Ramachari: ಪತ್ನಿಯ ಮದುವೆ ಮುಹೂರ್ತವಿಡಲು ಹೊರಟ ರಾಮಾಚಾರಿ, ಆತಂಕದಲ್ಲಿ ಚಾರು!

ವೃತ್ತಿ ಧರ್ಮ ಬಿಡಲ್ಲ ಅಂತಿದ್ದಾನೆ ರಾಮಾಚಾರಿ

ವೃತ್ತಿ ಧರ್ಮ ಬಿಡಲ್ಲ ಅಂತಿದ್ದಾನೆ ರಾಮಾಚಾರಿ

ಮದುವೆ ಮುಹೂರ್ತ ಇಡಲು ರಾಮಾಚಾರಿಯನ್ನೇ ಕರೆಸುತ್ತಿದ್ದಾರೆ. ಮುಹೂರ್ತದ ಜೊತೆ ಹೂವು ಮೂಡಿಸುವ ಶಾಸ್ತ್ರವನ್ನೂ ಸಹ ಮಾಡ್ತಾರಂತೆ. ಅದಕ್ಕೆ ಚಾರುಗೆ ಆತಂಕ ಹೆಚ್ಚಾಗಿ ರಾಮಾಚಾರಿಗೆ ಫೋನ್ ಮಾಡಿ ಮಾತನಾಡಬೇಕು ಬಾ ಎನ್ನುತ್ತಿದ್ದಾಳೆ.

  • News18 Kannada
  • 5-MIN READ
  • Last Updated :
  • Karnataka, India
  • Share this:

    ರಾಮಾಚಾರಿ (Ramachari)  ಕಲರ್ಸ್ ಕನ್ನಡದಲ್ಲಿ  (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ. ರಾಮಾಚಾರಿ ಕಂಪನಿ ವತಿಯಿಂದ ಬೇರೆ ಕಂಪನಿ ವಿಸಿಟ್ ಗೆ ಬಂದಿರುತ್ತಾರೆ. ಜೊತೆಯಲ್ಲಿ ಬೇರೆ ಕೆಲಸಗಾರರು ಇರುತ್ತಾರೆ. ಆಗ ಚಾರು ರಾಮಾಚಾರಿಯನ್ನು ಹಿಂದಿನಿಂದ ತಬ್ಬಿಕೊಂಡು ನನ್ನ ಪ್ರೀತಿ ಮಾಡು. ಲವ್ ಮಾಡ್ತೀನಿ ಅಂತ ಹೇಳೋವರೆಗೂ ನಾನು ನಿನ್ನ ಬಿಡಲ್ಲ ಎನ್ನುತ್ತಾಳೆ. ಅದಕ್ಕೆ ರಾಮಾಚಾರಿಗೆ ಕೋಪ ಬಂದು ಆಕೆಯನ್ನು ತಳ್ಳಿರುತ್ತಾನೆ. ಅದರಿಂದ ಕೆಮಿಕಲ್ ಬಿದ್ದು ಚಾರು ಶಾಶ್ವತವಾಗಿ ಕಣ್ಣು ಕಳೆದುಕೊಂಡಿರುತ್ತಾಳೆ. ಈಗ ಕಣ್ಣು ಬಂದಿದೆ, ಚಾರು ಸುಳ್ಳು ಹೇಳಿ ರಾಮಾಚಾರಿ ಕೈನಲ್ಲಿ ತಾಳಿ ಕಟ್ಟಿಸಿಕೊಂಡಿದ್ದಾಳೆ. ಆದ್ರೆ ಚಾರುಗೆ ಮನೆಯಲ್ಲಿ ಬೇರೆ ಮದುವೆ (Marriage) ಮಾಡಲು ಸಿದ್ಧರಾಗಿದ್ದಾರೆ.


    ಚಾರು-ರಾಮಾಚಾರಿ ಮದುವೆ
    ಚಾರುಗೆ ಚಿಕ್ಕಮಗಳೂರಿನಲ್ಲಿ ಕಣ್ಣಿನ ಚಿಕಿತ್ಸೆ ಕೊಡಿಸಿರುತ್ತಾರೆ. ಆಕೆಗೆ ಕಣ್ಣು ಬರುತ್ತೆ. ಆದ್ರೆ ರಾಮಾಚಾರಿ ದೂರ ಆಗ್ತಾನೆ ಎಂದು ಕಣ್ಣು ಕಾಣಲ್ಲ. ನನಗೆ ದಿಕ್ಕು ಯಾರು ಎಂದು ಸಾಯೋಕೆ ಹೊರಟಿರುತ್ತಾಳೆ. ಚಾರು ಮೇಡಂ ನಿಮ್ಮನ್ನು ನನ್ನ ಹೆಂಡತಿಯಾಗಿ ಸ್ವೀಕರಿಸಲು ನಾನು ಸಿದ್ಧವಾಗಿದ್ದೇನೆ. ಕಳೆದುಕೊಂಡ ಕಣ್ಣನ್ನು ನಾನು ವಾಪಸ್ ಕೊಡುವುದಕ್ಕೆ ಆಗಲಿಲ್ಲ. ತಾಳಿ ಕಟ್ಟುತ್ತೇನೆ ಎಂದು ಹೇಳಿ ಮದುವೆ ಆಗಿರುತ್ತಾನೆ.


    ಆತಂಕದಲ್ಲಿರುವ ಚಾರು
    ಚಾರುಗೆ ಮಾನ್ಯತಾ ಬೇರೆ ಗಂಡು ಹುಡುಕಿದ್ದಾಳೆ. ಅವನ ಜೊತೆ ಮದುವೆ ಮಾಡಲು ಎಲ್ಲಾ ತಯಾರಿ ನಡೆಸಿದ್ದಾಳೆ. ಮದುವೆ ಮುಹೂರ್ತ ಇಡಲು ರಾಮಾಚಾರಿಯನ್ನೇ ಕರೆಸುತ್ತಿದ್ದಾರೆ. ಮುಹೂರ್ತದ ಜೊತೆ ಹೂವು ಮೂಡಿಸುವ ಶಾಸ್ತ್ರವನ್ನೂ ಸಹ ಮಾಡ್ತಾರಂತೆ. ಅದಕ್ಕೆ ಚಾರುಗೆ ಆತಂಕ ಹೆಚ್ಚಾಗಿ ರಾಮಾಚಾರಿಗೆ ಫೋನ್ ಮಾಡಿ ಮಾತನಾಡಬೇಕು ಬಾ ಎನ್ನುತ್ತಿದ್ದಾಳೆ.




    ವೃತ್ತಿ ಧರ್ಮ ಬಿಡಲ್ಲ ಅಂತಿದ್ದಾನೆ ರಾಮಾಚಾರಿ
    ಚಾರು ರಾಮಾಚಾರಿಯನ್ನು ಭೇಟಿಯಾಗಿ, ನಿನಗೆ ನಾನು ಹೆಂಡ್ತಿ ಅನ್ನೋದು ನೆನಪಿದೆ ತಾನೇ. ನೀನು ಮನೆಯಯಲ್ಲಿ ಸುಳ್ಳು ಹೇಳಬೇಕು. ಯಾವುದೇ ಮುಹೂರ್ತ ಸದ್ಯಕ್ಕಿಲ್ಲ. 7 ತಿಂಗಳ ಬಳಿಕ ಮದುವೆ ಮಾಡಿ ಎಂದು ಹೇಳು. ಅಷ್ಟರಲ್ಲಿ ನಾವು ನಮ್ಮ ಮದುವೆ ವಿಷ್ಯನಾ ಎಲ್ಲರಿಗೂ ಹೇಳಿ ಒಪ್ಪಿಸೋಣ ಎಂದು ಹೇಳ್ತಾಳೆ. ಆದ್ರೆ ರಾಮಾಚಾರಿ ನಾನು ವೃತ್ತಿ ಧರ್ಮ ಬಿಡಲು ಆಗಲ್ಲ. ಸುಳ್ಳು ಹೇಳಲ್ಲ ಎನ್ನುತ್ತಿದ್ದಾನೆ.


    colors Kannada serial, kannada serial, ramachari serial, ramachari and charu in sad mood, charu in ramachari marriage, ramachari serial kannada cast, ರಾಮಾಚಾರಿ ಧಾರಾವಾಹಿ, ಪತ್ನಿಗೆ ಬೇರೆ ಮದುವೆ ಮುಹೂರ್ತವಿಡಲು ಹೊರಟ ರಾಮಾಚಾರಿ, ಆತಂಕದಲ್ಲಿ ಚಾರು!, ಚಾರುಗಾಗಿ ಮನೆಯವರಿಗೆ ವಿಲನ್ ಆದ ರಾಮಾಚಾರಿ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
    ರಾಮಾಚಾರಿ


    ಸಾಯ್ತೇನೆ ಎಂದ ಚಾರು
    ಅವತ್ತು ಸಾಯೋಕೆ ಹೊರಟ ನನ್ನನ್ನು ತಡೆದು ನೀನು ತಾಳಿ ಕಟ್ಟಿದ್ದೆ. ಕೊನೆವರೆಗೂ ಕಾಪಾಡ್ತೀನಿ ಅಂದಿದ್ದೆ. ಆದ್ರೆ ಈಗ ನೀನೇ ಬೇರೆ ಅವರ ಜೊತೆ ಮದುವೆ ಆಗಲು ಮುಹೂರ್ತ ನೋಡ್ತಾ ಇದ್ದೀಯಾ, ಆ ರೀತಿ ಏನಾದ್ರೂ ಆದ್ರೆ, ನಾನು ಖಂಡಿತಾ ಬದುಕಿರಲ್ಲ. ಸಾಯ್ತೇನೆ, ಪತಿ ಧರ್ಮ ಪಾಲನೆ ಮಾಡು. ನಿನ್ನ ಹೆಂಡ್ತಿಯನ್ನು ಉಳಿಸಿಕೋ ಎಂದು ಹೇಳಿ ಚಾರು ಹೋಗಿದ್ದಾಳೆ.


    colors Kannada serial, kannada serial, ramachari serial, ramachari and charu in sad mood, charu in ramachari marriage, ramachari serial kannada cast, ರಾಮಾಚಾರಿ ಧಾರಾವಾಹಿ, ಪತ್ನಿಗೆ ಬೇರೆ ಮದುವೆ ಮುಹೂರ್ತವಿಡಲು ಹೊರಟ ರಾಮಾಚಾರಿ, ಆತಂಕದಲ್ಲಿ ಚಾರು!, ಚಾರುಗಾಗಿ ಮನೆಯವರಿಗೆ ವಿಲನ್ ಆದ ರಾಮಾಚಾರಿ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
    ಚಾರು


    ಧರ್ಮ ಸಂಕಷ್ಟದಲ್ಲಿ ರಾಮಾಚಾರಿ
    ರಾಮಾಚಾರಿಗೆ ಏನು ಮಾಡಬೇಕು ಎಂದು ತೋಚುತ್ತಿಲ್ಲ. ಸುಳ್ಳು ಹೇಳೋಕೆ ಮನಸ್ಸಿಲ್ಲ. ಸತ್ಯ ಹೇಳೋಕೆ ಧೈರ್ಯ ಇಲ್ಲ. ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾನೆ. ಮುಂದೆ ಏನ್ ಮಾಡಬೇಕು ಎಂದು ಗೊತ್ತಾಗದೇ ಒದ್ದಾಡುತ್ತಿದ್ದಾನೆ. ಚಾರು ಮನೆಗೆ ಮುಹೂರ್ತವಿಡಲು ಹೋಗಿದ್ದಾನೆ. ಅಲ್ಲಿ ಏನ್ ಮಾಡ್ತಾನೆ ಅನ್ನೋದೇ ಕುತೂಹಲ.


    ಇದನ್ನೂ ಓದಿ: Sharmiela Mandre: ಚಂದನವನ ಕ್ರಿಟಿಕ್ ಅವಾರ್ಡ್ ಪಡೆದ ನಟಿ ಶರ್ಮಿಳಾ ಮಾಂಡ್ರೆ, ಯಾವ ಸಿನಿಮಾಗೆ ನೋಡಿ!


    ಚಾರು ಮದುವೆಗೆ ಮುಹೂರ್ತ ಇಡ್ತಾನಾ ರಾಮಾಚಾರಿ? ಸುಳ್ಳು ಹೇಳ್ತಾನಾ? ನಿಜ ಹೇಳ್ತಾನಾ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.

    Published by:Savitha Savitha
    First published: