• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Makara Sankranti: ಎಲ್ಲೆಡೆ ಸಂಕ್ರಾಂತಿ ಹಬ್ಬದ ಸಂಭ್ರಮ: ಅಭಿಮಾನಿಗಳಿಗೆ ಶುಭ ಕೋರಿದ ದರ್ಶನ್​-ಪುನೀತ್​ ರಾಜ್​ಕುಮಾರ್​..!

Makara Sankranti: ಎಲ್ಲೆಡೆ ಸಂಕ್ರಾಂತಿ ಹಬ್ಬದ ಸಂಭ್ರಮ: ಅಭಿಮಾನಿಗಳಿಗೆ ಶುಭ ಕೋರಿದ ದರ್ಶನ್​-ಪುನೀತ್​ ರಾಜ್​ಕುಮಾರ್​..!

ಸಂಕ್ರಾಂತಿ ಹಬ್ಬಕ್ಕೆ ಶುಭ ಕೋರಿದ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು

ಸಂಕ್ರಾಂತಿ ಹಬ್ಬಕ್ಕೆ ಶುಭ ಕೋರಿದ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು

ಕಳೆದ ವರ್ಷ ಕೊರೋನಾ ಕಾಟದಿಂದಾಗಿ ಯಾವ ಹಬ್ಬವನ್ನೂ ನೆಮ್ಮದಿಯಾಗಿ ಹಾಗೀ ಖುಷಿಯಿಂದ ಆಚರಿಸಲಾಗಲಿಲ್ಲ. ಆದರೆ ಈ ವರ್ಷ ಪರಿಸ್ಥಿತಿ ಕೊಂಚ ಬದಲಾಗಿದೆ. ಜನರು ಮನೆಗಳಿಂದ ಹೊರ ಬರುತ್ತಿದ್ದು, ಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಇನ್ನು ಸಂಕ್ರಾಂತಿ ಹಬ್ಬ ಎಲ್ಲರ ಜೀವನದಲ್ಲಿ ಹೊಸ ಹುರುಪು ತರಲಿ. ಕೊರೋನಾ ದೂರಾಗಿ ಉತ್ಸಾಹ ಮೂಡಲಿ ಎಂದು ದರ್ಶನ್​ ಹಾರೈಸಿದ್ದಾರೆ. 

ಮುಂದೆ ಓದಿ ...
  • Share this:

ಸಂಕ್ರಾತಿ ಹಬ್ಬವನ್ನು ಕನ್ನಡಿಗರು ಸುಗ್ಗಿಯ ಹಬ್ಬವೆಂದು ಆಚರಿಸುತ್ತಾರೆ. ಸಂಕ್ರಾತಿ ಹಬ್ಬವನ್ನು ಉತ್ತರ ಭಾರತದಲ್ಲಿ ಒಂದು ಹೆಸರಿನಿಂದ ಕರೆದರೆ, ತಮಿಳು ನಾಡಿನಲ್ಲಿ ಹಾಗೂ ಆಂಧ್ರದಲ್ಲಿ ವಿಭಿನ್ನವಾದ ಹೆಸರಿನಿಂದ ಆಚರಿಸಲಾಗುತ್ತದೆ. ಸೂರ್ಯ ತನ್ನ ಪಥ ಬದಲಿಸುವ ಈ ದಿನವನ್ನು ಹಬ್ಬದಂತೆ ಸಂಭ್ರಮಿಸಲಾಗುತ್ತದೆ. ಸಂಕ್ರಾತಿ ಹಬ್ಬವನ್ನು ಈ ಸಲ ಸಂಭ್ರಮದಿಂದ ಎಲ್ಲೆಡೆ ಆಚರಿಸಲಾಗುತ್ತಿದೆ. ಎಲ್ಲರೂ ದೇವಾಲಯಗಳಿಗೆ  ಹೋಗಿ ಪೂಜೆ ಸಲ್ಲಿಸುತ್ತಿದ್ದಾರೆ. ಕೊರೋನಾ ಭೀತಿಯಿಂದಾಗಿ ಕಳೆದ ವರ್ಷ ಕಳೆದಿದ್ದು, ಈ ವರ್ಷವಾದರೂ ಜನರ ಜೀವನ ಸಹಜ ಸ್ಥಿತಿ ಮರಳಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಕೊರೋನಾ ಕಾಟದಿಂದ ಜನರ ಬದುಕು ದುಸ್ಥರವಾಗಿತ್ತು. ಈಗಿರುವ ಎಲ್ಲ ಕಷ್ಟಗಳು ದೂರಾಗಿ ಜೀವನದಲ್ಲಿ ಶಾಂತಿ ನೆಮ್ಮದಿ ನೆಲೆಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಇನ್ನ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು ಹಾಗೂ ಕನ್ನಡ ಚಿತ್ರತಂಡಗಳು ಪ್ರೇಕ್ಷಕರಿಗೆ ಹಬ್ಬಕ್ಕೆ ಶುಭ ಕೋರುತ್ತಿದ್ದಾರೆ. ಕೆಲವು ಚಿತ್ರತಂಡಗಳು ಪ್ರೇಕ್ಷಕರಿಗಾಗಿ ಟೀಸರ್​,ಪೋಸ್ಟರ್ ಹೀಗೆ  ನಾನಾ ರೀತಿಯ ಉಡುಗೊರೆ ಕೊಡಲು ತಯಾರಿ ನಡೆಸಿದ್ದಾರೆ. 


ಕಳೆದ ವರ್ಷ ಕೊರೋನಾ ಕಾಟದಿಂದಾಗಿ ಯಾವ ಹಬ್ಬವನ್ನೂ ನೆಮ್ಮದಿಯಾಗಿ ಹಾಗೀ ಖುಷಿಯಿಂದ ಆಚರಿಸಲಾಗಲಿಲ್ಲ. ಆದರೆ ಈ ವರ್ಷ ಪರಿಸ್ಥಿತಿ ಕೊಂಚ ಬದಲಾಗಿದೆ. ಜನರು ಮನೆಗಳಿಂದ ಹೊರ ಬರುತ್ತಿದ್ದು, ಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಇನ್ನು ಸಂಕ್ರಾಂತಿ ಹಬ್ಬ ಎಲ್ಲರ ಜೀವನದಲ್ಲಿ ಹೊಸ ಹುರುಪು ತರಲಿ. ಕೊರೋನಾ ದೂರಾಗಿ ಉತ್ಸಾಹ ಮೂಡಲಿ ಎಂದು ದರ್ಶನ್​ ಹಾರೈಸಿದ್ದಾರೆ.



ಪವರ್​ ಸ್ಟಾರ್​ ಪುನೀತ್ ರಾಜ್​ಕುಮಾರ್​ ಸಹ ಅಭಿಮಾನಿಗಳಿಗೆ ಸಂಕ್ರಾಂತಿ ಹಬ್ಬಕ್ಕೆ ವಿಶ್​ ಮಾಡಿದ್ದಾರೆ. ರಾಜ್​ಕುಮಾರ್​ ಅವರು ಭತ್ತವನ್ನು ಕೈಯಲ್ಲಿ ಹಿಡಿದಿರುವ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಜನತೆಗೆ ಶುಭ ಕೋರಿದ್ದಾರೆ ಅಪ್ಪು.



ನಟ ರಮೇಶ್ ಅರವಿಂದ್ ಶುಭ ಕೋರಿದ್ದು, ಸಂತೋಷದ ಸುಗ್ಗಿ ಸಂಗಾತಿ ಆಗಲಿ... ಸದಾ..ಸದಾ.. ಸದಾ.. ಮಕರ ಸಂಕ್ರಾಂತಿಯ ಶುಭಾಶಯಗಳು ಎಂದಿದ್ದಾರೆ ಈ ನಟ.



ಇನ್ನು ಮದಗಜ ಚಿತ್ರತಂಡ ಇಂದು ತಮಿಳು ಟೀಸರ್​ ರಿಲೀಸ್​ ಮಾಡಲಿದ್ದರೆ, ಉಪೇಂದ್ರ ಕಬ್ಜ ಸಿನಿಮಾದ ಬಗ್ಗೆ ಹೊಸ ಅಪ್ಡೇಟ್​ ನೀಡಲಿದ್ದಾರೆ. ರಿಷಭ್​ ಶೆಟ್ಟಿ ಅವರ ಹೀರೋ ಸಿನಿಮಾದ ಟ್ರೇಲರ್​ ರಿಲೀಸ್​ ಆಗಲಿದೆ. ಸಂಜೆ 6ಕ್ಕೆ ದುನಿಯಾ ವಿಜಯ್​ ಫೇಸ್​ಬುಕ್​ನಲ್ಲಿ ಲೈವ್​ ಬರಲಿದ್ದು ಸಲಗ ಚಿತ್ರದ ಕುರಿತಾದ ಮಾಹಿತಿ ನೀಡಲಿದ್ದಾರೆ.

top videos
    First published: