• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Happy Birthday Junior NTR: ರಿವೀಲ್​ ಆಯ್ತು ಜೂನಿಯರ್​ ಎನ್​ಟಿಆರ್​ ಇಂಟೆನ್ಸ್​ ಲುಕ್​: ಅಭಿಮಾನಿಗಳಿಗೆ ಹಬ್ಬ..!​

Happy Birthday Junior NTR: ರಿವೀಲ್​ ಆಯ್ತು ಜೂನಿಯರ್​ ಎನ್​ಟಿಆರ್​ ಇಂಟೆನ್ಸ್​ ಲುಕ್​: ಅಭಿಮಾನಿಗಳಿಗೆ ಹಬ್ಬ..!​

ಹುಟ್ಟುಹಬ್ಬದ ಸಂಭ್ರಮದಲ್ಲಿ ಜೂನಿಯರ್ ಎನ್​ಟಿಆರ್​

ಹುಟ್ಟುಹಬ್ಬದ ಸಂಭ್ರಮದಲ್ಲಿ ಜೂನಿಯರ್ ಎನ್​ಟಿಆರ್​

RRR-Komaram Bheem: ಬಾಹುಬಲಿ ನಂತರ ರಾಜಮೌಳಿ ಅವರ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ಆರ್​ಆರ್​ಆರ್​. ಈ ಸಿನಿಮಾದಲ್ಲಿ ಜೂನಿಯರ್ ಎನ್​ಟಿಆರ್​ ಕೋಮರಾಮ್ ಭೀಮ್ ಹಾಗೂ ರಾಮ್​ ಚರಣ್​ ತೇಜ ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಜೂ. ಎನ್​ಟಿಆರ್ ಅವರ ಇಂಟೆನ್ಸ್​ ಲುಕ್​ ಇರುವ ಪೋಸ್ಟರ್​ ಅನ್ನು ಆರ್​ಆರ್​ಆರ್​ ಚಿತ್ರತಂಡ ರಿಲೀಸ್​ ಮಾಡಿದೆ.

ಮುಂದೆ ಓದಿ ...
  • Share this:

ಇತ್ತೀಚೆಗಷ್ಟೆ ಕೋವಿಡ್​ ಪಾಸಿಟಿವ್​ ಆಗಿದ್ದು, ಕ್ವಾರಂಟೈನ್​ನಲ್ಲಿರುವ ನಟ ಜೂನಿಯರ್​ ಎನ್​ಟಿಆರ್​ ಅವರು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸಿಸುತ್ತಿದ್ದಾರೆ.  ಸದ್ಯ ಕೋವಿಡ್​ಗೆ ಚಿಕಿತ್ಸೆ ಪಡೆಯುತ್ತಿರುವ ನಟ ಜೂನಿಯರ್​ ಎನ್​ಟಿಆರ್​ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ನಟನ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಬ್ಬದಂತೆ ಆಚರಿಸುತ್ತಿದ್ದಾರೆ. 38ನೇ ವಸಂತಕ್ಕೆ ಕಾಲಿಟ್ಟಿರುವ ನಟನಿಗೆ  ಕುಟುಂಬದ ಸದಸ್ಯರು, ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಪ್ರಸ್ತುತ ಜೂನಿಯರ್ ಎನ್​ಟಿಆರ್​ ಅವರು ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ಆರ್​ಆರ್​ಆರ್​. ರಾಜಮೌಳಿ ನಿರ್ದೇಶನದ ಈ ಸಿನಿಮಾದಲ್ಲಿ ಜೂನಿಯರ್ ಎನ್​ಟಿಆರ್​ ಕೋಮರಾಮ್​ ಭೀಮ್​ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆರ್​ಆರ್​ಆರ್​ ಚಿತ್ರತಂಡ ಜೂ. ಎನ್​ಟಿಆರ್ ಫ್ಯಾನ್ಸ್​ಗೆ  ಇಂದು ಸಖತ್​ ಸರ್ಪ್ರೈಸ್​ ಕೊಟ್ಟಿದೆ. 


ಬಾಹುಬಲಿ ನಂತರ ರಾಜಮೌಳಿ ಅವರ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ಆರ್​ಆರ್​ಆರ್​. ಈ ಸಿನಿಮಾದಲ್ಲಿ ಜೂನಿಯರ್ ಎನ್​ಟಿಆರ್​ ಕೋಮರಾಮ್ ಭೀಮ್ ಹಾಗೂ ರಾಮ್​ ಚರಣ್​ ತೇಜ ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಜೂ. ಎನ್​ಟಿಆರ್ ಅವರ ಇಂಟೆನ್ಸ್​ ಲುಕ್​ ಇರುವ ಪೋಸ್ಟರ್​ ಅನ್ನು ಆರ್​ಆರ್​ಆರ್​ ಚಿತ್ರತಂಡ ರಿಲೀಸ್​ ಮಾಡಿದೆ.


Happy Birthday Junior NTR, Jr NTR Birthday Komaram Bheem Rajamouli RRR Tollywood, Komaram Bheem Poster, Junior NTR, Alia Bhatt, Ram Charan, Ajay Devgn, Rajamouli, Junior NTR speaks in Kannada, Alia Bhatt in Telugu, Corona Awareness, rrr movie,rrr movie twitter,rrr movie shooting,rrr movie climax begun rajamouli tweet,rajamouli twitter,ram charan rrr shooting,jr ntr shooting rrr,ram charan jr ntr shooting in rrr,telugu cinema, ಆರ್​ಆರ್​ಆರ್​ ಸಿನಿಮಾದ ಕ್ಲೈಮ್ಯಾಕ್ಸ್​ ಶೂಟಿಂಗ್​, ಜೂನಿಯರ್​ ಎನ್​ಟಿಆರ್​ ರಾಮ್​ ಚರಣ್​ ತೇಜ, ಎನ್​ಟಿಆರ್​, ರಾಜಮೌಳಿ, ಆರ್​ಆರ್​ಆರ್​ ಸಿನಿಮಾ
ಕೋಮರಾಮ್​ ಭೀಮ್​ ಪಾತ್ರದಲ್ಲಿ ಜೂನಿಯರ್​ ಎನ್​ಟಿಆರ್​


ಕೋಮರಾಮ್​ ಭೀಮ್​ ಪಾತ್ರದ ಈ ಹೊಸ ಪೋಸ್ಟರ್​ ಅನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡುತ್ತಾ ಟ್ರೆಂಡ್​ ಮಾಡುತ್ತಿದ್ದಾರೆ.



ಕಳೆದ ವರ್ಷ ರಾಮ್​ ಚರಣ್​ ತೇಜ ಅವರ ಹುಟ್ಟುಹಬ್ಬಕ್ಕೆ ಅವರ ಪಾತ್ರವನ್ನು ಪರಿಚಯಿಸುವ ವಿಡಿಯೋ ರಿಲೀಸ್​ ಮಾಡಲಾಗಿತ್ತು. ಆ ವಿಡಿಯೋಗೆ ಜೂನಿಯರ್​ ಎನ್​ಟಿಆರ್ ಮಾತುಕೊಟ್ಟಂತೆ ಅವರೇ ಕಂಠದಾನ ಮಾಡಿದ್ದರು. ಇನ್ನು ಅದರಂತೆಯೇ ಜೂನಿಯರ್​ ಎನ್​ಟಿಆರ್ ಅವರ ಹುಟ್ಟುಹಬ್ಬಕ್ಕೆ ಅವರ ಪಾತ್ರವನ್ನು ಪರಿಚಯಿಸುವ ವಿಡಿಯೋ ರಿಲೀಸ್​ ಮಾಡಲು ಚಿತ್ರತಂಡ ಪ್ಲಾನ್​ ಮಾಡಿಕೊಂಡಿತ್ತು. ಆದರೆ ಕೊರೋನಾ ಲಾಕ್​ಡೌನ್​ನಿಂದಾಗಿ ಅದು ಸಾಧ್ಯವಾಗಲಿಲ್ಲ. ಎಲ್ಲರೂ ಮನೆಗಳಲ್ಲೇ ಲಾಕ್​ ಆಗಿದ್ದ ಕಾರಣದಿಂದ ರಾಮ್​ ಚರಣ್​ ಸಹ ಆಗ ಕಂಠದಾನ ಮಾಡಲಾಗಿರಲಿಲ್ಲ.


ಇದನ್ನೂ ಓದಿ: Happy Birthday Nishvika: ಸರಳವಾಗಿ ಹುಟ್ಟುಹಬ್ಬ ಆಚರಿಸಿದ ನಿಶ್ವಿಕಾಗೆ ಸಿಕ್ತು ಭರ್ಜರಿ ಗಿಫ್ಟ್​..!


ಇದರಿಂದಾಗಿ ಮೇ 20ರಿಂದ ಇಲ್ಲಿಯವರೆಗೆ ಜೂನಿಯರ್ ಎನ್​ಟಿಆರ್ ಅಭಿಮಾನಿಗಳು ಕಾತರರಾಗಿ ಕಾಯುತ್ತಲೇ ಇದ್ದರು. ನಂತರ ಅಕ್ಟೋಬರ್​ನಲ್ಲಿ ರಾಮ್​ಚರಣ್​ ಅವರು ಕಂಠದಾನ ಮಾಡಿದ ವಿಡಿಯೋವನ್ನು ರಿಲೀಸ್​ ಮಾಡಲಾಯಿತು.


ಕೋಮರಾಮ್​ ಭೀಮ್​ ಅವರ ಪಾತ್ರವನ್ನು ಪರಿಚಯಿಸುವ ವಿಡಿಯೋ ರಿಲೀಸ್​ ಆದಾಗಲೂ ಜೂನಿಯರ್​​ ಎನ್​ಟಿಆರ್​ ಅಭಿಮಾನಿಗಳನ್ನು ಅದನ್ನು ಟ್ವಿಟರ್​ನಲ್ಲಿ ಟ್ರೆಂಡ್​ ಮಾಡಿದ್ದರು. ಒಮ್ಮೆ ಲಾಕ್​ಡೌನ್​ ತೆರವುಗೊಂಡ ನಂತರ ಸಿನಿಮಾದ ಚಿತ್ರೀಕರಣ ಆರಂಭವಾದಾ ಅದರ ವಿಡಿಯೋವನ್ನೂ ಸಹ ರಾಜಮೌಳಿ ಹಂಚಿಕೊಂಡಿದ್ದರು.


ಇದನ್ನೂ ಓದಿ: Kichcha Sudeep: ಹಿರಿಯ ಕಲಾವಿದರ ಯೋಗಕ್ಷೇಮ ವಿಚಾರಿಸಿದ ಕಿಚ್ಚ ಸುದೀಪ್​


ರಾಜಮೌಳಿ ನಿರ್ದೇಶನದ ಈ ಸಿನಿಮಾ ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ರಿಲೀಸ್​ ಆಗಲಿದೆ. ಈ ಸಿನಿಮಾದಲ್ಲಿ ಬಾಲಿವುಡ್​ ನಟ-ನಟಿಯರಾದ ಅಜಯ್​ ದೇವಗನ್​, ಆಲಿಯಾ ಭಟ್​ ಸಹ ನಟಿಸಿದ್ದಾರೆ. ಆಲಿಯಾ ಭಟ್​ ಹುಟ್ಟುಹಬ್ಬದಂದು ಅವರ ಫಸ್ಟ್​ಲುಕ್​ ಪೋಸ್ಟರ್​ ಸಹ ರಿಲೀಸ್ ಮಾಡಲಾಯಿತು. ಆಲಿಯಾ ಅವರ ಲುಕ್​ಗೆ ಅಭಿಮಾನಿಗಳು ವಾಹ್​ ಎಂದಿದ್ದರು. ಭಾರೀ ಬಜೆಟ್​ನ ಆರ್​ಆರ್​ಆರ ಸಿನಿಮಾವನ್ನು ದಾಸಯ್ಯ ನಿರ್ಮಾಣ ಮಾಡುತ್ತಿದ್ದು, ಅಕ್ಟೋಬರ್​ 13ರಂದು ರಿಲೀಸ್​ ಆಗಲಿದೆ.


ಇದನ್ನೂ ಓದಿ: ತೌಕ್ತೆ ಚಂಡಮಾರುತ: ಹಾಳಾಯ್ತು ಸಲ್ಮಾನ್- ಕತ್ರಿನಾ ಅಭಿನಯದ ಟೈಗರ್ 3 ಸಿನಿಮಾದ ಸೆಟ್


ಜೂನಿಯರ್​ ಎನ್​ಟಿಆರ್​ ಅವರಿಗೆ ಕೊರೋನಾ ಸೋಂಕಾಗುವ ಮೊದಲು ಆರ್​ಆರ್​ಆರ್ ಚಿತ್ರತಂಡ ಒಂದು ವಿಡಿಯೋ ರಿಲೀಸ್ ಮಾಡಿತ್ತು. ಅದರಲ್ಲಿ ಜೂನಿಯರ್ ಎನ್​ಟಿಆರ್​ ಕನ್ನಡದಲ್ಲಿ ಮಾತನಾಡುವ ಮೂಲಕ ಅಭಿಮಾನಿಗಳಿಗೆ ಮಾಸ್ಕ್​ ಹಾಗೂ ಸ್ಯಾನಿಟೈಸರ್​ನ ಮಹತ್ವ ವಿವರಿಸಿದ್ದರು. ಕೊರೋನಾ ಹರಡುತ್ತಿರುವ ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಜಾಗ್ರತೆಯಿಂದ ಇರುವಂತೆ ಮನವಿ ಮಾಡಿದ್ದರು.

Published by:Anitha E
First published: