ ಮೇಲೆ ಪ್ರಭಾವ ಬೀರಬಹುದು. ಈ ಹಿನ್ನೆಲೆಯಲ್ಲಿ ಚುನಾವಣೆ ಮುಗಿಯುವವರೆಗೆ ಅವರ ಸಿನಿಮಾಗಳನ್ನು ತಡೆ ಹಿಡಿಯುವಂತೆ ಆಗ್ರಹಿಸಲಾಗಿದೆ.


ಏಪ್ರಿಲ್ 14 ರಿಂದ ಸುದೀಪ್ ಕ್ಯಾಂಪೇನ್ ಶುರು


ಸುದೀಪ್ ಬಿಜೆಪಿ ಪರ ಪ್ರಚಾರಕ್ಕೆ ನಿಂತಿದ್ದು,  ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ನಡುವೆ ನಟ ಕಿಚ್ಚ ಸುದೀಪ್​ ಬಿಜೆಪಿ ಪರ ಪ್ರಚಾರಕ್ಕೆ (campaign) ಮುಹೂರ್ತ ನಿಗದಿಯಾಗಿದ್ದು, ಏಪ್ರಿಲ್ 14 ರಿಂದ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಅವರು ಪ್ರಚಾರ ಆರಂಭಿಸಲಿದ್ದಾರೆ ಎಂದು ಹೇಳಲಾಗ್ತಿದೆ.


 ಎಲ್ಲಿಂದ ಶುರುವಾಗುತ್ತೆ ಕಿಚ್ಚನ ಪ್ರಚಾರ


ಸಿಎಂ ಬೊಮ್ಮಾಯಿ ಕಣಕ್ಕಿಳಿಯಲಿರುವ ಶಿಗ್ಗಾಂವಿ ಜೊತೆಗೆ ನಾಯಕ್ ಸಮುದಾಯದವರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಸುದೀಪ್ ಪ್ರಚಾರಕ್ಕಿಳಿಯುತ್ತಾರೆ ಎನ್ನಲಾಗ್ತಿದೆ. ಕಿಚ್ಚ ಸುದೀಪ್​ ಎಲ್ಲಿಂದ ಪ್ರಚಾರ ಆರಂಭಿಸಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. ಮತ್ತೊಂದೆಡೆ ಕಿಚ್ಚ ಸುದೀಪ್​ ಬಿಜೆಪಿ ಪರ ಪ್ರಚಾರ ಮಾಡುವುದಕ್ಕೆ ಅನುಮತಿ ನೀಡಬಾರದು ಎಂದು ಜೆಡಿಎಸ್, ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.


ನನ್ನ ಬೆಂಬಲ ಬೊಮ್ಮಾಯಿಗೆ ಎಂದಿದ್ದ ಸುದೀಪ್​


ಇತ್ತೀಚೆಗಷ್ಟೇ ಕಿಚ್ಚ ಸುದೀಪ್ ಅವರು ಸಿಎಂ ಜೊತೆ ಜಂಟಿ  ಸುದ್ದಿಗೋಷ್ಠಿಯಲ್ಲಿ ಮಾತಾಡಿ ನನ್ನ ಬೆಂಬಲ ಸಿಎಂ ಬೊಮ್ಮಾಯಿ ಅವರಿಗೆ ಎಂದು ಹೇಳಿದ್ರು.  ಅಲ್ಲದೆ ತಾವು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಹಾಗೂ ಬೊಮ್ಮಾಯಿ ಅವರು ಹೇಳಿದ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುವುದಾಗಿ ಸುದೀಪ್​ ಹೇಳಿದ್ದಾರೆ. ಆದರೆ ಸುದೀಪ್ ಬಿಜೆಪಿಯನ್ನು ಬೆಂಬಲಿಸುವುದಾಗಿ ಹೇಳಿಲ್ಲ. ತನಗೆ ಸಹಾಯ ಮಾಡಿದ ಬೊಮ್ಮಾಯಿ ಅವರನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ನನ್ನನ್ನು ಬೆಂಬಲಿಸಿದರೆ ಬಿಜೆಪಿಯನ್ನು ಬೆಂಬಲಿಸಿದಂತೆ ಎಂದಿದ್ದರು.


ಬೊಮ್ಮಾಯಿ ಎಲ್ಲಿ ಹೇಳ್ತಾರೋ ಅಲ್ಲಿ ಕೆಲಸ ಮಾಡುವೆ


ನನ್ನ  ಜೀವನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಒಳ್ಳೆಯ ಸ್ಥಾನ ನೀಡಿದ್ದೇನೆ. ಬಸವರಾಜ ಬೊಮ್ಮಾಯಿ ಎಲ್ಲಿ ಹೇಳ್ತಾರೆ ಅಲ್ಲಿ ಕೆಲಸ ಮಾಡೋಕೆ ನಾನು ರೆಡಿ ಇದ್ದೇನೆ ಎಂದ ಸುದೀಪ್ ಹೇಳಿದ್ದಾರೆ. ಬೇರೆ ಪಕ್ಷದ ನಾಯಕರು ಯಾರಾದರೂ ಹಿಂದೆ ನನ್ನ ಕಷ್ಟಕ್ಕೆ ಆಗಿದ್ರೆ, ಖಂಡಿತವಾಗಿಯೂ ಅವರ ಪರವಾಗಿ ನಾನು ಪ್ರಚಾರ ಮಾಡ್ತೀನಿ ಇದೇ ವೇಳೆ ಸುದೀಪ್ ಹೇಳಿದ್ದರು.




ಇದನ್ನೂ ಓದಿ:Kichcha Sudeep-BJP: ಕಿಚ್ಚ ಸುದೀಪ್ ಸಿನಿಮಾ, ಟಿವಿ ಶೋ ಪ್ರಸಾರಕ್ಕೆ ಬೀಳುತ್ತಾ ಬ್ರೇಕ್! ಚುನಾವಣಾ ಆಯೋಗಕ್ಕೆ ವಕೀಲರಿಂದ ದೂರು


ಕಷ್ಟದಲ್ಲಿ ನನಗೆ ಮಾಮ ಸಹಾಯ ಮಾಡಿದ್ದಾರೆ


ಬಸವರಾಜ ಬೊಮ್ಮಾಯಿ ಅವರು ನನ್ನ ಕಷ್ಟದ ಸಮಯದಲ್ಲಿ ಸಹಾಯ ಮಾಡಿದ್ದಾರೆ.  ಅವರು ಬೇರೆ ಪಕ್ಷದಲ್ಲಿ ಇದ್ದಿದ್ರು ಅವರ ಜೊತೆ ನಾನು‌ ನಿಲ್ತಿದ್ದೆ. ನಾನು ಅವರ ವಿಷಯದಲ್ಲಿ ಪಕ್ಷ ನೋಡುತ್ತಿಲ್ಲ ವ್ಯಕ್ತಿ ನೋಡ್ತೀನಿ. ಬೇರೆ ಪಕ್ಷದಲ್ಲಿ ನನಗೆ ವೈಯಕ್ತಿಕವಾಗಿ ಸಹಾಯ ಮಾಡಿದವರ ಪರ ನಿಲ್ತೀನಿ ಎಂದು ಸುದೀಪ್​ ಹೇಳಿದ್ರು.

First published: