ಇತ್ತೀಚೆಗೆ ಕೊರೋನಾ ವಿರುದ್ಧ ಹೋರಾಟದ ಸಲುವಾಗಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮುಂಬೈ ಪೊಲೀಸ್ ಫೌಂಡೇಷನ್ಗೆ 2 ಕೋಟಿ ರೂಪಾಯಿ ದೇಣಿಗೆ ನೀಡಿದ್ದರು. ಇದೀಗ ಕೊರೋನಾ ಸೋಂಕಿತರನ್ನು ಪತ್ತೆ ಹಚ್ಚುವ ಬ್ಯಾಂಡ್ವೊಂದನ್ನು ಮುಂಬೈ ಪೊಲೀಸರಿಗೆ ವಿತರಿಸಿದ್ದಾರೆ.
ಕೊರೋನಾ ವಿರುದ್ಧ ಮುಂಬೈ ಪೊಲೀಸರು ಹಗಲು ರಾತ್ರಿಯೆನ್ನದೆ ದುಡಿಯುತ್ತಿದ್ದಾರೆ. ಹಾಗಾಗಿ ಕೊರೋನಾ ಬಗ್ಗೆ ಹೆಚ್ಚು ಜಾಗೃತೆ ವಹಿಸಲು ಮತ್ತು ತಾಂತ್ರಿಕವಾಗಿ ರೋಗದ ಲಕ್ಷಣವನ್ನು ಪತ್ತೆ ಹಚ್ಚುವಂತಹ ಬ್ಯಾಂಡ್ ಅನ್ನು ಅಕ್ಷಯ್ ಕುಮಾರ್ ಮುಂಬೈ ಪೊಲೀಸ್ ಸಿಬ್ಬಂಧಿಗೆ ವಿತರಿಸಿದ್ದಾರೆ. ಕೈಗೆ ಕಟ್ಟುವ ಬ್ಯಾಂಡ್ ಇದಾಗಿದ್ದು, ಸುಮಾರು 1 ಸಾವಿರಕ್ಕೂ ಅಧಿಕ ಸಾಧನವನ್ನು ಅವರಿಗೆ ವಿತರಿಸಿದ್ದಾರೆ.
ಅಕ್ಷಯ್ ಕುಮಾರ್ ನೀಡಿರುವ ಬ್ಯಾಂಡ್ ಜರ್ಮನ್ ಮೂಲದ್ದಾಗಿದ್ದು, ಅಲ್ಲಿನ ಸ್ಟಾರ್ಟ್ಅಪ್ ಕಂಪೆನಿಯೊಂದು ರಿಸ್ಟ್ ಬ್ಯಾಂಡ್ ಅನ್ನು ತಯಾರಿಸಿದೆ. ಈ ಬ್ಯಾಂಡ್ ಜಿಒಕ್ಯೂಐಐ ಜತೆಗೆ ಪಾಲುದಾರಿಕೆಯನ್ನು ಹೊಂದಿದೆ. ಅಕ್ಷಯ್ ಕುಮಾರ್ ಜಿಒಕ್ಯೂಐಐ ಸಂಸ್ಥೆಯ ರಾಯಭಾರಿಯಾಗಿದ್ದಾರೆ. ಹಾಗಾಗಿ ಮುಂಬೈ ಪೊಲೀಸ್ ಸಿಬ್ಬಂಧಿಗಳ ಆರೋಗ್ಯದ ವಿಚಾರವಾಗಿ ಮತ್ತು ಕೊರೋನಾ ಸೋಂಕನ್ನು ಪತ್ತೆ ಹಚ್ಚುವ ಸಲುವಾಗಿ ರಿಸ್ಟ್ ಬ್ಯಾಂಡ್ ಅನ್ನು ನೀಡಿದ್ದಾರೆ.
ಇನ್ನು ಅಕ್ಷಯ್ ಕುಮಾರ್ ನೀಡಿರುವ ಈ ಸಾಧನದ ಮೂಲಕ ವ್ಯಕ್ತಿಯ ದೇಹದ ಉಷ್ಣತೆ, ಹೃದಯ ಬಡಿತ, ರಕ್ತದ ಒತ್ತಡ, ಕ್ಯಾಲೊರಿ ಬಗ್ಗೆ ಮಾಹಿತಿಯನ್ನು ನೀಡಲಿದೆ. ಕೊರೋನಾ ರೋಗದ ಲಕ್ಷಣ ಕಂಡು ಬಂದರೆ ಈ ರಿಸ್ಟ್ ಬ್ಯಾಂಡ್ ಮೂಲಕ ಗೊತ್ತಾಗಲಿದೆ.
ಕೊರೋನಾ ವಿರುದ್ಧ ಹೋರಾಟಕ್ಕೆ ಕೈ ಜೋಡಿಸುವ ಮೂಲಕ ಅಕ್ಷಯ್ ಕುಮಾರ್ ಪಿಎಂ ಕೇರ್ಸ್ಗೆ 25 ಕೋಟಿ ರೂಪಾಯಿಯನ್ನು ದೇಣಿಯಾಗಿ ನೀಡಿದ್ದರು. ಮುಂಬೈ ಮುನಿಸಿಪಾಲಿಟಿಗೆ 3 ಕೋಟಿ ರೂಪಾಯಿಯನ್ನು, ಮುಂಬೈ ಪೊಲೀಸ್ ಫೌಂಡೇಷನ್ಗೆ 2 ಕೋಟಿ ರೂಪಾಯಿಯನ್ನು ನೀಡಿದ್ದರು. ಇದೀಗ ಪೊಲೀಸ್ ಸಿಬ್ಬಂಧಿಗಾಗಿ 1000ಕ್ಕೂ ಅಧಿಕ ರಿಸ್ಟ್ ಬ್ಯಾಂಡ್ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
PayTM: ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ ಹಣ; ನೂತನ ಕಾರ್ಯಕ್ಕೆ ಮುಂದಾದ ಪೇಟಿಎಂ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ