ಟಾಲಿವುಡ್(Tollywood)ನ ಕ್ಯೂಟ್ ಕಪಲ್ ಎನಿಸಿಕೊಂಡಿದ್ದ ನಾಗಚೈತನ್ಯ(Naga Chaitanya )ಹಾಗೂ ಸಮಂತಾ(Samantha) ಈಗ ದೂರವಾಗಿದ್ದಾರೆ. ಒಬ್ಬರನ್ನೊಬ್ಬರು ಬಿಟ್ಟಿರಲಾಗದಷ್ಟು ಪ್ರೀತಿ ಮಾಡಿದ್ದ , ಈ ಜೋಡಿ ಇದ್ದಕ್ಕಿದ್ದ ಹಾಗೇ ದೂರವಾಗಿ ಬಿಟ್ಟಿದ್ದಾರೆ. ಇದು ಟಾಲಿವುಡ್ನಲ್ಲಿಈ ಸುದ್ದಿ ಅಲ್ಲೋಲ, ಕಲ್ಲೋಲವನ್ನು ಸೃಷ್ಟಿ ಮಾಡಿತ್ತು. ಬೇರೆ ಆಗಿದ್ದಕ್ಕೆ ಕಾರಣ ಕೂಡ ಫ್ಯಾನ್ಸ್(Fans) ಹುಡುಕಿದ್ದರು. ಆದರೆ ಯಾವ ಕಾರಣವೂ ಅಷ್ಟು ಗಟಿಯಾಗಿ ಕಾಣಲಿಲ್ಲ. ಇದೀಗ ಹೊಸ ವಿಷಯ ಏನಪ್ಪಾ ಅಂದರೆ, ನಾಗಚೈತನ್ಯ ಅವರ ಹಳೇ ವಿಷಯವೊಂದು ಇದೀಗ ಭಾರೀ ಸದ್ದು ಮಾಡುತ್ತಿದೆ. ಸಮಂತಾ ಅವರನ್ನು ಪ್ರೀತಿಸುವ ಮುನ್ನ ನಾಗಚೈತನ್ಯ ಮತ್ತೊಬ್ಬ ಟಾಪ್ ನಟಿ(Top Heroin) ಜೊತೆ ಡೇಟಿಂಗ್ (Dating)ಮಾಡುತ್ತಿದ್ದರು. ಅವರನ್ನೇ ಮದುವೆಯಾಗಬೇಕು ಅಂದುಕೊಂಡಿದ್ದರು. ಇಬ್ಬರು ಕೆಲ ದಿನಗಳ ಕಾಲ ಒಟ್ಟಿಗೆ ಸುತ್ತಾಡಿದ್ದರಂತೆ. ಸಮಂತಾಗೂ ಮುಂಚೆ ಆ ನಟಿಯನ್ನು ನಾಗಚೈತನ್ಯ ತುಂಬಾ ಪ್ರೀತಿ ಮಾಡಿದ್ದರಂತೆ. ಆ ಸ್ಟಾರ್ ನಟಿಗೂ ನಾಗಚೈತನ್ಯ ಕಂಡರೇ ಅಷ್ಟೇ ಇತ್ತು. ಆದರೆ ಕೆಲ ಕಾರಣಾಂತರಗಳಿಂದ ಈ ಜೋಡಿ ಮದುವೆಯಾಗಲು ಸಾಧ್ಯವಾಗಿರಲಿಲ್ಲ, ಈ ವಿಚಾರ ಸಮಂತಾ ಡಿವೋರ್ಸ್(Divorce) ಕೊಟ್ಟ ಬಳಿಕ ಭಾರೀ ವೈರಲ್ ಆಗುತ್ತಿದೆ. ಅಷ್ಟಕ್ಕೂ ನಾಗಚೈತನ್ಯ ಇಷ್ಟ ಪಟ್ಟಿದ್ದ ಆ ನಟಿ ಯಾರು? ಇವರ ಪ್ರೀತಿಯಲ್ಲಿ ಬಿರುಕು ಮೂಡಲು ಕಾರಣವೇನು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ..
ಶ್ರುತಿ ಹಾಸನ್ ಜೊತೆ ಡೇಟಿಂಗ್ ಮಾಡುತ್ತಿದ್ದರಂತೆ ನಾಗಚೈತನ್ಯ!
ಹೌದು, ಸಮಂತಾ ಅವರನ್ನು ಪ್ರೀತಿಸುವ ಮುನ್ನ ಭಾರತೀಯ ಸಿನಿಮಾ ರಂಗದ ಸ್ಟಾರ್ ನಟ ಕಮಲ್ಹಾಸನ್ ಅವರ ಪುತ್ರಿ ಶ್ರುತಿಹಾಸನ್ ಅವರೊಂದಿಗೆ ನಾಗಚೈತನ್ಯ ರಿಲೇಷನ್ಶಿಪ್ನಲ್ಲಿ ಇದ್ದರು. ಒಬ್ಬರನೊಬ್ಬರು ಇಷ್ಟ ಪಟ್ಟಿದ್ದರು. ಮದುವೆ ಮಾಡಿಕೊಳ್ಳವ ಪ್ಲ್ಯಾನ್ ಕೂಡ ಮಾಡಲಾಗಿತ್ತು. 2013ರಲ್ಲೇ ಇವರಿಬ್ಬರು ಪ್ರೀತಿಸುತ್ತಿದ್ದರು. ಒಂದು ದಿನ ಕೂಡ ಇಬ್ಬರು ಮೀಟ್ ಮಾಡದೇ ಇರುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ಪ್ರೀತಿ ಮಾಡುತ್ತಿದ್ದರು. ಇವರಿಬ್ಬರ ವಿಚಾರ ಎರಡು ಕುಟುಂಬಸ್ಥರು ಗೊತ್ತಿತ್ತಂತೆ. ಅವರು ಕೂಡ ಒಪ್ಪಿಕೊಂಡಿದ್ದರಂತೆ. ಒಂದು ದಿನ ಕೂಡ ಒಬ್ಬರನೊಬ್ಬರು ನೋಡದಿದ್ದರೇ ಆಗುತ್ತಿರಲಿಲ್ಲ. ಆದರೆ ಇವರ ಬ್ರೇಕ್ಅಪ್ಗೆ ಕಾರಣ ಏನು ಅಂತ ತಿಳಿದರೆ ನಿಮಗೂ ಒಂದು ಕ್ಷಣ ಶಾಕ್ ಆಗಬಹುದು.
![]()
ನಾಗಚೈತನ್ಯ, ಶ್ರುತಿ ಹಾಸನ್
ಇದನ್ನು ಓದಿ : ನಾಗಚೈತನ್ಯ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್; ಹುಟ್ಟುಹಬ್ಬದಂದೇ ಬಂಗಾರ್ರಾಜು ಸಿನಿಮಾ ಟೀಸರ್ ಬಿಡುಗಡೆ
ಬ್ರೇಕ್ಅಪ್ಗೆ ಕಾರಣವಾಗಿದ್ದು ಅಕ್ಷರ ಹಾಸನ್!
ಹೌದು, ಕೇಳಲು ವಿಚಿತ್ರವೆನಿಸಿದರು ನಿಜ..ದಕ್ಷಿಣ ಭಾರತದ ಹೆಸರಾಂತ ಅವಾರ್ಡ್ ಕಾರ್ಯಕ್ರಮದಲ್ಲಿ ಉಂಟಾದ ಜಗಳ ಇವರಿಬ್ಬರನ್ನು ದೂರ ಮಡುವಂತೆ ಮಾಡಿತ್ತು. ಶ್ರುತಿ ಹಾಸನ್ ತಮ್ಮ ತಂಗಿ ಅಕ್ಷರ ಹಾಸನ್ ಅವರನ್ನು ನೋಡಿಕೊಳ್ಳುವಂತೆ ನಾಗಚೈತನ್ಯ ಅವರಿಗೆ ಹೇಳಿದ್ದರಂತೆ. ನಾನು ಡ್ಯಾನ್ಸ್ ಮುಗಿಸಿ ಬರುವವರೆಗೂ ತನ್ನ ತಂಗಿಯ ಜೊತೆ ಇರಲು ಹೇಳಿದ್ದರಂತೆ. ಸರಿ ಎಂದು ಹೇಳಿದ್ದರಂತೆ ನಾಗಚೈತನ್ಯ. ಆದರೆ ಇದ್ದಕಿದ್ದ ಹಾಗೇ ಶ್ರುತಿ ಹಾಸನ್ಗೆ ಹೇಳದೇ ಕೇಳದೇ ನಾಗಚೈತನ್ಯ ಅಲ್ಲಿಂದ ಹೊರ ಬಂದಿದ್ದರಂತೆ. ಇತ್ತ ಡ್ಯಾನ್ಸ್ ಮುಗಿಸಿಕೊಂಡು ಬಂದಾಗ ಅಕ್ಷರ ಕಕ್ಕಾಬಿಕ್ಕಿಯಾಗಿದ್ದನ್ನು ಕಂಡು ಶ್ರುತಿ ಹಾಸನ್ಗೆ ಕೋಪ ಬಂದಿತ್ತಂತೆ. ಇಲ್ಲಿಂದ ಶುರುವಾದ ಜಗಳ ಇವರಿಬ್ಬರ ಬ್ರೇಕ್ಅಪ್ಗೆ ಕಾರಣವಾಯಿತು.
ಇದನ್ನು ಓದಿ : ವಿಚ್ಛೇದನದ ನಂತರ ಫೋಟೋಶೂಟ್ಗೆ ಪೋಸ್ ಕೊಟ್ಟ Samantha: ಇದರಲ್ಲಿ ಮಿಸ್ ಆಗಿದ್ದೇನು ಗಮನಿಸಿ..?
ಇದಾದ ಬಳಿಕ ನಾಗಚೈತನ್ಯ ಸಮಂತಾ ಅವರನ್ನು ಇಷ್ಟ ಪಟ್ಟು ಮದುವೆಯಾಗಿದ್ದರು. ಆದರೆ, ಈಗ ಇವರಿಬ್ಬರು ವಿಚ್ಛೇದನ ಪಡೆದು ಬೇರೆ ಬೇರೆಯಾಗಿದ್ದಾರೆ. ಇತ್ತ ಶ್ರುತಿ ಹಾಸನ್ಬಾಯ್ ಫ್ರೆಂಡ್ ಸಂತನು ಹಜಾರಿಕ ಅವರೊಟ್ಟಿಗೆ ಎಂಜಾಯ್ ಮಾಡುತ್ತಿದ್ದಾರೆ. ದೆಹಲಿ ಮೂಲದ ಡೂಡಲ್ ಕಲಾವಿದ ಮತ್ತು ಸಚಿತ್ರಕಾರ ಸಂತನು ಹಜಾರಿಕ ಜೊತೆ ಶ್ರುತಿ ಡೇಟಿಂಗ್ ಮಾಡ್ತಿದ್ದಾರೆ ಎಂದು ಹೇಳಲಾಗಿದೆ. ಶೀಘ್ರದಲ್ಲೇ ಇವರಿಬ್ಬರು ಮದುವೆಯಾಗಲಿದ್ದಾರೆ ಅನ್ನುವ ಮಾಹಿತಿ ಕೂಡ ದೊರಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ