ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ನಾಲ್ಕನೇ ವಾರಂತ್ಯದತ್ತ ಸಾಗುತ್ತಿದೆ. ಈಗಾಗಲೇ ಧನುಶ್ರೀ, ನಿರ್ಮಲಾ ಚೆನ್ನಪ್ಪಾ, ಗೀತಾ ಮೂವರು ಸ್ಪರ್ಧಿಗಳು ಎಲಿಮಿನೆಟ್ ಆಗಿ ಮನೆಯಿಂದ ಹೊರಹೋಗಿದ್ದಾರೆ. ಇನ್ನುಳಿದ ಸ್ಪರ್ಧಿಗಳು ಹೊರ ಹೋಗದಂತೆ ಮತ್ತು ಎಲಿಮಿನೆಟ್ ಆಗದಂತೆ ಪೈಪೋಟಿ ನೀಡುತ್ತಿದ್ದಾರೆ. ಬಿಗ್ ಬಾಸ್ ಕೊಟ್ಟ ಟಾಸ್ಕ್ನಲ್ಲಿ ಚೆನ್ನಾಗಿ ಗುರುತಿಸಿಕೊಳ್ಳುತ್ತಿದ್ದಾರೆ.
ದೊಡ್ಡನೆಯಲ್ಲಿ ನಡೆದ ಘಟನೆಗಳು ಆಗಾಗ ಸುದ್ದಿಯಾಗುತ್ತಿರುತ್ತದೆ. ಅದರಂತೆ ಸಾಮಾಜಿಕ ಕಾರ್ಯಕರ್ತನಾಗಿ ಮನೆಯೊಳಕ್ಕೆ ಬಂದಿದ್ದ ಪ್ರಶಾಂತ್ ಸಂಬರಗಿ ಹೇಳಿರುವ ಪುಸ್ತಕ ವಿಚಾರವು ಈಗ ಸುದ್ದಿಯಾಗಿದೆ.
ಪ್ರಶಾಂತ್ ಸಂಬರಗಿ ತುಪ್ಪಾ ತಿಂದಿದ್ದೇ ತಪ್ಪಾ? ಎಂಬ ಪುಸ್ತಕ ಬರೆದಿದ್ದಾರಂತೆ!. ಈ ಪುಸ್ತಕದ ಪ್ರತಿ 1 ಲಕ್ಷ ಸೇಲ್ ಆಗಿದೆ ಎಂದು ಅವರೇ ಬಿಗ್ ಬಾಸ್ ಮನೆಯಲ್ಲಿ ಸಹ ಸ್ಪರ್ಧಿಗಳೊಂದಿಗೆ ಹೇಳಿದ್ದಾರೆ.
ಪ್ರಶಾಂತ್ ಸಂಬರಗಿ ಇತ್ತೀಚೆಗೆ ಅಡುಗೆಯೊಂದನ್ನು ಮಾಡಿದ್ದರು. ಈ ವೇಳೆ ದೊಡ್ಮನೆಯಲ್ಲಿದ್ದ ತುಪ್ಪ ಬಳಸಿಕೊಂಡು ಖಾಲಿ ಮಾಡಿದ್ದರು ಎಂದು ಸಹ ಸ್ಪರ್ಧಿಗಳು ದೂರಿದರು. ಅಡುಗೆ ವಿಭಾಗದವರು ಪ್ರಶಾಂತ್ ಸಂಬರಗಿ ಅವರನ್ನು ತುಪ್ಪಾ ಅಷ್ಟೊಂದು ಬಳಸಬೇಡಿ. ಮನೆಯವರೆಲ್ಲರಿಗೂ ತುಪ್ಪಾ ಸಿಗುತ್ತಿಲ್ಲ ಎಂದು ಹೇಳಿದರು. ಈ ವಿಚಾರ ಎರಡು ದಿನಗಳಿಂದ ಭಾರೀ ಚರ್ಚೆಗೆ ಕಾರಣವಾಗಿತ್ತು. ಪ್ರಶಾಂತ್ ಕೂಡ ನಾನು ತುಪ್ಪಾ ಬಳಸಿಲ್ಲ ಎಂದು ವಾದಿಸುತ್ತಾ ಬಂದರು.
ಹೀಗೆ ತುಪ್ಪದ ವಿಚಾರಕ್ಕೆ ಪ್ರಶಾಂತ್ ತುಪ್ಪಾ ತಿಂದಿದ್ದೇ ತಪ್ಪಾ? ಎಂಬ ಟೈಟಲ್ ಇಟ್ಟುಕೊಂಡು ಪುಸ್ತಕ ಬರೆಯುವುದಾಗಿ ಹೇಳಿದ್ದಾರೆ. ಅದರಲ್ಲಿ ಎಲ್ಲವನ್ನು ವಿವರವಾಗಿ ಬರೆದಿದ್ದೇನೆ. ಎರಡು ಗ್ರಾಂ ತುಪ್ಪಕ್ಕೆ ಎರಡು ದಿನ ಮನೆಯಲ್ಲಿ ಮನಸ್ತಾಪ ಉಂಟಾಗಿದೆ ಎಂಬುದನ್ನು ಅದರಲ್ಲಿ ಹೇಳಿದ್ದಾರಂತೆ. ಈ ಪುಸ್ತಕ ಒಂದು ಲಕ್ಷ ಪ್ರತಿ ಮಾರಾಟವಾಗಿದೆಯಂತೆ.
ಪ್ರಶಾಂತ್ ಸಂಬರಗಿ ಹೇಳಿದ ಈ ವಿಚಾರಕ್ಕೆ ಮನೆಯವರು ನಕ್ಕಿದ್ದಾರೆ. ಅನೇಕರಲ್ಲು ಪ್ರಶಾಂತ್ ಸಂಬರಗಿ ತುಪ್ಪ ಖಾಲಿ ಮಾಡಿದ್ದಾರೆ ಎಂಬ ಅನುಮಾನವು ಹಾಗೆಯೇ ಉಳಿದುಕೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ