ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಲಕ್ಷಣ ಧಾರಾವಾಹಿ ನಾಯಕಿ ನಕ್ಷತ್ರಾ ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಕ್ಷತ್ರಾ, ಭೂಪತಿ ಮದುವೆ (Marriage) ಆಗೋ ಪರಿಸ್ಥಿತಿ ಬರುತ್ತೆ, ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗುತ್ತಿರಲಿಲ್ಲ. ಆದ್ರೆ ಈಗ ನಕ್ಷತ್ರಾಳನ್ನು ಸೊಸೆ ಎಂದು ಶಕುಂತಲಾ ದೇವಿ ಒಪ್ಪಿಕೊಂಡಿದ್ದಾರೆ. ಈ ಮದುವೆಯಲ್ಲಿ ನಕ್ಷತ್ರಾ ತಪ್ಪಿಲ್ಲ ಎಂದು ಭೂಪತಿಗೂ ಗೊತ್ತಾಗಿದೆ.
ನಕ್ಷತ್ರಾ ತಪ್ಪಿಲ್ಲ
ನಕ್ಷತ್ರಾಳನ್ನು ಭೂಪತಿಗೆ ಬಲವಂತವಾಗಿ ಚಂದ್ರಶೇಖರ್ ಮದುವೆ ಮಾಡಿಸಿರುತ್ತಾನೆ. ಅದರಲ್ಲಿ ನಕ್ಷತ್ರಾ ಪಾತ್ರ ಏನು ಇರುವುದಿಲ್ಲ. ಮೊದಲು ಮೌರ್ಯನು ತಪ್ಪು ತಿಳಿದುಕೊಂಡಿರುತ್ತಾನೆ. ಅದಕ್ಕೆ ನಕ್ಷತ್ರಾಳನ್ನು ಕೊಲ್ಲಲು ಓಡಾಡುತ್ತಿರುತ್ತಾನೆ. ನಂತರ ನಕ್ಷತ್ರಾ ಒಳ್ಳೆಯವರುಎಂದು ಗೊತ್ತಾಗಿ. ಬದಲಾಗಿದ್ದಾನೆ. ತನ್ನ ತಪ್ಪು ತಿದ್ದಿಕೊಂಡು ಒಳ್ಳೆಯವನಾಗಿದ್ದಾನೆ. ಅದನ್ನೇ ತನ್ನ ಅಣ್ಣ ಭೂಪತಿಗೂ ಹೇಳಿದ್ದಾನೆ.
ಭೂಪತಿಗೆ ಗೊತ್ತಾದ ಸತ್ಯ
ನಕ್ಷತ್ರಾ ಬಳಿ ಆಣೆ, ಪ್ರಮಾಣ ಮಾಡಿಸಿಕೊಂಡು ಸಿಎಸ್ ನಿನ್ನ ಜೊತೆ ಮದುವೆ ಆಗುವಂತೆ ಹೇಳಿರುತ್ತಾರೆ. ಅದಕ್ಕೆ ಆಕೆಯೂ ಒಪ್ತಾಳೆ. ಅಲ್ಲಿ ಆಕೆ ತಪ್ಪಿರಲ್ಲ. ಆದ್ರೆ ನೀನು ನಕ್ಷತ್ರಾ ಮೇಲೆ ಕೋಪ ಮಾಡಿಕೊಂಡಿದ್ದಿ. ಮಾಡದ ತಪ್ಪಿಗೆ ಹುಡುಗಿ ಶಿಕ್ಷೆ ಅನುಭವಿಸುತ್ತಿದ್ದಾಳೆ ಎಂದು ಮೌರ್ಯ ಭೂಪತಿಗೆ ಹೇಳ್ತಾನೆ.
ನಕ್ಷತ್ರಾ ಆಸೆ ಈಡೇರಿಸುತ್ತೇನೆ
ನಕ್ಷತ್ರಾ ತನ್ನ ತಪ್ಪು ಇಲ್ಲ ಅಂದ್ರೂ, ಒಂದು ದಿನವೂ ಕೋಪ ಮಾಡಿಕೊಂಡಿಲ್ಲ. ನಮ್ಮ ಮನೆಯವರನ್ನು ಚೆನ್ನಾಗಿ ನೋಡಿಕೊಂಡಿದ್ದಾಳೆ. ಅದಕ್ಕೆ ನಕ್ಷತ್ರಾಳ ಆಸೆಯನ್ನು ಈಡೇರಿಸಬೇಕು ಎಂದು ಆಕೆಯನ್ನು ಕೇಳುತ್ತಾನೆ. ಅದಕ್ಕೆ ಆಕೆ, ನಾನು, ನೀನು ಒಂದು ದಿನ ನಮ್ಮ ತಂದೆ ಮನೆಯಲ್ಲಿ ಉಳಿದುಕೊಳ್ಳೋಣ. ಮಗಳು-ಅಳಿಯನಾಗಿ. ಅವರಿಗೆ ತುಂಬಾ ಖುಷಿ ಆಗುತ್ತೆ ಎಂದು ಹೇಳಿದ್ದಾಳೆ. ಅದಕ್ಕೆ ಭೂಪತಿ ಒಪ್ಪಿಕೊಂಡಿದ್ದಾನೆ.
ಅಪ್ಪನ ಮನೆಗೆ ಬಂದ ನಕ್ಷತ್ರಾ-ಭೂಪತಿ
ನಕ್ಷತ್ರಾ-ಭೂಪತಿ ಮೊದಲ ಬಾರಿಗೆ ತುಂಬಾ ಖುಷಿಯಿಂದ ಚಂದ್ರಶೇಖರ್ ಮನೆಗೆ ಬಂದಿದ್ದಾರೆ. ಅದನ್ನು ನೋಡಿ ಸಿಎಸ್ ಮತ್ತು ಪತ್ನಿ ಆರತಿಗೆ ತುಂಬಾ ಖುಷಿಯಾಗಿದೆ. ಮಗಳು-ಅಳಿಯನನ್ನು ಪ್ರೀತಿಯಿಂದ ವೆಲ್ಕಮ್ ಮಾಡಿದ್ದಾರೆ. ರಾತ್ರಿಯಿಡಿ ಸಿಎಸ್ ಮತ್ತು ಆರತಿ ಖುಷಿಗೆ ಮಲಗೇ ಇಲ್ವಂತೆ. ಮಗಳ ಜೀವನ ಖುಷಿ ಆಯ್ತು ಎಂಬ ಸಂಭ್ರಮದಲ್ಲಿದ್ದಾರೆ.
ನಕ್ಷತ್ರಾ ಖುಷಿಗೆ ಕಲ್ಲು ಹಾಕ್ತಾಳಾ ಡೆವಿಲ್
ನಕ್ಷತ್ರಾ ಮತ್ತು ಎಲ್ಲರೂ ಖುಷಿಯಾಗಿದ್ದಾರೆ. ಅದಕ್ಕೆ ಡೆವಿಲ್ ಭಾರ್ಗವಿಗೆ ತುಂಬಾ ಕೋಪ ಬಂದಿದೆ. ಹೇಗಾದ್ರೂ ನನ್ನ ಅಣ್ಣ ಮತ್ತು ಅವನ ಮಗಳ ಖುಷಿಯನ್ನು ಹಾಳು ಮಾಡಬೇಕು ಎಂದು ಕಾಯ್ತಾ ಇದ್ದಾಳೆ. ಅಲ್ಲದೇ ಶ್ವೇತಾ ನನಗೆ ಭೂಪತಿಯನ್ನು ಮದುವೆ ಮಾಡಿಸು ಎಂದು ಗಂಟು ಬಿದ್ದಿದ್ದಾಳೆ. ಅದಕ್ಕೆ ಭಾರ್ಗವಿ ನಕ್ಷತ್ರಾ ಜೀವನವನ್ನು ಅಲ್ಲೋಲ ಕಲ್ಲೋಲ ಮಾಡೋಕೆ ರೆಡಿಯಾಗಿದ್ದಾಳೆ.
ನಕ್ಷತ್ರಾ ಖುಷಿ ಕೊನೆವರೆಗೂ ಇರುತ್ತಾ? ಭೂಪತಿ ಪ್ರೀತಿ ಮಾಡ್ತಾನಾ? ಡೆವಿಲ್ ಮುಂದಿನ ನಡೆ ಏನು? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ