• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Rajinikanth: `ತಲೈವಾ’ ಸಿನಿಮಾಗೆ ದುಡ್ಡು ಹಾಕಲ್ಲ ಎಂದ ಬೋನಿ ಕಪೂರ್​.. ಟ್ರೋಲರ್ಸ್​ ಕೈಲಿ ಸಿಕ್ಕಿ ಫುಲ್​ ರೋಸ್ಟ್​!

Rajinikanth: `ತಲೈವಾ’ ಸಿನಿಮಾಗೆ ದುಡ್ಡು ಹಾಕಲ್ಲ ಎಂದ ಬೋನಿ ಕಪೂರ್​.. ಟ್ರೋಲರ್ಸ್​ ಕೈಲಿ ಸಿಕ್ಕಿ ಫುಲ್​ ರೋಸ್ಟ್​!

ಬೋನಿ ಕಪೂರ್​, ರಜನಿಕಾಂತ್​

ಬೋನಿ ಕಪೂರ್​, ರಜನಿಕಾಂತ್​

ರಜನಿಕಾಂತ್ ಸಿನಿಮಾ ಒಂದು ವೇಳೆ ಹಿಟ್ ಆಗಲಿಲ್ಲ ಅಂದರೆ, ನಷ್ಟವನ್ನು ಸೂಪರ್ ಸ್ಟಾರ್​ ರಜನಿಕಾಂತ್ ಅವರೇ ತುಂಬಿಕೊಡುತ್ತಾರೆ. ನಿರ್ಮಾಪಕ ಅನ್ನ ಹಾಕುವ ದೇವರು, ಅವರಿಗೆ ನಷ್ಟ ಆಗಬಾರದು ಎನ್ನುವುದು ರಜನಿ ಮಾತು.

  • Share this:

ಸೂಪರ್ ಸ್ಟಾರ್(Super Star) ರಜಿನಿಕಾಂತ್ ಅಂದರೆ ಭಾರತೀಯ ಚಿತ್ರರಂಗ(Indian Cinema Industry)ದ ಧ್ರುವತಾರೆ(Polar Star). ಭಾರತವಷ್ಟೇ ಅಲ್ಲದೇ ವಿದೇಶಗಳಲ್ಲೂ ಮೊದಲ ಬಾರಿಗೆ ಕ್ರೇಜ್ (Craze)​ ಹುಟ್ಟಿಸಿದ ಭಾರತೀಯ ನಟ ಅಂದರೆ, ಅದೇ ತಲೈವಾ ರಜಿನಿಕಾಂತ್ (Rajinikanth)​. ಇವರ ಸಿನಿಮಾ ರಿಲೀಸ್​ ಇರಲಿ, ಹೊಸ ಸಿನಿಮಾ ಸೆಟ್ಟೇರಿದರೂ ಸಾಕು ಅವರ ಅಭಿಮಾನಿಗಳು ಹಬ್ಬ(Festival)ವನ್ನೇ ಮಾಡುತ್ತಾರೆ. ಕೇವಲ ಫ್ಯಾನ್ಸ್​ ಅಷ್ಟೇ ಅಲ್ಲ ನಿರ್ಮಾಪಕರು(Producers) ಕೂಡ ತಲೈವಾ ಜೊತೆ ಸಿನಿಮಾ ಮಾಡಲು ಕ್ಯೂನಲ್ಲಿ ನಿಂತಿರುತ್ತಾರೆ.  ರಜನಿಕಾಂತ್​ ಕಾಲ್​​ಶೀಟ್(Call Sheet)​ಗಾಗಿ ಮನೆ ಬಾಗಿಲಲ್ಲೇ ಕಾಯುತ್ತಿರುತ್ತಾರೆ. ಯಾಕೆ ಗೊತ್ತಾ? ರಜನಿಕಾಂತ್ ಸಿನಿಮಾ ಒಂದು ವೇಳೆ ಹಿಟ್ ಆಗಲಿಲ್ಲ ಅಂದರೆ, ನಷ್ಟವನ್ನು ಸೂಪರ್ ಸ್ಟಾರ್​ ರಜನಿಕಾಂತ್ ಅವರೇ ತುಂಬಿಕೊಡುತ್ತಾರೆ. ನಿರ್ಮಾಪಕ ಅನ್ನ ಹಾಕುವ ದೇವರು(God), ಅವರಿಗೆ ನಷ್ಟ ಆಗಬಾರದು ಎನ್ನುವುದು ರಜನಿ ಮಾತು. ಇದಕ್ಕೋಸ್ಕರವೇ ರಜನಿ ಜೊತೆ ಸಿನಿಮಾ ಮಾಡಲು ತಾ ಮುಂದೆ ನಾ ಮುಂದೆ ಎನ್ನುತ್ತಾರೆ ನಿರ್ಮಾಪಕರು.


ರಜನಿ ಸಿನಿಮಾ ರಿಜೆಕ್ಟ್ ಮಾಡಿದ ಬೋನಿ ಕಪೂರ್​!


ಹೌದು, ರಜನಿಕಾಂತ್​ ತಮ್ಮ 170 ನೇ ಸಿನಿಮಾವನ್ನುಅರುಣ್ ರಾಜ ಕಾಮರಾಜ್ ಜೊತೆ ಮಾಡಲಿದ್ದಾರೆ ಎಂಬ ಮಾಹಿತಿ ದೊರೆತಿದೆ.ಈ ಸಿನಿಮಾಗೆ ಬಾಲಿವುಡ್​ನ ಖ್ಯಾತ ನಿರ್ಮಾಪಕ ಬೋನಿ ಕಪೂರ್​ ಬಂಡವಾಳ ಹೂಡುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ, ಈಗ ಶಾಕಿಂಗ್​ ಸುದ್ದಿಯೊಂದು ಹರಿದಾಡುತ್ತಿದೆ. ನಾಯಕ ನಟರು ಸಿನಿಮಾ ರಿಜೆಕ್ಟ್ ಮಾಡುವುದನ್ನು ಕೇಳಿದ್ದೀರಾ.. ನೋಡಿದ್ದೀರಾ.. ಆದರೆ, ಇಲ್ಲಿ ಉಲ್ಟಾ ಆಗಿದೆ. ರಜನಿಕಾಂತ್​ ಸಿನಿಮಾವನ್ನೇ ಬೋನಿ ಕಪೂರ್ ರಿಜೆಕ್ಟ್​ ಮಾಡಿದ್ದಾರೆ.


ಟ್ವೀಟ್​ ಮಾಡಿ ಸ್ಪಷ್ಟನೆ ಕೊಟ್ಟ ಬೋನಿ ಕಪೂರ್​!


ನಾನು, ರಜನಿಕಾಂತ್​ ಅವರು ತುಂಬಾ ಒಳ್ಳೆ ಸ್ನೇಹಿತರು. ನಾವು ಸಿಕ್ಕಾಗೆಲ್ಲ ಸಿನಿಮಾ ಬಗ್ಗೆಯೆ ಮಾತನಾಡುತ್ತೇವೆ. ಒಂದು ವೇಳೆ ಇಬ್ಬರು ಒಟ್ಟಿಗೆ ಸಿನಿಮಾ ಮಾಡುವುದಾದರೆ, ಮೊದಲಿಗೆ ನಾನೇ ನಿಮಗೆ ತಿಳಿಸುತ್ತೆನೆ ಎಂದು ಬೋನಿ ಕಪೂರ್​ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್​ ಕಂಡು ರಜನಿ ಫ್ಯಾನ್ಸ್​ ಫುಲ್​ ಗರಂ ಆಗಿದ್ದಾರೆ. ಈ ಟ್ವೀಟ್​ ಇಟ್ಟುಕೊಂಡು ಹಲವಾರು ರೀತಿಯಲ್ಲಿ ಟ್ರೋಲ್ ಮಾಡುತ್ತಿದ್ಧಾರೆ.



ಇದನ್ನೂ ಓದಿ: ಮತ್ತೊಬ್ಬ ಯುವ ನಿರ್ದೇಶಕನಿಗೆ ಕಾಲ್​ಶಿಟ್​ ಕೊಟ್ಟ ರಜನಿಕಾಂತ್​.. ಇದು ಬೇರೆ ಲೆವೆಲ್​ ಸಿನಿಮಾ ಅಂತೆ!


ತಲೈವಾರ್​ 170ಗೆ ಅರುಣ್ ರಾಜ್​ ಕುಮಾರ್ ನಿರ್ದೇಶನ


ರಜನಿಕಾಂತ್​ ಅವರ 170ನೇ ಸಿನಿಮಾಗೆ ಅರುಣ್​ ರಾಜ ಕಾಮರಾಜ್​ ಆ್ಯಕ್ಷನ್​ ಕಟ್​ ಹೇಳುವುದು ಬಹುತೇಕ ಫೈನಲ್​ ಆಗಿದೆ. ಈ ಹಿಂದೆ ನಾಯಕಿ ಪ್ರಧಾನ ಸಿನಿಮಾವಾದ ‘ಕನಾ’ ಸಿನಿಮಾವನ್ನು ಕಾಮರಾಜ್​ ನಿರ್ದೇಶನ ಮಾಡಿದ್ದರು. ಇದಾದ ಬಳಿಕ ‘ನೆಂಜುಕು ನೀಧಿ’ ಎಂಬ ಸಿನಿಮಾವನ್ನು ಡೈರೆಕ್ಟ್ ಮಾಡಿದ್ದರು. ಜೊತೆಗೆ ಅರುಣ್​ ರಾಜ್​ ಕಾಮರಾಜ್​ ಹಾಡುಗಾರ ಕೂಡ ಹೌದು, ಡಿಮೇಟ್​ ಕಾಲೋನಿ ಸಿನಿಮಾದಲ್ಲಿ ಹಾಡಿದ್ದಾರೆ. ಇದೀಗ ರಜನಿಕಾಂತ್ ಅವರ ಮುಂದಿನ ಸಿನಿಮಾಗೆ ನಿರ್ದೇಶನ ಮಾಡಲಿದ್ದಾರೆ.



ಇದನ್ನೂ ಓದಿ: `ಬೀಸ್ಟ್​’ ನಿರ್ದೇಶಕನ ಜೊತೆ ರಜನಿಕಾಂತ್​​ ನೆಕ್ಸ್ಟ್​​​ ಸಿನಿಮಾ.. ತಲೈವಾಗೆ ಹೇಳಿ ಮಾಡಿಸಿದ ಕಥೆಯಂತೆ!


ಬೋನಿ ಕಪೂರ್​ ನಿರ್ಮಾಣದ ಸಿನಿಮಾ ‘ವಲಿಮೈ’


ಇನ್ನೂ ಬೋನಿ ಕಪೂರ್​ ಯಾವಾಗ ರಜನಿ ಜೊತೆ ಸಿನಿಮಾ ಮಾಡುತ್ತಿಲ್ಲ ಎಂದಿದ್ದಾರೋ ಫುಲ್​ ಟ್ರೋಲ್​ ಆಗುತ್ತಿದ್ದಾರೆ. ನಾಳೆ ಅಜಿತ್​ ನಟನೆಯ ಬೋನಿ ಕಪೂರ್ ನಿಮಾರ್ಣದ ‘ವಲಿಮೈ’ ಸಿನಿಮಾ ತೆರೆಕಾಣುತ್ತಿದೆ. ‘ಆ ಸಿನಿಮಾಗೆ ನೀವು ದುಡ್ಡು ಹಾಕುತ್ತೀರಾ. ರಜನಿ ಸಿನಿಮಾಗೆ ಹಾಕಲ್ವಾ?’ ಎಂದು ಸೂಪರ್ ಸ್ಟಾರ್​ ರಜನಿಕಾಂತ್​ ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ

Published by:Vasudeva M
First published: