• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Bigg Boss 8 Kannada: ಮೋಸದಾಟ ಆಡಿದ ದಿವ್ಯಾ ಉರುಡುಗ: ಆರೋಪಿಸಿದ ಶಮಂತ್ ಗೌಡ​-ಪ್ರಶಾಂತ್​ ಸಂಬರಗಿ

Bigg Boss 8 Kannada: ಮೋಸದಾಟ ಆಡಿದ ದಿವ್ಯಾ ಉರುಡುಗ: ಆರೋಪಿಸಿದ ಶಮಂತ್ ಗೌಡ​-ಪ್ರಶಾಂತ್​ ಸಂಬರಗಿ

ಬಿಗ್ ಬಾಸ್​ ಮನೆಯಲ್ಲಿ ಆಗಿದೆಯಾ ಮೋಸದಾಟ..?

ಬಿಗ್ ಬಾಸ್​ ಮನೆಯಲ್ಲಿ ಆಗಿದೆಯಾ ಮೋಸದಾಟ..?

ಟಾಸ್ಕ್​ನಲ್ಲಿ ಸೆಣಸಾಡುತ್ತಿರುವ ಸ್ಪರ್ಧಿಗಳಲ್ಲಿ ಚಕ್ರವರ್ತಿ ಚಂದ್ರಚೂಡ, ಶಮಂತ್ ಗೌಡ ಹಾಗೂ ಪ್ರಶಾಂತ್ ಸಂಬರಗಿ ಅವರಿಗೆ ದಿವ್ಯಾ ಉರುಡುಗ ಟಾಸ್ಕ್​ನಲ್ಲಿ ಅರವಿಂದ್​ ಅವರ ವಿಷಯ ಬಂದಾಗ ಪಕ್ಷಪಾತ ಮಾಡುತ್ತಿದ್ದಾರೆ ಎಂದು ದೂರುತ್ತಿದ್ದಾರೆ.

  • Share this:

ಬಿಗ್ ಬಾಸ್ ಸೀಸನ್​ 8ರ ಸೆಕೆಂಡ್ ್ಇನ್ನಿಂಗ್ಸ್​ನಲ್ಲಿ ಪ್ರಶಾಂತ್ ಸಂಬರಗಿ, ದಿವ್ಯಾ ಉರುಡುಗ ಹಾಗೂ ಅರವಿಂದ್​ ಅವರ ನಡುವೆ ಒಂದು ಒಳ್ಳೆಯ ಬಾಂಧವ್ಯ ಇದೆ. ಎರಡನೇ ಇನ್ನಿಂಗ್ಸ್ ಆರಂಭವಾದಾಗಿನಿಂದ ಇವರ ನಡುವೆ ಜಗಳ ಆಗಿದ್ದೇ ಇಲ್ಲ. ಕೆಲವೊಮ್ಮೆ ಟಾಸ್ಕ್​ ವಿಷಯದಲ್ಲಿ ಇವರ ನಡುವೆ ಅಸಮಧಾನ ಮೂಡಿದರೂ ಅಲ್ಲೇ ಅದನ್ನು ಮಾತನಾಡಿ ಸರಿಪಡಿಸಿಕೊಳ್ಳುತ್ತಾರೆ. ಆದರೆ 2ನೇ ಇನ್ನಿಂಗ್ಸ್​ನಲ್ಲಿ ಇದೇ ಮೊದಲ ಸಲ ಪ್ರಶಾಂತ್ ಸಂಬರಗಿ ಹಾಗೂ ಶಮಂತ್ ಗೌಡ ಅವರು ದಿವ್ಯಾ ಉರುಡುಗ ಅವರ ಮೇಲೆ ಪಕ್ಷಪಾತ ಮಾಡುತ್ತಿರುವ ಆರೋಪ ಮಾಡಿದ್ದಾರೆ. ಹೌದು, ದಿವ್ಯಾ ಉರುಡುಗ ಈಗ ಮನೆಯ ಕ್ಯಾಪ್ಟನ್ ಆಗಿದ್ದು, ಮನೆಯಲ್ಲಿ ನಡೆಯುತ್ತಿರುವ ಟಾಸ್ಕ್​ಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ. ಈ ಸಲ ದಿವ್ಯಾ ಉರುಡುಗ ಅವರು ತಮ್ಮ ಕರ್ತವ್ಯ ನಿರ್ವಹಿಸುವಾಗ ಪಕ್ಷಪಾತ ಮಾಡುತ್ತಿದ್ದು ಮೋಸ ಮಾಡುತ್ತಿದ್ದಾರೆ ಅನ್ನೋ ಆರೋಪ ಕೆಲವರಿಂದ ಕೇಳಿ ಬರುತ್ತಿದೆ. 


ಬಿಗ್ ಬಾಸ್​ ಮನೆಯಲ್ಲಿ ಸದ್ಯ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಭಾಗಿಯಾಗಲು ಅರ್ಹತೆ ಪಡೆಯಲು ನಾನಾ ರೀತಿಯ ಟಾಸ್ಕ್​ಗಳು ನಡೆಯುತ್ತಿವೆ. ಇದರಲ್ಲಿ ಕ್ಯಾಪ್ಟನ್​ ದಿವ್ಯಾ ಉರುಡುಗ ಅವರನ್ನು ಬಿಟ್ಟು ಉಳಿದ ಹತ್ತು ಮಂದಿ ಸ್ಪರ್ಧಿಗಳು ಭಾಗಿಯಾಗುತ್ತಿದ್ದಾರೆ. ಈ ಅರ್ಹತಾ ಸುತ್ತಿಗಾಗಿ ಸೆಣಸಾಡುತ್ತಿರುವ ಸ್ಪರ್ಧಿಗಳಲ್ಲಿ ಚಕ್ರವರ್ತಿ ಚಂದ್ರಚೂಡ, ಶಮಂತ್ ಗೌಡ ಹಾಗೂ ಪ್ರಶಾಂತ್ ಸಂಬರಗಿ ಅವರಿಗೆ ದಿವ್ಯಾ ಉರುಡುಗ ಟಾಸ್ಕ್​ನಲ್ಲಿ ಅರವಿಂದ್​ ಅವರ ವಿಷಯ ಬಂದಾಗ ಪಕ್ಷಪಾತ ಮಾಡುತ್ತಿದ್ದಾರೆ ಎಂದು ದೂರುತ್ತಿದ್ದಾರೆ.







ನಿನ್ನೆಯ ಸಂಚಿಕೆಯಲ್ಲಿ ಟಂಕಸಾಲೆ ಟಾಸ್ಕ್​ನಲ್ಲಿ ಶಮಂತ್​ ಬಜರ್​ ಆದ ಕೂಡಲೇ ಶಮಂತ್ ಅವರು ಬಂದು ಏಪ್ರಾನ್​ ತೆಗೆದುಕೊಂಡು ನೋಟು ಮುದ್ರಿಸಲು ನಿಲ್ಲುತ್ತಾರೆ. ಶಮಂತ್ ಹಿಂದೆ ಅರವಿಂದ್​ ಇದ್ದ ಕಾರಣದಿಂದ ದಿವ್ಯಾ ಉರುಡುಗ ಶಮಂತ್ ಮಾಡಿದ್ದಯು ಫೌಲ್​ ಎಂದು ಹೇಳಿ ಅರವಿಂದ್​ ಅವರಿಗೆ ಆಡಲು ಅವಕಾಶ ನೀಡುತ್ತಾರೆ. ಇದರಿಂದಾಗಿ ಸಿಟ್ಟಿಗೆದ್ದ ಶಮಂತ್​, ಒಂದು ವೇಳೆ ಅರವಿಂದ್​ ಅಲ್ಲಿ ಇಲ್ಲದಿದ್ದರೆ ದಿವ್ಯಾ ಉರುಡುಗ ಹೀಗೆ ಮಾಡುತ್ತಿರಲಿಲ್ಲ ಎಂದಿದ್ದಾರೆ.


ಇದನ್ನೂ ಓದಿ: Bigg Boss 8 Kannada: ತಂದಿಟ್ಟು ತಮಾಷೆ ನೋಡುವ ಚಕ್ರವರ್ತಿಗೆ ಬಿಸಿ ಮುಟ್ಟಿಸಿದ ಪ್ರಶಾಂತ್ ಸಂಬರಗಿ: ಸುಳ್ಳು ಹೇಳಿ ಸಿಕ್ಕಿ ಬಿದ್ದ ಚಂದ್ರಚೂಡ


ಇನ್ನು ದಿವ್ಯಾ ಉರುಡುಗ ಮಾತ್ರ ಬಜರ್ ಆದಾಗ ಸ್ಪರ್ಧಿಗಳು ಮನೆಯ ಒಳಗಿನಿಂದ ಬಂದರೆ ಮಾತ್ರ ನೋಡು ಮುದ್ರಣ ಮಾಡಲು ಅರ್ಹತೆ ಪಡೆಯುತ್ತಾರೆ ಅನ್ನೋ ನಿಯಮವನ್ನೇ ನಾವೇ ಮಾಡಿಕೊಂಡಿದ್ದೇವೆ. ಅದನ್ನು ಶಮಂತ್​ ಉಲ್ಲಂಘನೆ ಮಾಡಿದ್ದಾರೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.




ಪ್ರಶಾಂತ್ ಸಂಬರಗಿ ಅವರು ಮೊದಲು ಬಂದು ಏಪ್ರಾನ್​ ಹಿಡುಕೊಳ್ಳುತ್ತಾರೆ. ಆದರೆ ಅದೇ ಏಪ್ರಾನ್​ ಅನ್ನು ತಡವಾಗಿ ಬಂದ ಮಂಜು ಕೈಯಲ್ಲಿ ಹಿಡಿದುಕೊಂಡ ತಮ್ಮ ಕುತ್ತಿಗೆಗೆ ಹಾಕಿಕೊಳ್ಳುತ್ತಾರೆ. ಇದರಿಂದಾಗಿ ದಿವ್ಯಾ ಈ ಆಟ ಮಂಜು ಅವರೇ ಆಡಬೇಕೆಂದು ಹೇಳುತ್ತಾರೆ. ನಿಯಮದ ಪ್ರಕಾರ ಯಾರು ಮೊದಲು ಏಪ್ರಾನ್​ ಅನ್ನು ಕುತ್ತಿಗೆಗೆ ಹಾಕಿಕೊಳ್ಳುತ್ತಾರೋ ಅವರೇ ಆಡಲು ಅರ್ಹರಾಗುತ್ತಾರೆ ಎಂದು ಹೇಳುತ್ತಾರೆ. ದಿವ್ಯಾ ಅವರ ನಿರ್ಧಾರದಿಂದ ಸಿಟ್ಟಿಗೆದ್ದ ಪ್ರಶಾಂತ್ ಸಂಬರದಿ ದಿವ್ಯಾ ಮೋಸದಾಟ ಆಡುತ್ತಿದ್ದು, ಪಕ್ಷಪಾತ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.


ದಿವ್ಯಾ ಉರುಡುಗ ಮೋಸ ಮಾಡಿದ್ದಾರೆ ಎಂದು ಪ್ರಶಾಂತ್ ಅವರು ಜೋರಾಗಿ ಕೂಗುತ್ತಾ ಹೇಳುತ್ತಾರೆ. ಅದಕ್ಕೆ ದಿವ್ಯಾ ಕೂಗಿದರೆ ತಪ್ಪು ಸರಿಯಾಗೋದಿಲ್ಲ ಎನ್ನುತ್ತಾ ನಿಮಗೆ ಮೈಕ್​ ಬೇಕಾ ಎಂದು ವ್ಯಂಗ ಮಾಡುತ್ತಾರೆ. ಇನ್ನು ಆಗಲೇ ಅರವಿಂದ್ ರಘು ಅವರ ವಿಷಯದಲ್ಲಿ ಮಾಡಿದ ನಿಮಯ ಉಲ್ಲಂಘನೆ ಬಗ್ಗೆಯೂ ಪ್ರಶಾಂತ್ ಅವರು ಮಾತನಾಡುತ್ತಾರೆ. ಅದಕ್ಕೆ ದಿವ್ಯಾ ಉರುಡುಗ ರಘು ಅವರಿಗೆ ಸಮಸ್ಯೆ ಇಲ್ಲ ನೀವು ಏಕೆ ಕೇಳುತ್ತೀರಾ. ಯಾರಿಗೆ ಸಮಸ್ಯೆ ಆಗುತ್ತೋ ಅವರು ಕೇಳಲಿ ನಾನು ಉತ್ತರಿಸುತ್ತೇನೆ ಎಂದು ಅರವಿಂದ್​ ಅವರ ಪರ ಮಾತನಾಡುತ್ತಾರೆ.


ಇದನ್ನೂ ಓದಿ: Bigg Boss 8 Kannada: ಎಡವಟ್ಟಿನ ಮೇಲೆ ಎಡವಟ್ಟು: ಮತ್ತೆ ಟ್ರೋಲ್​ ಆಗುತ್ತಿರುವ ಬಿಗ್​ ಬಾಸ್​ ಸ್ಪರ್ಧಿ ಕೆ ಪಿ ಅರವಿಂದ್​..!


ಈ ವಿಷಯ ಈಗ ಸಾಮಾಜಿಕ ಜಾಲತಾಣದಲ್ಲೂ ಸಹ ಚರ್ಚೆಯಾಗುತ್ತಿದೆ. ದಿವ್ಯಾ ಉರುಡುಗ ಅವರು ಅರವಿಂದ್​ ವಿಷಯ ಬಂದಾಗ ಬೇರೆ ಸ್ಪರ್ಧಿಗಳಿಗೆ ಮೋಸ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ನೀರಿನ ಬಲೂನ್​ ಆಟದಲ್ಲೂ ಸಹ ಚಕ್ರವರ್ತಿ ಚಂದ್ರಚೂಡ ಅವರೂ ದಿವ್ಯಾ ಉರುಡುಗ ಅವರ ಮೇಲೆ ಇದೇ ಆರೋಪ ಮಾಡಿದ್ದರು.

Published by:Anitha E
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು