ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ. ರಾಮಾಚಾರಿ ಕಂಪನಿ ವತಿಯಿಂದ ಬೇರೆ ಕಂಪನಿ ವಿಸಿಟ್ ಗೆ ಬಂದಿರುತ್ತಾರೆ. ಜೊತೆಯಲ್ಲಿ ಬೇರೆ ಕೆಲಸಗಾರರು ಇರುತ್ತಾರೆ. ಆಗ ಚಾರು ರಾಮಾಚಾರಿಯನ್ನು ಹಿಂದಿನಿಂದ ತಬ್ಬಿಕೊಂಡು ನನ್ನ ಪ್ರೀತಿ ಮಾಡು. ಲವ್ (Love) ಮಾಡ್ತೀನಿ ಅಂತ ಹೇಳೋವರೆಗೂ ನಾನು ನಿನ್ನ ಬಿಡಲ್ಲ ಎನ್ನುತ್ತಾಳೆ. ಅದಕ್ಕೆ ರಾಮಾಚಾರಿಗೆ ಕೋಪ ಬಂದು ಆಕೆಯನ್ನು ತಳ್ಳಿರುತ್ತಾನೆ. ಅದರಿಂದ ಕೆಮಿಕಲ್ ಬಿದ್ದು ಚಾರು ಶಾಶ್ವತವಾಗಿ ಕಣ್ಣು ಕಳೆದುಕೊಂಡಿರುತ್ತಾಳೆ. ಈಗ ಕಣ್ಣು ಬಂದಿದೆ. ಆದ್ರೆ ಕಾಣುತ್ತಿಲ್ಲ ಎಂದು ಸುಳ್ಳು ಹೇಳುತ್ತಿದ್ದಾಳೆ. ಚಾರುಗೆ ರಾಮಾಚಾರಿ ತಾಳಿ ಕಟ್ಟಿದ್ದಾನೆ.
ಸಾಯುತ್ತೇನೆ ಎಂದು ಚಾರು ನಾಟಕ
ಚಾರುಗೆ ಕಣ್ಣು ಕಾಣ್ತಾ ಇದ್ದರು, ಕಾಣಲ್ಲ ಎಂದು ಸುಳ್ಳು ಹೇಳಿದ್ದಾಳೆ. ಅದು ರಾಮಾಚಾರಿ ಪ್ರೀತಿ ಪಡೆಯಲು, ಅವನನ್ನು ಮದುವೆ ಆಗಲು. ಚಾರುಗೆ ರಾಮಾಚಾರಿಯನ್ನು ಮದುವೆಗೆ ಹೇಗೆ ಒಪ್ಪಿಸಬೇಕು ಎಂದು ಗೊತ್ತಿಲ್ಲ.
ಅದಕ್ಕೆ ಚಾರು ಸಾಯುತ್ತೇನೆ ಎಂದು ಹೇಳಿದ್ದಾಳೆ. ಬೆಟ್ಟದ ತುದಿಯಲ್ಲಿ ಚಾರು ನಿಂತಿರುತ್ತಾಳೆ. ರಾಮಾಚಾರಿ ನನ್ನ ಕಣ್ಣಿನ ಸಮಸ್ಯೆಗೆ ಪರಿಹಾರ ಸಿಗಲಿಲ್ಲ ನಾನು ಸಾಯುತ್ತೇನೆ. ಬದುಕಿ ಏನು ಪ್ರಯೋಜನ ಎಂದು ಕೇಳಿದ್ದಳು.
ತಾಳಿ ಕಟ್ಟು ಎಂದ ಚಾರು
ರಾಮಾಚಾರಿ ಚಾರುಳನ್ನು ತಡೆಯುತ್ತಿದ್ದಾನೆ. ಬೇಡ ಚಾರು ಮೇಡಂ ಸಾಯಬೇಡಿ. ನನಗೆ ಯಾರು ದಿಕ್ಕು, ನನ್ನ ಯಾರು ನೋಡಿಕೊಳ್ತಾರೆ ಎಂದು ಕೇಳ್ತಾಳೆ. ಅದಕ್ಕೆ ರಾಮಾಚಾರಿ ನಾನು ನಿಮ್ಮನ್ನು ಅರ್ಧ ದಾರಿಗೆ ಕೈಬಿಡಲ್ಲ ಮೇಡಂ ಎಂದು ಹೇಳುತ್ತಾನೆ. ಅದಕ್ಕೆ ಚಾರು, ನೀನು ಜೀವನ ಪೂರ್ತಿ ನನ್ನ ಜೊತೆ ಇರಬೇಕು ಎಂದ್ರೆ, ಗಂಡನಾಗಿ ಮಾತ್ರ ಸಾಧ್ಯ. ನನ್ನನ್ನು ಮದುವೆ ಆಗ್ತೀಯಾ ಎಂದು ತಾಳಿ ಹಿಡಿದು ಕೇಳಿದ್ದಳು.
ನೀವೇ ನನ್ನ ಹೆಂಡ್ತಿ
ಚಾರು ಮೇಡಂ ನಿಮ್ಮನ್ನು ನನ್ನ ಹೆಂಡತಿಯಾಗಿ ಸ್ವೀಕರಿಸಲು ನಾನು ಸಿದ್ಧವಾಗಿದ್ದೇನೆ. ಕಳೆದುಕೊಂಡ ಕಣ್ಣನ್ನು ನಾನು ವಾಪಸ್ ಕೊಡುವುದಕ್ಕೆ ಆಗಲಿಲ್ಲ. ಕಡೆ ಪಕ್ಷ ಈ ತಾಳಿ ಕಟ್ಟಿ, ನಿಮ್ಮ ಬಾಳ ಸಂಗಾತಿಯಾಗಿ, ಜೀವನ ಪೂರ್ತಿ ನಿಮ್ಮ ಕಣ್ಣಾಗಿರುತ್ತೇನೆ. ಬದುಕು ನಿಮಗಾಗಿ, ಈ ಜೀವನ ಎಲ್ಲ ನಿಮಗಾಗಿ. ಎಂಥದ್ದೇ ಪರಿಸ್ಥಿತಿ ಬಂದ್ರೂ ಕಾಯಾ, ವಾಚಾ, ಮನಸ್ಸಾ, ನಿಮ್ಮ ಗಂಡನಾಗಿ ನಿಮ್ಮ ಕೈ ಹಿಡಿದು ನಡೆಸುತ್ತೇನೆ ಎಂದು ರಾಮಾಚಾರಿ ಹೇಳಿದ್ದಾಳೆ.
ರಾಮಾಚಾರಿ-ಚಾರು ಮದುವೆ
ಜೀವನ ಪೂರ್ತಿ ನಿಮ್ಮ ಜೊತೆಗೆ ಇರ್ತಿನಿ ಅಂತ, ಈ ಪ್ರಕೃತಿ ಸಾಕ್ಷಿಯಾಗಿ, ನಿಮಗೆ ಈ ತಾಳಿ ಕಟ್ಟುತ್ತಿದ್ದೇನೆ. ಎಂದು ರಾಮಾಚಾರಿ ತಾಳಿ ಕಟ್ಟಿದ್ದಾನೆ. ಇವತ್ತಿನಿಂದ ನೀವೇ ನನ್ನ ಹೆಂಡ್ತಿ. ನಾನೇ ನಿಮ್ಮ ಗಂಡ ಎಂದು ರಾಮಾಚಾರಿ ಹೇಳಿದ್ದಾನೆ. ಚಾರು ತುಂಬಾ ಖುಷಿಯಾಗಿ ಅವನನ್ನು ತಬ್ಬಿಕೊಂಡಿದ್ದಾಳೆ.
ಮನೆಯವರು ಒಪ್ತಾರಾ ಈ ಮದುವೆಯನ್ನು?
ರಾಮಾಚಾರಿ ಮನೆಯನ್ನು ಕಂಡ್ರೆ ಆಗಲ್ಲ. ಅಲ್ಲದೇ ಅವಳ ಸುದ್ದಿಗೆ ಹೋಗಬೇಡ ಎಂದು ಸಹ ಹೇಳಿದ್ದರು. ಅಲ್ಲದೇ ರಾಮಾಚಾರಿಗೆ ತನ್ನ ಮಾವನ ಮಗಳು ದೀಪಾ ಜೊತೆ ಮದುವೆ ನಿಶ್ಚಯ ಆಗಿತ್ತು. ಇದನ್ನು ಅವರು ಹೇಗೆ ಸ್ವೀಕರಿಸುತ್ತಾರೋ ನೋಡಬೇಕು. ಇನ್ನೂ ಚಾರು ಅಮ್ಮ ಮಾನ್ಯತಾಗೆ ರಾಮಾಚಾರಿಯನ್ನು ಕಂಡ್ರೆ ಎಲ್ಲಿಲ್ಲದ ಕೋಪ. ಈಗ ಆಕೆ ಏನ್ ಮಾಡ್ತಾಳೋ ನೋಡಬೇಕು.
ಇದನ್ನೂ ಓದಿ: Deepika Das: ದೀಪಿಕಾ ದಾಸ್ ಮನೆ ಬೆಕ್ಕು ಕಳೆದು ಹೋಗಿದೆಯಂತೆ, ಹುಡುಕಿ ಕೊಟ್ರೆ ಬಹುಮಾನ ಸಿಗುತ್ತೆ!
ಕೊನೆಗೂ ರಾಮಾಚಾರಿ-ಚಾರು ಮದುವೆ ನಡೆದಿದೆ. ಇದನ್ನು ಮನೆವರು ಒಪ್ಪಿಕೊಳ್ತಾರಾ? ಮಾನ್ಯತಾ ಮುಂದಿನ ನಡೆ ಏನು? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ