• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • ಹೊಂಬಾಳೆ ಫಿಲಂಸ್​ನಿಂದ ಮತ್ತೊಂದು ಬಿಗ್ ಅನೌನ್ಸ್​ಮೆಂಟ್: ಈ ಬಾರಿ ಹೀರೋ ಯಾರು ಗೊತ್ತೇ?

ಹೊಂಬಾಳೆ ಫಿಲಂಸ್​ನಿಂದ ಮತ್ತೊಂದು ಬಿಗ್ ಅನೌನ್ಸ್​ಮೆಂಟ್: ಈ ಬಾರಿ ಹೀರೋ ಯಾರು ಗೊತ್ತೇ?

Hombale films

Hombale films

ಸಲಾರ್ ನಂತರ ಮತ್ತೊಂದು ಕನ್ನಡ ಚಿತ್ರವನ್ನು ಹೊಂಬಾಳೆ ಫಿಲಂಸ್ ಅನೌನ್ಸ್ ಮಾಡಲಿರುವುದು ಒಳ್ಳೆಯ ಬೆಳವಣಿಗೆ. ಈ ಚಿತ್ರದ ನಾಯಕ ರೋರಿಂಗ್ ಸ್ಟಾರ್ ಮುರಳಿಯ ಅಥವಾ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅವರೇನಾ ಎಂದು ತಿಳಿಯಲು ಡಿಸೆಂಬರ್ 17 ವರೆಗೆ ಕಾಯಬೇಕಾಗಿದೆ.

  • Share this:

    ಸ್ಯಾಂಡಲ್​ವುಡ್​ ಕಡೆ ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡುವ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಸಂಸ್ಥೆ ಹೊಂಬಾಳೆ ಫಿಲಂಸ್​. ಇಂತಹ ಪ್ರತಿಷ್ಠಿತ ಸಂಸ್ಥೆ ಕೆಜಿಎಫ್​ ನಂತರ ಇತ್ತೀಚೆಗಷ್ಟೆ ಮತ್ತೊಂದು ಪ್ಯಾನ್​ ಇಂಡಿಯಾ ಸಿನಿಮಾವನ್ನು ಪ್ರಕಟಿಸಿತ್ತು. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಸಲಾರ್​ ಎಂದು ಟೈಟಲ್​ ಇಟ್ಟಿರುವ ಚಿತ್ರದಲ್ಲಿ ಪ್ರಭಾಸ್​ ಮೋಸ್ಟ್​ ವೈಲೆಂಟ್​ ಮ್ಯಾನ್​ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇದರ ಬೆನ್ನಲ್ಲೇ ವಿಜಯ್ ಕಿರಂಗದೂರು ಅವರ ಹೊಂಬಾಳೆ ಫಿಲಂಸ್ ಮತ್ತೊಂದು ಘೋಷಣೆಗೆ ಸಜ್ಜಾಗಿದೆ. ಡಿಸೆಂಬರ್ 17, ಬೆಳಿಗ್ಗೆ 11.59ಕ್ಕೆ ಹೊಸ ಚಿತ್ರವೊಂದನ್ನು ಘೋಷಿಸಲಿದ್ದಾರೆ. ಇದು ಹೊಂಬಾಳೆ ಫಿಲಂಸ್ ನ 8ನೇ ಚಿತ್ರ.


    ಹೌದು, ಡಿಸೆಂಬರ್ 17 ರೋರಿಂಗ್ ಸ್ಟಾರ್ ಮುರಳಿಯವರ ಹುಟ್ಟಿದ ಹಬ್ಬ. ಆದ್ದರಿಂದ, ಮುರಳಿ ಯವರ ಮುಂದಿನ ಚಿತ್ರಕ್ಕೆ ಹೊಂಬಾಳೆ ಫಿಲಂಸ್ ಬಂಡವಾಳ ಹೂಡಲಿದ್ದಾರ? ಎಂಬುದು ಕುತೂಹಲ. ಜೊತೆಗೆ ಇನ್ನೊಂದು ಮೂಲಗಳ ಪ್ರಕಾರ ಹೊಂಬಾಳೆ ಫಿಲಂಸನ 8ನೇ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.


    ಮಾತಿನ ಮನೆಯಲ್ಲಿ ಕಸ್ತೂರಿ ಮಹಲ್!



    ಪುನೀತ್ ಮತ್ತು ನಿರ್ದೇಶಕ ಸಂತೋಷ್ ಆನಂದ್ ರಾಮ್ ಕಾಂಬಿನೇಷನ್ ನಲ್ಲಿ ಹ್ಯಾಟ್ರಿಕ್ ಸಿನಿಮಾಗೆ ತಯಾರಿ ನಡೆಯುತ್ತಿದೆ. ಯುವರತ್ನ ಸಿನಿಮಾ ಬಳಿಕ ಮತ್ತೆ ಈ ಜೋಡಿ ಮತ್ತೆ ಒಂದಾಗುತ್ತಿದೆ. ಇಬ್ಬರ ಹ್ಯಾಟ್ರಿಕ್ ಸಿನಿಮಾಗೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಲಿದೆ ಎನ್ನುವ ಮಾತು ಕೇಳಿಬರುತ್ತಿದೆ.


    ಹೊಂಬಾಳೆ ಫಿಲಂನ ವಾರಸುದಾರಾ ವಿಜಯ್ ಕಿರಂಗದೂರು. ಇವರು ಮೊದಲು ನಿರ್ಮಾಣ ಮಾಡಿದ ಚಿತ್ರ ಪುನೀತ್ ರಾಜ್ ಕುಮಾರ್ ಆಕ್ಟ್ ಮಾಡಿರೋ ನಿನ್ನಿಂದಲೇ. ಈ ಚಿತ್ರ ಬಾಕ್ಸ್ ಆಫೀಸ್ ಫೇಲ್ಯೂರ್. ನಂತರ ಹೊಂಬಾಳೆ ಫಿಲಂಸ್ ಯಶ್ ಅಭಿನಯದ ಮಾಸ್ಟರ್ ಪೀಸ್ ನಿರ್ಮಾಣ ಮಾಡಿದರು. ಈ ಚಿತ್ರ ಬಾಕ್ಸ್ ಆಫೀಸ್ ಹಿಟ್ ಆಯಿತು. ನಂತರ ರಾಜ್ ಕುಮಾರ್ ಅಭಿನಯದ, ಸಂತೋಷ್ ಆನಂದ್ ರಾಮ್ ನಿರ್ದೇಶನದ ರಾಜಕುಮಾರ. ಇದು ಬಾಕ್ಸ್ ಆಫೀಸ್ ನಲ್ಲಿ 75 ಕೋಟಿ ಗಳಿಸಿ ಇಂಡಸ್ಟ್ರಿ ಹಿಟ್ ಆಗಿತ್ತು.


    Rapper Chandan Shetty: ಹೊಸ ವರ್ಷಕ್ಕೆ ಪಾರ್ಟಿ ಫ್ರೀಕ್​ ಮೂಲಕ ಕಿಕ್ಕೇರಿಸಲು ಬರುತ್ತಿದ್ದಾರೆ ರ‍್ಯಾಪರ್ ಚಂದನ್​ ಶೆಟ್ಟಿ


    ನಂತರ ಹೊಂಬಾಳೆ ಫಿಲಂಸ್ ಗೆ ನ್ಯಾಷನಲ್ ಫೇಮ್ ತಂದು ಕೊಟ್ಟಿದ್ದು ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ ಕೆ ಜಿ ಎಫ್ ಚಾಪ್ಟರ್ 1. ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ 225 ಕೋಟಿಗಿಂತಲೂ ಹೆಚ್ಚು ಗಳಿಸಿತು. ಕನ್ನಡ ಮಾತ್ರವಲ್ಲದೆ, ತೆಲುಗು, ಹಿಂದಿ ಹಾಗು ತಮಿಳಿನಲ್ಲೂ ಕೂಡ ಡಬ್ ಆಗಿ ಸೂಪರ್ ಹಿಟ್ ಆಯಿತು. ಈಗ ದೇಶಾದ್ಯಂತ ಜನ ಕೆ ಜಿ ಎಫ್ ಚಾಪ್ಟರ್ 2 ಗಾಗಿ ಕಾಯುತ್ತಿದ್ದಾರೆ.


    ಸಲಾರ್ ನಂತರ ಮತ್ತೊಂದು ಕನ್ನಡ ಚಿತ್ರವನ್ನು ಹೊಂಬಾಳೆ ಫಿಲಂಸ್ ಅನೌನ್ಸ್ ಮಾಡಲಿರುವುದು ಒಳ್ಳೆಯ ಬೆಳವಣಿಗೆ. ಈ ಚಿತ್ರದ ನಾಯಕ ರೋರಿಂಗ್ ಸ್ಟಾರ್ ಮುರಳಿಯ ಅಥವಾ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅವರೇನಾ ಎಂದು ತಿಳಿಯಲು ಡಿಸೆಂಬರ್ 17 ವರೆಗೆ ಕಾಯಬೇಕಾಗಿದೆ.

    First published: