ಸಂಕ್ರಾತಿ ಹಬ್ಬವನ್ನು ಕನ್ನಡಿಗರು ಸುಗ್ಗಿಯ ಹಬ್ಬವೆಂದು ಆಚರಿಸುತ್ತಾರೆ. ಸಂಕ್ರಾತಿ ಹಬ್ಬವನ್ನು ಉತ್ತರ ಭಾರತದಲ್ಲಿ ಒಂದು ಹೆಸರಿನಿಂದ ಕರೆದರೆ, ತಮಿಳು ನಾಡಿನಲ್ಲಿ ಹಾಗೂ ಆಂಧ್ರದಲ್ಲಿ ವಿಭಿನ್ನವಾದ ಹೆಸರಿನಿಂದ ಆಚರಿಸಲಾಗುತ್ತದೆ. ಸೂರ್ಯ ತನ್ನ ಪಥ ಬದಲಿಸುವ ಈ ದಿನವನ್ನು ಹಬ್ಬದಂತೆ ಸಂಭ್ರಮಿಸಲಾಗುತ್ತದೆ. ಸಂಕ್ರಾತಿ ಹಬ್ಬವನ್ನು ಈ ಸಲ ಸಂಭ್ರಮದಿಂದ ಎಲ್ಲೆಡೆ ಆಚರಿಸಲಾಗುತ್ತಿದೆ. ಎಲ್ಲರೂ ದೇವಾಲಯಗಳಿಗೆ ಹೋಗಿ ಪೂಜೆ ಸಲ್ಲಿಸುತ್ತಿದ್ದಾರೆ. ಕೊರೋನಾ ಭೀತಿಯಿಂದಾಗಿ ಕಳೆದ ವರ್ಷ ಕಳೆದಿದ್ದು, ಈ ವರ್ಷವಾದರೂ ಜನರ ಜೀವನ ಸಹಜ ಸ್ಥಿತಿ ಮರಳಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಕೊರೋನಾ ಕಾಟದಿಂದ ಜನರ ಬದುಕು ದುಸ್ಥರವಾಗಿತ್ತು. ಈಗಿರುವ ಎಲ್ಲ ಕಷ್ಟಗಳು ದೂರಾಗಿ ಜೀವನದಲ್ಲಿ ಶಾಂತಿ ನೆಮ್ಮದಿ ನೆಲೆಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಇನ್ನ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ಹಾಗೂ ಕನ್ನಡ ಚಿತ್ರತಂಡಗಳು ಪ್ರೇಕ್ಷಕರಿಗೆ ಹಬ್ಬಕ್ಕೆ ಶುಭ ಕೋರುತ್ತಿದ್ದಾರೆ. ಕೆಲವು ಚಿತ್ರತಂಡಗಳು ಪ್ರೇಕ್ಷಕರಿಗಾಗಿ ಟೀಸರ್,ಪೋಸ್ಟರ್ ಹೀಗೆ ನಾನಾ ರೀತಿಯ ಉಡುಗೊರೆ ಕೊಡಲು ತಯಾರಿ ನಡೆಸಿದ್ದಾರೆ.
ಕಳೆದ ವರ್ಷ ಕೊರೋನಾ ಕಾಟದಿಂದಾಗಿ ಯಾವ ಹಬ್ಬವನ್ನೂ ನೆಮ್ಮದಿಯಾಗಿ ಹಾಗೀ ಖುಷಿಯಿಂದ ಆಚರಿಸಲಾಗಲಿಲ್ಲ. ಆದರೆ ಈ ವರ್ಷ ಪರಿಸ್ಥಿತಿ ಕೊಂಚ ಬದಲಾಗಿದೆ. ಜನರು ಮನೆಗಳಿಂದ ಹೊರ ಬರುತ್ತಿದ್ದು, ಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಇನ್ನು ಸಂಕ್ರಾಂತಿ ಹಬ್ಬ ಎಲ್ಲರ ಜೀವನದಲ್ಲಿ ಹೊಸ ಹುರುಪು ತರಲಿ. ಕೊರೋನಾ ದೂರಾಗಿ ಉತ್ಸಾಹ ಮೂಡಲಿ ಎಂದು ದರ್ಶನ್ ಹಾರೈಸಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಸಹ ಅಭಿಮಾನಿಗಳಿಗೆ ಸಂಕ್ರಾಂತಿ ಹಬ್ಬಕ್ಕೆ ವಿಶ್ ಮಾಡಿದ್ದಾರೆ. ರಾಜ್ಕುಮಾರ್ ಅವರು ಭತ್ತವನ್ನು ಕೈಯಲ್ಲಿ ಹಿಡಿದಿರುವ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಜನತೆಗೆ ಶುಭ ಕೋರಿದ್ದಾರೆ ಅಪ್ಪು.
ನಟ ರಮೇಶ್ ಅರವಿಂದ್ ಶುಭ ಕೋರಿದ್ದು, ಸಂತೋಷದ ಸುಗ್ಗಿ ಸಂಗಾತಿ ಆಗಲಿ... ಸದಾ..ಸದಾ.. ಸದಾ.. ಮಕರ ಸಂಕ್ರಾಂತಿಯ ಶುಭಾಶಯಗಳು ಎಂದಿದ್ದಾರೆ ಈ ನಟ.
ಇನ್ನು ಮದಗಜ ಚಿತ್ರತಂಡ ಇಂದು ತಮಿಳು ಟೀಸರ್ ರಿಲೀಸ್ ಮಾಡಲಿದ್ದರೆ, ಉಪೇಂದ್ರ ಕಬ್ಜ ಸಿನಿಮಾದ ಬಗ್ಗೆ ಹೊಸ ಅಪ್ಡೇಟ್ ನೀಡಲಿದ್ದಾರೆ. ರಿಷಭ್ ಶೆಟ್ಟಿ ಅವರ ಹೀರೋ ಸಿನಿಮಾದ ಟ್ರೇಲರ್ ರಿಲೀಸ್ ಆಗಲಿದೆ. ಸಂಜೆ 6ಕ್ಕೆ ದುನಿಯಾ ವಿಜಯ್ ಫೇಸ್ಬುಕ್ನಲ್ಲಿ ಲೈವ್ ಬರಲಿದ್ದು ಸಲಗ ಚಿತ್ರದ ಕುರಿತಾದ ಮಾಹಿತಿ ನೀಡಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ