ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿ (Serial)ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಲಕ್ಷಣ ಧಾರಾವಾಹಿ ನಾಯಕಿ ನಕ್ಷತ್ರಾ ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಕ್ಷತ್ರಾ, ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ, ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ಈ ಮಧ್ಯೆ ಶಕುಂತಲಾ ದೇವಿ ನಕ್ಷತ್ರಾಳನ್ನು ಕೀಳಾಗಿ ಕಾಣುತ್ತಿದ್ದಾಳೆ. ಶ್ವೇತಾಳಿಗೆ ಹೆಚ್ಚು ಬೆಲೆ ಕೊಡ್ತಾ ಇದ್ದಾಳೆ. ಅದಕ್ಕೆ ಚಂದ್ರಶೇಖರ್ ನಕ್ಷತ್ರಾ ಮತ್ತು ಶ್ವೇತಾ ಒಂದು ಟಾಸ್ಕ್ (Task) ನೀಡಿದ್ದಾರೆ. ಈ ಗೆಲುವ ನಕ್ಷತ್ರಾ (Nakshatra) ಜೀವನವನ್ನೇ ಬದಲಾಯಿಸುತ್ತೆ.
ಶ್ವೇತಾ-ನಕ್ಷತ್ರಾಗೆ 500 ರೂಪಾಯಿ ಸವಾಲು
ನಾನು ನಿನಗೆ, ಶ್ವೇತಾಗೆ 500, 500 ರೂಪಾಯಿ ಕೊಡ್ತೀನಿ. ನಾಳೆ ಮನೆಯನ್ನು ನಿಮಗೆ ತಿಳದಿರುವ ರೀತಿಯಲ್ಲಿ ಈ ದುಡ್ಡಲ್ಲಿ ನಡೆಸಬೇಕು. ಮನೆಯ ಸಂಪೂರ್ಣ ಖರ್ಚು, ವೆಚ್ಚ ಈ ದುಡ್ಡಲ್ಲಿ ಮಾಡಬೇಕು.
ಮನೆಯ ಪ್ರತಿಯೊಬ್ಬರಿಗೂ ಊಟ, ತಿಂಡಿ ಕೊಟ್ಟು ದಿನದ ಕೊನೆಯಲ್ಲಿ ಯಾರ ಬಳಿ ಹೆಚ್ಚು ದುಡ್ಡು ಇರುತ್ತೋ ಅವರಿಗೆ ಗೆಲುವು ಎಂದು ಚಂದ್ರಶೇಖರ್ ಹೇಳ್ತಾರೆ. ಯಾರ ಬಳಿಯೂ ಸಾಲ ಮಾಡಬಾರದು. ಸಾಲ ಮಾಡಿದ್ರೆ ಸೋತಂತೆ ಎಂದು ಆರತಿ ಹೇಳ್ತಾಳೆ.
ಆಟದ ನಿಯಮ ಬದಲಾಯಿಸಿದ ಶಕುಂತಲಾ ದೇವಿ
ಚಂದ್ರಶೇಖರ್ ಕೊಟ್ಟ ಟಾಸ್ಕ್ ಕೇವಲ ನಕ್ಷತ್ರಾ, ಶ್ವೇತಾರಲ್ಲಿ ಯಾರು ಬೆಸ್ಟ್ ಅನ್ನುವುದು ಆಗಿತ್ತು. ಆದ್ರೆ ಶಕುಂತಲಾ ದೇವಿ ಗೇಮ್ ಪ್ಲ್ಯಾನ್ ಬದಲಾಯಿಸಿದ್ದಾಳೆ. ಶಕುಂತಲಾ ದೇವಿ ಹೇಳಿದ್ದನ್ನು ಕೇಳಿ ಚಂದ್ರಶೇಖರ್ ಆತಂಕಕ್ಕೆ ಒಳಗಾಗಿದ್ದಾನೆ. ನನ್ನ ಮಗಳ ಭವಿಷ್ಯ ಹೇಗೆ ಎಂದು ಚಿಂತೆ ಮಾಡುತ್ತಾ ಇದ್ದಾನೆ.
ಇದನ್ನೂ ಓದಿ: Deepika Das: ಬಿಗ್ ಬಾಸ್ನಿಂದ ಬಂದ ದೀಪಿಕಾ ದಾಸ್ ಮಾಡಿದ್ದೇನು?
ಶಕುಂತಲಾ ದೇವಿ ಹೇಳಿದ್ದೇನು?
ನೀವು ನಕ್ಷತ್ರಾ-ಶ್ವೇತಾಗೆ ಒಂದು ಟಾಸ್ಕ್ ನೀಡಿದ್ದೀರಿ. ನಕ್ಷತ್ರಾ ಗೆದ್ದರೆ, ನಾನು ಆಕೆಯನ್ನು ನಮ್ಮ ಮನೆ ಸೊಸೆ ಎಂದು ಒಪ್ಪಿಕೊಳ್ತೇನೆ. ಒಂದು ವೇಳೆ ಸೋತರೆ, ನೀವು ನಿಮ್ಮ ಮಗಳನ್ನು ಶಾಶ್ವತವಾಗಿ ನಿಮ್ಮ ಮನೆಗೆ ಕರೆದುಕೊಂಡು ಹೋಗಬೇಕು ಎಂದು ಹೇಳಿದ್ದಾರೆ. ಅದನ್ನು ಕೇಳಿ ಸಿಎಸ್ ಭಯಗೊಂಡಿದ್ದಾರೆ.
ನಕ್ಷತ್ರಾಗೆ ಧೈರ್ಯ ತುಂಬಿದ ಸಿಎಸ್
ನಾಳೆಯ ಗೆಲುವು ನಿನಗೆ ತುಂಬಾ ಮುಖ್ಯ ನಕ್ಷತ್ರಾ. ಅದು ನಿನ್ನ ಜೀವನದ ದಿಕ್ಕನ್ನೇ ಬದಲಾಯಿಸುತ್ತೆ. ಜೀವನದಲ್ಲಿ ಎಲ್ಲಾ ಸವಾಲುಗಳನ್ನು ಎದುರಿಸಿ ಇಲ್ಲಿವರೆಗೂ ಬಂದಿರುವ ನನ್ನ ಮಗಳು ನೀನು. ಈ ರೀತಿಯ ಚಿಕ್ಕ ವಿಷಯಕ್ಕೆ ಭಯಪಡಬಾರದು. ಮನಸ್ಸನ್ನು ಗಟ್ಟಿ ಮಾಡಿಕೋ. ನಮ್ಮ ಆಶೀರ್ವಾದ, ದೇವರ ಆಶೀರ್ವಾದ ನಿನ್ನನ್ನು ಕಾಯುತ್ತೆ ಎಂದು ಚಂದ್ರಶೇಖರ್ ನಕ್ಷತ್ರಾಗೆ ಧೈರ್ಯ ತುಂಬಿದ್ದಾರೆ.
ಟಾಸ್ಕ್ ಗೆದ್ದ ಸೊಸೆಯಾಗಿ ಉಳಿಯುತ್ತಾಳಾ?
ನಕ್ಷತ್ರಾಗೆ ಈ ಟಾಸ್ಕ್ ಸವಾಲಾಗಿದೆ. ಈ ಸವಾಲಿನಲ್ಲಿ ಗೆಲ್ಲಲೇ ಬೇಕಿದೆ. ಸೋತ್ರೆ ಭೂಪತಿ ಮತ್ತು ಗಂಡನ ಮನೆ ಎರಡು ಕಳೆದುಕೊಳ್ಳುತ್ತಾಳೆ. ತನ್ನ ಮಗಳು ಗೆಲ್ಲುತ್ತಾಳೆ ಎನ್ನುವ ವಿಶ್ವಾಸದಲ್ಲಿ ಸಿಎಸ್ ಈ ಚಾಲೆಂಜ್ ಗೆ ಒಪ್ಪಿಕೊಂಡಿದ್ದಾರೆ. ನಕ್ಷತ್ರಾ ಗೆಲ್ತಾಳಾ ನೋಡಬೇಕು.
ಇದನ್ನೂ ಓದಿ: Daali Dhananjay: ಡಾಲಿ ನಟನೆಗೆ ದಶಕದ ಸಂಭ್ರಮ, ನಟ ರಾಕ್ಷಸನಿಗೆ ಸ್ಪೆಷಲ್ ಟ್ರಿಬ್ಯೂಟ್!
ನಕ್ಷತ್ರಾ ಗೆದ್ದು ಗಂಡನ ಮನೆಯಲ್ಲಿ ಇರುತ್ತಾಳಾ? ಸೋತು ಅಪ್ಪನ ಮನೆ ಸೇರ್ತಾಳಾ? 500 ರೂಪಾಯಿಯಲ್ಲಿ ಮನೆ ನಿಭಾಯಿಸಲು ಆಗುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ