ಮಾಲಿವುಡ್ ಅಯ್ಯಪ್ಪನುಂ ಕೋಶಿಯುಮ್ ಚಿತ್ರದ ನಿರ್ದೇಶಕ ಕೆ. ಆರ್ ಸಚ್ಚಿದಾನಂದ್ ಅವರಿಗೆ ಜೂ.16ರಂದು ಹೃದಯಾಘಾತ ಸಂಭವಿಸಿದೆ. ಕೇರಳ ತ್ರಿಶೂರಿನಲ್ಲಿರುವ ಖಾಸಗಿ ಆಸ್ಪತ್ರೆಯೊಂದಕ್ಕೆ ಅವರನ್ನು ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಸಚ್ಚಿದಾನಂದ್ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಸಚ್ಚಿದಾನಂದ್ ಅವರಿಗೆ ಜೂನ್ 16 ರಂದು ಬೆಳಗ್ಗೆ ಹೃದಯಾಘಾತ ಸಂಭವಿಸಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸದ್ಯ, ವೆಂಟಿಲೇಟರ್ ಮೂಲಕ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಸಿಟಿ ಸ್ಕ್ಯಾನ್ ವರದಿಯ ಪ್ರಕಾರ ಸಚ್ಚಿದಾನಂದ್ ಅವರಿಗೆ ಹೃದಯಘಾತದಿಂದಾಗಿ ಮೆದುಳಿಗೆ ಹಾನಿಯಾಗಿದೆ. ಸದ್ಯ ಚಿಕಿತ್ಸೆಗೆ ಸ್ಪಂದಿಸುತ್ತಿದ್ದರಾದರು 72 ದಿನಗಳ ನಂತರವೇ ಅವರ ಆರೋಗ್ಯದ ಬಗ್ಗೆ ಖಚಿತ ಮಾಹಿತಿ ನೀಡಬಹುದು ಎಂದು ವೈದ್ಯರು ತಿಳಿಸಿದ್ದಾರೆ.
ಇತ್ತೀಚೆಗೆ ನಟ ಪೃಥ್ವಿ ಸುಕುಮಾರನ್ ಮತ್ತು ಬಿಜು ಮೆನನ್ ಅವರನ್ನು ಹಾಕಿಕೊಂಡು ‘ಅಯ್ಯಪ್ಪನುಂ ಕೋಶಿಯುಮ್’ ಸಿನಿಮಾ ನಿರ್ದೇಶಿಸಿ ಬಿಡುಗಡೆ ಮಾಡಿದ್ದರು. ಈ ಸಿನಿಮಾ ಮಾಲಿವುಡ್ನಲ್ಲಿ ಹಿಟ್ ಆಗಿತ್ತು. ಹಿಂದಿ, ತೆಲುಗು ಭಾಷೆಯಲ್ಲಿ ಈ ಸಿನಿಮಾ ರಿಮೇಕ್ ಆಗುತ್ತಿದೆ.
Video: ಕಿಚ್ಚನ ಜೊತೆ ಮಾತನಾಡಲು ತುದಿಗಾಲಿನಲ್ಲಿ ನಿಂತಿರುವ ಕುವೈತ್ ದೇಶದ ಅಭಿಮಾನಿ!
ಲವ್ ಮಾಕ್ಟೇಲ್-2 ಸ್ಕ್ರಿಪ್ಟ್ ಪೂರ್ಣಗೊಳಿಸಿದ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್; ಶೂಟಿಂಗ್ ಯಾವಾಗ? ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ