ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಲಕ್ಷಣ ಧಾರಾವಾಹಿ ನಾಯಕಿ ನಕ್ಷತ್ರಾ ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಕ್ಷತ್ರಾ, ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ, ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ (Nakshatra) ಕಂಡ್ರೆ ಆಗಲ್ಲ. ಈ ಮಧ್ಯೆ ಶಕುಂತಲಾ ದೇವಿ ನಕ್ಷತ್ರಾಳನ್ನು ಕೀಳಾಗಿ ಕಾಣುತ್ತಿದ್ದಾಳೆ. ಶ್ವೇತಾಳಿಗೆ ಹೆಚ್ಚು ಬೆಲೆ ಕೊಡ್ತಾ ಇದ್ದಾಳೆ. ಅದಕ್ಕೆ ಚಂದ್ರಶೇಖರ್ ನಕ್ಷತ್ರಾ ಮತ್ತು ಶ್ವೇತಾ ಒಂದು ಟಾಸ್ಕ್ ನೀಡಿದ್ದಾರೆ. ಟಾಸ್ಕ್ (Task) ಗೆಲ್ಲಲ್ಲು ನಕ್ಷತ್ರಾಗೆ ಚಿತ್ರಾನ್ನ ಸಹಾಯ ಮಾಡುತ್ತಾ?
500 ರೂಪಾಯಿಯ ಸವಾಲಿನ ಗೆಲುವು ಯಾರಿಗೆ?
ನಾನು ನಿನಗೆ, ಶ್ವೇತಾಗೆ 500, 500 ರೂಪಾಯಿ ಕೊಡ್ತೀನಿ. ನಾಳೆ ಮನೆಯನ್ನು ನಿಮಗೆ ತಿಳದಿರುವ ರೀತಿಯಲ್ಲಿ ಈ ದುಡ್ಡಲ್ಲಿ ನಡೆಸಬೇಕು. ಮನೆಯ ಸಂಪೂರ್ಣ ಖರ್ಚು, ವೆಚ್ಚ ಈ ದುಡ್ಡಲ್ಲಿ ಮಾಡಬೇಕು.
ಮನೆಯ ಪ್ರತಿಯೊಬ್ಬರಿಗೂ ಊಟ, ತಿಂಡಿ ಕೊಟ್ಟು ದಿನದ ಕೊನೆಯಲ್ಲಿ ಯಾರ ಬಳಿ ಹೆಚ್ಚು ದುಡ್ಡು ಇರುತ್ತೋ ಅವರಿಗೆ ಗೆಲುವು ಎಂದು ಚಂದ್ರಶೇಖರ್ ಹೇಳಿದ್ದರು. ಯಾರ ಬಳಿಯೂ ಸಾಲ ಮಾಡಬಾರದು. ಸಾಲ ಮಾಡಿದ್ರೆ ಸೋತಂತೆ ಎಂದು ಆರತಿ ಹೇಳಿರುತ್ತಾಳೆ.
ಮಣ್ಣು ಪಾಲಾದ ಊಟ
ನಕ್ಷತ್ರಾ ಸೌದೆ ಒಲೆಯಲ್ಲಿ ಬೇಗ ಬೇಗೆ ತಿಂಡಿ ಮಾಡಿ ಮನೆಯವರನ್ನು ಕರೆಯಲು ಹೋಗಿದ್ದಳು. ಅಷ್ಟರಲ್ಲಿ ಮಿಲ್ಲಿ ಬಂದ ಆ ಅನ್ನವನ್ನು ಚೆಲ್ಲಿ ಹೋಗಿದ್ದಾಳೆ. ಮಿಲ್ಲಿ ಭಾರ್ಗವಿಯ ಮಗಳು. ನಕ್ಷತ್ರಾ ಸೋಲಬೇಕು ಎಂದು ಈ ರೀತಿ ಮಾಡ್ತಾ ಇದ್ದಾಳೆ. ತಾನು ಮಾಡಿದ ಊಟ ಬಿದ್ದು ಹಾಳಾಗಿದ್ದನ್ನು ನೋಡಿ ನಕ್ಷತ್ರಾ ಅಳುತ್ತಾ ಕೂತಿದ್ದಾಳೆ. ಆಕೆಗೆ ಅವರ ತಂದೆ, ತಾಯಿ ಧೈರ್ಯ ತುಂಬಿದ್ದಾರೆ.
ಇದನ್ನೂ ಓದಿ: Olavina Nildana: ತಾರಿಣಿಗೆ ಕ್ಲಾಸ್ ತೆಗೆದುಕೊಂಡ ಸಿದ್ಧಾಂತ್ ಅಮ್ಮ! ಆಗಿದ್ದೇನು?
ಹೋಟೆಲ್ ತಿಂಡಿ ಬಡಿಸಿದ ಶ್ವೇತಾ
ಶ್ವೇತಾಗೆ ಅಡುಗೆ ಮಾಡಲು ಬರಲ್ಲ. ಅದಕ್ಕೆ ಆಕೆಗೆ ಮಿಲ್ಲಿ ಹೋಟೆಲ್ ನಿಂದ ತಿಂಡಿ ತಂದು ಕೊಟ್ಟಿದ್ದಾಳೆ. ಆಗ ನಕ್ಷತ್ರಾ ಬಂದು, ನಿಮ್ಮ ತಿಂಡಿ ಮುಗಿಯುವುದರೊಳಗೆ ನಾನು ನಿಮಗೆ ತಿಂಡಿ ಮಾಡಿ ಕೊಡ್ತೇನೆ ಎಂದು ಹೇಳಿ ಹೋಗ್ತಾಳೆ. ಆದ್ರೆ ಶಕುಂತಲಾ ದೇವಿ ಶ್ವೇತಾ ಬಡಿಸಿದ್ದನ್ನು ತಿಂದು, ತುಂಬಾ ಚೆನ್ನಾಗಿದೆ. ಈ ಗೆಲುವು ನಿನಗೆ ಖಚಿತ ಎನ್ನುತ್ತಾಳೆ.
ಚಿತ್ರಾನ್ನ ಮಾಡಿಕೊಂಡು ಬಂದ ನಕ್ಷತ್ರಾ
ನಕ್ಷತ್ರಾ ಬೇಗ ಬೇಗ ಚಿತ್ರಾನ್ನ ಮಾಡಿಕೊಂಡು ಬಂದಿದ್ದಾಳೆ, ಶ್ವೇತಾ ಇದನ್ನು ತಿನ್ನುವುದಾ ಎಂದು ಹೇಳುತ್ತಾಳೆ. ಅದಕ್ಕೆ ನಕ್ಷತ್ರಾ ಚಿತ್ರಾನ್ನದ ಮಹತ್ವ ತಿಳಿಸಿದ್ದಾಳೆ. ಅರ್ಧಕ್ಕರ್ಧ ಬೆಂಗಳೂರು, ಮೈಸೂರು ನಡೆಯುತ್ತಿರುವುದೇ ಈ ಚಿತ್ರಾನ್ನದಿಂದ. ಚಿತ್ರಾನ್ನ ಅದರ ಮಧ್ಯೆ ಸಿಗೋ ಕಡಲೆ ಬೀಜ, ಹುಳಿ, ಖಾರ ಟೇಸ್ಟ್ ಸ್ವರ್ಗದ ರೀತಿ ಇರುತ್ತೆ. ಚಿತ್ರಾನ್ನಕ್ಕೆ ಇನ್ನೊಂದು ವಿಶೇಷತೆ ಇದೆ. ಇದು ತಿಂಡಿಯೂ ಹೌದು. ಊಟವೂ ಹೌದು.
ಚಿತ್ರಾನ್ನವನ್ನು ಬಿಸಿಯಾಗಿ ಸಹ ತಿನ್ನಬಹುದು, ತಣ್ಣಗಿದ್ರೂ ತಿನ್ನಬಹುದು. ದೋಸೆಗೆ ಚಟ್ನಿ ಬೇಕು. ಪೂರಿಗೆ ಸಾಗು ಬೇಕು. ಪಲಾವ್ ಗೆ ಮೊಸರು ಬೇಕು, ಆದ್ರೆ ಚಿತ್ರಾನ್ನಕ್ಕೆ ಏನೂ ಇಲ್ಲ ಅಂದ್ರೂ ತಿನ್ನಬಹುದು. ಚಿತಾನ್ನಕ್ಕೆ ಬಡವರು, ಶ್ರೀಮಂತರ ಅಂತ ಇಲ್ಲ. ನಮಗೆ ಟೈಂ ಇಲ್ಲದಿದ್ದಾಗ, ಅನ್ನ ಮಿಕ್ಕಾಗ, ಟ್ರಿಪ್ ಹೋಗುವಗ ಚಿತ್ರಾನ್ನ ಬೆಸ್ಟ್. ಅಲ್ವಾ ಭೂಪತಿ ಎಂದು ತಮ್ಮ ಹಳೆಯ ದಿನಗಳನ್ನು ನೆನೆದಿದ್ದಾರೆ.
ಇದನ್ನೂ ಓದಿ: Punyavathi: ಕೊನೆಗೂ ಡ್ಯಾನ್ಸ್ ಮಾಡಿದ ಪದ್ಮಿನಿ, ಸಿಟ್ಟಾಗ್ತಾರಾ ವರನ ಕಡೆಯವರು?
ಈ ಟಾಸ್ಕ್ ಸೋತ್ರೆ ನಕ್ಷತ್ರಾ ತವರು ಮನೆಗೆ ಹೋಗಬೇಕಾಗುತ್ತೆ. ಚಿತ್ರಾನ್ನ ನಕ್ಷತ್ರಾಳನ್ನು ಗೆಲ್ಲಿಸುತ್ತಾ? ಶಕುಂತಲಾ ದೇವಿ ಸೊಸೆಯಾಗಿ ಉಳಿಯುತ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ