ಬಿಗ್ ಬಾಸ್ ಸೀಸನ್ 8ರ ಫಿನಾಲೆಗೆ ಇನ್ನು ಕೆಲವೇ ಕೆಲವು ದಿನಗಳು ಬಾಕಿ ಉಳಿದಿವೆ. ಹೀಗಿರುವಾಗಲೇ ಬಿಗ್ ಬಾಸ್ ಮನೆಯಲ್ಲಿ ಮೊದಲು ಇದ್ದ ತಮಾಷೆ ಹಾಗೂ ಖುಷಿಯ ವಾತಾವರಣ ಕ್ರಮೇಣ ಕಡಿಮೆಯಾಗುತ್ತಿದೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ಒಂದೇ ಒಂದು ವಾರ ಮಾತ್ರ ಕೂಗಾಡದೆ, ಜಗಳವಾಡದೆ ಇದ್ದ ಪ್ರಶಾಂತ್ ಅವರು ಈಗ ಮತ್ತೆ ಮನೆಯಲ್ಲಿ ಕೂಗಾಡ ಆರಂಭಿಸಿದ್ದಾರೆ. ಆದರೆ, ಅದರ ಜೊತೆಗೆ ಸಹ ಸ್ಪರ್ಧಿಗಳಿಗೆ ಸಖತ್ತಾಗಿಯೇ ಕಾಟ ಕೊಡುತ್ತಿದ್ದಾರೆ. ಅಂದರೆ ಸಹ ಸ್ಪರ್ಧಿಗಳ ಜೊತೆ ಪ್ರಶಾಂತ್ ಸಂಬರಗಿ ಮಾಡುತ್ತಿರುವ ತುಂಟಾಟ ಕೊಂಚ ಹೆಚ್ಚಾಗುತ್ತಿದೆ. ಈ ಹಿಂದೆ ಶಮಂತ್, ಚಕ್ರವರ್ತಿ ಅವರಿಗೆ ಮಾತ್ರ ಮೀಸಲಾಗಿದ್ದ ಈ ತುಂಟಾಟ ಈಗ ಬೇರೆ ಸ್ಪರ್ಧಿಗಳನ್ನೂ ತಲುಪುತ್ತಿದೆ. ಪ್ರಶಾಂತ್ ಅವರು ಜಗಳ ಆಡುವುದನ್ನು ನೋಡಿದ್ದ ಪ್ರೇಕ್ಷಕರಿಗೆ ಅವರ ಈ ತುಂಟತನದ ಮುಖ ಸಹ ಈಗ ಕಾಣಿಸುತ್ತಿದೆ.
ಹೌದು, ಪ್ರಶಾಂತ್ ಸಂಬರಗಿ ಅವರು ಮಾಡಿರುವ ಆ ಒಂದು ಕೆಲಸದಿಂದ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ದಿವ್ಯಾ ಉರುಡುಗ ಅವರು ತಲೆಕಡೆಸಿಕೊಂಡು ಒದ್ದಾಡಿದ್ದರು. ಶುಕ್ರವಾರ ಪ್ರಶಾಂತ್ ಸಂಬರಗಿ ಅವರನ್ನು ಕಳಪೆ ಎಂದು ಪ್ರಕಟಿಸಿ, ಜೈಲಿಗೆ ಕಳುಹಿಸಲಾಗಿತ್ತು. ಪ್ರತಿ ಸಲ ಯಾರೇ ಕಳಪೆ ಪಟ್ಟ ಹೊತ್ತುಕೊಂಡರೂ ಅವರು ಒಂದು ರಾತರಿ ಜೈಲಿನಲ್ಲಿ ಕಳೆಯಲೇಬೇಕು. ಇನ್ನು ಜೈಲಿನ ಬೀಗವನ್ನು ಮನೆಯ ಕ್ಯಾಪ್ಟನ್ ಇಟ್ಟುಕೊಳ್ಳಬೇಕು.
View this post on Instagram
ಇದನ್ನೂ ಓದಿ: ಚಕ್ರವರ್ತಿ ನಂತರ ಕಳಪೆ ಆಯ್ಕೆ ವಿಷಯದಲ್ಲಿ ತಕರಾರು ತೆಗೆದ ಪ್ರಶಾಂತ್ ಸಂಬರಗಿ..!
ದಿವ್ಯಾ ತಲೆಕಡೆಸಿಕೊಂಡು ಮನೆಯಲ್ಲ ಹುಡುಕಾಡುತ್ತಾರೆ. ಆದರೂ ಕೀ ಎಲ್ಲಿದೆ ಎಂದು ಯಾರಿಗೂ ತಿಳಿಯುವುದಿಲ್ಲ. ಮನೆಯಲ್ಲಿ ಕೆಲವರು ಮಂಜು ಪಾವಗಡ ಅವರ ಮೇಲೆ ಅನುಮಾನ ಪಡುತ್ತಾರೆ. ಬೆಳಗಾಗುತ್ತಿದ್ದಂತೆಯೇ, ಪ್ರಶಾಂತ್ ಸಂಬರಗಿ ದಿವ್ಯಾ ಅವರ ಮೇಲೆ ಕೂಡಾಗಡಲಾರಂಭಿಸುತ್ತಾರೆ. ನಾನು ತಡವಾಗಿ ಜೈಲಿಗೆ ಬಂದೆ ಅಂತ ಹೀಗೆ ಮಾಡಿ ಸೇಡು ತೀರಿಸಿಕೊಳ್ಳುತ್ತೀದ್ದಿಯಾ ಎಂದೆಲ್ಲ ಎಮೋಷನಲ್ ಆಗಿ ಬ್ಲಾಕ್ಮೇಲ್ ಮಾಡುತ್ತಾರೆ.
View this post on Instagram
ಜೈಲಿನಿಂದ ಹೊರ ಬಂದ ನಂತರ ಪ್ರಶಾಂತ್, ದಿವ್ಯಾ ಉರುಡುಗ ಅವರನ್ನುಅಪ್ಪಿಕೊಂಡು ಸಾರಿ ಎನ್ನುತ್ತಾರೆ. ನಂತರ ಈ ವಿಷಯ ವಾರದ ಕತೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಚರ್ಚೆಗೆ ಬಂದಾಗ ಸುದೀಪ್, ಪ್ರಶಾಂತ್ ಅವರನ್ನು ಹೀಗೆ ಮಾಡಿದ್ದೇಕೆ ಅಂತ ಕಾರಣ ಕೇಳುತ್ತಾರೆ. ಆಗ ಪ್ರಶಾಂತ್, ಸರ್ ಒಂದು ಕೀಯನ್ನು ತಮ್ಮ ಬಳಿ ಇಟ್ಟುಕೊಳ್ಳಬೇಕು ಅನ್ನೋದು ಕ್ಯಾಪ್ಟನ್ ಕರ್ತವ್ಯ. ಎರಡನೆಯದ್ದು ನನಗೆ ಕಳಪೆ ಕೊಟ್ಟು ಜೈಲಿಗೆ ಕಳುಹಿಸಿದ್ದ ದಿವ್ಯಾ ಉರುಡುಗ ಅವರ ಮೇಲೆ ಕೊಂಚ ಸಿಟ್ಟಿತ್ತು. ಅದನ್ನು ತೀರಿಸಿಕೊಳ್ಳಲು ಹೀಗೆ ಮಾಡಿದೆ ಎನ್ನುತ್ತಾರೆ. ಒಟ್ಟಾರೆ ಪ್ರಶಾಂತ್ ಅವರ ತುಂಟಾಟದಿಂದ ದಿವ್ಯಾ ಕೆಲ ಸಮಯ ಪರದಾಡಿದ್ದಂತೂ ಸತ್ಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ