ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಹೆಸರು ಅವರ ಸಿನಿಮಾಗಳಿಂದಾಗಿ ಹಾಗೂ ವಿವಾದಗಳಿಂದಾಗಿ ಹೆಚ್ಚಾಗಿ ಸುದ್ದಿಯಲ್ಲಿರುತ್ತದೆ. ಸಲ್ಮಾನ್ ಖಾನ್ ಹಾಗೂ ವಿವಾದಗಳಿಗೆ ಒಂದು ರೀತಿಯ ನಂಟು ಬೆಳೆದುಕೊಂಡಿರುವಂತಿದೆ. ಒಂದಲ್ಲಾಒಂದಲ್ಲಾ ಪ್ರಕರಣಗಳಿಂದಾಗಿ ಸಲ್ಮಾನ್ ಖಾನ್ ಸುದ್ದಿಯಲ್ಲಿರುತ್ತಾರೆ. ಹೌದು, ಈಗಲೂ ಸಹ ಸಲ್ಮಾನ್ ಖಾನ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸದ್ದು ಮಾಡುತ್ತಿದ್ದಾರೆ. ಕೆಲವೇ ದಿನಗಳ ಹಿಂದೆಯಷ್ಟೆ ಸಲ್ಮಾನ್ ಹೆಸರು ಹೇಳಿಕೊಂಡು ಮಹಿಳೆಯೊಬ್ಬರಿಗೆ 12 ಲಕ್ಷ ವಂಚಿಸಿರುವ ಪ್ರಕರಣ ಜೋಧಪುರದಲ್ಲಿ ನಡೆದಿತ್ತು. ಈ ಪ್ರಕರಣದ ಸಂಬಂಧ ತನಿಖೆ ನಡೆಸುವಂತೆ ರಾಜಸ್ಥಾನದ ಹೈಕೋರ್ಟ್ ಆದೇಶ ನೀಡಿತ್ತು. ಈಗ ಮತ್ತೊಂದು ವಂಚನೆ ಪರಕರಣದಲ್ಲಿ ಸಲ್ಮಾನ್ ಖಾನ್ ಅವರ ಸಹೋದರಿ ಸೇರಿದಂತೆ ಒಟ್ಟು ಎಂಟು ಮಂದಿಯ ಹೆಸರು ಕೇಳಿ ಬರುತ್ತಿದೆ.
ವಿವಾದಗಳಿಂದಲೇ ಹೆಚ್ಚಾಗಿ ಸುದ್ದಿಯಲ್ಲಿರುವ ನಟ ಸಲ್ಮಾನ್ ಖಾನ್. ಅದಕ್ಕೆ ಇವರನ್ನು ಬ್ಯಾಡ್ ಬಾಯ್ ಆಫ್ ಬಾಲಿವುಡ್ ಎನ್ನಲಾಗುತ್ತದೆ. ಸಲ್ಮಾನ್ ಖಾನ್ ಅವರ ಹೆಸರು ಈಗ ವಂಚನೆ ಪ್ರಕರಣವೊಂದರಲ್ಲಿ ಕೇಳಿ ಬರುತ್ತಿದೆ. ಸಲ್ಮಾನ್ ಖಾನ್ ಅವರ ಸಹೋದರಿ ಅಲ್ವಿರಾ ಖಾನ್ ಹಾಗೂ ಇತರೆ ಆರು ಮಂದಿ ಇರುದ್ಧ ಚಂಡೀಗಡ ಪೊಲೀಸರು ಈ ಪ್ರಕರಕ್ಕೆ ಸಂಬಂಧಿಸಿದಂತೆ ಸಮನ್ಸ್ ಜಾರಿ ಮಾಡಿದ್ದಾರೆ.
ಸಲ್ಮಾನ್ ಖಾನ್ ಒಡೆತನದ ಬೀಯಿಂಗ್ ಹ್ಯೂಮನ್ ಮತ್ತು ಬೀಯಿಂಗ್ ಹ್ಯೂಮನ್ ಜ್ಯುವೆಲ್ಲರಿ ವಿರುದ್ಧ ಉದ್ಯಮಿ ಅರುಣ್ ಗುಪ್ತಾ ಎಂಬುವರು ವಂಚನೆ ಪ್ರಕರಣ ದಾಖಲಿಸಿದ್ದಾರೆ. ಬೀಯಿಂಗ್ ಹ್ಯೂಮನ್ ಜ್ಯುವೆಲ್ಲರಿ ಬ್ರ್ಯಾಂಡ್ ಅಡಿಯಲ್ಲಿ ಉದ್ಯಮಿ ಅರುಣ್ ಗುಪ್ತಾ ಅವರು 2018ರಲ್ಲಿ ಒಂದು ಶಾಪ್ ತೆರೆದಿದ್ದರು. ಈ ಅಂಗಡಿ ತೆರೆಯಲು 2-3 ಕೋಟಿ ಹಣ ಖರ್ಚು ಮಾಡಿದ್ದಾರಂತೆ ಅರುಣ್ ಗುಪ್ತಾ. ಇನ್ನು ಶಾಪ್ ತೆರೆಯುವ ಮುನ್ನ ಅರುಣ್ ಗುಪ್ತಾ ಅವರಿಗೆ ಎಲ್ಲರ ರೀತಿಯಲ್ಲೂ ಸಹಕರಿಸುವುದಾಗಿ ಮಾತು ಕೊಟ್ಟಿದ್ದರಂತೆ ಜೊತೆಗೆ ಬ್ರ್ಯಾಂಡ್ ಅನ್ನು ಪ್ರಚಾರ ಮಾಡುವುದಾಗಿಯೂ ಹೇಳಿದ್ದರಂತೆ. ಆದರೆ ಈಗ ಆಡಿದ ಮಾತಿಗೆ ತಪ್ಪಿರುವ ಬೀಯಿಂಗ್ ಹ್ಯೂಮನ್ ಜುವೆಲ್ಲರಿ ತಂಡದವರು ತಮ್ಮ ಶಾಪ್ಗೆ ಸರಕುಗಳನ್ನೂ ಕೊಡುತ್ತಿಲ್ಲ ಎಂದು ಅರುಣ್ ಗುಪ್ತಾ ಆರೋಪಿಸಿದ್ದಾರೆ.
ಇದನ್ನೂ ಓದಿ: ಎಡವಟ್ಟಿನ ಮೇಲೆ ಎಡವಟ್ಟು: ಮತ್ತೆ ಟ್ರೋಲ್ ಆಗುತ್ತಿರುವ ಬಿಗ್ ಬಾಸ್ ಸ್ಪರ್ಧಿ ಕೆ ಪಿ ಅರವಿಂದ್
ತಮ್ಮ ಬ್ಯ್ರಾಂಡ್ ಅನ್ನು ಖುದ್ದು ಸಲ್ಮಾನ್ ಖಾನ್ ಅವರೇ ಪ್ರಮೋಟ್ ಮಾಡುತ್ತಾರೆ ಹಾಗೂ ಅವರೇ ಶಾಪ್ ಉದ್ಘಾಟನೆ ಮಾಡಲಿದ್ದಾರೆ ಎಂದು ಬೀಯಿಂಗ್ ಹ್ಯೂಮನ್ ಜುವೆಲ್ಲರಿ ಅವರು ಮಾತು ಕೊಟ್ಟಿದ್ದರಂತೆ. ಅದೂ ಆಗಲಿಲ್ಲ. ಇತ್ತ ಶಾಪ್ ತೆರೆದ ನಂತರ ಶಾಪ್ಗೆ ಪೂರೈಸಬೇಕಾದ ವಸ್ತುಗಳನ್ನೂ ಕೊಡುತ್ತಿಲ್ಲವಂತೆ. ಈ ಬಗ್ಗೆ ಬೀಯಿಂಗ್ ಹ್ಯೂಮನ್ ಜ್ಯುವೆಲ್ಲರಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೆ ಯಾವುದೇ ಪ್ರಯೋಜನ ಆಗಲಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಅರುಣ್ ಗುಪ್ತಾ.
ಅರುಣ್ ಗುಪ್ತಾ ಅವರು ನೀಡಿರುವ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಸಲ್ಮಾನ್ ಖಾನ್, ಅವರ ಸಹೋದರಿ ಅಲ್ವಿರಾ ಖಾನ್ ಹಾಗೂ ಇತರೆ ಆರು ಮಂದಿಗೆ ಚಂಡೀಗಡ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ.
ಏನಿದು ಕುದುರೆ ಮಾರಾಟ ಪ್ರಕರಣ
ಸಲ್ಮಾನ್ ಅವರು ತಮ್ಮ ತೋಟದ ಮನೆಯಲ್ಲಿ ಕುದುರೆಗಳನ್ನು ಸಾಕಿರುವ ವಿಷಯ ಗೊತ್ತೇ ಇದೆ.ಅವರು ಆಗಾಗ ತಮ್ಮ ಕುದುರೆಗಳೊಂದಿಗೆ ಇರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ಇದನ್ನೂ ಓದಿ: Sanjjanaa Galrani: ಸಂಜನಾ ಗಲ್ರಾನಿ ಬೆನ್ನಿನ ಮೇಲೆ ಗಂಡ ಅಜೀಜ್ ಹೆಸರಿನ ಟ್ಯಾಟೂ: ವರ್ಷಗಳ ನಂತರ ರಿವೀಲ್ ಮಾಡಿದ ನಟಿ..!
ಸಲ್ಮಾನ್ ಅವರ ಜೊತೆಗಿರುವ ಕುದುರೆಯನ್ನು ಮಾರುವುದಾಗಿ ಹೇಳಿ ಮೂರು ಮಂದಿ ಮಹಿಳೆಯೊಬ್ಬರಿಗೆ 12 ಲಕ್ಷ ವಂಚಿಸಿದ್ದಾರೆ.ಈ ಸಂಬಂಧ ಈಗಾಗಲೇ ಜೋಧಪುರದಲ್ಲಿ ಪ್ರಕರಕಣ ದಾಖಲಾಗಿದೆ. ಈ ಪ್ರಕರಣದಲ್ಲಿ ಸಲ್ಮಾನ್ ಖಾನ್ ಹೆಸರು ಇರುವುದರಿಂದ ಪೊಲೀಸರು ತನಿಖೆ ನಡೆಸುತ್ತಿಲ್ಲ ಎಂದು ಆರೋಪಿಸಿ ವಂಚನೆಗೊಳಗಾದವರು ರಾಜಸ್ಥಾನದ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.ಕುದುರೆ ಖರೀದಿಸಲು ಮಹಿಳೆ 11 ಲಕ್ಷದ ಚೆಕ್ ಹಾಗೂ ಒಂದು ಲಕ್ಷ ನಗದು ನೀಡಿದ್ದು, ನಂತರ ಆರೋಪಿಗಳು ಕುದುರೆ ಕೊಡದೆ ಯಾಮಾರಿಸಿದ್ದಾರಂತೆ.
ಸಲ್ಮಾನ್ ಖಾನ್ ತಮ್ಮ ಕುದುರೆಯನ್ನು ಮಾರುತ್ತಿದ್ದು, ಅದನ್ನು ನೀವು ಖರೀದಿಸಿದ ನಂತರ ಮಾರಿದರೆ ಲಕ್ಷಗಟ್ಟಲೆ ಲಾಭ ಸಿಗುತ್ತದೆ ಎಂದು ಆರೋಪಿಗಳು ಸಲ್ಮಾನ್ ಜೊತೆಗಿರುವ ಕುದುರೆಯ ಫೋಟೋ ತೋರಿದ್ದರಂತೆ. ದಾಣಿ ಸಾಂಗರಿಯಾ ನಿವಾಸಿಯಾಗಿರುವ ವಂಚಿತ ಮಹಿಳೆ ಹೆಸರು ಸಂತೋಷ್ ಬಾಟಿ. ವಂಚಿತರಾದ ನಿಭರ್ಯ್ ಸಿಂಗ್, ರಾಜ್ ಪ್ರೀತ್ ಹಾಗೂ ಇತರರ ವಿರುದ್ಧ ಈಗ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ