ಕಲರ್ಸ್ ಕನ್ನಡದಲ್ಲಿ (Colors Kannada) ಪ್ರತಿ ದಿನ ರಾತ್ರಿ 10 ಗಂಟೆಗೆ ತ್ರಿಪುರ ಸುಂದರಿ (Tripura Sundari) ಧಾರಾವಾಹಿ (Serial) ಪ್ರಸಾರವಾಗ್ತಿದೆ. ಇದೊಂದು ವಿಭಿನ್ನ ಕಥೆಯಾಗಿದೆ. ಗಂಧರ್ವ ಲೋಕದ ಸಿಂಹಾಸನದ ಮೇಲೆ ಧನಂಜಯ ಎಂಬ ದುಷ್ಟ ಕೂತಿದ್ದಾನೆ. ಅವನ ದರ್ಪದಿಂದ ಗಂಧರ್ವರೆಲ್ಲೆರೂ ಕಳೆದ 27 ವರ್ಷಗಳಿಂದ ಬಳಲುತ್ತಿದ್ದಾರೆ. ಸಿಂಹಾಸನದ ಮೇಲೆ ಗಂಧರ್ವ ರಾಜ (King) ರಾರಾಜಿಸದ ಹೊರತು, ಗಂಧರ್ವ ಲೋಕಕ್ಕೆ ನೆಮ್ಮದಿ ಇಲ್ಲ. ಮಯೂರು ಸಿಂಹಾಸನದ ಮೇಲೆ ಹಕ್ಕಿರುವುದು ಅಥರ್ವ ದೇವರದ್ದೇ, ಆದ್ರೆ ಆ ಧನಂಜಯ ಅವರನ್ನು ಸೆರೆ ಹಿಡಿದು, ಯಾರ ಅನುಮತಿಯೂ ಇಲ್ಲದೇ ಬಲವಂತವಾಗಿ ಸಿಂಹಾಸನದ ಮೇಲೆ ಕುಳಿತಿದ್ದಾನೆ. ಅದಕ್ಕೆ ರಾಜಕುಮಾರನ್ನು ಕರೆದುಕೊಂಡು ಹೋಗಲು ಆಮ್ರಪಾಲಿ ಭೂಲೋಕಕ್ಕೆ ಬಂದಿದ್ದಾಳೆ.
ಭೂಮಿಗೆ ಬಂದಿರುವ ಆಮ್ರಪಾಲಿ
ಧನಂಜಯನ ಎಂಬುವವನ ಕ್ರೂರ ದೃಷ್ಟಿಯಿಂದ ತಪ್ಪಿಸಲು ರಾಜಕುಮಾರನನ್ನು 27 ವರ್ಷಗಳ ಹಿಂದೆ ಭೂಲೋಕದಲ್ಲಿ ಬಚ್ಚಿಡಲಾಯ್ತು. ಅವರನ್ನು ಅರಸಿ ಅತಿ ಶೀಘ್ರದಲ್ಲೇ ಗಂಧರ್ವ ಲೋಕಕ್ಕೆ ಕರೆದೊಯ್ಯಬೇಕು. ಅದಕ್ಕೆ ಆಮ್ರಪಾಲಿ ಭೂಮಿಗೆ ಬಂದಿದ್ದಾಳೆ. ಆತನನ್ನು ಎಲ್ಲೆಡೆ ಹುಡುಕುತ್ತಿದ್ದಾಳೆ.
ರಾಜಕುಮಾರನಿಲ್ಲದೇ ಗಂಧರ್ವ ಲೋಕಕ್ಕೆ ಮರಳುವುದಿಲ್ಲ ಎಂದು ಶಪಥ ಮಾಡಿ ಬಂದಿದ್ದಾಳೆ ಆಮ್ರಪಾಲಿ. ರಾಜಕುಮಾರನ್ನು ಹುಡುಕಿ, ಅವನ ಮನವೊಲಿಸಿ ಗಂಧರ್ವ ಲೋಕಕ್ಕೆ ಕರೆದುಕೊಂಡು ಹೋಗಬೇಕು.
ಪದಕ ಕಳೆದುಕೊಂಡ ಆಮ್ರಪಾಲಿ
ಆಮ್ರಪಾಲಿ ಭೂಲೋಕದಲ್ಲಿ ರಾಜಕುಮಾರನನ್ನು ಹುಡುಕಲು ಕೊಟ್ಟಿದ್ದ ಪದಕವನ್ನು ಕಳೆದುಕೊಂಡಿದ್ದಾರೆ. ಪದಕ ಇದ್ದಿದ್ರೆ ರಾಜಕುಮಾರ ಹತ್ತಿರ ಇದ್ರೆ ಆ ಪದಕ ಹೊಳೆಯುತ್ತಿತ್ತು. ಈಗ ಅದು ಇಲ್ಲದೇ ಹುಡುಕಲು ಕಷ್ಟವಾಗ್ತಿದೆ. ಆಮ್ರಪಾಲಿ ಯಾವ ರಾಜಕುಮಾರನನ್ನು ಹುಡುಕುತ್ತಿದ್ದಾಳಾ ಅದೇ ಮನೆಗೆ ಬಂದಿದ್ದಾಳೆ. ಕಷ್ಟದಲ್ಲಿದ್ದ ಆಮ್ರಪಾಲಿಯನ್ನು ಪ್ರದ್ಯುಮ್ನ ಕಾಪಾಡಿದ್ದ. ಮನೆಗೆ ಕರೆದುಕೊಂಡು ಬಂದಿದ್ದಾನೆ. ಅವನೇ ರಾಜಕುಮಾರ.
ಮಂತ್ರ ಶಕ್ತಿ ಇಲ್ಲದ ಲೋಕ
ಇದು ಭೂಲೋಕ. ಮಂತ್ರ ಶಕ್ತಿ ಇಲ್ಲದ ಲೋಕ. ಇಲ್ಲಿ ಯಾರಾದ್ರೂ ಮಂತ್ರಶಕ್ತಿಯನ್ನು ಉಪಯೋಗಿಸಿದ್ರೆ, ಅವರನ್ನು ಅನುಮಾನದಿಂದ ನೋಡವ ಸ್ವಭಾವ ಮಾನವರದ್ದು. ಭೂಲೋಕದಲ್ಲಿ ಇರುವಷ್ಟು ದಿನ,
ಈ ಮಾಯ ಮಂತ್ರ ಶಕ್ತಿಯನ್ನು ವಿವೇಚನೆಯಿಂದ ಬಳಸು. ನಿನ್ನ ಕಾರ್ಯ ಕೈಗೂಡಬೇಕೆಂದ್ರೆ, ನೀನು ಮಾನವರಂತೆ ಬದುಕಬೇಕು ಎಂದು ನಾಗದೇವ ಆಮ್ರಪಾಲಿಗೆ ಸಲಹೆ ನೀಡಿರುತ್ತಾರೆ. ಅದನ್ನು ಮರೆತು ಮಂತ್ರ ಶಕ್ತಿ ಪ್ರಯೋಗ ಮಾಡಿದ್ದಾಳೆ. ಅದನ್ನು ಬೃದಾ ನೋಡಿ ಶಾಕ್ ಆಗಿದ್ದಾಳೆ.
ಆಮ್ರಪಾಲಿಯನ್ನು ಅರ್ಥ ಮಾಡಿಕೊಳ್ತಾರಾ?
ಭೂಲೋಕದಲ್ಲಿ ಆಮ್ರಪಾಲಿಗೆ ಎಲ್ಲವೂ ವಿಚಿತ್ರ ಅನ್ನಿಸುತ್ತೆ. ಇಲ್ಲಿ ನಾನು ಒಬ್ಬಂಟಿಯಾಗಿದ್ದೇನೆ ಎಂದು ಬೇಸರ ಮಾಡಿಕೊಂಡಿದ್ದಾಳೆ. ಆಮ್ರಪಾಲಿಯನ್ನು ಭೂಲೋಕದ ಜನ ಅರ್ಥ ಮಾಡಿಕೊಳ್ತಾರಾ? ಆಮ್ರಪಾಲಿ ಏನೇ ಮಾಡಿದ್ರೂ ಅನುಮಾನ ಪಡುತ್ತಿದ್ದಾರೆ. ಅವಳನ್ನು ಹುಚ್ಚಿ ಎಂದು ತಿಳಿದುಕೊಳ್ತಾ ಇದ್ದಾರೆ.
ದಿವ್ಯಾ ಸುರೇಶ್ ಅಭಿನಯ
ತ್ರಿಪುರ ಸುಂದರಿ ಧಾರಾವಾಹಿಯಲ್ಲಿ ನಟಿಯಾಗಿ ಬಿಗ್ ಬಾಸ್ ಸೀನನ್ 08 ರ ಸ್ಪರ್ಧಿ ದಿವ್ಯಾ ಸುರೇಶ್ ಅಭಿನಯಿಸುತ್ತಿದ್ದಾರೆ. ದಿವ್ಯಾ ಸುರೇಶ್ ನಟನೆ, ನೋಟವನ್ನು ಜನ ಮೆಚ್ಚಿಕೊಂಡಿದ್ದಾರೆ. ತ್ರಿಪುರ ಸುಂದರಿ ಹೆಸರಿಗೆ ತಕ್ಕಂತೆ ತ್ರಿಪುರ ಸುಂದರಿಯೇ ಆಗಿದ್ದಾರೆ. ತುಂಬಾ ಚೆನ್ನಾಗಿ ಕಾಣ್ತಾ ಇದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Bhagya Lakshmi: ಕುಸುಮಾ ಪರೀಕ್ಷೆ ಗೆದ್ದ ಲಕ್ಷ್ಮಿ ಜೊತೆ ವೈಷ್ಣವ್ ಮದುವೆ, ಕೀರ್ತಿ ಕೋಪಕ್ಕೆ ಕಾರಣವೇನು?
ರಾಜಕುಮಾರ ಸಿಗ್ತಾನಾ?
ಪದಕ ಕಳೆದುಕೊಂಡುರವ ಆಮ್ರಪಾಲಿಗೆ ರಾಜಕುಮಾರ ಸಿಗ್ತಾನಾ? ಆಮ್ರಪಾಲಿ ಆ ಪದಕವನ್ನು ಹೇಗೆ ಹುಡುಕುತ್ತಾಳೆ? ಜೊತೆಗಿರುವ ರಾಜಕುಮಾರನ ಗುರುತು ಸಿಗುತ್ತಾ? ಆಮ್ರಪಾಲಿಗೆ ಸಹಾಯ ಮಾಡುವವರು ಯಾರು? ಮುಂದೇನಾಗುತ್ತೆ ಅಂತ ನೋಡೋಕೆ ತ್ರಿಪುರ ಸುಂದರಿ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ