ಎಲ್ಲೂ ಸ್ಟಾಪ್ ಆಗದೇ ಜನರ ಮನಸ್ಸಿನಲ್ಲಿ ಒಲವಿನ ನಿಲ್ದಾಣ (Olavina Nildana) ಧಾರಾವಾಹಿ (Serial) ಓಡ್ತಾ ಇದೆ. ಕಲರ್ಸ್ ಕನ್ನಡದಲ್ಲಿ (Colors Kannada) ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ನಟ ಸಿದ್ಧಾಂತ್ ಗುರಿ, ಅವನ ಕಾಳಜಿ, ಮನೆಯವರ ಮೇಲಿನ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ. ನಟಿ ತಾರಿಣಿಯನ್ನು ಮೊದಲು ಸಿದ್ಧಾಂತ್ ಇಷ್ಟ ಪಡ್ತಿದ್ದ. ತಾರಿಣಿ ಸಹ ಇಷ್ಟ ಪಡುತ್ತಿದ್ದಳು. ಆದ್ರೆ ಇಬ್ಬರ ಮನೆಯವರ ಮುನಿಸು ಇವರ ಪ್ರೀತಿಯನ್ನು ದೂರ ಮಾಡಿದೆ. ತಾರಿಣಿ ಮನೆಯವರು ಸಿದ್ದು ಜೊತೆ ಮಾತನಾಡದಂತೆ ತಾಕೀತು ಮಾಡಿದ್ದಾರೆ. ತಾರಿಣಿ ಮನಸ್ಸಿನಲ್ಲಿ ಇಲ್ಲ ಸಲ್ಲದ ತಪಿತಸ್ಥ ಭಾವನೆ ಮೂಡಿಸುತ್ತಿದ್ದಾರೆ. ಸಿದ್ಧಾಂತ್ ತಾರಿಣಿಯನ್ನು ಸಂಪೂರ್ಣವಾಗಿ ಮರೆಯುತ್ತಾನಂತೆ. ಇತ್ತ ಸಿದ್ಧಾಂತ್ ಅಪ್ಪ ಮಾಡಿದ ಸಾಲದಿಂದ ಮನೆ ಹರಾಜಿಗಿಗೆ ಬಂದಿರುತ್ತೆ. ಈಗ ಜಗದೀಶ್ವರಿ ಕೈನಲ್ಲಿ ಸಿದ್ದು ಮನೆ (Home) ಪತ್ರ ಇದೆ.
ತಾರಿಣಿ ಸಹಾಯ
ಸಿದ್ಧಾಂತ್ ಅಪ್ಪ ಮನೆ ಮೇಲೆ ತುಂಬಾ ಸಾಲ ಮಾಡಿರುತ್ತಾರೆ. ಅದರ ಬಡ್ಡಿಯನ್ನು ಸಹ ಬ್ಯಾಂಕ್ ಗೆ ಕಟ್ಟಿರಲ್ಲ. ಬ್ಯಾಂಕ್ ನವರು ಕಾಲ್ ಮಾಡಿದ್ರೆ ರಿಸೀವ್ ಸಹ ಮಾಡಿರಲ್ಲ. ಅದಕ್ಕೆ ಬ್ಯಾಂಕ್ ನವರು ಮನೆಗೆ ಬಂದು ನೋಟಿಸ್ ಕೊಟ್ಟಿರುತ್ತಾರೆ. 5 ದಿನದಲ್ಲಿ 40 ಲಕ್ಷ ಕಟ್ಟಿ. ಇಲ್ಲ ಮನೆ ಹರಾಜು ಹಾಕ್ತೇವೆ ಎಂದು ಹೇಳಿರುತ್ತಾರೆ. ಅದಕ್ಕೆ ತಾರಿಣಿ ಸಹಾಯ ಮಾಡಿರುತ್ತಾಳೆ.
ತಾರಿಣಿ ಅಮ್ಮನಿಗೆ ಪತ್ರ ಕೊಟ್ಟ ಸಿದ್ದು
ಸಿದ್ದುಗೆ ತಾರಿಣಿ ದುಡ್ಡು ಕೊಟ್ಟಿದ್ದು ಗೊತ್ತಾಗುತ್ತೆ. ಅದಕ್ಕೆ ಉಮಾ ಸಿದ್ದು ಮತ್ತು ಅನಂತಕೃಷ್ಣಾಗೆ ಉಮಾ ಬಾಯಿಗೆ ಬಂದಂತೆ ಬೈದಿರುತ್ತಾಳೆ. ನಮ್ಮಿಂದಲೇ ನೀವು ಬದುಕಿರೋದು ಎಂದು ಹೇಳ್ತಾಳೆ.
ಅಲ್ಲದೇ ನಮ್ಮ ಮಗಳಿಂದ ನಿಮ್ಮ ಮರ್ಯಾದೆ ಉಳಿದಿದೆ ಎಂದೆಲ್ಲಾ ಹೇಳ್ತಾಳೆ. ಅದಕ್ಕೆ ಸಿದ್ಧಾಂತ್ ತಮ್ಮ ಮನೆ ಪತ್ರ ತಂದು ಕೊಟ್ಟಿದ್ದಾನೆ. ಇದು 3 ಕೋಟಿಗೆ ಬೆಲೆ ಬಾಳುತ್ತೆ. ಇದನ್ನು ನಿಮ್ಮ ಬಳಿ ಇಟ್ಟುಕೊಳ್ಳಿ. ದುಡ್ಡು ಕೊಟ್ಟ ಮೇಲೆ ವಾಪಸ್ ಕೊಡಿ ಎನ್ನುತ್ತಿದ್ದಾನೆ.
ಜಗದೀಶ್ವರಿಗೆ ಕೊಟ್ಟ ಉಮಾ
ಉಮಾ ಆ ಪತ್ರವನ್ನು ತಂದು ಜಗದೀಶ್ವರಿ ಕೈನಲ್ಲಿ ಕೊಟ್ಟಿದ್ದಾಳೆ. ನಿಮಗೆ ಇದು ಉಪಯೋಗಕ್ಕೆ ಬರಬಹುದು. ಆ ಸಿದ್ದು ತುಂಬಾ ಸ್ವಾಭಿಮಾನಿ ತರ ಮಾತನಾಡಿದ ಎಂದು ಉಮಾ ಹೇಳ್ತಾಳೆ. ಅದನ್ನು ಇಟ್ಟುಕೊಂಡು ಜಗದೀಶ್ವರಿ ಅವರನ್ನು ಆಟವಾಡಿಸಲು ನಿರ್ಧಾರ ಮಾಡಿದ್ದಾಳೆ. ಧೀರಜ್ ಮತ್ತು ಪಾಲಾಕ್ಷ ಸಹ ಕೈ ಜೋಡಿಸಿದ್ದಾರೆ.
40 ಲಕ್ಷ ಜೋಡಿಸಲು ಒದ್ದಾಟ
ಸಿದ್ದು ಮತ್ತು ಅನಂತಕೃಷ್ಣ ಮನೆಯ ಪತ್ರ ಬಿಡಿಸಿಕೊಳ್ಳಲು 40 ಲಕ್ಷ ಜೋಡಿಸಲು ಒದ್ದಾಟ ನಡೆಸುತ್ತಿದ್ದಾರೆ. ಯಾಕಂದ್ರೆ ಈ ವಿಷ್ಯ ಮನೆಯಲ್ಲಿ ಗೊತ್ತಾದ್ರೆ ರಾಮಾಯಣ ಆಗುತ್ತೆ ಅಂತ ಚಡಪಡಿಸುತ್ತಿದ್ದಾರೆ. ಆದ್ರೆ ದುಡ್ಡು ಜೋಡಿಸಲು ಆಗುತ್ತಿಲ್ಲ. ಆಗ ಸಿದ್ದು ಅತ್ತಿಗೆ ಮನೆ ಪತ್ರ ಕೊಡಿ ನಾನು ಸಾಲ ಕೊಡಿಸುತ್ತೇನೆ ಎಂದು ಹೇಳಿದ್ದಾಳೆ.
ಮನೆಯಲ್ಲಿ ಸತ್ಯ ಗೊತ್ತಾಗುತ್ತಾ?
ಸಂಗೀತಾ ಇದ್ದಕ್ಕಿದ್ದ ಹಾಗೇ ಮನೆ ಪತ್ರ ಕೇಳಿದ್ದಾಳೆ. ಅದನ್ನು ಕೇಳಿ, ಸಿದ್ದು ಶಾಕ್ ಆಗಿದ್ದಾನೆ. ಅನಂತಕೃಷ್ಣಗೆ ಏನು ಉತ್ತರ ಹೇಳಬೇಕು ಎಂದು ಗೊತ್ತಾಗದೇ ಸುಮ್ಮನೇ ನಿಂತಿದ್ದಾರೆ. ಮನೆಯಲ್ಲಿ ಮನೆ ಪತ್ರ ಇಲ್ಲದಿರುವುದು ಗೊತ್ತಾಗುತ್ತಾ? ಮನೆಯಲ್ಲಿ ಗಲಾಟೆ ಆಗುತ್ತಾ? ಏನು ಉತ್ತರ ಹೇಳಿ ಎಲ್ಲರನ್ನು ಸಮಾಧಾನ ಮಾಡ್ತಾರೋ ನೋಡಬೇಕು.
ಇದನ್ನೂ ಓದಿ: Actress Megha Shetty: ಸೀರೆಯುಟ್ಟು, ಕ್ಯಾಮೆರಾ ಕೈಲಿಡಿದ ಮೇಘಾ ಶೆಟ್ಟಿ, ಯಾರ್ ಫೋಟೋ ತೆಗೆಯುತ್ತಿರಬಹುದು?
ಸಿದ್ದುಗೆ ಜಗದೀಶ್ವರಿ ತೊಂದ್ರೆ ಕೊಡ್ತಾಳಾ? ಸಿದ್ದು ಮನೆಯಲ್ಲಿ ಸತ್ಯ ಗೊತ್ತಾಗುತ್ತಾ? ಎಲ್ಲ ಸಮಸ್ಯೆ ಹೇಗೆ ಬಗೆಹರಿಯುತ್ತೆ ಅಂತ ನೋಡೋಕೆ ಒಲವಿನ ನಿಲ್ದಾಣ ಸೀರಿಯಲ್ ವಾಚ್ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ