• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Bigg Boss 8 Kannada: ನಾಮಿನೇಟ್ ಆದ್ರು ಎಲ್ಲ ಸ್ಪರ್ಧಿಗಳು​: ಮಂಜು-ದಿವ್ಯಾ ಸುರೇಶ್​ರನ್ನೇ ಮತ್ತೆ ಟಾರ್ಗೆಟ್​ ಮಾಡಿದ ಅರವಿಂದ್​..!

Bigg Boss 8 Kannada: ನಾಮಿನೇಟ್ ಆದ್ರು ಎಲ್ಲ ಸ್ಪರ್ಧಿಗಳು​: ಮಂಜು-ದಿವ್ಯಾ ಸುರೇಶ್​ರನ್ನೇ ಮತ್ತೆ ಟಾರ್ಗೆಟ್​ ಮಾಡಿದ ಅರವಿಂದ್​..!

ದಿವ್ಯಾ ಸುರೇಶ್​ ಹಾಗೂ ಮಂಜು ಅವರನ್ನೇ ಟಾರ್ಗೆಟ್ ಮಾಡಿದ್ರಾ ಅರವಿಂದ್​ ಕೆಪಿ

ದಿವ್ಯಾ ಸುರೇಶ್​ ಹಾಗೂ ಮಂಜು ಅವರನ್ನೇ ಟಾರ್ಗೆಟ್ ಮಾಡಿದ್ರಾ ಅರವಿಂದ್​ ಕೆಪಿ

ಈ ವಾರ ಮನೆಯಲ್ಲಿರುವ 11 ಮಂದಿ ಸ್ಪರ್ಧಿಗಳಲ್ಲಿ ಪ್ರತಿಯೊಬ್ಬರೂ ಇಬ್ಬರು ಸ್ಪರ್ಧಿಗಳನ್ನು ನಾಮಿನೇಟ್ ಮಾಡಬೇಕಾಗಿತ್ತು. ನಾಮಿನೇಷನ್​​ ಮಾಡುವ ಬರದಲ್ಲಿ ಪ್ರತಿಯೊಬ್ಬರೂ ಈಗ ಮನೆಯಿಂದ ಹೊರ ಹೋಗಲು ನಾಮಿನೇಟ್​ ಆಗಿದ್ದಾರೆ. ಜೊತೆಗೆ ಅರವಿಂದ್ ಎಂದಿನಂತೆ ದಿವ್ಯಾ ಸುರೇಶ್ ಹಾಗೂ ಮಂಜು ಅವರನ್ನೇ ಟಾರ್ಗೆಟ್​ ಮಾಡಿದ್ದಾರೆ.

ಮುಂದೆ ಓದಿ ...
  • Share this:

ಬಿಗ್ ಬಾಸ್​ ಮನೆಯಲ್ಲಿ 13 ದಿನಗಳನ್ನು ಕಳೆದಿರುವ  11 ಮಂದಿ ಸ್ಪರ್ಧಿಗಳು ಈಗ 14 ದಿನಕ್ಕೆ ಕಾಲಿಡಲಿದ್ದಾರೆ. ಸೆಕೆಂಡ್​ ಇನ್ನಿಂಗ್ಸ್​ ಆರಂಭವಾದಾಗಿನಿಂದಲೂ ಬಿಗ್ ಬಾಸ್​ ಮನೆಯಲ್ಲಿ ಜಗಳ, ಚುಚ್ಚು ಮಾತುಗಳೇ ಹೆಚ್ಚಾಗಿವೆ. ಬಿಗ್ ಬಾಸ್​ ಮನೆಗೆ ಕಾಲಿಟ್ಟ ಮೊದಲ ದಿನದನಿಂದಲೇ ಆರಂಭವಾದ ಜಗಳ ಇನ್ನೂ ಮುಂದುವರೆಯುತ್ತಲೇ ಇದೆ. ಮೊದಲ ದಿನ ಸಹ ಹೊರಗೆ ಇದ್ದಾಗ ನೋಡಿದ ವಿಡಿಯೋಗಳ ಆಧಾರದ ಮೇಲೆ ಇತರೆ ಸ್ಪರ್ಧಿಗಳನ್ನು ನಾಮಿನೇಟ್ ಮಾಡಲಾಗಿತ್ತು. ಮೊದಲ ವಾರ ಎಲಿಮಿನೇಷನ್​ ಪ್ರಕ್ರಿಯೆಯನ್ನು ಮುಂದೂಡಲಾಗಿತ್ತು. ಇದರಿಂದಾಗಿ ನಿನ್ನೆ ನಡೆ ಎಲಿಮಿನೇಷನ್​ನಲ್ಲಿ ನಟಿ ನಿಧಿ ಸುಬ್ಬಯ್ಯ ಎಲಿಮಿನೇಟ್ ಆಗಿ ಬಿಗ್​ ಬಾಸ್​ ಮನೆಯಿಂದ ಹೊರ ನಡೆದರು. ಎಲಿಮಿನೇಷನ್ ಪ್ರಕ್ರಿಯೆ ನಡೆದು ಒಂದು ದಿನ ಕಳೆಯುತ್ತಿದ್ದಂತೆಯೇ ಈ ವಾರದ ನಾಮಿನೇಷನ್​ ಪ್ರಕ್ರಿಯೆ ಮತ್ತೆ ಈಗ ಬಿಗ್​ ಬಾಸ್ ಮನೆಯಲ್ಲಿ ನಡೆದಿದೆ. 


ಈ ವಾರ ಮನೆಯಲ್ಲಿರುವ 11 ಮಂದಿ ಸ್ಪರ್ಧಿಗಳಲ್ಲಿ ಪ್ರತಿಯೊಬ್ಬರೂ ಇಬ್ಬರು ಸ್ಪರ್ಧಿಗಳನ್ನು ನಾಮಿನೇಟ್ ಮಾಡಬೇಕಾಗಿತ್ತು. ನಾಮಿನೇಷನ್​​ ಮಾಡುವ ಬರದಲ್ಲಿ ಪ್ರತಿಯೊಬ್ಬರೂ ಈಗ ಮನೆಯಿಂದ ಹೊರ ಹೋಗಲು ನಾಮಿನೇಟ್​ ಆಗಿದ್ದಾರೆ.




ಆದರೆ, ಮನೆಯ ಕ್ಯಾಪ್ಟನ್​ ಆಗಿರುವ ದಿವ್ಯಾ ಉರುಡುಗ ಅವರಿಗೆ ಈ ಸಲ ಓರ್ವ ಸದಸ್ಯನನ್ನು ನಾಮಿನೇಷನ್​ ಪ್ರಕ್ರಿಯೆಯಿಂದ ಪಾರು ಮಾಡುವ ವಿಶೇಷ ಅಧಿಕಾರ ನೀಡಲಾಯಿತು. ಈ ವಿಶೇಷ ಅಧಿಕಾರವನ್ನು ಉಪಯೋಗಿಸುವ ಮೂಲಕ ದಿವ್ಯಾ ಉರುಡುಗ ಶುಭಾ ಪೂಂಜಾ ಅವರನ್ನು ನಾಮಿನೇಷನ್​ ಪ್ರಕ್ರಿಯೆಯಿಂದ ಉಳಿಸಿಕೊಂಡಿದ್ದಾರೆ.


ಇದನ್ನೂ ಓದಿ: ಲಂಕೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳಲಿರುವ ಲೂಸ್ ಮಾದ ಯೋಗಿ


ಅರವಿಂದ್ ಅವರು ಮನೆಯಿಂದ ಹೊರ ಹೋದ ನಿಧಿ ಸುಬ್ಬಯ್ಯ ಅವರಿಂದ ನೇರವಾಗಿ ನಾಮಿನೇಟ್ ಆಗಿದ್ದ ಕಾರಣದಿಂದಾಗಿ ಅವರನ್ನು ದಿವ್ಯಾ ಪಾರು ಮಾಡಲು ಸಾಧ್ಯವಾಗಲಿಲ್ಲ.


ಮಂಜು ಪಾವಗಡ-ದಿವ್ಯಾ ಸುರೇಶ್  ಅವರನ್ನೇ ಮತ್ತೆ ಟಾರ್ಗೆಟ್​ ಮಾಡಿದ ಅರವಿಂದ್​ ಕೆಪಿ


ಅರವಿಂದ್ ಕೆ ಪಿ ಅವರು ಮೊದಲ ಇನ್ನಿಂಗ್ಸ್​ನಲ್ಲಿ ಇದ್ದಂತೆ ಅವರು ಇಲ್ಲ ಅನ್ನೋ ಮಾತುಗಳು ತುಂಬಾ ಕೇಳಿ ಬರುತ್ತಿದೆ. ಅವರು ಈ ಸಲ ಬಿಗ್ ಬಾಸ್​ ಮನೆಗೆ ಬಂದಾಗಿನಿಂದ ದಿವ್ಯಾ ಸುರೇಶ್ ಹಾಗೂ ಮಂಜು ಪಾವಗಡ ಅವರನ್ನೇ ಟಾರ್ಗೆಟ್ ಮಾಡಿಕೊಂಡಿದ್ದಾರೆ. ಈ ಹಿಂದೆ ನಡೆದ ನಾಮಿನೇಷನ್​ನಲ್ಲೂ ಈ ಇಬ್ಬರ ಹೆಸರನ್ನೇ ಅರವಿಂದ್ ಹಾಗೂ ದಿವ್ಯಾ ಉರುಡುಗ ತೆಗೆದುಕೊಂಡಿದ್ದರು. ಈ ಸಲ ಮತ್ತೆ ಅರವಿಂದೇ ಅದನ್ನೆ ರಿಪೀಟ್ ಮಾಡಿದ್ದಾರೆ.


ಅರವಿಂದ್ ಅವರ ಈ ನಿರ್ಧಾರವನ್ನು ನೋಡಿದರೆ, ಮಂಜು ಹಾಗೂ ದಿವ್ಯಾ ಪ್ರಬಲ ಸ್ಪರ್ಧಿಗಳು ಎಂಬ ಕಾರಣಕ್ಕೆ ಹೀಗೆ ಟಾರ್ಗೆಟ್​ ಮಾಡಿದ್ದಾರಾ ಅನ್ನೋ ಅನುಮಾನ ಕಾಡಲಾರಂಭಿಸಿದೆ. ಈ ಸಲ ಮಂಜು ಅವರು ಟಾಸ್ಕ್​ನಲ್ಲಿ ಮಾಡಿದ ಯಾವುದೋ ಒಂದು ಕಾರಣ ಕೊಟ್ಟು ಅವರನ್ನು ನಾಮಿನೇಟ್​ ಮಾಡಿದ್ದಾರೆ.


ಇದನ್ನೂ ಓದಿ: Kavya Shastry: ಕ್ಯಾನ್ಸರ್​ ರೋಗಿಗಳಿಗಾಗಿ ಕೂದಲು ದಾನ ಮಾಡಿದ ನಟಿ ಕಾವ್ಯಾ ಶಾಸ್ತ್ರಿ..!


ದಿವ್ಯಾ ಸುರೇಶ್ ಅವರ ವರ್ತನೆ ನಾಟಕೀಯ ಹಾಗೂ ಅವರು ಅಡುಗೆ ಮನೆ ಕೆಲಸದಲ್ಲಿ ಹೆ್ಚಾಗಿ ಕಾಣಿಸಿಕೊಂಡಿಲ್ಲ ಅನ್ನೋ ಕಾರಣವನ್ನೇ ಮತ್ತೆ ಕೊಡುವ ಮೂಲಕ ಅವರನ್ನು ನಾಮಿನೇಟ್​ ಮಾಡಿದ್ದಾರೆ. ಇನ್ನೂ ದಿವ್ಯಾ ಸುರೇಶ್ ಅವರು ಅಡುಗೆ ಮನೆ ಕೆಲಸದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲ ಎಂದು ಬೇರೆ ಯಾವ ಸದಸ್ಯರೂ ಆರೋಪ ಮಾಡಿಲ್ಲ. ಅಲ್ಲದೆ ದಿವ್ಯಾ ಉರುಡುಗ ಅವರೂ ಅರವಿಂದ್​ ಆರೋಪಿಸಿದಾಗ ದಿವ್ಯಾ ಸುರೇಶ್​ ಅವರ ಪರ ವಾದಿಸಿದ್ದರು.


ಅರವಿಂದ್​ ಮೇಲೆ ಸಿಟ್ಟು ತೀರಿಸಿಕೊಂಡ ನಿಧಿ ಸುಬ್ಬಯ್ಯ


ಬಿಗ್​ ಬಾಸ್​ ಮನೆಯಲ್ಲಿ 12 ದಿನಗಳನ್ನು ಕಳೆದಿದ್ದ ನಿಧಿ ಸುಬ್ಬಯ್ಯ ನಿನ್ನೆ ರಾತ್ರಿ ಮನೆಯಿಂದ ಹೊರ ಬಿದ್ದಿದ್ದಾರೆ. ಸೆಕೆಂಡ್​ ಇನ್ನಿಂಗ್ಸ್​ನ ಮೊದಲ ಎಲಿಮಿನೇಷನ್​ ಪ್ರಕ್ರಿಯೆಯಲ್ಲಿ ಪಂಚರಂಗಿ ಹುಡುಗಿ ನಿಧಿ ಸುಬ್ಬಯ್ಯ ಎಲಿಮಿನೇಟ್​ ಆದ ಮೊದಲ ಸ್ಪರ್ಧಿಯಾಗಿದ್ದಾರೆ.


ಸೆಕೆಂಡ್​ ಇನ್ನಿಂಗ್ಸ್​ ಮೂಲಕ ಬಿಗ್ ಬಾಸ್​ ಮನೆಗೆ ಕಾಲಿಟ್ಟ ಮೊದಲ ದಿನವೇ ಬಿಗ್​ ಬಾಸ್ ಮನೆಯಲ್ಲಿ ನಾಮಿನೇಷನ್​ ಪ್ರಕ್ರಿಯೆ ನಡೆದಿತ್ತು. ಆಗ ಮನೆಯವರು ಮಾಡಿದ ವೋಟ್​ ಆಧಾರದ ಮೇಲೆ ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ, ನಿಧಿ ಸುಬ್ಬಯ್ಯ, ರಘು ಗೌಡ, ಪ್ರಿಯಾಂಕಾ ತಿಮ್ಮೇಶ್. ಮಂಜು ಪಾವಗಡ​ ಹಾಗೂ ದಿವ್ಯಾ ಸುರೇಶ್​ ನಾಮಿನೇಟ್​ ಆಗಿದ್ದರು. ಮೊದಲ ವಾರಾಂತ್ಯದಲ್ಲಿ ಎಲಿಮಿನೇಷನ್ ಪ್ರಕ್ರಿಯೆ ಆಗದ ಕಾರಣದಿಂದ ಅದು ಒಂದು ವಾರ ಮುಂದೆ ಹೋಯಿತು.


ಇನ್ನು ಒಂದು ವಾರದಲ್ಲಿ ಬಿಗ್ ಬಾಸ್​ ಮನೆಯಲ್ಲಿ ಸಾಕಷ್ಟ ಬೆಳವಣಿಗೆಗಳಾಗಿದ್ದವು. ಮನೆಯಲ್ಲಿ ನಡೆದ ಕ್ಯಾಪ್ಟನ್ಸಿ ಟಾಸ್ಕ್​ ವೇಳೆ ಅರವಿಂದ್​ ಅವರು ನಿಧಿ ವಿಷಯದಲ್ಲಿ ಮಾತು ಜಾರಿದ್ದರು. ಇದರಿಂದಾಗಿ ಸಿಟ್ಟಿಗೆದ್ದ ನಿಧಿ ಅರವಿಂದ್​ ಅವರ ಕ್ರೀಡೆ ಹಾಗೂ ಪದಕ ಗೆಲ್ಲುವ ಕುರಿತು ಖಾರವಾಗಿ ಮಾತನಾಡಿದ್ದರು. ಈ ವಿಷಯದಲ್ಲಿ ಅರವಿಂದ್ ಹಾಗೂ ನಿಧಿ ಸುಬ್ಬಯ್ಯ ಅವರ ಅಭಿಮಾನಿಗಳು ಒಬ್ಬರೊನ್ನಬ್ಬರು ಟ್ರೋಲ್ ಮಾಡಿದ್ದರು. ನಿಧಿ ಹಾಗೂ ಅರವಿಂದ್​ ಅವರು ಮಾಡಿದ ತಪ್ಪಿಗೆ ಕ್ಷಮೆ ಯಾಚಿಸಬೇಕೆಂದು ಇಬ್ಬರ ಅಭಿಮಾನಿಗಳೂ ಆಗ್ರಹಿಸಿದ್ದರು.


ಇದನ್ನೂ ಓದಿ: Samantha Akkineni: ವೈರಲ್​ ಆಗುತ್ತಿರುವ ಸಮಂತಾರ ಬ್ಯಾಕ್​ಲೆಸ್​ ಫೋಟೋ ನೋಡಿ ಸುಸ್ತಾದ ರಾಕುಲ್​ ಪ್ರೀತ್​ ಸಿಂಗ್​..!


ವಾರದ ಕತೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಅರವಿಂದ್​ ಅವರನ್ನು ತರಾಟೆಗೆ ತೆಗೆದುಕೊಂಡ ಸುದೀಪ್​, ಯಾವಾಗಲೂ ಕ್ಷಮೆ ಕೇಳು ಸ್ಥಾನದಲ್ಲಿರಬಾರದು ಎಂದಿದ್ದರು. ಅಲ್ಲದೆ ಗೌರವ ಕೊಡುವಂತೆಯೇ ಕೊಟ್ಟು ಮಾತು ಜಾರ ಬಾರದು ಎಂದೂ ಅರವಿಂದ್​ ಮಾಡಿದ್ದ ತಪ್ಪನ್ನು ಎತ್ತಿ ತೋರಿಸಿದ್ದರು. ಅಂತೆಯೇ ನಿಧಿ ಅವರಿಗೂ ಸಹ ಓರ್ವ ಕ್ರೀಡಾಪಟುವಾಗಿ ಮತ್ತೊಬ್ಬರ ಸಾಧನೆ ಬಗ್ಗೆ ಮಾತು ಜಾರುವುದು ಸರಿಯಲ್ಲ ಎಂದು ಹೇಳಿ ಇಬ್ಬರ ನಡುವಿನ ಮನಸ್ತಾಪಕ್ಕೆ ಅಂತ್ಯ ಹಾಡಿದ್ದರು.


ನಿಧಿ ಹಾಗೂ ಅರವಿಂದ್​ ನಡುವೆ ಕಿಚ್ಚ ಸಂಧಾನ ಮಾಡಿಸಿದ್ದರೂ ಅವರ ನಡುವಿನ ಜಗಳ ಹಾಗೂ ಸಿಟ್ಟು ಕಡಿಮೆಯಾಗಿರಲಿಲ್ಲ. ಹೌದು, ನಿಧಿ ಸುಬ್ಬಯ್ಯ ಅವರು ಮನೆಯಿಂದ ಹೊರ ಬರುವಾಗ ಅದು ಸಾಬೀತಾಯಿತು. ಮನೆಯಿಂದ ಹೊರ ಬರುವ ಮುನ್ನ ನಿಧಿ ಅವರಿಗೆ ಯಾರನ್ನಾದರೂ ಮುಂದಿನ ವಾರಕ್ಕೆ ನಾಮಿನೇಟ್​ ಮಾಡುವ ವಿಶೇಷ ಅಧಿಕಾರ ಸಿಕ್ಕಿತ್ತು. ಅದನ್ನು ಬಳಿಸಿಕೊಂಡ ನಿಧಿ, ಅರವಿಂದ್​ ಅವರನ್ನು ನೇರವಾಗಿ ನಾಮಿನೇಟ್ ಮಾಡುವ ಮೂಲಕ ತಮ್ಮ ಸಿಟ್ಟು ತೀರಿಸಿಕೊಂಡಿದ್ದಾರೆ.

Published by:Anitha E
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು