ಬಿಗ್ ಬಾಸ್ ಸೀಸನ್ 8ರ ಸೆಕೆಂಡ್ ಇನ್ನಿಂಗ್ಸ್ನ ಮೊದಲ ಸೂಪರ್ ಸಂಡೆ ಸಂಚಿಕೆ ಪ್ರಸಾರವಾಗುತ್ತಿದೆ. ಸುದೀಪ್ ಸೂಪರ್ ಲುಕ್ಸ್ನಲ್ಲಿ ಕಿರುತೆರೆ ಮೇಲೆ ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಾಸ್ ವೀಕ್ಷಕರಿಗೆ ಸೂಪರ್ ಸಂಡೆ ಸಂಚಿಕೆಯ ಆರಂಭದಲ್ಲೇ ವೀಕ್ಷಕರಿಗೆ ಕಾದಿತ್ತು ಶಾಕ್. ಈ ವಾರ ಯಾರು ಬಿಗ್ ಬಾಸ್ ಮನೆಯಿಂದ ಹೊರ ಹೋಗಲಿದ್ದಾರೆ ಎಂದು ಕಾಯಲಾಗುತ್ತಿತ್ತು. ನಿನ್ನೆಯೇ ನಡೆಯಬೇಕಿದ್ದ ಎಲಿಮಿನೇಶನ್ ಪ್ರಕ್ರಿಯೆಯನ್ನು ಭಾನುವಾರ ಅಂದರೆ ಇವತ್ತಿಗೆ ಮುಂದೂಡಲಾಗಿತ್ತಯ. ಸುದೀಪ್ ನಿರೂಪಣೆ ಆರಂಭಿಸುತ್ತಿದ್ದಂತೆಯೇ ಎಲಿಮಿನೇಶನ್ ಪ್ರಕ್ರಿಯೆಗೆ ಕೊಟ್ಟಿರುವ ದೊಡ್ಡ ಟ್ವಿಸ್ಟ್ ಬಗ್ಗೆ ಪ್ರಕಟಿಸಿದ್ದಾರೆ. ಇದರ ಜೊತೆಗೆ ಇಂದಿನ ಸಂಚಿಕೆಯಲ್ಲಿ ಯಾವೆಲ್ಲ ತಿರುವು ಹಾಗೂ ಸ್ಪರ್ಧಿಗಳಿಗೆ ಯಾವೆಲ್ಲ ರೀತಿ ಆಟವಾಡಿಸಲು ತಯಾರಿ ನಡೆಸಲಾಗಿದೆ ಎಂದೂ ಸುದೀಪ್ ವಿವರಿಸಿದ್ದಾರೆ. ಅಷ್ಟಕ್ಕೂ ಸುದೀಪ್ ಕೊಟ್ಟ ಆ ಶಾಕಿಂಗ್ ಸುದ್ದಿ ಏನು ಗೊತ್ತಾ..?
ಒಂದು ಕಡೆ ಪ್ರತಿ ಶನಿವಾರ ಹಾಗೂ ಭಾನುವಾರ ವೀಕ್ಷಕರು ಕಿರುತೆರೆಯಲ್ಲಿ ಸುದೀಪ್ ಅವರನ್ನು ನೋಡಲು ತುಂಬಾ ಜನ ಕಾಯುತ್ತಿರುತ್ತಾರೆ. ಇದರ ನಡುವೆ ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ಸ್ಪರ್ಧಿ ಯಾರು ಅಂತ ನೋಡಲು ಕಾತರರಾಗಿರುತ್ತಾರೆ.
ಈ ವಾರ ಮನೆಯಿಂದ ಹೊರ ಹೋಗಲು ನಿಧಿ ಸುಬ್ಬಯ್ಯ, ಪ್ರಿಯಾಂಕಾ ತಿಮ್ಮೇಶ್, ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ, ಮಂಜು ಪಾವಗಡ, ದಿವ್ಯಾ ಸುರೇಶ್ ಹಾಗೂ ರಘು ಮನೆಯಿಂದ ಹೊರ ಹೋಗಲು ಈ ವಾರ ನಾಮಿನೇಟ್ ಆಗಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಇದ್ದರೂ ಇಲ್ಲದಂತಾದ ಪ್ರಶಾಂತ್ ಸಂಬರಗಿ: ಎಲಿಮಿನೇಟ್ ಆದ್ರ ಟೀ ಮಾಸ್ಟರ್..!
ಆದರೆ, ಈ ಸಲ ಬಿಗ್ ಬಾಸ್ ಮನೆಯಲ್ಲಿ ವಾರಾಂತ್ಯದಲ್ಲಿ ನಡೆಯಲಿರುವ ಎಲಿಮಿನೇಶನ್ ಪ್ರಕ್ರಿಯೆಗೆ ಟ್ವಿಸ್ಟ್ ಸಿಕ್ಕಿದೆ. ಹೌದು, ಈ ವಾರ ಎಲಿಮಿನೇಶನ್ ಪ್ರಕ್ರಿಯೆ ಇಲ್ಲವಂತೆ. ಹೀಗಾಗಿ ಯಾರೂ ಸಹ ಮನೆಯಿಂದ ಹೊರ ಹೋಗುತ್ತಿಲ್ಲ. ಈ ನಾಮಿನೇಶನ್ ಮುಂದಿನ ವಾರಕ್ಕೆ ಮುಂದುವರೆಯಲಿದೆ.
ಮನೆಯ ಕ್ಯಾಪ್ಟನ್ ಆದ ಮಂಜು ಪಾವಗಡ
ಬಿಗ್ ಬಾಸ್ ಕನ್ನಡ ಸೀಸನ್ 8ರ ಸೆಕೆಂಡ್ ಇನ್ನಿಂಗ್ಸ್ನ ಮೊದಲ ವಾರದಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ನಡೆದಿದೆ. ಈ ಟಾಸ್ಕ್ನಲ್ಲಿ ಮತ್ತೆ ಹುಡುಗರೇ ಮೇಲುಗೈ ಸಾಧಿಸಿದ್ದಾರೆ. ಈ ಸಲವೂ ಯಾವೊಬ್ಬ ಹುಡುಗಿಯೂ ಕ್ಯಾಪ್ಟನ್ ಆಗಿ ಆಯ್ಕೆಯಾಗಿಲ್ಲ. ಮಂಜು ಪಾವಗಡ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.
ಒಬ್ಬರೇ ವಿನ್ಯಾಸಕರ ಬಳಿ ಡ್ರೆಸ್ ಡಿಸೈನ್ ಮಾಡಿಸುತ್ತಿರುವ ಅರ್ವಿಯಾ
ಅರವಿಂದ್ ಹಾಗೂ ದಿವ್ಯಾ ಉರುಡುಗ ಇಬ್ಬರೂ ಒಬ್ಬರೇ ವಸ್ತ್ರ ವಿನ್ಯಾಸಕರ ಬಳಿ ತಮ್ಮ ಡ್ರೆಸ್ಗಳ ಡಿಸೈನ್ ಮಾಡಿಸಿದ್ದಾರಂತೆ. ಈ ಬಗ್ಗೆ ಸುದೀಪ್ ಅವರೇ ಅರ್ವಿಯಾ ಬಳಿ ಕೇಳಿದ್ದಾರೆ. ಇಲ್ಲಿಯವರೆಗೂ ಈ ವಿಷಯ ಯಾರಿಗೂ ತಿಳಿದಿರಲಿಲ್ಲ. ಇನ್ನು ಈ ವಾರ ಯಾರದ್ದು ಬೆಸ್ಟ್ ಡ್ರೆಸ್ಡ್ ಅಂತ ಕೇಳಿದ್ದಕ್ಕೆ ದಿವ್ಯಾ ಉರುಡುಗ ಅರವಿಂದ್ ಹಾಗೂ ಅರವಿಂದ್ ದಿವ್ಯಾ ಉರುಡುಗ ಅವರ ಹೆಸರನ್ನೇ ತೆಗೆದುಕೊಂಡಿದ್ದಾರೆ.
ಬಿಗ್ ಬಾಸ್ 8ರ ಸೆಕೆಂಡ್ ಇನ್ನಿಂಗ್ಸ್ನಲ್ಲಿ ದಿವ್ಯಾ ಉರುಡುಗ ಹಾಗೂ ಅರವಿಂದ್ ಉಳಿದುಕೊಂಡರೆ, ಇಬ್ಬರಲ್ಲಿ ಯಾರಾದರೂ ಒಬ್ಬರು ಉಳಿದುಕೊಂಡು ಒಬ್ಬರು ಮನೆಗೆ ಹೋಗುವಂತೆ ಹೇಳಿ, ನಿರ್ಧಾರ ನಿಮಗೆ ಬಿಟ್ಟರೆ ನಿಮ್ಮ ನಿರ್ಧಾರ ಏನಿರುತ್ತದೆ ಅಂತ ಸುದೀಪ್ ಪ್ರಶ್ನೆ ಕೇಳುತ್ತಾರೆ. ಅದಕ್ಕೆ ಉತ್ತರಿಸಲು ಹಿಂಜರಿಯುವ ದಿವ್ಯಾ ಉರುಡುಗ, ಸ್ವಲ್ಪ ಸಮಯದ ನಂತರ ನಾನೇ ಉಳಿದುಕೊಂಡು ಅರವಿಂದ್ ಅವರನ್ನು ಹೋಗಲು ಹೇಳುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: Bigg Boss 8: ಅರವಿಂದ್ಗಾಗಿ ಆಟವನ್ನು ಬಿಡುವುದಿಲ್ಲ ಎಂದ ದಿವ್ಯಾ ಉರುಡುಗ: ಅರವಿಂದ್ ಪ್ರತಿಕ್ರಿಯೆ ಬೇರೆನೇ ಆಗಿತ್ತು...!
ಆದರೆ ಅರವಿಂದ್ ಮಾತ್ರ ದಿವ್ಯಾ ಅವರನ್ನು ಬಿಗ್ ಬಾಸ್ ಮನೆಯಲ್ಲಿ ಇರುವಂತೆ ತಾನೇ ಹೊರಗೆ ಹೋಗುವುದಾಗಿ ಹೇಳಿದ್ದಾರೆ.ಆಟದ ವಿಷಯಕ್ಕೆ ಬಂದಾಗ ಎದುರಾಳಿಯಾಗಿ ಅರವಿಂದ್ ಇದ್ದರೆ ಅವರನ್ನು ತಾನು ಪ್ರತಿಸ್ಪರ್ಧಿಯಾಗಿಯೇ ನೋಡುತ್ತೇನೆ ಎಂದಿದ್ದಾರೆ ದಿವ್ಯಾ ಉರುಡುಗ.ಇನ್ನು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅರವಿಂದ್ ನಾನು ಸೋಲುತ್ತೇನೆ, ಆದರೆ ಆಟ ಬಿಟ್ಟುಕೊಡುವುದಿಲ್ಲ ಎಂದಿದ್ದಾರೆ.
ಇದೇ ಪ್ರಶ್ನೆಯನ್ನು ಅರವಿಂದ್ ಕೆ ಪಿ ಅವರಿಗೆ ಕೇಳಿದಾಗ ಅವರು ಯೋಚಿಸದೆಯೇ ದಿವ್ಯಾ ಬಿಗ್ ಬಾಸ್ ಮನೆಯಲ್ಲೇ ಇರಲಿ, ನಾನು ಹೊರಗೆ ಹೋಗುತ್ತೇನೆ ಎಂದಿದ್ದಾರೆ. ಸುದೀಪ್ ಅವರ ಪ್ರಶ್ನೆಗೆ ದಿವ್ಯಾ ಉರುಡುಗ ಕೊಟ್ಟ ಉತ್ತರದಿಂದ ಈ ಜೋಡಿಯ ನಡುವಿನ ಸಂಬಂಧದಲ್ಲಿ ಏನಾದರೂ ಬದಲಾವಣೆ ಕಾಣಬಹುದಾ ಅನ್ನೋ ಅನುಮಾನ ಈಗ ಕೆಲವರನ್ನು ಕಾಡಲಾರಂಭಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ