ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಲಕ್ಷಣ ಧಾರಾವಾಹಿ ನಾಯಕಿ ನಕ್ಷತ್ರಾ. ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಕ್ಷತ್ರಾ, ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ. ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ಆದ್ರೆ ಇನ್ನೊಂದೆಡೆ ಸಿಎಸ್ ತಂಗಿ (Sisters) ಭಾರ್ಗವಿ, ತನ್ನ ಅಣ್ಣ ಮತ್ತು ಅವನ ಮಗಳು (Daughter) ನಕ್ಷತ್ರಾಗೆ ಕಾಟ ಕೊಡುತ್ತಿದ್ದಾಳೆ. ಶ್ವೇತಾಗೆ ಭಾರ್ಗವಿಯೇ ಡೆವಿಲ್ ಎಂದು ಗೊತ್ತಾಗಿದೆ. ಡೆವಿಲ್ ವಿಡಿಯೋ ಕಳಿಸಿ ಶ್ವೇತಾ ಆಟವಾಡುತ್ತಿದ್ದಾಳೆ.
ಸಿಎಸ್ ತಂಗಿಯೇ ಡೆವಿಲ್
ಭಾರ್ಗವಿಯೇ ಡೆವಿಲ್ ಎಂದು ಗೊತ್ತಾಗಿ ಶ್ವೇತಾಗೆ ಶಾಕ್ ಆಗಿದ್ದಳು. ಇಷ್ಟು ದಿನ ಈ ಡೆವಿಲ್ ನನ್ನನ್ನು ಮುಂದಿಟ್ಟುಕೊಂಡು ತನ್ನ ಅಣ್ಣ-ಅತ್ತಿಗೆಗೆ ತೊಂದ್ರೆ ಕೊಟ್ಟಿದ್ದಾಳೆ. ಅದಕ್ಕೆ ಇಷ್ಟು ದಿನ ನನ್ನನ್ನು ದಾಳವಾಗಿ ಮಾಡಿಕೊಂಡಿದ್ದಳು. ಇನ್ಮುಂದೆ ನಾನು ನಿನ್ನನ್ನು ಆಟವಾಡಿಸುತ್ತೇನೆ ಎಂದಿದ್ದಾಳೆ. ಅದಕ್ಕೆ ಭಾರ್ಗವಿ ಮಾತನಾಡುವಾಗ ಅದನ್ನು ವಿಡಿಯೋ ಮಾಡಿಕೊಂಡಿದ್ದಾಳೆ.
ಸತ್ಯ ಹೇಳ್ತೇನೆ ಎಂದ ಶ್ವೇತಾ
ಶ್ವೇತಾ ತನಗೆ ಎಲ್ಲಾ ಸತ್ಯ ಗೊತ್ತಾಗಿದೆ. ಸಾಕ್ಷಿಗಾಗಿ ವಿಡಿಯೋ ಮಾಡಿಕೊಂಡಿದ್ದೇನೆ. ಅದನ್ನು ಎಲ್ಲರ ಮುಂದೆ ಹೇಳ್ತೇನೆ. ನನಗೆ ತೊಂದ್ರೆ ಕೊಟ್ಟಿದ್ದೆ. ನಿನ್ನ ಮಾತ್ರ ಸುಮ್ಮನೇ ಬಿಡಲ್ಲ ಎಂದು ಶ್ವೇತಾ ಹೇಳ್ತಿದ್ದಾಳೆ. ಅದನ್ನು ಕೇಳಿ ಭಾರ್ಗವಿ ಗಾಬರಿಯಾಗಿದ್ದಾಳೆ. ಅಲ್ಲದೇ ಯಾರಿಗೂ ಹೇಳಬೇಡ. ನಿನ್ನನ್ನು ಕೊಲ್ಲುತ್ತೇನೆ ಎಂದು ಭಯಪಡಿಸುತ್ತಿದ್ದಾಳೆ. ಆದ್ರೆ ಶ್ವೇತಾ ಹೆದರಿಕೊಂಡಿಲ್ಲ.
ಡೆವಿಲ್ ವಿಡಿಯೋ ಪೆನ್ಡ್ರೈವ್ ನಲ್ಲಿ ಕಳಿಸಿದ ಶ್ವೇತಾ
ಡೆವಿಲ್ ಮಾತನಾಡಿದ್ದ ವಿಡಿಯೋವನ್ನು ಶ್ವೇತಾ ಸಿಎಸ್ ಮನೆಗೆ ಪೋಸ್ಟ್ ಮಾಡಿದ್ದಾಳೆ. ಅವರು ಅದನ್ನು ತೆಗೆದಾಗ ಡೆವಿಲ್ ಅಂತ ಪೆನ್ಡ್ರೈವ್ ಮೇಲೆ ತೆರೆದಿರುತ್ತೆ. ಅದಕ್ಕೆ ಅದನ್ನು ನೋಡಿ CS, ಭೂಪತಿ, ಆರತಿ, ನಕ್ಷತ್ರಾ ಎಲ್ಲ ಗಾಬರಿಯಾಗಿದ್ದಾರೆ. ಅದರಲ್ಲಿ ಏನಿದೆ ನೋಡಬೇಕು ಎಂದು ಎಲ್ಲರು ಕಾತುರರಾಗಿದ್ದಾರೆ. ಅದನ್ನು ಟಿವಿಗೆ ಹಾಕುತ್ತಿದ್ದಾರೆ.
ಸಿಎಸ್ ಮನೆ ಕರೆಂಟ್ ತೆಗೆದ ಡೆವಿಲ್
ಡೆವಿಲ್ಗೆ ಈ ವಿಚಾರ ಗೊತ್ತಾಗುತ್ತೆ ಪೆನ್ಡ್ರೈವ್ ನೋಡಿದ್ರೆ ಸಿಎಸ್ ಗೆ ಎಲ್ಲಾ ಸತ್ಯ ಗೊತ್ತಾಗುತ್ತೆ ಎಂದು ಗಾಬರಿಗೊಂಡಿದ್ದಾಳೆ. ಅದಕ್ಕೆ ಮನೆಯ ಕರೆಂಟ್ ತೆಗೆದಿದ್ದಾಳೆ. ಮಿಲ್ಲಿ ಕೈನಲ್ಲಿ ಯುಪಿಎಸ್ ಪವರ್ ಕಟ್ ಮಾಡಿಸಿದ್ದಾಳೆ. ಭೂಪತಿ ಇನ್ನೇನು ಟಿವಿ ಆನ್ ಮಾಡಬೇಕು. ಅಷ್ಟರಲ್ಲಿ ಕರೆಂಟ್ ಹೋಗುತ್ತೆ. ಬೇಕು ಅಂತ ಮಾಡಿದ್ದು ಎಂದು ಇವರಿಗೆ ಗೊತ್ತಾಗುತ್ತೆ.
ಲ್ಯಾಪ್ಟಾಪ್ ಹೈಡ್ ಮಾಡಿದ ಡೆವಿಲ್
ಭೂಪತಿ ಇದನ್ನು ಲ್ಯಾಪ್ಟಾಪ್ನಲ್ಲಿ ನೋಡೋಣ ಎಂದು ಹೇಳ್ತಾನೆ. ಅದನ್ನು ಕೇಳಿಸಿಕೊಂಡ ಭಾರ್ಗವಿ, ಲ್ಯಾಪ್ಟಾಪ್ ಹೈಡ್ ಮಾಡ್ತಾಳೆ. ತನ್ನ ಅಣ್ಣನ, ಮತ್ತು ತನ್ನ ಲ್ಯಾಪ್ಟಾಪ್ ಬಚ್ಚಿಡುತ್ತಾಳೆ. ಸಿಎಸ್ ಬಂದು ಎಲ್ಲ ಕಡೆ ಲ್ಯಾಪ್ಟಾಪ್ ಹುಡುಕುತ್ತಾನೆ. ಆದ್ರೆ ಸಿಗಲ್ಲ. ಆದ್ರೆ ಭೂಪತಿ ಲ್ಯಾಪ್ಟಾಪ್ ಇದೆ. ಅದನ್ನು ತೆಗೆದುಕೊಂಡು ನೋಡಲು ರೆಡಿಯಾಗಿದ್ದಾರೆ.
ಇದನ್ನೂ ಓದಿ: Bhagya Lakshmi: ವೈಷ್ಣವ್ ಮದುವೆ ನಿಲ್ಲಿಸ್ತಾಳಾ ಕೀರ್ತಿ? ಭಾಗ್ಯ-ಲಕ್ಷ್ಮಿ ಇಬ್ಬರಿಗೂ ಶುರುವಾಗಿದೆ ಅನುಮಾನ
ಭಾರ್ಗವಿ ಸತ್ಯ ಮನೆಯವರಿಗೆಲ್ಲಾ ತಿಳಿಯುತ್ತಾ? ಇಲ್ಲ ಅದನ್ನು ನೋಡದಂತೆ ಡೆವಿಲ್ ತಪ್ಪಿಸುತ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ