ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಧಾರಾವಾಹಿ (Serial) ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ. ಅಕ್ಕ-ತಂಗಿಯರ ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ತಂಗಿಗೆ ಅಕ್ಕ ಒಳ್ಳೆ ಹುಡುಗನನ್ನು ಮದುವೆ ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗ ಬೇಕಂತೆ. ನಟನ ಪಾತ್ರದಲ್ಲಿ ಶಮಂತ್ ಬ್ರೋ ಗೌಡ ವೈಷ್ಣವ್ ಆಗಿ ಅಭಿನಯಿಸುತ್ತಿದ್ದಾರೆ. ವೈಷ್ಣವ್ ಮತ್ತು ಕೀರ್ತಿ ದೂರ ಆಗಿದ್ದಾರೆ. ಕಾವೇರಿ ಲಕ್ಷ್ಮಿ-ವೈಷ್ಣವ್ಗೆ ಮದುವೆ (Marriage) ಮಾಡಲು ನಿರ್ಧಾರ ಮಾಡಿದ್ದಾಳೆ.
ಕೀರ್ತಿ-ವೈಷ್ಣವ್ ಬ್ರೇಕ್ ಅಪ್
ಕಾವೇರಿ ಮಗ ವೈಷ್ಣವ್ ಕೀರ್ತಿಯನ್ನು ಪ್ರೀತಿ ಮಾಡ್ತಾ ಇದ್ದ. ಆದ್ರೆ ಕಾವೇರಿಗೆ ಕೀರ್ತಿ ಸೊಸೆಯಾಗಿ ಬರುವುದು ಇಷ್ಟ ಇಲ್ಲ. ಆದ್ರೆ ಮಗನ ಆಸೆಯಂತೆ ಕೀರ್ತಿ ಜೊತೆ ಎಂಗೇಜ್ಮೆಂಟ್ ಮಾಡಲು ಒಪ್ಪಿಕೊಂಡಿದ್ದಳು. ಎಲ್ಲಾ ತಯಾರಿ ಆಗಿತ್ತು. ಆದ್ರೆ ಕೀರ್ತಿ ನಿಶ್ಚಿತಾರ್ಥ ಬೇಡ ಎಂದು ಬಿಟ್ಟಳು ಕಾರಣವೇ ನೀಡದೇ ವೈಷ್ಣವ್ ಜೊತೆ ಬ್ರೇಕ್ ಅಪ್ ಮಾಡಿಕೊಂಡಳು.
ಕೀರ್ತಿ ಕಾಲಿಡಿದ್ರೂ ಕರಗಲಿಲ್ಲ ಮನಸ್ಸು
ವೈಷ್ಣವ್ ತನ್ನನ್ನು ಕೀರ್ತಿ ಏಕೆ ಬೇಡ ಅಂದಳು ಎಂದು ಕಾರಣ ತಿಳದುಕೊಳ್ಳಲು ಸಾಯುವ ನಾಟಕ ಮಾಡಿರುತ್ತಾನೆ. ಅದಕ್ಕೆ ಕಾವೇರಿ ಕೀರ್ತಿ ಕಾಲಿಡಿದು ಮಗನನ್ನು ಬದುಕಿಸಿ ಕೊಡು ಎಂದು ಕೇಳ್ತಾಳೆ. ಅದಕ್ಕೆ ಕೀರ್ತಿ ಕಾಲಿನಿಂದಲೇ ಕಾವೇರಿಯನ್ನು ಒದೆಯುತ್ತಾಳೆ. ನಿಮ್ಮ ಮಗ ಬದುಕಿದ್ರೆ ಏನು, ಸತ್ತರೆ ಏನು? ನನಗೂ ಅದಕ್ಕೆ ಸಂಬಂಧ ಇಲ್ಲ ಎನ್ನುತ್ತಾಳೆ.
ಬದಲಾದ ವೈಷ್ಣವ್
ಯಾವಾಗ ಕೀರ್ತಿ ತನ್ನ ಅಮ್ಮನಿಗೆ ಗೌರವ ಕೊಡಲಿಲ್ವೋ ಆಗಲೇ ವೈಷ್ಣವ್ ಬದಲಾಗಿದ್ದಾನೆ. ನೀನು ಏನ್ ಬಿಟ್ಟು ಹೋಗುವುದು. ನಾನೇ ನಿನ್ನ ಬಿಟ್ಟು ಹೋಗ್ತೇನೆ ಎಂದು ಹೇಳಿದ್ದಾನೆ. ಅಮ್ಮನ ಬಳಿ ಅತ್ತು, ಜಗತ್ತಿನಲ್ಲಿ ಅಮ್ಮ-ಅಪ್ಪನ ಪ್ರೀತಿ ಮುಂದೇ ಏನೂ ಇಲ್ಲ. ನಾನು ನೀವು ತೋರಿಸಿದ ಹುಡುಗಿಯನ್ನು ಮದುವೆ ಆಗ್ತೀನಿ ಎಂದು ಹೇಳಿದ್ದಾನೆ. ಅದಕ್ಕೆ ಕಾವೇರಿಗೆ ಖುಷಿ ಆಗಿದೆ.
ವೈಷ್ಣವ್-ಲಕ್ಷ್ಮಿ ಮದುವೆ ಮಾತು
ಕಾವೇರಿ ವೈಷ್ಣವ್ ಮದುವೆಗೆ ಒಪ್ಪಿದ್ದೇ ತಡ, ಇನ್ನು ಲೇಟ್ ಮಾಡಲ್ಲ. ನಮ್ಮ ಭಾಗ್ಯಾಳ ತಂಗಿ ಲಕ್ಷ್ಮಿಯನ್ನು ನನ್ನ ಮಗ ವೈಷ್ಣವ್ ಗೆ ಮದುವೆ ಮಾಡಿಕೊಳ್ತೇನೆ ಎಂದು ಕಾವೇರಿ ಮನೆಯಲ್ಲಿ ಹೇಳಿದ್ದಾಳೆ. ಎಲ್ಲರೂ ಖುಷಿಯಿಂದ ಒಪ್ಪಿಕೊಂಡಿದ್ದಾರೆ. ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.
ಲಕ್ಷ್ಮಿ ಮದುವೆಗೆ ಒಪ್ತಾಳಾ?
ಲಕ್ಷ್ಮಿಗೆ ಭಾಗ್ಯ ಒಳ್ಳೆ ಹುಡುಗನನ್ನು ಹುಡುಕುತ್ತಿದ್ದಾಳೆ. ಈ ನಡುವೆ ಕುಸುಮಾ ನಿನ್ನ ತಂಗಿಗೆ ಒಳ್ಳೆ ಗಂಡು ನೋಡಿದ್ದೆ ಎಂದು ಹೇಳಿದ್ದಾಳೆ. ಅದು ವೈಷ್ಣವ್. ಹಾಗಾದ್ರೆ ಲಕ್ಷ್ಮಿ ಸಹ ವೈಷ್ಣವ್ ನನ್ನು ಮದುವೆ ಆಗಲು ಒಪ್ತಾಳಾ ನೋಡಬೇಕು. ಆದ್ರೆ ಲಕ್ಷ್ಮಿ ಚಿಕ್ಕಮ್ಮ ಈಕಗೆ ಮದುವೆ ಮಾಡಿದ್ರೆ ನಮ್ಮ ಜೀವನ ನಡೆಯಲ್ಲ ಎನ್ನುತ್ತಿದ್ದಾಳೆ.
ಇದನ್ನೂ ಓದಿ: Ramachari: ಚಾರುಗೆ ಶಾಶ್ವತವಾಗಿ ಕಣ್ಣು ಬರಲ್ವಾ? ಕಣ್ಣೀರಿಡುತ್ತಿದ್ದಾನೆ ರಾಮಾಚಾರಿ!
ವೈಷ್ಣವ್-ಲಕ್ಷ್ಮಿ ಮದುವೆ ನಡೆಯುತ್ತಾ? ಲಕ್ಷ್ಮಿ ಈ ಮದುವೆಗೆ ಒಪ್ತಾಳಾ? ಭಾಗ್ಯ ನಡೆ ಏನು? ಎಲ್ಲವನ್ನೂ ನೋಡಲು ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ