Bigg Boss Kannada Season 8: ಬಿಗ್ ಬಾಸ್​ ಮನೆಯಿಂದ ಈ ವಾರ ಹೊರ ಹೋಗುವ ಸ್ಪರ್ಧಿ ಇವರೇ ನೋಡಿ..!

ಬಿಗ್​ ಬಾಸ್​ ಮನೆಯಲ್ಲಿ ಎಲಿಮಿನೇಷನ್​

ಬಿಗ್​ ಬಾಸ್​ ಮನೆಯಲ್ಲಿ ಎಲಿಮಿನೇಷನ್​

Bigg Boss Kannada Season 8 Elimination: ಬಿಗ್ ಬಾಸ್​ ಮನೆಯಲ್ಲಿ ಸಾಕಷ್ಟು ತಿರುವುಗಳಿಂದ ಕೂಡಿದ್ದ ಈ ವಾರ ಎಲ್ಲರಲ್ಲೂ ತುಂಬಾ ಕುತೂಹಲ ಮೂಡಿಸಿದೆ. ಇಂದು ರಾತ್ರಿ ಯಾರ ಜರ್ನಿ ಅಂತ್ಯವಾಗಲಿದೆ. ಯಾರು ಕಿಚ್ಚ ಸುದೀಪ್​ ಅವರೊಂಗಿದೆ ವೇದಿಕೆ ಹಂಚಿಕೊಳ್ಳಲಿದ್ದಾರೆ ಅನ್ನೋದಕ್ಕೆ ಇಲ್ಲಿದೆ ಉತ್ತರ.

ಮುಂದೆ ಓದಿ ...
  • Share this:

ಬಿಗ್​ ಬಾಸ್ ಸೀಸನ್​ 8ರ ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಈ ವಾರ ಸಾಕಷ್ಟು ಟ್ವಿಸ್ಟ್​ ಹಾಗೂ ಟರ್ನ್​ಗಳಿಂದ ಕೂಡಿತ್ತು. ಬಿಗ್​ ಬಾಸ್ ಮನೆಯಲ್ಲಿ ಈ ವಾರ ನಾಮಿನೇಷನ್​ ಪ್ರಕ್ರಿಯೆ ನಡೆಯಲೇ ಇಲ್ಲ. ಬದಲಾಗಿ ಮನೆಯ ಕ್ಯಾಪ್ಟನ್​ ಆಗಿ ಅರವಿಂದ್ ಅವರು ಆಯ್ಕೆಯಾಗುತ್ತಿದ್ದಂತೆಯೇ ಮನೆಯಲ್ಲಿ ನಾಮಿನೇಷನ್​ ಪ್ರಕ್ರಿಯೆ ಆತಂಕದಲ್ಲಿ ಮನೆಯವರಿದ್ದರು. ಆಗಲೇ ಬಿಗ್ ಬಾಸ್​ ಮನೆಯ ಸ್ಪರ್ಧಿಗಳಿಗೆ ಸಿಕ್ಕಿತ್ತು ಒಂದು ಶಾಕಿಂಗ್​ ಸುದ್ದಿ. ಅದು ಈ ವಾರ ಮನೆಯಿಂದ ಹೊರ ಹೋಗಲು ಕ್ಯಾಪ್ಟನ್​ ಅರವಿಂದ್ ಹಾಗೂ ರಘು ಸೇವ್​ ಮಾಡಿರುವ ಶಮಂತ್ ಅವರನ್ನು ಹೊರತು ಪಡಿಸಿ, ಉಳಿದವರೆಲ್ಲ ನಾಮಿನೇಟ್ ಆಗಿದ್ದಾರೆ ಅನ್ನೋದು. ಹೌದು, ಅದರ ಜೊತೆಗೇ ಮನೆಯವರಿಗೆ ಬಿಗ್ ಬಾಸ್​ ಈ ನಾಂಇನೇಷನ್​ ಪ್ರಕ್ರಿಯೆಯಿಂದ ಪಾರಾಗಲು ಒಂದು ಅವಕಾಶವನ್ನೂ ಕೊಟ್ಟರು. ಆಗ ಸ್ಪರ್ಧಿಗಳಿಗೆ ಕೊಂಚ ನಿರಾಳವಾಗಿತ್ತು. ಒಂದು ಕಡೆ ಮನೆಯ ಕ್ಯಾಪ್ಟನ್ಸಿ ಟಾಸ್ಕ್​ ಜೊತೆಗೆ ನಾಮಿನೇಷನ್​ನಿಂದ ಪಾರಾಗಲು ಕೊಟ್ಟಿರುವ ಟಾಸ್ಕ್​. 


ಅರವಿಂದ್​ ಹಾಗೂ ಶಮಂತ್ ಅವರನ್ನು ಹೊರತು ಪಡಿಸಿ ನಾಮಿನೇಟ್​ ಆಗಿದ್ದ ಸ್ಪರ್ಧಿಗಳು ಹೇಗಾದರೂ ಮಾಡಿ ಈ ಟಾಸ್ಕ್​ನಲ್ಲಿ ಗೆದ್ದು ಇಮ್ಯುನಿಟಿ ಪಡೆಯಬೇಕೆಂಬ ಹಂಬಲದಲ್ಲಿದ್ದರು. ಅರವಿಂದ್ ಹಾಗೂ ಮಂಜು ಪಾವಗಡ ನೇತೃತ್ವದಲ್ಲಿ ಎರಡು ತಂಡಗಳನ್ನು ಮಾಡಲಾಯಿತು. ಅರವಿಂದ್​ ಅವರ ತಂಡ ವಿಜಯಯಾತ್ರೆ ಹಾಗೂ ಮಂಜು ಅವರ ತಂಡ ನಿಂಗೈತೆ ಇರು ಎಂಬ ಹೆಸರುಗಳನ್ನು ತಮ್ಮ ತಂಡಗಳಿಗೆ ಆಯ್ಕೆ ಮಾಡಿಕೊಂಡರು.




ಈ ತಂಡಗಳು ನಾಮಿನೇಷನ್​ನಿಂದ ಪಾರಾಗಲು ದಂಡ ಯಾತ್ರೆ ಟಾಸ್ಕ್​ನಲ್ಲಿ ಭಾಗಿಯಾಗಿದವು. ಇದರಲ್ಲಿ ಕೊಟ್ಟಿದ್ದ 10 ವಿಭಿನ್ನ ಟಾಸ್ಕ್​ಗಳಲ್ಲಿ ಮಂಜು ಪಾವಗಡ ಅವರ ನೇತೃತ್ವದ ನಿಂಗೈತೆ ಇರು ತಂಡ ಜಯಗಳಿಸಿ ನಾಮಿನೇಷನ್​ನಿಂದ ಪಾರಾಯಿತು. ಈ ತಂಡದಲ್ಲಿ ಮಂಜು ಪಾವಗಡ, ದಿವ್ಯಾ ಸುರೇಶ್, ದಿವ್ಯಾ ಉರುಡುಗ, ಶಮಂತ್​ ಹಾಗೂ ಚಕ್ರವರ್ತಿ ಚಂದ್ರಚೂಡ ಇದ್ದರು.


ಇದನ್ನೂ ಓದಿ: ಜಾಕ್ವೆಲಿನ್​ ಫರ್ನಾಂಡಿಸ್​ ಜತೆಗಿನ ತನ್ನಿಷ್ಟದ ಎರಡು ಫೋಟೋಗಳನ್ನು ಹಂಚಿಕೊಂಡ ಕಿಚ್ಚ ಸುದೀಪ್​


ಇನ್ನು ವಿಜಯ ಯಾತ್ರೆ ತಂಡ ದಂಡ ಯಾತ್ರೆ ಟಾಸ್ಕ್​ನಲ್ಲಿ ಒಂದು ದಂಡವನ್ನು ಕಡಿಮೆ ಪಡೆಯುವ ಮೂಲಕ ಸೋಲನ್ನು ಅನುಭವಿಸಿ, ಈ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್​ ಆಯಿತು. ಇದರಲ್ಲಿ ಅರವಿಂದ್​ ಕೆ.ಪಿ, ವೈಷ್ಣವಿ, ಪ್ರಶಾಂತ್​ ಸಂಬರಗಿ, ಶುಭಾ ಪೂಂಹಾ ಹಾಗೂ ಪ್ರಿಯಾಂಕಾ ತಿಮ್ಮೇಶ್​ ಇದ್ದರು. ಇದರಲ್ಲಿ ಅರವಿಂದ್ ಮನೆಯ ಕ್ಯಾಪ್ಟನ್​ ಆಗಿದ್ದ ಕಾರಣ ಅವರು ಸೇಫ್​ ಆಗಿದ್ದಾರೆ. ಇನ್ನು ಉಳಿದವರಲ್ಲಿ ನಿನ್ನೆಯ ಸಂಚಿಕೆಯಲ್ಲಿ ಅತಿ ಹೆಚ್ಚು ಮತಗಳನ್ನು ಪಡೆಯುವ ಮೂಲಕ ನಾಮಿನೇಷನ್​ ಪ್ರಕ್ರಿಯೆಯಿಂದ ಪಾರಾಗಾಗಿದ್ದಾರೆ.


ಇಂದು ಮನೆಯಿಂದ ಹೋಗುವುದು ಯಾರು..? 


ಇನ್ನು ಉಳಿದಿರುವ ವಿಜಯ ಯಾತ್ರೆ ಸ್ಪರ್ಧಿಗಳಲ್ಲಿ ಪ್ರಶಾಂತ್​ ಸಂಬರಗಿ, ಶುಭಾ ಪೂಂಜಾ ಹಾಗೂ ಪ್ರಿಯಾಂಕಾ ತಿಮ್ಮೇಶ್​ ಅವರಲ್ಲಿ ಯಾರು ಮನೆಯಿಂದ ಹೊರ ಹೋಗಲಿದ್ದಾರೆ ಅನ್ನೋ ಕುತೂಹಲ ವೀಕ್ಷಕರಲ್ಲಿ ಮನೆ ಮಾಡಿದೆ.


ಇದನ್ನೂ ಓದಿ: Happy Birthday Priyanka Chopra: ಹುಟ್ಟುಹಬ್ಬದಂದು ಸ್ವಿಮ್​ ಸೂಟ್​ನಲ್ಲಿರುವ ಫೋಟೋ ಶೇರ್​ ಮಾಡಿ ಟ್ರೋಲಾದ ಪ್ರಿಯಾಂಕಾ ಚೋಪ್ರಾ..!


ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿ ಹಾಗೂ ಲೆಕ್ಕಾಚಾರಗಳ ಪ್ರಕಾರ ಈ ವಾರ ಪ್ರಿಯಾಂಕಾ ತಿಮ್ಮೇಶ್​ ಅವರು ಮನೆಯಿಂದ ಹೊರ ಹೋಗಲಿದ್ದಾರೆ ಎನ್ನಲಾಗುತ್ತಿದೆ. ಈ ನಾಮಿನೇಷನ್​ ತೂಗುಗತ್ತಿಯಿಂದ ಯಾರು ತಪ್ಪಿಸಿಕೊಳ್ಳಲಿದ್ದಾರೆ ಹಾಗೂ ಯಾರ ಬಿಗ್ ಬಾಸ್​ ಜರ್ನಿ ಅಂತ್ಯವಾಗಲಿದೆ ಅನ್ನೋದು ಇಂದಿನ ರಾತ್ರಿಯ ಸಂಚಿಕೆಯಲ್ಲಿ ತಿಳಿಯಲಿದೆ.

Published by:Anitha E
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು