ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ. ಅತ್ತಿಗೆ ಅಪರ್ಣಾಗೆ ಸಾವಿಗೆ ಕಾರಣವಾದ ಚಾರು ಮೇಲೆ ರಾಮಾಚಾರಿಗೆ ತುಂಬಾ ಕೋಪ ಇದೆ. ಅವಳನ್ನು ಮಾತನಾಡಿಸುವುದು ಇರಲಿ, ಅವರ ನೆರಳು ನಮ್ಮ ಮನೆ ಕಡೆ ಬೀಳಬಾರದು ಅಂತಿದ್ದಾರೆ, ಆದ್ರೆ ಮಾನ್ಯತಾ ಮತ್ತು ಚಾರುಗೆ ಬುದ್ದಿ ಕಲಿಸಬೇಕು ಎಂದು ರಾಮಾಚಾರಿ ಅಂದುಕೊಳ್ತಿದ್ದಾನೆ. ತಮ್ಮ ಮನೆಯವರ ಸುದ್ದಿಗೆ ಬಂದವರಿಗೆ ಬುದ್ಧಿವಂತಿಕೆಯಿಂದಲೇ ಶಾಸ್ತಿ ಮಾಡ್ತೀನಿ ಎಂದುಕೊಳ್ಳುತ್ತಿದ್ದಾನೆ. ಆದ್ರೆ ಚಾರುಗೆ ರಾಮಾಚಾರಿ ಮೇಲೆ ಲವ್ ಆಗಿದೆ. ರಾಮಾಚಾರಿ ಮಾಡಿದ ಎಡವಟ್ಟಿನಿಂದ ಚಾರು ಕಣ್ಣ (Eye) ಕಳೆದುಕೊಂಡಿದ್ದಾಳೆ. ರಾಮಾಚಾರಿ ಚಾರುಳನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ
ರಾಮಾಚಾರಿಯಿಂದ ಕಣ್ಣು ಕಳೆದುಕೊಂಡ ಚಾರು
ರಾಮಾಚಾರಿ ಕಂಪನಿ ವತಿಯಿಂದ ಬೇರೆ ಕಂಪನಿ ವಿಸಿಟ್ ಗೆ ಬಂದಿರುತ್ತಾರೆ. ಜೊತೆಯಲ್ಲಿ ಬೇರೆ ಕೆಲಸಗಾರರು ಇರುತ್ತಾರೆ. ಆಗ ಚಾರು ಈ ರೀತಿ ನಡೆದುಕೊಂಡಿದ್ದಾಳೆ. ಅದಕ್ಕೆ ಕೋಪ ಮಾಡಿಕೊಂಡ ರಾಮಾಚಾರಿ, ತಬ್ಬಿಕೊಂಡಿದ್ದ ಚಾರುಳನ್ನು ತಳ್ಳಿದ್ದಾನೆ. ಆಗ ಆಕೆ ಬಿದ್ದು, ಕೆಮಿಕಲ್ ಇರುವ ಬಾಟೆಲ್ ಹೊಡೆದು ಹೋಗುತ್ತವೆ. ಕೆಮಿಕಲ್ ಹೊಗೆ ಆವರಿಸಿಕೊಂಡು, ಚಾರುಗೆ ಕಣ್ಣು ಹೋಗಿದೆ. ಸ್ಟ್ರಾಂಗ್ ಆಗಿರುವ ಕೆಮಿಕಲ್ ಬಿದ್ದು ಶಾಶ್ವತವಾಗಿ ಕಣ್ಣು ಕಳೆದುಕೊಂಡಿದ್ದಾಳೆ.
ಚಾರುಗೆ ಸತ್ಯ ಗೊತ್ತಿಲ್ಲ
ಚಾರು ತನಗೆ ಕೇವಲ ಒಂದು ವಾರ ಕಣ್ಣು ಹೋಗಿರುವುದು ಎಂದುಕೊಂಡಿದ್ದಾಳೆ. ಶಾಶ್ವತವಾಗಿ ಹೋಗಿದೆ ಎಂದು ಗೊತ್ತಿಲ್ಲ. ಅದಕ್ಕೆ ಒಂದು ವಾರ ಹೇಗೋ ಮ್ಯಾನೇಜ್ ಮಾಡಬಹುದು ಎಂದುಕೊಂಡಿದ್ದಾಳೆ. ಅದಕ್ಕೆ ಮನೆಯಲ್ಲಿ ನಾನು ಪ್ರಾಜೆಕ್ಟ್ ಮೇಲೆ ಆಚೆ ಹೋಗ್ತಾ ಇದ್ದೀನಿ ಎಂದು ಹೇಳಿದ್ದಾಳೆ. ಅದಕ್ಕೆ ಅವರ ಅಮ್ಮ ಮಾನ್ಯತಾ ಓಕೆ ಎಂದಿದ್ದಾಳೆ.
ಇದನ್ನೂ ಓದಿ: APPU ಅಂದ್ರೆ ಏನು? ಸರಿಗಮಪ ವೇದಿಕೆಯಲ್ಲಿ ಪವರ್ ಸ್ಟಾರ್ ಬಗ್ಗೆ ದಿಯಾ ಹೇಳಿದ್ದು ಹೀಗೆ!
ಚಾರುಳನ್ನು ಮನೆಗೆ ಕರೆದುಕೊಂಡು ಹೋದ ರಾಮಾಚಾರಿ
ನಿನಗೆ ನನ್ನ ಕಣ್ಣು ಕಳೆದೇ, ಅನ್ನೋ ಚಿಂತೆ ಇದ್ರೆ, ನಾನು ಒಂದು ಶಿಕ್ಷೆ ಕೊಡ್ತೀನಿ. ನನಗೆ ಒಂದು ವಾರ ಕಣ್ಣಾಗಿ ಇರ್ತಿಯಾ ಎಂದು ಚಾರು ಕೇಳಿದ್ದಾಳೆ. ಅದಕ್ಕೆ ರಾಮಾಚಾರಿ ಚಾರುಳನ್ನು ಮನೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಒಂದು ವಾರ ನೋಡಿಕೊಳ್ಳಲು ಪ್ಲ್ಯಾನ್ ಮಾಡಿದ್ದಾನೆ.
ಮನೆಯವರಿಗೆ ವಿಲನ್ ಆದ ರಾಮಾಚಾರಿ
ರಾಮಾಚಾರಿ ಚಾರು ಕರೆದುಕೊಂಡು ಬಂದಿದ್ದಕ್ಕೆ ಮನೆಯವರು ಬೇಸರ ಮಾಡಿಕೊಂಡಿದ್ದಾರೆ. ನಮ್ಮ ಮನೆಯ ದೀಪ ಆರಿ ಹೋಗಲು ಅವಳು ಕಾರಣ. ಅವಳನ್ನು ಮನೆಗೆ ಕರೆದುಕೊಂಡು ಬಂದೆಯಾ ಎಂದು ಕೇಳುತ್ತಾರೆ. ಮನೆಯವರು ಎಷ್ಟೇ ಬೇಡ ಅಂದ್ರೂ ಅವರಿಗೆ ವಿಲನ್ ಆಗಿ, ಚಾರುಳನ್ನು ನೋಡಿಕೊಳ್ತಾ ಇದ್ದಾನೆ.
ಚಾರುಗೆ ಉಪಚಾರ
ಚಾರುಳನ್ನು ಮನೆಗೆ ಕರೆದುಕೊಂಡು ಬಂದಿರುವ ರಾಮಾಚಾರಿ ಆಕೆಯ ಸೇವೆ ಮಾಡ್ತಾ ಇದ್ದಾನೆ. ಆಕೆಗೆ ಅವನೇ ಊಟ ಮಾಡಿಸುತ್ತಿದ್ದಾನೆ. ಕಣ್ಣಾಗಿ ಇರ್ತೀನಿ ಎಂದು ಮಾತು ಕೊಟ್ಟಂತೆ ಆಕೆಯನ್ನು ನೋಡಿಕೊಳ್ಳುತ್ತಿದ್ದಾನೆ. ಅದನ್ನು ನೋಡಿ ಮನೆಯವರಿಗೆ ಬೇಸರವಾಗಿದೆ. ಏನು ಮಾಡಿದ್ರೂ ಇದೇ ರೀತಿ ಮಾಡ್ತಾನೆ ಎಂದುಕೊಂಡಿದ್ದಾರೆ.
ಇದನ್ನೂ ಓದಿ: Kannadathi: ಭುವಿ ರಕ್ಷಣೆಗೆ ಬಂದ ಹರ್ಷನಿಗೆ ಅಪಾಯ, ತನ್ನನ್ನು ತಾನು ಕಾಪಾಡಿಕೊಳ್ತಾನಾ?
ಚಾರುಗೆ ಶಾಶ್ವತವಾಗಿ ಕಣ್ಣು ಹೋಗಿರುವುದು ಗೊತ್ತಾಗುತ್ತಾ? ರಾಮಾಚಾರಿ ಆ ಸತ್ಯವನ್ನು ಹೇಳ್ತಾನಾ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ