Vidya Balan: ಈ ಸಿನಿಮಾಗಾಗಿ ಒಂದಲ್ಲಾ 75 ಬಾರಿ ರಿಜೆಕ್ಟ್ ಆಗಿದ್ದರಂತೆ ವಿದ್ಯಾ ಬಾಲನ್!
Vidya Balan: ನಟಿ ವಿದ್ಯಾ ಬಾಲನ್ ‘ಪರಿಣಿತಾ’ ಸಿನಿಮಾದ ನಾಯಕಿ ಪಾತ್ರಕ್ಕೆ ಆಡಿಷನ್ ನೀಡಿದಾಗ 75 ಬಾರಿ ರಿಜೆಕ್ಟ್ ಆಗಿದ್ದರಂತೆ. ಆದರೆ ಛಲಬಿಡದ ಪ್ರಯತ್ನದಿಂದ ಕೊನೆಗೊ ಅವರೇ ಆಯ್ಕೆಯಾಗಿದ್ದಾರೆ. ‘ಪರಿಣಿತಾ’ ಸಿನಿಮಾ ವಿದ್ಯಾ ಬಾಲನ್ ಅವರ ಜೀವನಕ್ಕೆ ತಿರುವು ಕೊಟ್ಟ ಸಿನಿಮಾವಾಗಿದೆ.
ಸಿನಿಮಾ ಅಂದಮೇಲೆ ನಿರ್ದೇಶಕ ಆ ಚಿತ್ರಕ್ಕೆ ಸರಿಯಾದ ನಟಿಯನ್ನು ಆಯ್ಕೆ ಮಾಡುತ್ತಾರೆ. ಪಾತ್ರಕ್ಕೆ ಸರಿ ಹೊಂದುವ ನಟಿಯರನ್ನು ಆಯ್ಕೆ ಮಾಡುವ ಸಮಯಲ್ಲಿ ಆಡಿಷನ್ ಕೂಡ ಮಾಡುತ್ತಾರೆ. ಆದರೆ ಬಾಲಿವುಡ್ ನಟಿ ವಿದ್ಯಾ ಬಾಲನ್ ಒಂದೇ ಚಿತ್ರಕ್ಕೆ 75 ಬಾರಿ ಆಡಿಷನ್ ನೀಡಿದ್ದಾರೆ. ಅಷ್ಟೇ ಅಲ್ಲ, 75 ಬಾರಿ ಕೂಡ ರಿಜೆಕ್ಟ್ ಆಗಿ ಕೊನೆಗೆ ಅವರೇ ಆಯ್ಕೆಯಾದರು!
‘ಪರಿಣಿತಾ’ ಸಿನಿಮಾದ ನಾಯಕಿ ಪಾತ್ರಕ್ಕೆ ವಿದ್ಯಾ ಬಾಲನ್ ಆಡಿಷನ್ ನೀಡಿದಾಗ 75 ಬಾರಿ ರಿಜೆಕ್ಟ್ ಆಗಿದ್ದರು. ಆದರೆ ಛಲಬಿಡದ ಪ್ರಯತ್ನದಿಂದ ಕೊನೆಗೊ ಅವರೇ ಆಯ್ಕೆಯಾಗಿದ್ದಾರೆ. ‘ಪರಿಣಿತಾ’ ಸಿನಿಮಾ ವಿದ್ಯಾ ಬಾಲನ್ ಅವರ ಜೀವನಕ್ಕೆ ತಿರುವು ಕೊಟ್ಟ ಸಿನಿಮಾವಾಗಿದೆ. ಅಂದಹಾಗೆ, ಈ ಸಿನಿಮಾ ಪ್ರದೀಪ್ ಸರ್ಕಾರ್ ನಿರ್ದೇಶನದಲ್ಲಿ ಮೂಡಿಬಂದಿತ್ತು.
ಕಿರುತೆರೆಯಲ್ಲಿ ಸಣ್ಣ –ಪುಟ್ಟ ಪಾತ್ರಗಳಲ್ಲಿ ಮಿಂಚುತ್ತಿದ್ದ ವಿದ್ಯಾ ಬಾಲನ್ ‘ಪರಿಣಿತಾ’ ಸಿನಿಮಾದ ನಂತರ ಬಾಲಿವುಡ್ನಲ್ಲಿ ಸ್ಟಾರ್ ನಟಿಯಾಗಿ ಬೆಳೆದರು. ಇವರ ನಟನೆ ಬಾಲಿವುಡ್ ಸಿನಿ ರಸಿಕರನ್ನು ಹುಚ್ಚೆಬ್ಬಿಸುವಂತೆ ಮಾಡಿತ್ತು. ಆದರೆ ಈ ಸಿನಿಮಾ ಆಡಿಷನ್ಗೆ ಮಾತ್ರ ವಿದ್ಯಾ ಬಾಲನ್ ಕಷ್ಟ ಪಟ್ಟಿರುವ ವಿಚಾರ ಯಾರಿಗೂ ತಿಳಿದಿರಲಿಲ್ಲ. ಆದರೀಗ ಈ ವಿಚಾರ ಹೊರಬಿದ್ದಿದೆ.
‘ಪರಿಣಿತಾ’ ಸಿನಿಮಾದ ಸಂಗೀತ ನಿರ್ದೇಶ ಶಂತನು ಮೊಯೇತ್ರಾ ಈ ವಿಚಾರವನ್ನು ನೆನಪಿಸಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ‘ಪರಿಣಿತಾ’ ಚಿತ್ರಕ್ಕೆ ಆಡಿಷನ್ ನಡೆಯುತ್ತಿದ್ದವು. ವಿದ್ಯಾ ಕೂಡ ಆಡಿಷನ್ಗೆ ಭಾಗವಹಿಸಿದ್ದರು. ಪ್ರತಿ ಬಾರಿ ಏನಾದರೊಂದು ಸಣ್ಣ ತಪ್ಪಿನಿಂದ ರಿಜೆಕ್ಟ್ ಆಗುತ್ತಿದ್ದರು. ಆದರೆ ಪ್ರತಿ ಬಾರಿ ಪ್ರಯತ್ನ ಪಡುತ್ತಲೇ ಇರುತ್ತಿದ್ದರು.
ನನಗಿನ್ನೂ ನೆನೆಪಿದೆ. ಅಂದು ಮುಂಬೈನಲ್ಲಿ ಬ್ರಿಯಾನ್ ಆ್ಯಡಮ್ಸ್ ಅವರ ಕಾನ್ಸರ್ಟ್ ಇತ್ತು. ಆ ಶೋಗೆ ವಿದ್ಯಾ ಬಾಲನ್ ಹೋಗಬೇಕಿತ್ತು. ಆದಕ್ಕೂ ಮುನ್ನ ಇನ್ನೊಂದು ಬಾರಿ ಪ್ರಯತ್ನಿಸು ಎಂದು ನಿರ್ದೇಶಕ ಪ್ರದೀಪ್ ಸರ್ಕಾರ್ ಹೇಳಿದ್ದರು. ಅದರಂತೆ ವಿದ್ಯಾ ಬಾಲನ್ ಆಡಿಷನ್ ನೀಡಿ 3.30ಕ್ಕೆ ಹೊರಟು ಹೋದರು. ಅವರು ಹೋದ ನಂತರ ನಾನು ಪ್ರದೀಪ್ ಆ ವಿಡಿಯೋ ನೋಡುತ್ತಾ ಕುಳಿತೆವು. ಆದರಲ್ಲಿ ಒಂದು ಎಕ್ಸ್ಪ್ರೆಶನ್ ಪ್ರದೀಪ್ಗೆ ಇಷ್ಟವಾಯಿತು. ಕೊನೆಗೆ ‘ಪರಿಣಿತಾ’ ಸಿಕ್ಕಳು ಎಂದು ಪ್ರದೀಪ್ ಖುಷಿಯಾದರು. ನಂತರ ಈ ವಿಚಾರವನ್ನು ವಿದ್ಯಾ ಬಾಲನ್ಗೆ ತಿಳಿಸಲಾಯಿತು. ಈ ವಿಚಾರ ತಿಳಿದು ವಿದ್ಯಾ ಬಾಲನ್ ಅತ್ತಿದ್ದರಂತೆ. ಸುಮಾರು 75 ಬಾರಿ ಅಡಿಷನ್ ನೀಡಿ ರಿಜೆಕ್ಟ್ ಆಗಿದ್ದ ವಿದ್ಯಾ ಛಲಬಿಡದೆ ಕೊನೆಯ ಆಡಿಷನ್ನಲ್ಲಿ ನಿರ್ದೇಶಕರ ಮನಗೆದ್ದರು ಎಂದು ಸಂಗೀತ ನಿರ್ದೇಶಕ ಶಂತನು ಸಂರ್ದನದಲ್ಲಿ ಹೇಳಿದ್ದಾರೆ.
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ