• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Ramachari: ರಾಮಾಚಾರಿ ಮನೆಯವ್ರನ್ನು ಕೊಲ್ಲಲು ಬಂದ ಮಾನ್ಯತಾ! ಇತ್ತ ಚಾರುಗೆ ಫುಲ್ ಟೆನ್ಶನ್

Ramachari: ರಾಮಾಚಾರಿ ಮನೆಯವ್ರನ್ನು ಕೊಲ್ಲಲು ಬಂದ ಮಾನ್ಯತಾ! ಇತ್ತ ಚಾರುಗೆ ಫುಲ್ ಟೆನ್ಶನ್

ರಾಮಾಚಾರಿ ಮನೆಯವರನ್ನು ಕೊಲ್ಲಲು ಹೋದ ಮಾನ್ಯತಾ

ರಾಮಾಚಾರಿ ಮನೆಯವರನ್ನು ಕೊಲ್ಲಲು ಹೋದ ಮಾನ್ಯತಾ

ಮಾನ್ಯತಾ ರೌಡಿಗಳ ಜೊತೆ ಬಂದು ರಾಮಾಚಾರಿಯನ್ನು ಹುಡುಕಿದ್ದಾಳೆ. ಆದ್ರೆ ರಾಮಾಚಾರಿ ಮನೆಯಲ್ಲಿ ಇಲ್ಲ. ಅದಕ್ಕೆ ಅವರ ಮನೆಯವರನ್ನು ಕಟ್ಟಿ ಹಾಕಿ, ಚಿತ್ರಹಿಂಸೆ ಮಾಡುತ್ತಿದ್ದಾಳೆ. ಹಾಗಾದ್ರೆ ರಾಮಾಚಾರಿ ಫ್ಯಾಮಿಲಿಯವ್ರಿಗೆ ಅಪಾಯವಾಗುತ್ತಾ?

  • News18 Kannada
  • 3-MIN READ
  • Last Updated :
  • Karnataka, India
  • Share this:

    ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial) ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ. ರಾಮಾಚಾರಿ ಕಂಪನಿ ವತಿಯಿಂದ ಬೇರೆ ಕಂಪನಿ ವಿಸಿಟ್‌ಗೆ ಬಂದಿರುತ್ತಾರೆ. ಜೊತೆಯಲ್ಲಿ ಬೇರೆ ಕೆಲಸಗಾರರು ಇರುತ್ತಾರೆ. ಆಗ ಚಾರು ರಾಮಾಚಾರಿಯನ್ನು ಹಿಂದೆಯಿಂದ ತಬ್ಬಿಕೊಂಡು ನನ್ನ ಪ್ರೀತಿ (Love) ಮಾಡು, ನಾನು ಲವ್ ಮಾಡ್ತೀನಿ ಅಂತ ಹೇಳೋವರೆಗೂ ನಾನು ನಿನ್ನ ಬಿಡಲ್ಲ ಎನ್ನುತ್ತಾಳೆ. ಅದಕ್ಕೆ ರಾಮಾಚಾರಿಗೆ ಕೋಪ ಬಂದು ಆಕೆಯನ್ನು ತಳ್ಳಿರುತ್ತಾನೆ. ಅದರಿಂದ ಕೆಮಿಕಲ್ ಬಿದ್ದು ಚಾರು ಶಾಶ್ವತವಾಗಿ ಕಣ್ಣು (Eye) ಕಳೆದುಕೊಂಡಿದ್ದಾಳೆ. ಚಾರು ಕಣ್ಣು ಹೋಗಲು ರಾಮಾಚಾರಿ ಕಾರಣ ಎಂದು ಗೊತ್ತಾಗಿ, ಅವನನ್ನು ಕೊಲ್ಲಲು (Murder) ಹೋಗಿದ್ದಾಳೆ ಮಾನ್ಯತಾ.


    ಚಾರು ಕಣ್ಣು ಹೋಗಲು ರಾಮಾಚಾರಿ ಕಾರಣ!
    ಚಾರು ಶಾಶ್ವತವಾಗಿ ಕಣ್ಣು ಕಳೆದುಕೊಂಡಿದ್ದಾಳೆ. ಅದಕ್ಕೆ ಮಾನ್ಯತಾ ನೋವಿನಲ್ಲಿದ್ದಾಳೆ. ಆಗ ಚಾರು ಮಾತನಾಡಿಸಲು ಎಂದು ರೂಮ್‍ಗೆ ಬರುತ್ತಾಳೆ. ಚಾರುಗೆ ಕಣ್ಣು ಕಾಣದೇ ಇರೋ ಕಾರಣ ತನ್ನ ಅಮ್ಮ ಬಂದಿದ್ದು ಗೊತ್ತಾಗಲ್ಲ.


    ನನ್ನ ಕಣ್ಣು ಹೋಗಲು ರಾಮಾಚಾರಿ ಕಾರಣ ಎಂದು ಯಾವುದೇ ಕಾರಣಕ್ಕೂ ಅಮ್ಮನಿಗೆ ಗೊತ್ತಾಗಬಾರದು ಎಂದು ಚಾರು ತನ್ನಷ್ಟಕ್ಕೆ ತಾನೇ ಹೇಳಿಕೊಳ್ಳುತ್ತಾಳೆ. ಆದರೆ ಆ ಮಾತು ಮಾನ್ಯತಾ ಕೇಳಿಸಿಕೊಂಡಿದ್ದಾಳೆ.


    ಕೆಂಡಮಂಡಲವಾದ ಮಾನ್ಯತಾ
    ಮಾನ್ಯತಾಗೆ ಮೊದಲೇ ತನ್ನ ಮಗಳು ಚಾರು ಅಂದ್ರೆ ತುಂಬಾ ಇಷ್ಟ. ಆಕೆಗೆ ನೋವಾದ್ರೆ ಸಹಿಸಲ್ಲ. ಇನ್ನೂ ಶಾಶ್ವತವಾಗಿ ಕಣ್ಣು ಹೋಗಲು ರಾಮಾಚಾರಿ ಕಾರಣ ಎಂದು ಕೆಂಡಮಂಡಲವಾಗಿದ್ದಾಳೆ. ನನ್ನ ಮಗಳನ್ನು ಈ ಪರಿಸ್ಥಿತಿಗೆ ತಂದವನನ್ನು ಸುಮ್ಮನೇ ಬಿಡಬಾರದು ಎಂದು ರೌಡಿಗಳ ಜೊತೆ ರಾಮಾಚಾರಿ ಮನೆಗೆ ಹೋಗಿದ್ದಾಳೆ.




    ರಾಮಾಚಾರಿ ಮನೆಯವರನ್ನು ಕಟ್ಟಿ ಹಾಕಿ ಚಿತ್ರಹಿಂಸೆ!
    ಮಾನ್ಯತಾ ರೌಡಿಗಳ ಜೊತೆ ಬಂದು ರಾಮಾಚಾರಿಯನ್ನು ಹುಡುಕಿದ್ದಾಳೆ. ಆದ್ರೆ ರಾಮಾಚಾರಿ ಮನೆಯಲ್ಲಿ ಇಲ್ಲ. ಅದಕ್ಕೆ ಅವರ ಮನೆಯವರನ್ನು ಕಟ್ಟಿ ಹಾಕಿ, ಚಿತ್ರಹಿಂಸೆ ಮಾಡುತ್ತಿದ್ದಾಳೆ. ರಾಮಾಚಾರಿ ಎಲ್ಲಿ ಹೇಳಿ ಎಂದು ಕೇಳುತ್ತಿದ್ದಾಳೆ. ಆದ್ರೆ ಮನೆಯವರು ಹೇಳುತ್ತಿಲ್ಲ. ಅದಕ್ಕೆ ಮಾನ್ಯತಾ ನಿಮ್ಮನೆಲ್ಲಾ ಜೀವಂತವಾಗಿ ಸುಡುತ್ತೇನೆ ಎಂದು ಹೇಳುತ್ತಿದ್ದಾಳೆ.


    colors kannada serial, kannada serial, ramachari serial, manyata ready to kill ramachari family, charu was blind chemical effect, ರಾಮಾಚಾರಿ ಧಾರಾವಾಹಿ, ಕಣ್ಣು ಕಳೆದುಕೊಂಡ ಚಾರು, ರಾಮಾಚಾರಿ ಮನೆಯವರನ್ನು ಕೊಲ್ಲಲು ಹೋದ ಮಾನ್ಯತಾ, ಟೆನ್ಶನ್‍ನಲ್ಲಿ ಚಾರು!, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
    ಮಾನ್ಯತಾ


    ದೇವಸ್ಥಾನದಲ್ಲಿರುವ ರಾಮಾಚಾರಿ
    ರಾಮಾಚಾರಿ ಚಾರುಗಾಗಿ ಒಂಟಿ ಕಾಲಿನ ಸೇವೆ ಮಾಡುತ್ತಿದ್ದಾನೆ. ಮಡಿಯಿಂದ ಕಲ್ಲಿನ ಮೇಲೆ ನಿಂತು ನಾಗ ದೇವನನ್ನು ಜಪಿಸುತ್ತಿದ್ದಾನೆ. ಇದು ಕೊನೆ ಪ್ರಯತ್ನ, ದೇವರು ಏನಾದ್ರೂ ದಾರಿ ತೋರಿಸುತ್ತಾನೆ ಎಂದು ನಂಬಿದ್ದಾನೆ. ನನ್ನಿಂದ ಚಾರು ಮೇಡಂಗೆ ಕಣ್ಣು ಹೋಗಿತ್ತು. ನಾನೇ ಏನಾದ್ರೂ ಮಾಡಬೇಕು ಎಂದು ಒದ್ದಾಡುತ್ತಿದ್ದಾನೆ.


    colors kannada serial, kannada serial, ramachari serial, manyata ready to kill ramachari family, charu was blind chemical effect, ರಾಮಾಚಾರಿ ಧಾರಾವಾಹಿ, ಕಣ್ಣು ಕಳೆದುಕೊಂಡ ಚಾರು, ರಾಮಾಚಾರಿ ಮನೆಯವರನ್ನು ಕೊಲ್ಲಲು ಹೋದ ಮಾನ್ಯತಾ, ಟೆನ್ಶನ್‍ನಲ್ಲಿ ಚಾರು!, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
    ರಾಮಾಚಾರಿ


    ಚಾರುಗೆ ಟೆನ್ಶನ್
    ಚಾರುಗೆ ತನ್ನ ಅಮ್ಮ ಮನೆಯಲ್ಲಿ ಇಲ್ಲ ಎಂದು ಗೊತ್ತಾಗಿದೆ. ಅದಕ್ಕೆ ತನ್ನ ತಮ್ಮನನ್ನು ಕೇಳಿದ್ದಾಳೆ. ಅದಕ್ಕೆ ಅವನು ಅಮ್ಮ ರಾತ್ರಿಯೆಲ್ಲಾ ನಿದ್ದೆ ಮಾಡಿಲ್ಲ. ಯಾರನ್ನೂ ನಿಮ್ಮನ್ನು ಬಿಡಲ್ಲ ಎನ್ನುತ್ತಿದ್ದಳು. ರಾಮಾಚಾರಿ ಮನೆಯವರನ್ನು ಕೊಲ್ಲುತ್ತೇನೆ ಎಂದು ಹೇಳ್ತಾ ಇದ್ಲು, ಬೆಳಗ್ಗೆಯೇ ಎದ್ದು ಹೋಗಿದ್ದಾಳೆ ಎಂದು ಹೇಳ್ತಾನೆ. ಅದನ್ನು ಕೇಳಿ ಚಾರು ಆತಂಕಕೊಂಡಿದ್ದಾಳೆ.


    colors kannada serial, kannada serial, ramachari serial, manyata ready to kill ramachari family, charu was blind chemical effect, ರಾಮಾಚಾರಿ ಧಾರಾವಾಹಿ, ಕಣ್ಣು ಕಳೆದುಕೊಂಡ ಚಾರು, ರಾಮಾಚಾರಿ ಮನೆಯವರನ್ನು ಕೊಲ್ಲಲು ಹೋದ ಮಾನ್ಯತಾ, ಟೆನ್ಶನ್‍ನಲ್ಲಿ ಚಾರು!, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
    ಚಾರು


    ಇದನ್ನೂ ಓದಿ: Kannadathi: ಕನ್ನಡದಲ್ಲೇ ಕಾಫಿ ಅಂಗಡಿ ಓಪನ್ ಆಯ್ತು! ಹಣ ತೆಗೆದುಕೊಂಡು ಸಾನಿಯಾ ಹೋಗಿದ್ದೆಲ್ಲಿಗೆ? 


    ರಾಮಾಚಾರಿ ಮನೆಯವರನ್ನು ಮಾನ್ಯತಾ ಕೊಳ್ತಾಳಾ? ಚಾರು ಅದನ್ನು ತಡೆಯುತ್ತಾಳಾ? ರಾಮಾಚಾರಿಗೆ ಅಪಾಯನಾ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.

    Published by:Savitha Savitha
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು