ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ. ರಾಮಾಚಾರಿ ಕಂಪನಿ ವತಿಯಿಂದ ಬೇರೆ ಕಂಪನಿ ವಿಸಿಟ್ ಗೆ ಬಂದಿರುತ್ತಾರೆ. ಜೊತೆಯಲ್ಲಿ ಬೇರೆ ಕೆಲಸಗಾರರು ಇರುತ್ತಾರೆ. ಆಗ ಚಾರು ರಾಮಾಚಾರಿಯನ್ನು ಹಿಂದಿನಿಂದ ತಬ್ಬಿಕೊಂಡು ನನ್ನ ಪ್ರೀತಿ (Love) ಮಾಡು. ಲವ್ ಮಾಡ್ತೀನಿ ಅಂತ ಹೇಳೋವರೆಗೂ ನಾನು ನಿನ್ನ ಬಿಡಲ್ಲ ಎನ್ನುತ್ತಾಳೆ. ಅದಕ್ಕೆ ರಾಮಾಚಾರಿಗೆ ಕೋಪ ಬಂದು ಆಕೆಯನ್ನು ತಳ್ಳಿರುತ್ತಾನೆ. ಅದರಿಂದ ಕೆಮಿಕಲ್ ಬಿದ್ದು ಚಾರು ಶಾಶ್ವತವಾಗಿ ಕಣ್ಣು ಕಳೆದುಕೊಂಡಿರುತ್ತಾಳೆ. ಈಗ ಕಣ್ಣು ಬಂದಿದೆ, ಚಾರು ಸುಳ್ಳು ಹೇಳಿ ರಾಮಾಚಾರಿ ಕೈನಲ್ಲಿ ತಾಳಿ ಕಟ್ಟಿಸಿಕೊಂಡಿದ್ದಾಳೆ. ಆದ್ರೆ ಮಾನ್ಯತಾ ನಾನು ಚಾರುಗೆ ಮದುವೆ (Marriage) ಮಾಡ್ತೀನಿ ಅಂತಿದ್ದಾಳೆ.
ಚಾರು ಮೇಡಂ ನೀವೇ ನನ್ನ ಹೆಂಡತಿ
ಚಾರು ಮೇಡಂ ನಿಮ್ಮನ್ನು ನನ್ನ ಹೆಂಡತಿಯಾಗಿ ಸ್ವೀಕರಿಸಲು ನಾನು ಸಿದ್ಧವಾಗಿದ್ದೇನೆ. ಕಳೆದುಕೊಂಡ ಕಣ್ಣನ್ನು ನಾನು ವಾಪಸ್ ಕೊಡುವುದಕ್ಕೆ ಆಗಲಿಲ್ಲ. ಕಡೆ ಪಕ್ಷ ಈ ತಾಳಿ ಕಟ್ಟಿ, ನಿಮ್ಮ ಬಾಳ ಸಂಗಾತಿಯಾಗಿ, ಜೀವನ ಪೂರ್ತಿ ನಿಮ್ಮ ಕಣ್ಣಾಗಿರುತ್ತೇನೆ. ಬದುಕು ನಿಮಗಾಗಿ, ಈ ಜೀವನ ಎಲ್ಲ ನಿಮಗಾಗಿ. ಎಂಥದ್ದೇ ಪರಿಸ್ಥಿತಿ ಬಂದ್ರೂ ಕಾಯಾ, ವಾಚಾ, ಮನಸ್ಸಾ, ನಿಮ್ಮ ಗಂಡನಾಘಿ ನಿಮ್ಮ ಕೈ ಹಿಡಿದು ನಡೆಸುತ್ತೇನೆ ಎಂದು ರಾಮಾಚಾರಿ ಹೇಳಿದ್ದಾಳೆ.
ಪ್ರಕೃತಿ ಮುಂದೆ ಮದುವೆ
ಜೀವನ ಪೂರ್ತಿ ನಿಮ್ಮ ಜೊತೆಗೆ ಇರ್ತಿನಿ ಅಂತ, ಈ ಪ್ರಕೃತಿ ಸಾಕ್ಷಿಯಾಗಿ, ನಿಮಗೆ ಈ ತಾಳಿ ಕಟ್ಟುತ್ತಿದ್ದೇನೆ. ಎಂದು ರಾಮಾಚಾರಿ ತಾಳಿ ಕಟ್ಟಿದ್ದಾನೆ. ಇವತ್ತಿನಿಂದ ನೀವೇ ನನ್ನ ಹೆಂಡ್ತಿ. ನಾನೇ ನಿಮ್ಮ ಗಂಡ ಎಂದು ರಾಮಾಚಾರಿ ಹೇಳಿದ್ದಾನೆ. ಚಾರು ತುಂಬಾ ಖುಷಿಯಾಗಿ ಅವನನ್ನು ತಬ್ಬಿಕೊಂಡಿದ್ದಾಳೆ. ಖುಷಿಯಾಗಿದ್ದಾಳೆ.
ಸದ್ಯಕ್ಕೆ ಮನೆಯಲ್ಲಿ ಹೇಳೋದು ಬೇಡ
ರಾಮಾಚಾರಿ ಚಾರು ಗಂಡ ಆಗಿದ್ದಾನೆ. ಆದ್ರೆ ಈ ವಿಚಾರವನ್ನು ಸದ್ಯಕ್ಕೆ ಯಾರಿಗೂ ಹೇಳೋದು ಬೇಡ ಎಂದು ರಾಮಾಚಾರಿ ಚಾರು ಬಳಿ ಹೇಳಿದ್ದಾನೆ. ನನ್ನ ಅಣ್ಣನ ಜೀವನ ಸರಿ ಮಾಡಬೇಕು. ನನ್ನ ತಂಗಿಗೆ ಮದುವೆ ಮಾಡಬೇಕು. ನಂತರ ನನ್ನ ಜೀವನ ಎಂದು ರಾಮಾಚಾರಿ ಹೇಳಿದ್ದಾನೆ. ಅದಕ್ಕೆ ಚಾರು ಸಹ ಒಪ್ಪಿಕೊಂಡಿದ್ದಾಳೆ. ಇನ್ಮುಂದೆ ನಾನು ನಿನ್ನ ಕಷ್ಟಕ್ಕೆ ಜೊತೆಯಾಗಿರುತ್ತೇನೆ ಎಂದಿದ್ದಾಳೆ.
ಮಾನ್ಯತಾಗೆ ಕೋಪ
ರಾಚಾಮಾರಿ ಚಾರುಳನ್ನು ಚಿಕ್ಕಮಗಳೂರಿನಿಂದ ಮನೆಗೆ ಕರೆದುಕೊಂಡು ಬಂದಿದ್ದಾನೆ. ಚಿಕಿತ್ಸೆ ವಿಫಲವಾಯ್ತು ಎಂದು ಮಾನ್ಯತಾ ಮುಂದೆ ಹೇಳ್ತಾ ಇದ್ದಾನೆ. ಅದಕ್ಕೆ ಮಾನ್ಯತಾ ಕೋಪ ಮಾಡಿಕೊಂಡು, ನೀನು ಇದನ್ನೇ ಹೇಳ್ತಾ ಇದ್ದೆ ಎಂದು ನನಗೆ ಗೊತ್ತು. ನಾಟಕ ಮಾಡಿ ನಮ್ಮ ಸಮಯ ಹಾಳು ಮಾಡಿಬಿಟ್ಟೆ ನೀನು ಎಂದು ಮಾನ್ಯತಾ ಸಿಡಿಯುತ್ತಿದ್ದಾಳೆ.
ಕಣ್ಣಾಗಿರೋ ಗಂಡು ಸಿಕ್ಕಿದ್ದಾನೆ
ನನ್ನ ಮಗಳ ಕಣ್ಣಾಗಿರೋ ಹುಡುಗ ಸಿಕ್ಕಿದ್ದಾನೆ. ಕಣ್ಣಿಲ್ಲ ಇವಳನ್ನು ಯಾರು ಮದುವೆ ಆಗ್ತಾರೆ ಎಂದು ಒಳಗೊಳಗೆ ಖುಷಿ ಒಡ್ತಾ ಇದ್ದೆ ಅಲ್ವಾ? ನನ್ನ ಮಗಳ ಜೀವನ ಹಾಳಾಗೋಕೆ ಈ ಮಾನ್ಯತಾ ಬಿಡಲ್ಲ.
ನೀನ್ ಜೀವನ ಪೂರ್ತಿ ದುಡಿದ್ರೂ, ಅವರು ಕಟ್ಟಿರೋ ಒಂದು ವಾಚ್ ಸಹ ನಿನ್ನ ಕೈನಲ್ಲಿ ಕೊಂಡುಕೊಳ್ಳೋಕೆ ಆಗಲ್ಲ. ನೋಡ್ತಾ ಇರು, ನಿನ್ನ ಕಣ್ಣ ಮುಂದೆ ನನ್ನ ಮಗಳ ಮದುವೆ ಹೇಗೆ ಮಾಡ್ತೀನಿ ಎಂದು ಮಾನ್ಯತಾ ರಾಮಾಚಾರಿಗೆ ಚಾಲೆಂಜ್ ಹಾಕಿದ್ದಾಳೆ.
ಇದನ್ನೂ ಓದಿ: Zee Kannada: ಜೀ ಕನ್ನಡದಲ್ಲಿ ಕರುನಾಡ ಸಂಭ್ರಮ, 2 ದಿನ ಮನರಂಜನೆಯ ರಸದೌತಣ!
ಚಾರು ನನ್ನ ಹೆಂಡ್ತಿ ಎಂದು ರಾಮಾಚಾರಿ ಹೇಳ್ತಾನಾ? ಸದ್ಯದ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾರೆ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ