ಎಲ್ಲೂ ಸ್ಟಾಪ್ ಆಗದೇ ಜನರ ಮನಸ್ಸಿನಲ್ಲಿ ಒಲವಿನ ನಿಲ್ದಾಣ (Olavina Nildana) ಧಾರಾವಾಹಿ (Serial) ಓಡ್ತಾ ಇದೆ. ಕಲರ್ಸ್ ಕನ್ನಡದಲ್ಲಿ (Colors Kannada) ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ನಟ ಸಿದ್ಧಾಂತ್ ಗುರಿ, ಅವನ ಕಾಳಜಿ, ಮನೆಯವರ ಮೇಲಿನ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ. ತಾರಿಣಿ ಪ್ರೀತಿ ಮೊದಲೇ ಅರ್ಥ ಮಾಡಿಕೊಳ್ಳದ ಸಿದ್ಧಾಂತ್, ಈಗ ಆಕೆಯ ಪ್ರೀತಿ ಪಡೆಯಲು ಒದ್ದಾಡುತ್ತಿದ್ದಾನೆ. ಆದ್ರೆ ತಾರಿಣಿ ಮನೆಯವರು ಸಿದ್ದು ಜೊತೆ ಮಾತನಾಡದಂತೆ ತಾರಿಣಿಗೆ ತಾಕೀತು ಮಾಡಿದ್ದಾರೆ. ತಾರಿಣಿ ಮನಸ್ಸಿನಲ್ಲಿ ಇಲ್ಲ ಸಲ್ಲದ ತಪಿತಸ್ಥ ಭಾವನೆ ಮುಡಿಸುತ್ತಿದ್ದಾರೆ. ತಾರಿಣಿಗೆ ಧೀರಜ್ ಜೊತೆ ನಿಶ್ಚಿತಾರ್ಥ (Engagement) ಮಾಡಲು ತಯಾರಾಗಿದ್ದಾರೆ. ಅದನ್ನು ಕೇಳಿ ಸಿದ್ಧಾಂತ್ ಶಾಕ್ (Shock) ಆಗಿ ಹೋಗಿದ್ದಾನೆ. ತಾರಿಣಿ ನಿಜವಾಗ್ಲೂ ನನ್ನನ್ನು ಮರೆತು ಹೋದ್ಲಾ ಎನ್ನುವ ಬೇರಸದಲ್ಲಿದ್ದಾನೆ.
ಸಿದ್ಧಾಂತ್ಗೆ ತಾರಿಣಿ ಮೇಲೆ ಪ್ರೀತಿ
ಮೊದಲು ಸಿದ್ಧಾಂತ್ ಮತ್ತು ತಾರಿಣಿ ಮಧ್ಯೆ ಸುಳ್ಳಿನ ನಿಶ್ಚಿತಾರ್ಥ ನಡೆದಿರುತ್ತೆ. ತಾರಿಣಿ ಮನೆಯವರು ಮದುವೆ ತನಕ ಬಂದಿರುತ್ತಾರೆ. ಆಗ ತಾರಿಣಿಗೆ ಮಾತ್ರ ಸಿದ್ಧಾಂತ್ ಮೇಲೆ ತುಂಬಾ ಪ್ರೀತಿ ಇರುತ್ತೆ. ಸಿದ್ದುಗೆ ಇರುವುದಿಲ್ಲ. ಅದಕ್ಕೆ ತಾರಿಣಿ ಮನೆಯವರ ಬಳಿ ಹೇಳಿ ಮದುವೆ ಕ್ಯಾನ್ಸಲ್ ಮಾಡಿಸಿದ್ದಳು. ಆದ್ರೆ ಈಗ ಸಿದ್ದುಗೆ ತಾರಿಣಿ ಮೇಲೆ ಪ್ರೀತಿ ಆಗಿದೆ. ಆಕೆಯನ್ನು ಹೇಗಾದ್ರೂ ಒಪ್ಪಿಸಬೇಕು ಎಂದು ಒದ್ದಾಡುತ್ತಿದ್ದಾನೆ.
ನಿಮ್ಮ ಮೇಲೆ ಪ್ರೀತಿ ಇಲ್ಲ ಎಂದ ತಾರಿಣಿ
ನೋಡಿ ಸಿದ್ಧಾಂತ್ ನಾನು ನಿಮ್ಮನ್ನು ಇಷ್ಟ ಪಟ್ಟಿದ್ದು ನಿಜ. ನಿಮಗೆ ಅವತ್ತು ಹೇಳಿದ್ದೀನಿ. ಇವತ್ತು ಹೇಳ್ತಾ ಇದ್ದೀನಿ. ಆದ್ರೆ ಅದು ಆಗ. ನಿಮಗೆ ನನ್ನ ಮೇಲೆ ಪ್ರೀತಿ ಇಲ್ಲ ಎಂದು ಗೊತ್ತಾದಾಗ ನಾನೇ ಬದಲಾದೆ. ನಿಧಾನವಾಗಿ ನಿಮ್ಮನ್ನು ಮರೆಯೋಕೆ ಪ್ರಯತ್ನ ಮಾಡ್ತಾ ಬಂದೆ. ಆದ್ರೆ ಈಗ ನೀವು ನನ್ನ ಮೇಲೆ ಪ್ರೀತಿ ಇದೆ ಎಂದು ಬಂದಿದ್ದೀರಿ ಅದನ್ನು ಹೇಳಲು ಒದ್ದಾಡುತ್ತಿದ್ದೀರಿ. ಆದ್ರೆ ನನಗೆ ನಿಮ್ಮ ಮೇಲೆ ಪ್ರೀತಿ ಇಲ್ಲ ಎಂದು ತಾರಿಣಿ ಹೇಳಿದ್ದಾಳೆ.
ಇದನ್ನೂ ಓದಿ: Actor Anirudh: ಅಭಿಮಾನಿಗಳಿಗೆ ಅನಿರುದ್ಧ್ ಧನ್ಯವಾದ, 'ಸೂರ್ಯವಂಶ'ದ ಕಿರುತೆರೆಗೆ ರೀ-ಎಂಟ್ರಿ
ಧೀರಜ್ ಜೊತೆ ನಿಶ್ಚಿತಾರ್ಥ ಮಾಡೋ ಪ್ಲ್ಯಾನ್!
ತಾರಿಣಿ ಎಷ್ಟೇ ಸಿದ್ಧಾಂತ್ ಮೇಲೆ ಪ್ರೀತಿ ಇಲ್ಲ ಎಂದು ಹೇಳಿದ್ರೂ, ಮನೆಯವರಿಗೆ ನಂಬಲು ಆಗುತ್ತಿಲ್ಲ. ಮತ್ತೆ ಎಲ್ಲಿ ತಾರಿಣಿ ಸಿದ್ಧಾಂತ್ ಕಡೆ ವಾಲಿ ಬಿಡ್ತಾಳೋ ಅನ್ನೋ ಭಯ. ಅದಕ್ಕೆ ಧೀರಜ್ ಜೊತೆ ನಿಶ್ಚಿತಾರ್ಥ ಮಾಡಬೇಕು ಎಂದುಕೊಂಡಿದ್ದಾರೆ. ತಾರಿಣಿಗೂ ಹೇಳದೇ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಸಿದ್ಧಾಂತ್ಗೆ ಶಾಕ್
ತಾರಿಣಿ ಮಾವ ಪಾಲಾಕ್ಷ ಮತ್ತು ಸಿದ್ದು ಅತ್ತಿಗೆ ಸಂಗೀತಾ ಇಬರು ಪರಿಚಯ. ಪಾಲಾಕ್ಷ ಸಿದ್ದು ಮನೆಯಲ್ಲಿ ನಡೆಯುವ ಪ್ರತಿಯೊಂದು ಘಟನೆಗಳನ್ನು ಆಕೆ ಬಳಿ ತಿಳಿದುಕೊಳ್ತಾನೆ. ಅದೇ ರೀತಿ ಸಂಗೀತಾ ಬಳಿ ಎಲ್ಲ ವಿಷಯ ಹಂಚಿಕೊಳ್ತಾನೆ. ಸಂಗೀತಾ ಸಿದ್ಧಾಂತ್ ಬಳಿ ಬಂದು ತಾರಿಣಿ ನಿಶ್ಚಿತಾರ್ಥ ಎಂದು ವಿಷಯ ತಿಳಿಸಿದ್ದಾಳೆ. ಸಿದ್ಧಾಂತ್ ಅದನ್ನು ಕೇಳಿ ಶಾಕ್ ಆಗಿದ್ದಾನೆ.
ನಿಶ್ಚಿತಾರ್ಥ ತಡೆಯುತ್ತಾನಾ ಸಿದ್ದು
ತಾರಿಣಿ ನಿನ್ನ ಮೇಲೆ ಪ್ರೀತಿ ಇಲ್ಲ ಎಂದು ಹೇಳಿದ್ರೂ, ಅದನ್ನು ಸಿದ್ದು ನಂಬಿಲ್ಲ. ಅಲ್ಲದೇ ತಾರಿಣಿ ಮನೆಯವರಿಗೆ ನಿಮ್ಮ ಮಗಳನ್ನು ಮದುವೆ ಆಗೋದು ನಾನೇ ಎಂದು ಚಾಲೆಂಜ್ ಮಾಡಿದ್ದಾನೆ. ಅದಕ್ಕೆ ಈಗ ಧೀರಜ್ ಜೊತೆ ಆಗೋ ನಿಶ್ಚಿತಾರ್ಥ ತಡೆಯುತ್ತಾನಾ ನೋಡಬೇಕು.
ಇದನ್ನೂ ಓದಿ: Bigg Boss Kannada: ಸಂಬರ್ಗಿ-ಗುರೂಜಿ ಮಾತಿಗೆ ಸುದೀಪ್ ಗರಂ! ರಾಕಿ ಬಗ್ಗೆ ಹೇಳಿದ್ದೇನು?
ತಾರಿಣಿ ಸಿದ್ಧಾಂತ್ ನನ್ನು ಮರೆಯುತ್ತಾಳಾ? ಧೀರಜ್ ಜೊತೆ ನಿಶ್ಚಿತಾರ್ಥ ಮಾಡಿಕೊಳ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಒಲವಿನ ನಿಲ್ದಾಣ ಧಾರಾವಾಹಿ ನೋಡಬೇಕು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ