ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಲಕ್ಷಣ ಧಾರಾವಾಹಿ ನಾಯಕಿ ನಕ್ಷತ್ರಾ ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ (Father) ಚಂದ್ರಶೇಖರ್ ಮಾಡಿದ ಅವಾಂತರದಿಂದ ನಕ್ಷತ್ರಾ, ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ, ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ಚಂದ್ರಶೇಖರ್ ನಕ್ಷತ್ರಾ ಮತ್ತು ಶ್ವೇತಾಗೆ ಒಂದು ಟಾಸ್ಕ್ (Task) ನೀಡಿದ್ದಾರೆ. ದುಡ್ಡಿಲ್ಲ ಅಂದ್ರೂ ನಕ್ಷತ್ರಾ ಸ್ವಾಭಿಮಾನ ಬಿಡ್ತಾ ಇಲ್ಲ. ಶ್ವೇತಾ ಗೆಲ್ಲುವುದು ಖಚಿತನಾ?
ಶ್ವೇತಾ-ನಕ್ಷತ್ರಾಗೆ 500 ರೂಪಾಯಿ ಸವಾಲು
ನಾನು ನಿನಗೆ, ಶ್ವೇತಾಗೆ 500, 500 ರೂಪಾಯಿ ಕೊಡ್ತೀನಿ. ನಾಳೆ ಮನೆಯನ್ನು ನಿಮಗೆ ತಿಳದಿರುವ ರೀತಿಯಲ್ಲಿ ಈ ದುಡ್ಡಲ್ಲಿ ನಡೆಸಬೇಕು. ಮನೆಯ ಸಂಪೂರ್ಣ ಖರ್ಚು, ವೆಚ್ಚ ಈ ದುಡ್ಡಲ್ಲಿ ಮಾಡಬೇಕು. ಮನೆಯ ಪ್ರತಿಯೊಬ್ಬರಿಗೂ ಊಟ, ತಿಂಡಿ ಕೊಟ್ಟು ದಿನದ ಕೊನೆಯಲ್ಲಿ ಯಾರ ಬಳಿ ಹೆಚ್ಚು ದುಡ್ಡು ಇರುತ್ತೋ ಅವರಿಗೆ ಗೆಲುವು ಎಂದು ಚಂದ್ರಶೇಖರ್ ಹೇಳಿದ್ದಾರೆ. ಯಾರ ಬಳಿಯೂ ಸಾಲ ಮಾಡಬಾರದು. ಸಾಲ ಮಾಡಿದ್ರೆ ಸೋತಂತೆ ಎಂದು ಆರತಿ ಹೇಳಿದ್ದಾರೆ.
ಶಕುಂತಲಾ ದೇವಿ ಗೇಮ್ ಪ್ಲ್ಯಾನ್
ಚಂದ್ರಶೇಖರ್ ಕೊಟ್ಟ ಟಾಸ್ಕ್ ಕೇವಲ ನಕ್ಷತ್ರಾ, ಶ್ವೇತಾರಲ್ಲಿ ಯಾರು ಬೆಸ್ಟ್ ಅನ್ನುವುದು ಆಗಿತ್ತು. ಆದ್ರೆ ಶಕುಂತಲಾ ದೇವಿ ಗೇಮ್ ಪ್ಲ್ಯಾನ್ ಬದಲಾಯಿಸಿದ್ದಾಳೆ. ನೀವು ನಕ್ಷತ್ರಾ-ಶ್ವೇತಾಗೆ ಒಂದು ಟಾಸ್ಕ್ ನೀಡಿದ್ದೀರಿ. ನಕ್ಷತ್ರಾ ಗೆದ್ದರೆ, ನಾನು ಆಕೆಯನ್ನು ನಮ್ಮ ಮನೆ ಸೊಸೆ ಎಂದು ಒಪ್ಪಿಕೊಳ್ತೇನೆ. ಒಂದು ವೇಳೆ ಸೋತರೆ, ನೀವು ನಿಮ್ಮ ಮಗಳನ್ನು ಶಾಶ್ವತವಾಗಿ ನಿಮ್ಮ ಮನೆಗೆ ಕರೆದುಕೊಂಡು ಹೋಗಬೇಕು ಎಂದು ಹೇಳಿದ್ದಾರೆ. ಅದನ್ನು ಕೇಳಿ ಸಿಎಸ್ ಭಯಗೊಂಡಿದ್ದಾರೆ.
ದುಡ್ಡು ಕಳೆದುಕೊಂಡ ನಕ್ಷತ್ರಾ
ಕೊಟ್ಟ 500 ರೂಪಾಯಿ ತರಕಾರಿ ತರಲು ಮಾರ್ಕೆಟ್ಗೆ ಹೋಗಿದ್ದರು. ಆಗ ಡೆವಿಲ್ ಭಾರ್ಗವಿ ಹೇಳಿದಂತೆ, ಮಿಲ್ಲಿ ನಕ್ಷತ್ರಾಳ ದುಡ್ಡನ್ನು ಕದ್ದಿದ್ದಾಳೆ. ನಕ್ಷತ್ರಾ ದುಡ್ಡು ಕಾಣದೇ ಪರದಾಡುತ್ತಿದ್ದಾಳೆ. ಬೇರೆಯವರ ಬಳಿ ಸಾಲ ಮಾಡುವಂತಿಲ್ಲ. ಸಹಾಯ ಪಡೆಯುವಂತಿಲ್ಲ. ಆ ರೀತಿ ಮಾಡಿದ್ರೆ, ಸೋತಂತೆ. ಅದಕ್ಕೆ ನಕ್ಷತ್ರಾ ದುಡ್ಡು ಕಾಣದೇ ನಡೆದುಕೊಂಡೇ ಹೋಗುತ್ತಿದ್ದಾಳೆ.
ಇದನ್ನೂ ಓದಿ: Rupesh Shetty-Koragajja: ಬಿಗ್ ಬಾಸ್ ಗೆಲುವಿನ ಹಿಂದಿದೆಯಾ ಕೊರಗಜ್ಜನ ಕೃಪೆ? ದೈವದ ಮಹಿಮೆ ತೆರೆದಿಟ್ಟ ರೂಪೇಶ್ ಶೆಟ್ಟಿ!
ಶ್ವೇತಾಗೆ ಟಾಂಗ್, ಸ್ವಾಭಿಮಾನಿ ನಕ್ಷತ್ರಾ
ದುಡ್ಡು ಇಲ್ಲ. ಆಟೋಗೆ ಬಾಡಿಗೆ ಕೊಡಲು ಆಗಲ್ಲ ಹೇಗೆ ಹೋಗ್ತೀಯಾ. ಈ ಬಿಸಿಲಲ್ಲಿ ನಡೆದುಕೊಂಡು ಹೋಗ್ತೀಯಾ? ಕಪ್ಪು ಆಗಿ ಬಿಡ್ತೀಯಾ. ಆ ಟೆನ್ಶನ್ ನಿನಗೆ ಇಲ್ಲ ಬಿಡು ಎಂದು ಶ್ವೇತಾ ರೇಗಿಸುತ್ತಾಳೆ. ನಾನು ಬಿಸಿಲಲ್ಲಿ ಒಣಗಿದ್ರೂ, ಮಳೆಯಲ್ಲಿ ನೆಂದ್ರೂ ನಂದು ಒಂದೇ ಬಣ್ಣ ಕಪ್ಪು ಬಣ್ಣ.
ನನಗೆ ಆಗಲಿ, ನನ್ನ ಬಣ್ಣಕ್ಕೆ ಆಗಲಿ ಕ್ಷಣಕ್ಕೊಂದು ಬಣ್ಣ ಬದಲಾಯಿಸಿ ಅಭ್ಯಾಸ ಇಲ್ಲ. ನೀನು ಮನೆಯಲ್ಲಿ ಇದ್ದಾಗ ಒಂದು ಬಣ್ಣ, ಹೊರಗೆ ಬಂದ ಮೇಲೆ ಒಂದು ಬಣ್ಣ ಎಂದು ಶ್ವೇತಾಗೆ ನಕ್ಷತ್ರಾ ಹೇಳಿದ್ದಾಳೆ.
ನಡೆದುಕೊಂಡು ಹೋದ ನಕ್ಷತ್ರಾ
ಈ ಬಿಸಿಲು ನಾನು ಎಷ್ಟು ನೋಡಿಲ್ಲ. ನಾನು ನಿನ್ನ ರೀತಿ ಎಸಿ ಕಾರಲ್ಲಿ ಓಡಾಡಿ ಬೆಳೆದಿಲ್ಲ. ಆಟೋಗೆ 50 ರೂಪಾಯಿ ಕೊಡಬೇಕಾಗುತ್ತೆ ಅಂತ ನಡೆದುಕೊಂಡು ಹೋದ ಜನ ಕಣೇ ನಾವು. ಈ ಬೆಂಗಳೂರು ಬಿಸಿಲು, ಧೂಳು, ಇದ್ಯಾವುದು ಹೊಸದಲ್ಲ ನನಗೆ. ಈಗ ಸ್ವಲ್ಪ ಬದಲಾಗಿದೆ ಬಿಟ್ರೆ, ನಾನು ಹಳೆಯದು ಯಾವುದು ಮರೆತಿಲ್ಲ ಶ್ವೇತಾ. ಮೂಟೆ ಎತ್ತುವುದಕ್ಕೆ ಕೈ ಇದೆ. ಮನೆ ತಲುಪುವುದಕ್ಕೆ ಕಾಲು ಇದೆ. ಎಂದು ನಡೆದುಕೊಂಡು ಹೋಗಿದ್ದಾಳೆ.
ಇದನ್ನೂ ಓದಿ: Sameer Acharya: ಮಗು ಬದುಕಿದ್ದೇ ಪವಾಡ, ಕಣ್ಣೀರಿಟ್ಟ ಸಮೀರಾಚಾರ್ಯ!
ದುಡ್ಡು ಇಲ್ಲ ಅಂದ್ರೆ ನಕ್ಷತ್ರಾ ಗೆಲ್ಲಲ್ಲ. ಎಲ್ಲಾ ದುಡ್ಡು ಕಳೆದುಕೊಂಡಿದ್ದಾಳೆ. ಹಾಗಾದ್ರೆ ದುಡ್ಡು ಇರುವ ಶ್ವೇತಾ ಗೆಲ್ತಾಳಾ ನೋಡಬೇಕು. ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ