ಹಿಂದಿ ಹೇರಿಕೆ ಹಾಗೂ ಹಿಂದಿ ದಿವಸದ ವಿರುದ್ಧ ದಕ್ಷಿಣ ಭಾರತದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ವಿವಿಧತೆಯಲ್ಲಿ ಏಕತೆಯನ್ನ ಕಾಣುವ, ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲಾ 22 ಭಾಷೆಗಳಿಗೂ ಪ್ರಾಧಾನ್ಯತೆ ಕೊಡಬೇಕು. ಯಾವುದೇ ಒಂದು ಭಾಷೆಯನ್ನ ವಿಶೇಷವಾಗಿ ಕಾಣುವುದು ತಪ್ಪು ಅಂತ ದೊಡ್ಡ ದನಿಯಲ್ಲಿ ದಕ್ಷಿಣ ಭಾರತೀಯರು ಖಂಡಿಸುತ್ತಿದ್ದಾರೆ.
ಇದಕ್ಕೆ ಸಿನಿಮಾ ರಂಗ ಕೂಡ ಸಾಥ್ ನೀಡಿದ್ದು, ತಮಿಳಿನ ಯುವ ನಟರು ಹಿಂದಿ ಗೊತ್ತಿಲ್ಲ ಹೋಗೋ ಎಂಬ ಅಭಿಯಾನ ಸ್ಟಾರ್ಟ್ ಮಾಡಿದ್ದಾರೆ. ಇನ್ನು ಕನ್ನಡದ ನಟರಾದ ಧನಂಜಯ್, ಸತೀಶ್ ನೀನಾಸಂ, ನಿಖಿಲ್, ಚೇತನ್ ಸಹ ಕನ್ನಡಿಗರಿಗೆ ಕನ್ನಡವೇ ರಾಷ್ಟ್ರ ಭಾಷೆ ಅಂತ ಗಟ್ಟಿದನಿಯಲ್ಲಿ ಹೇಳುತ್ತಿದ್ದಾರೆ. ಹಿಂದಿ ಹೇರಿಕೆ ವಿರುದ್ಧ ದನಿಗೂಡಿಸಿದ್ದಾರೆ.
ಸ್ವಾಭಿಮಾನಿ ಕನ್ನಡಿಗರಿಗೆ ಕನ್ನಡವೇ ರಾಷ್ಟ್ರ ಭಾಷೆ.
ನಮ್ಮ ಕೊನೆಯುಸಿರಿರುವವರೆಗೂ ಕನ್ನಡ ಪರವಾಗಿ ನಿಲ್ಲುತೇವೆ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ pic.twitter.com/YfnGUaTToL
— Darshan Thoogudeepa (@dasadarshan) September 15, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ